Asianet Suvarna News Asianet Suvarna News

ಬೆಂಗಳೂರು: ಮದ್ಯ ಸೇವಿಸುವಾಗ ಜಗಳ, ಇಟ್ಟಿಗೆ ಎತ್ತಿಹಾಕಿ ಸೋದರ ಸಂಬಂಧಿ ಹತ್ಯೆ

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸತೀಶ್ ಕುಮಾರ್ ಸ್ನೇಹಿತರ ಭೇಟಿಗಾಗಿ ಏ.18ರ ರಾತ್ರಿ ದೊಮ್ಮ ಲೂರಿಗೆ ಹೋಗಿದ್ದ. ಈ ವೇಳೆ ಆಕಸ್ಮಿಕವಾಗಿ ಸಿಕ್ಕ ಆರೋಪಿ ಶ್ರೀಕಾಂತ್, ಸ್ನೇಹಿತರು ಮದ್ಯ ಸೇವಿಸಿದ್ದಾರೆ. ಕ್ಷುಲ್ಲಕ ವಿಚಾರಕ್ಕೆ ಶ್ರೀಕಾಂತ್, ಸತೀಶ್ ಕುಮಾರ್ ನಡುವೆ ಜಗಳವಾಗಿ ವಿಕೋಪಕ್ಕೆ ತಿರುಗಿದಾಗ ಕೋಪಗೊಂಡ ಶ್ರೀಕಾಂತ್, ಹಳೇ ದ್ವೇಷದ ವಿಚಾರ ಪ್ರಸ್ತಾಪಿಸಿ ಸತೀಶ್ ಕುಮಾರ್‌ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಕೊಲೆಗೈದು ಪರಾರಿಯಾಗಿದ್ದ. 

38 Year Old Man Arrested for Murder Case in Bengaluru grg
Author
First Published May 12, 2024, 12:33 PM IST | Last Updated May 12, 2024, 12:33 PM IST

ಬೆಂಗಳೂರು(ಮೇ.12): ಹಳೇ ದ್ವೇಷದ ಹಿನ್ನೆಲೆಯಲ್ಲಿ ಸೋದರ ಸಂಬಂಧಿಯನ್ನು ಕೊಲೆಗೈದಿದ್ದ ಆರೋಪಿಯನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಮ್‌ಸಿಂಗ್ ಪೇಟ್ ನಿವಾಸಿ ಶ್ರೀಕಾಂತ್ (38) ಬಂಧಿತ. 

ಆರೋಪಿ ಏ.18ರಂದು ಮದ್ಯದ ಅಮಲಿನಲ್ಲಿ ತನ್ನ ಸೋದರ ಸಂಬಂಧಿ ಸತೀಶ್ ಕುಮಾರ್ (38) ಎಂಬಾ ತನ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಕೊಲೆಗೈದು ಪರಾರಿಯಾಗಿದ್ದ. ಈ ಸಂಬಂಧ ದಾಖಲಾಗಿದ್ದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.

ಮಗಳ ಪ್ರೀತಿಗೆ ಅಡ್ಡ ನಿಂತು ಭಗ್ನಪ್ರೇಮಿಗೆ ಚಾಕು ಇರಿದ ಅಪ್ಪ, ಬಿಡಿಸಲು ಬಂದ ಸಹೋದರನೂ ಬಲಿ!

ಪ್ರಕರಣದ ವಿವರ:

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸತೀಶ್ ಕುಮಾರ್ ಸ್ನೇಹಿತರ ಭೇಟಿಗಾಗಿ ಏ.18ರ ರಾತ್ರಿ ದೊಮ್ಮ ಲೂರಿಗೆ ಹೋಗಿದ್ದ. ಈ ವೇಳೆ ಆಕಸ್ಮಿಕವಾಗಿ ಸಿಕ್ಕ ಆರೋಪಿ ಶ್ರೀಕಾಂತ್, ಸ್ನೇಹಿತರು ಮದ್ಯ ಸೇವಿಸಿದ್ದಾರೆ. ಕ್ಷುಲ್ಲಕ ವಿಚಾರಕ್ಕೆ ಶ್ರೀಕಾಂತ್, ಸತೀಶ್ ಕುಮಾರ್ ನಡುವೆ ಜಗಳವಾಗಿ ವಿಕೋಪಕ್ಕೆ ತಿರುಗಿದಾಗ ಕೋಪಗೊಂಡ ಶ್ರೀಕಾಂತ್, ಹಳೇ ದ್ವೇಷದ ವಿಚಾರ ಪ್ರಸ್ತಾಪಿಸಿ ಸತೀಶ್ ಕುಮಾರ್‌ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಕೊಲೆಗೈದು ಪರಾರಿಯಾಗಿದ್ದ. ಈ ಸಂಬಂಧ ಹಲಸೂರು ಠಾಣೆಯಲ್ಲಿ ಪ್ರಕರಣ ದಾಖ ಲಾಗಿತ್ತು. ಕಾರ್ಯಾಚರಣೆ ನಡೆಸಿ ಆರೋ ಪಿಯನ್ನು ಬಂಧಿಸಿ ಜೈಲಿಗಟ್ಟಲಾಗಿದೆ.

Latest Videos
Follow Us:
Download App:
  • android
  • ios