Asianet Suvarna News Asianet Suvarna News

ಮುಷ್ತಾಕ್‌ ಅಲಿ ಟಿ20: ಸೂಪರ್‌ ಲೀಗ್‌ ವೇಳಾ​ಪಟ್ಟಿ ಪ್ರಕಟ

ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಸೂಪರ್ ಲೀಗ್ ವೇಳಾಪಟ್ಟಿ ಪ್ರಕಟಗೊಂಡಿದ್ದು, ಹಾಲಿ ಚಾಂಪಿಯನ್ ಕರ್ನಾಟಕ ತಂಡಕ್ಕೆ ಕಠಿಣ ಪೈಪೋಟಿ ಎದುರಾಗಲಿದೆ. ಸೂಪರ್ ಲೀಗ್ ಹಂತದ ಮೊದಲ ಪಂದ್ಯದಲ್ಲಿ ಕರ್ನಾಟಕ ತಂಡವು ನ.21ರಂದು ರಾಜ​ಸ್ಥಾನ ತಂಡವನ್ನು ಎದುರಿಸಲಿದೆ.

Syed Mushtaq Ali Trophy Super League Schedule Announced
Author
Bengaluru, First Published Nov 19, 2019, 10:00 AM IST

ಬೆಂಗ​ಳೂ​ರು(ನ.19): ಸಯ್ಯದ್‌ ಮುಷ್ತಾಕ್‌ ಅಲಿ ರಾಷ್ಟ್ರೀಯ ಟಿ20 ಟೂರ್ನಿಯ ಗುಂಪು ಹಂತ ಮುಕ್ತಾ​ಯ​ಗೊಂಡಿದ್ದು, ಸೂಪರ್‌ ಲೀಗ್‌ ಹಂತ​ದ ವೇಳಾ​ಪ​ಟ್ಟಿ ಸಿದ್ಧ​ಗೊಂಡಿದೆ. ಹಾಲಿ ಚಾಂಪಿ​ಯನ್‌ ಕರ್ನಾ​ಟ​ಕಕ್ಕೆ ಕಠಿಣ ಸವಾಲು ಎದು​ರಾ​ಗ​ಲಿದೆ. 

ಮುಷ್ತಾಕ್ ಅಲಿ ಟ್ರೋಫಿ: ಗೋವಾ ಮಣಿಸಿ ಸೂಪರ್‌ ಲೀಗ್‌ ಪ್ರವೇಶಿಸಿದ ಕರ್ನಾಟಕ

ನ.21ರಿಂದ ಆರಂಭ​ಗೊ​ಳ್ಳಲಿರುವ ಸೂಪರ್‌ ಲೀಗ್‌ನ ಮೊದಲ ಪಂದ್ಯ​ದಲ್ಲಿ ಕರ್ನಾ​ಟಕ, ‘ಬಿ’ ಗುಂಪಿ​ನಲ್ಲಿ 2ನೇ ಸ್ಥಾನ ಪಡೆದ ರಾಜ​ಸ್ಥಾನ ತಂಡವನ್ನು ಎದು​ರಿ​ಸ​ಲಿದೆ. 2ನೇ ಪಂದ್ಯ​ದಲ್ಲಿ ‘ಇ’ ಗುಂಪಿ​ನಲ್ಲಿ ಅಗ್ರ​ಸ್ಥಾನ ಪಡೆದ ದೆಹ​ಲಿ, 3ನೇ ಪಂದ್ಯ​ದ​ಲ್ಲಿ ‘ಸಿ’ ಗುಂಪಿ​ನಲ್ಲಿ ಅಗ್ರಸ್ಥಾನ ಪಡೆದ ಮಹಾ​ರಾಷ್ಟ್ರ, 4ನೇ ಪಂದ್ಯ​ದ​ಲ್ಲಿ ‘ಡಿ’ ಗುಂಪಿ​ನಲ್ಲಿ 2ನೇ ಸ್ಥಾನ ಪಡೆದ ಹರ್ಯಾಣ ತಂಡ​ಗಳನ್ನು ಎದು​ರಿಸ​ಲಿದೆ. ಮತ್ತೊಂದು ಗುಂಪಿ​ನಲ್ಲಿ ಬರೋಡಾ, ತಮಿ​ಳು​ನಾಡು, ಪಂಜಾಬ್‌, ಮುಂಬೈ ಹಾಗೂ ಜಾರ್ಖಂಡ್‌ ತಂಡ​ಗಳು ಸ್ಥಾನ ಪಡೆ​ದಿವೆ.

ಸೂಪರ್‌ ಲೀಗ್‌ ಮಾದರಿ ಹೇಗೆ?: ನ.21ರಿಂದ ಆರಂಭ​ಗೊ​ಳ್ಳ​ಲಿ​ರುವ ಸೂಪರ್‌ ಲೀಗ್‌ನಲ್ಲಿ ಒಟ್ಟು 10 ತಂಡ​ಗಳು ಸೆಣ​ಸ​ಲಿವೆ. ಟೂರ್ನಿಗೆ ಪ್ರವೇ​ಶಿ​ಸಿದ್ದ 38 ತಂಡ​ಗ​ಳನ್ನು 5 ಗುಂಪು​ಗ​ಳಾಗಿ ವಿಂಗ​ಡಿ​ಸ​ಲಾ​ಗಿತ್ತು. ‘ಎ’ ಹಾಗೂ ‘ಬಿ’ ಗುಂಪಿ​ನಲ್ಲಿ ತಲಾ 7, ‘ಸಿ’, ‘ಡಿ’ ಹಾಗೂ ‘ಇ’ ಗುಂಪಿ​ನಲ್ಲಿ ತಲಾ 8 ತಂಡ​ಗಳಿದ್ದವು. 5 ಗುಂಪು​ಗ​ಳಲ್ಲಿ ಅಗ್ರ 2 ಸ್ಥಾನ​ಗ​ಳನ್ನು ಪಡೆದ ತಂಡ​ಗಳು ಸೂಪರ್‌ ಲೀಗ್‌ಗೆ ಪ್ರವೇ​ಶಿ​ಸಿವೆ. ಸೂಪರ್‌ ಲೀಗ್‌ನಲ್ಲಿ ತಲಾ 5 ತಂಡ​ಗಳ 2 ಗುಂಪು​ಗ​ಳನ್ನು ಮಾಡ​ಲಾ​ಗಿದ್ದು, ಗುಂಪಿ​ನಲ್ಲಿ ಅಗ್ರ 2 ಸ್ಥಾನ​ಗ​ಳನ್ನು ಪಡೆ​ಯುವ ತಂಡ​ಗಳು ಸೆಮಿ​ಫೈ​ನಲ್‌ಗೆ ಪ್ರವೇ​ಶಿಸಲಿವೆ. ಸೂಪರ್‌ ಲೀಗ್‌ ಹಂತ​ದಲ್ಲಿ ಪ್ರತಿ ತಂಡ 4 ಪಂದ್ಯ​ಗ​ಳನ್ನು ಆಡ​ಲಿದೆ.

 

ನ.27ಕ್ಕೆ ಸೂಪರ್‌ ಲೀಗ್‌ ಹಂತ ಮುಕ್ತಾ​ಯ​ಗೊ​ಳ್ಳ​ಲಿದ್ದು, ನ.29ಕ್ಕೆ ಸೆಮಿ​ಫೈ​ನಲ್‌ ಪಂದ್ಯ​ಗಳು ನಡೆ​ಯ​ಲಿವೆ. ಡಿ.1ರಂದು ಫೈನಲ್‌ ಪಂದ್ಯ ನಡೆ​ಯ​ಲಿದೆ.

ಕರ್ನಾ​ಟ​ಕದ ಸೂಪರ್‌ ಲೀಗ್‌ ವೇಳಾ​ಪ​ಟ್ಟಿ

ದಿನಾಂಕ ​ಎ​ದು​ರಾಳಿ

ನ.21  ರಾಜ​ಸ್ಥಾನ

ನ.22   ದೆಹ​ಲಿ

ನ.24   ಮಹಾ​ರಾಷ್ಟ್ರ

ನ.25   ಹರ್ಯಾ​ಣ

ಗೌತಮ್‌ ಬದಲು ತಂಡಕ್ಕೆ ಅನಿ​ರು​ದ್ಧ್

ಸೂಪರ್‌ ಲೀಗ್‌ನ 4 ಪಂದ್ಯ​ಗ​ಳಿಗೆ ಸೋಮವಾರ ಕರ್ನಾ​ಟಕ ತಂಡ​ವನ್ನು ಪ್ರಕ​ಟಿ​ಸ​ಲಾ​ಯಿತು. ವೈಯ​ಕ್ತಿಕ ಕಾರಣಗಳಿಂದ ಆಲ್ರೌಂಡರ್‌ ಕೆ.ಗೌ​ತಮ್‌ ತಂಡ​ದಿಂದ ಹೊರ​ಗು​ಳಿ​ದಿದ್ದು, ಅವರ ಬದ​ಲಿಗೆ ಅನಿ​ರುದ್ಧ್ ಜೋಶಿಗೆ ಸ್ಥಾನ ನೀಡ​ಲಾ​ಗಿದೆ.

ತಂಡ: ಮನೀಶ್‌ ಪಾಂಡೆ (ನಾಯಕ), ಕರುಣ್‌ ನಾಯರ್‌, ಕೆ.ಎಲ್‌. ರಾಹುಲ್‌, ದೇವದತ್‌ ಪಡಿಕ್ಕಲ್‌, ರೋಹನ್‌ ಕದಂ, ಪವನ್‌ ದೇಶಪಾಂಡೆ, ಲುವ್ನಿತ್‌ ಸಿಸೋಡಿಯಾ, ಶ್ರೇಯಸ್‌ ಗೋಪಾಲ್‌, ಜೆ. ಸುಚಿತ್‌, ಅಭಿ​ಮನ್ಯು ಮಿಥುನ್‌, ಪ್ರವೀಣ್‌ ದುಬೆ, ವಿ. ಕೌಶಿಕ್‌, ರೋನಿತ್‌ ಮೋರೆ, ಮನೋಜ್‌ ಎಂ. ಅನಿರುದ್ಧ್ ಜೋಶಿ.
 

Follow Us:
Download App:
  • android
  • ios