ಅಗ್ರೋ ಅಂಗಡಿ ಮಾಲೀಕನ ಮಾತನ್ನ ನಂಬಿ ನಕಲಿ ಕ್ರಿಮಿನಾಶಕ ಸಿಂಪಡಿಸಿ ರೈತನೋರ್ವ ಬೆಳೆ ಕಳೆದುಕೊಂಡ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ತಂಬೂರು ಗ್ರಾಮದಲ್ಲಿ ನಡೆದಿದೆ.


ಹುಬ್ಬಳ್ಳಿ (ಜು.5): ಅಗ್ರೋ ಅಂಗಡಿ ಮಾಲೀಕನ ಮಾತನ್ನ ನಂಬಿ ನಕಲಿ ಕ್ರಿಮಿನಾಶಕ ಸಿಂಪಡಿಸಿ ರೈತನೋರ್ವ ಬೆಳೆ ಕಳೆದುಕೊಂಡ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ತಂಬೂರು ಗ್ರಾಮದಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದಿದ್ದ ರೈತ. ಕಳೆದ ನಾಲ್ಕೈದು ದಿನಗಳ ಹಿಂದೆ ಗೋವಿನ ಜೋಳ ಬೆಳೆಯಲ್ಲಿ ಕಳೆರೋಗ ಕಾಣಿಸಿಕೊಂಡಿತ್ತು. ಕಳೆರೋಗವನ್ನ ಹೋಗಲಾಡಿಸಲು ಕಲಘಟಗಿ ಶ್ರೀ ವರಮಹಾಲಕ್ಷ್ಮಿ ಆಗ್ರೋ ಮಾಲೀಕನ ಸಲಹೆ ಕೇಳಿದ ರೈತರು. ಈ ವೇಳೆ ಸ್ಟ್ರೆಪ್ಟೊಪ್ಲಸ್ ಎಂಬ ಕ್ರಿಮಿನಾಶಕ ಸಿಂಪಡಿಸಲು ಸಲಹೆ ನೀಡಿದ್ದ ಮಾಲೀಕ. 

ಹೆರಿಗೆ ವೇಳೆ ಶಿಶುವಿನ ಗುದದ್ವಾರ ಕತ್ತರಿಸಿದ ವೈದ್ಯ! ಎರಡು ದಿನ ಜೀವನ್ಮರಣ ಹೋರಾಟ ನಡೆಸಿ ಮಗು ಸಾವು!

ಮಾಲೀಕನ ಮಾತು ನಂಬಿದ ರೈತ ಕೈಗೆ ಬಂದಿದ್ದ ಬೆಳೆಗೆ ಅಗ್ರೋ ಮಾಲೀಕನ ಸಲಹೆಯಂತೆ ಸ್ಟ್ರೆಪ್ಟೊಪ್ಲಸ್ ಎಂಬ ಕ್ರಿಮಿನಾಶಕ ಖರೀದಿಸಿ ಬೆಳೆಗೆ ಸಿಂಪಡಿಸಿದ್ದಾರೆ. ಕ್ರಿಮಿನಾಶಕ ಸಿಂಪಡಿಸಿದ ಮಾರನೆಯ ದಿನವೇ ಒಣಗಿ‌ ನಿಂತ ಗೋವಿನ ಜೋಳ. ಕಳೆರೋಗ ಹೋಗುವ ಬದಲು ಮಳೆಗಾಲದಲ್ಲೇ ಬೆಳೆಯೇ ಸಂಪೂರ್ಣವಾಗಿ ಒಣಗಿ ನಿಂತಿದೆ. ರೈತ ಕಂಗಾಲಾಗಿದ್ದಾನೆ. ಅಗ್ರೋ ಮಾಲೀಕನ ಮಾತು ನಂಬಿ ಮೋಸ ಹೋದೆ ಎಂದು ಕಣ್ಣೀರಿಟ್ಟಿರುವ ರೈತ. ಬೆಳೆ ಒಣಗಿದ ಕಾರಣ ದಿಕ್ಕು ತೋಚದಂತಾಗಿರುವ ಅನ್ನದಾತ. ಇದೇ ರೀತಿ ಆಗ್ರೋ ಅಂಗಡಿ ಮಾಲೀಕನಿಂದ ಸ್ಟ್ರೆಪ್ಟೊಪ್ಲಸ್ ಎಂಬ ಕ್ರಿಮಿನಾಶಕವನ್ನ ಹಲವು ರೈತರಿಗೆ ವಿತರಣೆ ಮಾಡಲಾಗಿದೆ.