Asianet Suvarna News Asianet Suvarna News

ಇಂದು ಕರ್ನಾ​ಟ​ಕ-ಛತ್ತೀಸ್‌ಗಢ ಸೆಮೀ​ಸ್‌; ರಾಜ್ಯಕ್ಕೆ ಮಯಾಂಕ್ ಬಲ!

ವಿಜಯ್ ಹಜಾರೆ ಟೂರ್ನಿಯಲ್ಲಿ ಭರ್ಜರಿ ಗೆಲುವಿನ ಮೂಲಕ ಸೆಮಿಫೈನಲ್ ತಲುಪಿರುವ ಕರ್ನಾಟಕ ತಂಡ ಇಂದು ಛತ್ತೀಸ್‌ಗಡ ವಿರುದ್ದ ಹೋರಾಟ ನಡೆಸಲಿದೆ. ಸೌತ್ ಆಫ್ರಿಕಾ ವಿರುದ್ದದ ಟೆಸ್ಟ್ ಪಂದ್ಯ ಆಡಿದ ಮಯಾಂಕ್ ಅಗರ್ವಾಲ್ ದಿಢೀರ್ ಕರ್ನಾಟಕ ತಂಡ ಸೇರಿಕೊಂಡಿದ್ದಾರೆ. 

Vijay hazare Karnataka will face chhattisgarh in semifinal
Author
Bengaluru, First Published Oct 23, 2019, 10:29 AM IST

ಬೆಂಗಳೂರು(ಅ.23):  2019ರ ವಿಜಯ್‌ ಹಜಾರೆ ಏಕ​ದಿನ ಟೂರ್ನಿ​ಯಲ್ಲಿ ಗೆಲು​ವಿನ ಓಟ ಮುಂದು​ವ​ರಿ​ಸಿ​ರುವ ಕರ್ನಾ​ಟಕ, ಬುಧ​ವಾರ ಇಲ್ಲಿನ ಚಿನ್ನ​ಸ್ವಾಮಿ ಕ್ರೀಡಾಂಗಣದಲ್ಲಿ ನಡೆ​ಯ​ಲಿ​ರುವ ಸೆಮಿ​ಫೈ​ನಲ್‌ ಪಂದ್ಯ​ದಲ್ಲಿ ಛತ್ತೀಸ್‌ಗಢ ತಂಡ​ವನ್ನು ಎದು​ರಿ​ಸ​ಲಿದೆ. ಪಂದ್ಯಕ್ಕೆ ಮಳೆ ಅಡ್ಡಿ​ಪ​ಡಿ​ಸುವ ಸಾಧ್ಯತೆ ಇದ್ದು, ಒಂದೊಮ್ಮೆ ಫಲಿ​ತಾಂಶ ಬರ​ದಿ​ದ್ದರೆ ಗುಂಪು ಹಂತ​ದಲ್ಲಿ ಹೆಚ್ಚು ಗೆಲುವು ಸಾಧಿ​ಸಿದ ಆಧಾ​ರದ ಮೇಲೆ ಕರ್ನಾ​ಟಕ ಫೈನಲ್‌ಗೇರ​ಲಿದೆ.

ಇದನ್ನೂ ಓದಿ: ಪಾನಿಪೂರಿ ಮಾರುತ್ತಿದ್ದ ಜೈಸ್ವಾಲ್ ದಾಖಲೆಯ ಡಬಲ್ ಸೆಂಚುರಿ ಚಚ್ಚಿದ..!

ರೌಂಡ್‌ ರಾಬಿನ್‌ ಹಂತ​ದಲ್ಲಿ ಆಕ​ರ್ಷಕ ಪ್ರದ​ರ್ಶನ ತೋರಿದ್ದ ಕರ್ನಾ​ಟಕ, ‘ಎ’ ಗುಂಪಿ​ನಲ್ಲಿ ಅಗ್ರ​ಸ್ಥಾನ ಗಳಿಸಿ ನಾಕೌಟ್‌ ಹಂತ​ಕ್ಕೇ​ರಿತ್ತು. ಕ್ವಾರ್ಟರ್‌ ಫೈನಲ್‌ನಲ್ಲಿ ಪುದು​ಚೇರಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಸೆಮೀಸ್‌ಗೇರಿದ ಮನೀಶ್‌ ಪಾಂಡೆ ಪಡೆ, ಮತ್ತೊಂದು ಸುಲಭ ಗೆಲು​ವಿನ ನಿರೀ​ಕ್ಷೆಯಲ್ಲಿದೆ.

ಮಂಗ​ಳ​ವಾರ ದ.ಆ​ಫ್ರಿಕಾ ವಿರುದ್ಧ 3ನೇ ಟೆಸ್ಟ್‌ ಮುಕ್ತಾ​ಯ​ಗೊಂಡ ಬಳಿಕ ರಾಂಚಿಯಿಂದ ಬೆಂಗ​ಳೂ​ರಿಗೆ ಆಗ​ಮಿ​ಸಿದ ಮಯಾಂಕ್‌ ಅಗರ್‌ವಾಲ್‌, ಸೆಮಿ​ಫೈ​ನಲ್‌ನಲ್ಲಿ ಪಾಲ್ಗೊ​ಳ್ಳ​ಲಿ​ದ್ದಾರೆ ಎಂದು ಕೆಎಸ್‌ಸಿಎ ವಕ್ತಾರ ವಿನಯ್‌ ಮೃತ್ಯುಂಜಯ ಖಚಿತ ಪಡಿಸಿದರು. ಅಭಿ​ಷೇಕ್‌ ರೆಡ್ಡಿ ಬದ​ಲಿಗೆ ಮಯಾಂಕ್‌ಗೆ ಸ್ಥಾನ ನೀಡ​ಲಾ​ಗಿದೆ.

ಇದನ್ನೂ ಓದಿ: ಚೊಚ್ಚಲ ದ್ವಿಶತಕ ಸಿಡಿಸಿ ದಾಖಲೆ ಬರೆದ ಸಂಜು ಸಾಮ್ಸನ್!

ಮನೀಶ್‌ ಪಾಂಡೆ, ಕೆ.ಎಲ್‌.ರಾ​ಹುಲ್‌, ದೇವ್‌ದತ್‌ ಪಡಿ​ಕ್ಕಲ್‌ ಉತ್ಕೃಷ್ಟಲಯ​ದ​ಲ್ಲಿ​ದ್ದು, ಮಯಾಂಕ್‌ ಸೇರ್ಪಡೆ ತಂಡದ ಬ್ಯಾಟಿಂಗ್‌ ಬಲ​ವನ್ನು ಮತ್ತಷ್ಟುಹೆಚ್ಚಿ​ಸ​ಲಿದೆ. ಆದರೆ ಟೂರ್ನಿ​ಯಲ್ಲಿ ರಾಜ್ಯದ ಪರ ಗರಿಷ್ಠ ವಿಕೆಟ್‌ ಕಬ​ಳಿ​ಸಿ​ರುವ ವೇಗಿ ಪ್ರಸಿದ್‌್ಧ ಕೃಷ್ಣ ಗಾಯ​ಗೊಂಡಿ​ರುವ ಕಾರಣ, ಪಂದ್ಯಕ್ಕೆ ಅಲ​ಭ್ಯ​ರಾ​ಗ​ಲಿ​ದ್ದಾರೆ. ಅವರ ಅನು​ಪ​ಸ್ಥಿ​ತಿ​ಯಲ್ಲಿ ಹಿರಿಯ ವೇಗಿ ಅಬಿ​ಮನ್ಯು ಮಿಥುನ್‌ ಬೌಲಿಂಗ್‌ ಪಡೆಯನ್ನು ಮುನ್ನ​ಡೆ​ಸ​ಲಿ​ದ್ದಾರೆ.

ಹಾಲಿ ಚಾಂಪಿ​ಯನ್‌ ಮುಂಬೈ ತಂಡದ ವಿರುದ್ಧದ ಕ್ವಾರ್ಟರ್‌ ಫೈನಲ್‌ ಪಂದ್ಯಕ್ಕೆ ಮಳೆ ಅಡ್ಡಿ​ಯಾ​ಗಿ​ದ್ದ​ರಿಂದ ಛತ್ತೀಸ್‌ಗಢಕ್ಕೆ ಸೆಮೀಸ್‌ ಪ್ರವೇಶ ದೊರೆ​ಯಿತು. ಆಶು​ತೋಷ್‌ ಸಿಂಗ್‌, ಹಪ್ರೀರ್‍ತ್‌ ಸಿಂಗ್‌ ಹಾಗೂ ಅಮನ್‌ದೀಪ್‌ ಖಾರೆ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳಾ​ಗಿ​ದ್ದಾರೆ. ಈ ಮೂವರ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇರಿ​ಸಿದೆ.

ಗುಜ​ರಾತ್‌-ತಮಿ​ಳು​ನಾ​ಡು ಮುಖಾ​ಮುಖಿ ಇಂದು
2ನೇ ಸೆಮಿ​ಫೈ​ನಲ್‌ ಪಂದ್ಯ​ದಲ್ಲಿ ತಮಿ​ಳು​ನಾ​ಡು ಹಾಗೂ ಗುಜ​ರಾತ್‌ ತಂಡ​ಗಳು ಮುಖಾ​ಮುಖಿ​ಯಾ​ಗ​ಲಿವೆ. ಪಂದ್ಯ ಬೆಂಗ​ಳೂ​ರಿನ ಹೊರ​ವ​ಲ​ಯ​ದ​ಲ್ಲಿ​ರುವ ಜಸ್ಟ್‌ ಕ್ರಿಕೆಟ್‌ ಮೈದಾ​ನ​ದಲ್ಲಿ ನಡೆ​ಯ​ಲಿದೆ. ಒಂದೊಮ್ಮೆ ಮಳೆಯಿಂದಾಗಿ ಪಂದ್ಯ ಫಲಿ​ತಾಂಶ ಕಾಣ​ದಿ​ದ್ದರೆ, ತಮಿ​ಳು​ನಾಡು ಫೈನಲ್‌ಗೇರ​ಲಿದೆ. ‘ಸಿ​’ ಗುಂಪಿ​ನ​ಲ್ಲಿದ್ದ ತಮಿ​ಳು​ನಾಡು, ಆಡಿದ 9 ಪಂದ್ಯ​ಗ​ಳಲ್ಲೂ ಗೆಲುವು ಸಾಧಿ​ಸಿತ್ತು. ರಾಂಚಿ ಟೆಸ್ಟ್‌ ಮುಗಿಸಿ ಆರ್‌.ಅ​ಶ್ವಿನ್‌ ಬೆಂಗಳೂ​ರಿಗೆ ಆಗ​ಮಿ​ಸಿದ್ದು, ಪಂದ್ಯ​ದಲ್ಲಿ ಆಡ​ಲಿ​ದ್ದಾರೆ ಎನ್ನಲಾ​ಗಿದೆ.

Follow Us:
Download App:
  • android
  • ios