Asianet Suvarna News Asianet Suvarna News

ವಿಜಯ್ ಹಜಾರೆ ಟ್ರೋಫಿ ಫೈನಲ್: ಟಾಸ್ ಗೆದ್ದ ಕರ್ನಾಟಕ ಫೀಲ್ಡಿಂಗ್ ಆಯ್ಕೆ

ಕರ್ನಾಟಕ-ತಮಿಳುನಾಡು ನಡುವಿನ ವಿಜಯ್ ಹಜಾರೆ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಕರ್ನಾಟಕ ಫೀಲ್ಡಿಂಗ್ ಆಯ್ದುಕೊಂಡಿದೆ. ತಮಿಳುನಾಡು ತಂಡ ಆರಂಭಿಕ ಆಘಾತ ಅನುಭವಿಸಿದೆ.

Vijay Hazare Trophy Final Karnataka Won the toss choose to bowling first
Author
Bengaluru, First Published Oct 25, 2019, 9:45 AM IST

ಬೆಂಗ​ಳೂರು[ಅ.25]: 2019ರ ವಿಜಯ್‌ ಹಜಾರೆ ರಾಷ್ಟ್ರೀ​ಯ ಏಕ​ದಿನ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಕರ್ನಾಟಕ-ತಮಿಳುನಾಡು ತಂಡಗಳು ಮುಖಾಮುಖಿಯಾಗಿದ್ದು ಟಾಸ್ ಗೆದ್ದ ಕರ್ನಾಟಕ ಫೀಲ್ಡಿಂಗ್ ಆಯ್ದುಕೊಂಡಿದೆ. ಇನ್ನು ಮೊದಲ ಓವರ್’ನಲ್ಲೇ ಬರ್ತ್ ಡೇ ಹೀರೋ ಅಭಿಮನ್ಯು ಮಿಥುನ್, ಮುರಳಿ ವಿಜಯ್ ಅವರನ್ನು ಪೆವಿಲಿಯನ್’ಗೆ ಅಟ್ಟಿದ್ದಾರೆ. ಇದೀಗ  8 ಓವರ್ ಮುಕ್ತಾಯದ ವೇಳೆಗೆ ತಮಿಳುನಾಡು ತಂಡ 2 ವಿಕೆಟ್ ಕಳೆದುಕೊಂಡು 24 ರನ್ ಬಾರಿಸಿದೆ. ಇನ್ನು ಸೆಮಿಫೈನಲ್ ಪಂದ್ಯದಲ್ಲಿ ಮಿಂಚಿದ್ದ ಕೌಶಿಕ್, ಟೀಂ ಇಂಡಿಯಾ ಕ್ರಿಕೆಟಿಗ ರವಿಚಂದ್ರನ್ ಅವರನ್ನು ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು.

ಇಲ್ಲಿನ ಚಿನ್ನ​ಸ್ವಾಮಿ ಕ್ರೀಡಾಂಗಣದಲ್ಲಿ ನಡೆ​ಯುತ್ತಿರುವ ಫೈನಲ್ ಪಂದ್ಯದಲ್ಲಿ 3 ಬಾರಿಯ ಚಾಂಪಿ​ಯನ್‌ ಕರ್ನಾ​ಟಕ, 5 ಬಾರಿ ಪ್ರಶಸ್ತಿ ಗೆದ್ದು ಟೂರ್ನಿಯ ಅತ್ಯಂತ ಯಶ್ವಸಿ ತಂಡ ಎನಿ​ಸಿ​ಕೊಂಡಿ​ರುವ ತಮಿ​ಳು​ನಾಡು ನಡುವಿನ ಕಾದಾಟಕ್ಕೆ ಆತಿಥ್ಯ ವಹಿಸಿದೆ. ಈ ಋುತು​ವಿ​ನಲ್ಲಿ ಅತ್ಯು​ತ್ತಮ ಪ್ರದ​ರ್ಶನ ತೋರು​ತ್ತಿ​ರುವ ಉಭಯ ತಂಡ​ಗಳ ನಡು​ವಿನ ಪ್ರಶಸ್ತಿ ಸುತ್ತಿನ ಹೋರಾಟ ಭಾರೀ ಕುತೂ​ಹಲ ಹುಟ್ಟಿ​ಸಿದೆ.

ವಿಜಯ್‌ ಹಜಾರೆ ಟೂರ್ನಿ 2019: ಫೈನಲ್’ಗೆ ಲಗ್ಗೆಯಿಟ್ಟ ಕರ್ನಾಟಕ

ತಾರೆಗಳ ಮುಖಾ​ಮುಖಿ: ಈ ಪಂದ್ಯ​ದಲ್ಲಿ ಅಂತಾ​ರಾ​ಷ್ಟ್ರೀಯ ಕ್ರಿಕೆಟ್‌ ಆಡಿ ಅನು​ಭ​ವ​ವಿರುವ ಹಲವು ಆಟ​ಗಾ​ರರು ಕಣ​ಕ್ಕಿ​ಳಿದಿರುವುದು ವಿಶೇಷ. ಕರ್ನಾ​ಟಕ ತಂಡ​ದ​ಲ್ಲಿ ಕೆ.ಎಲ್‌.ರಾ​ಹುಲ್‌, ಮನೀಶ್‌ ಪಾಂಡೆ, ಮಯಾಂಕ್‌ ಅಗರ್‌ವಾಲ್‌, ಕರುಣ್‌ ನಾಯರ್‌ ಇದ್ದರೆ, ತಮಿಳುನಾಡು ತಂಡ​ವನ್ನು ದಿನೇಶ್‌ ಕಾರ್ತಿಕ್‌, ಆರ್‌.ಅ​ಶ್ವಿನ್‌, ಮುರಳಿ ವಿಜಯ್‌, ವಿಜಯ್‌ ಶಂಕರ್‌, ವಾಷಿಂಗ್ಟನ್‌ ಸುಂದರ್‌ ಇದ್ದಾರೆ.

ಕರ್ನಾ​ಟಕ ತನ್ನ ಅಗ್ರ ಬ್ಯಾಟ್ಸ್‌ಮನ್‌ಗಳ ಮೇಲೆ ಹೆಚ್ಚಿನ ವಿಶ್ವಾಸವಿರಿ​ಸಿದೆ. ರಾಹುಲ್‌, ಮಯಾಂಕ್‌ ಜತೆ ಯುವ ಬ್ಯಾಟ್ಸ್‌ಮನ್‌ ದೇವದತ್‌ ಪಡಿ​ಕ್ಕಲ್‌ ಅದ್ಭುತ ಲಯ​ದ​ಲ್ಲಿ​ದ್ದಾರೆ. ಬೌಲಿಂಗ್‌ ವಿಭಾ​ಗ​ದಲ್ಲೂ ಕರ್ನಾ​ಟಕ ಹಲವು ಆಯ್ಕೆಗಳನ್ನು ಹೊಂದಿದೆ.

ಅನಿಲ್ ಕುಂಬ್ಳೆ ಕೆಳಗಿಳಿಸಿದ್ದು ಕೊಹ್ಲಿ; ಸೀಕ್ರೆಟ್ ಬಿಚ್ಚಿಟ್ಟ ಬಿಸಿಸಿಐ ನಿರ್ಗಮಿತ COA!

ತಮಿ​ಳು​ನಾಡು ತಂಡದ ಸಹ ತನ್ನ ಬ್ಯಾಟಿಂಗ್‌ ವಿಭಾಗದ ಮೇಲೆ ಅವ​ಲಂಬಿತಗೊಂಡಿ​ದ್ದರೂ ಟಿ.ನ​ಟ​ರಾ​ಜನ್‌, ಎಂ.ಮೊ​ಹ​ಮದ್‌, ಕೆ.ವಿ​ಗ್ನೇಶ್‌ರಂತಹ ಪ್ರತಿ​ಭಾ​ನ್ವಿತ ಬೌಲರ್‌ಗಳಿ​ದ್ದಾರೆ. ಚಿನ್ನ​ಸ್ವಾಮಿ ಕ್ರೀಡಾಂಗಣದ ಪಿಚ್‌ನಲ್ಲಿ ಸ್ಪಿನ್ನರ್‌ಗಳ ಪಾತ್ರವೂ ಪ್ರಮು​ಖ​ವೆ​ನಿ​ಸ​ಲಿದ್ದು, ಎರಡೂ ತಂಡ​ಗ​ಳಲ್ಲಿ ಉತ್ತಮ ಸ್ಪಿನ್ನರ್‌ಗಳಿ​ದ್ದಾರೆ. ಪಂದ್ಯ ಭಾರೀ ಪೈಪೋಟಿಯಿಂದ ಕೂಡಿ​ರುವ ಸಾಧ್ಯತೆ ಇದ್ದು, ಕರ್ನಾ​ಟಕ ತಂಡ 4ನೇ ಬಾರಿಗೆ ಪ್ರಶಸ್ತಿ ಎತ್ತಿ​ಹಿ​ಡಿ​ಯುವ ವಿಶ್ವಾಸದಲ್ಲಿದೆ.

ಉಚಿತ ಪ್ರವೇಶ

ಕರ್ನಾ​ಟ​ಕ-ತಮಿ​ಳು​ನಾಡು ನಡು​ವಿನ ಫೈನಲ್‌ ಪಂದ್ಯದ ವೀಕ್ಷಣೆಗೆ ಕೆಎಸ್‌ಸಿಎ ಉಚಿತ ಪ್ರವೇಶ ಕಲ್ಪಿ​ಸಿದೆ. ಚಿನ್ನ​ಸ್ವಾಮಿ ಕ್ರೀಡಾಂಗ​ಣದ ಪಿ3 ಸ್ಟ್ಯಾಂಡ್‌ಗೆ ಪ್ರವೇಶವಿದ್ದು, ಗೇಟ್‌ ನಂ.15ರಿಂದ ಕ್ರೀಡಾಂಗಣ ಪ್ರವೇ​ಶಿ​ಸ​ಬ​ಹು​ದಾ​ಗಿದೆ.

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 2
 

Follow Us:
Download App:
  • android
  • ios