4ನೇ ಟಿ20 ಪಂದ್ಯದಲ್ಲಿನ ಅಂತಿಮ 4 ಓವರ್ ಸಾಕು, ರೋಹಿತ್ ಶರ್ಮಾ ನಾಯಕತ್ವ ವಿವರಿಸಲು. ಇದು ಸತ್ಯ ಕೂಡ. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಿದ ರೀತಿ ಇದೀಗ ಈ ಆಗ್ರಹಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ. ಸಾಮಾಜಿಕ ಜಾಲಾತಾಣದಲ್ಲಿ ಕೊಹ್ಲಿ ಬದಲು ರೋಹಿತ್‌ಗೆ ಕ್ಯಾಪ್ಟನ್ ನೀಡಲು ಆಗ್ರಹ ಹೆಚ್ಚಾಗಿದೆ.

ಅಹಮ್ಮದಾಬಾದ್(ಮಾ.19): ಭಾರತ ಹಾಗೂ ಇಂಗ್ಲೆಂಡ್ ನಡುವಿನ 4ನೇ ಟಿ20 ಪಂದ್ಯ ಉಭಯ ತಂಡಗಳಿಗೆ ಮಹತ್ವದ್ದಾಗಿತ್ತು. ಈ ರೋಚಕ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿ ಸರಣಿ ಜೀವಂತವಾಗಿದೆ. ಆದರೆ ಚೇಸಿಂಗ್ ವೇಳೆ ಇಂಗ್ಲೆಂಡ್ ಇನ್ನೇನು ಈ ಪಂದ್ಯದಲ್ಲೂ ಗೆಲುವು ಸಾಧಿಸುತ್ತೆ ಅನ್ನೋ ವಾತಾವರಣ ನಿರ್ಮಾಣವಾಗಿತ್ತು. ಆದರೆ ಅಂತಿಮ 4 ಓವರ್‌ನಲ್ಲಿ ಪಂದ್ಯದ ಚಿತ್ರಣ ಬದಲಾಗಿತ್ತು. ಇದಕ್ಕೆ ಕಾರಣ ರೋಹಿತ್ ಶರ್ಮಾ ನಾಯಕತ್ವ.

Add Asianetnews Kannada as a Preferred SourcegooglePreferred

ಪಂದ್ಯದ ಮಹತ್ವದ ಘಟ್ಟದಲ್ಲಿ ವಿರಾಟ್‌ ಕೊಹ್ಲಿ ಮೈದಾನ ತೊರೆದಿದ್ದೇಕೆ..?.

ಹೌದು, ವಿರಾಟ್ ಕೊಹ್ಲಿ ಇಂಗ್ಲೆಂಡ್ ರನ್ ಚೇಸಿಂಗ್ ಸಂದರ್ಭದ ಅಂತಿಮ ನಾಲ್ಕು ಓವರ್‌ ಇರುವಾಗ ಮೈದಾನದಿಂದ ಹೊರನಡೆದಿದ್ದರು. ರೋಹಿತ್ ಶರ್ಮಾ 4 ಓವರ್‌ಗಳಲ್ಲಿ ಟೀಂ ಇಂಡಿಯಾವನ್ನು ಮುನ್ನಡೆ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದರು. ಇನ್ನು ಐಪಿಎಲ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನಾಯಕತ್ವ ಸಾಬೀತು ಪಡಿಸಿದ್ದಾರೆ. ಹೀಗಾಗಿ ಇದೀಗ ಟಿ20ಯಲ್ಲಿ ಕೊಹ್ಲಿ ಬದಲು ರೋಹಿತ್‌ಗೆ ನಾಯಕತ್ವ ನೀಡಿ ಎಂದು ಆಗ್ರಹ ಹೆಚ್ಚಾಗಿದೆ.

ಟಾಸ್ ಸೋತವನೂ ಬಾಸ್; 4ನೇ T20 ಗೆಲುವಿನ ಜೊತೆಗೆ ಟೀಕೆಗೆ ಉತ್ತರ ನೀಡಿದ ಭಾರತ!

ರೋಹಿತ್ ಶರ್ಮಾ ನಾಯಕತ್ವ ನೀಡಲು ಕ್ರಿಕೆಟ್ ದಿಗ್ಗಜರು , ಮಾಜಿ ಕ್ರಿಕೆಟಿಗರ ಪರೋಕ್ಷ ಸೂಚನೆ ನೀಡಿದ್ದಾರೆ. ಇನ್ನು ಅಭಿಮಾನಿಗಳು ರೋಹಿತ್‌ಗೆ ನಾಯಕತ್ವ ನೀಡಿದರೆ ಮಾತ್ರ ಐಸಿಸಿ ಟ್ರೋಫಿ ಗೆಲ್ಲಲು ಸಾಧ್ಯ ಅನ್ನೋ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Scroll to load tweet…
Scroll to load tweet…
Scroll to load tweet…