ಎರಡನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್‌ ಟೂರ್ನಿಗೆ ಈಗಿನಿಂದಲೇ ಸಿದ್ದತೆತವರು, ತವ​ರಿ​ನಾಚೆ ಮಾದ​ರಿ​ಯಲ್ಲಿ ಇದೇ ವರ್ಷ ದೀಪಾ​ವಳಿ ನಡೆಸಲು ಬಿಸಿಸಿಐ ಚಿಂತನೆಈ ವರ್ಷದ ಟೂರ್ನಿ ಮಾರ್ಚ್‌ 4ರಿಂದ 26ರ ವರೆಗೆ ನಡೆದಿತ್ತು

ಮುಂಬೈ(ಏ.15): 2ನೇ ಆವೃ​ತ್ತಿಯ ವುಮೆನ್ಸ್‌ ಪ್ರೀಮಿ​ಯರ್‌ ಲೀಗ್‌​(​ಡ​ಬ್ಲ್ಯು​ಪಿ​ಎ​ಲ್‌) ತವರು, ತವ​ರಿ​ನಾಚೆ ಮಾದ​ರಿ​ಯಲ್ಲಿ ಇದೇ ವರ್ಷ ದೀಪಾ​ವಳಿ ಸಮ​ಯ​ದಲ್ಲಿ ನಡೆ​ಸಲು ಚಿಂತನೆ ನಡೆ​ಸು​ತ್ತಿ​ದ್ದೇವೆ ಎಂದು ಬಿಸಿ​ಸಿಐ ಕಾರ‍್ಯ​ದರ್ಶಿ ಜಯ್‌ ಶಾ ಹೇಳಿ​ದ್ದಾರೆ. ಆದರೆ ವರ್ಷ​ದಲ್ಲಿ 2 ಆವೃತ್ತಿ ನಡೆ​ಸುವ ಉದ್ದೇ​ಶ​ವಿಲ್ಲ ಎಂದು ಅವರು ಖಚಿ​ತ​ಪ​ಡಿ​ಸಿದ್ದು, ಬಿಡು​ವಿನ ಸಮಯ ನೋಡಿ​ಕೊಂಡು ಟೂರ್ನಿಯನ್ನು ಆಯೋ​ಜಿ​ಸ​ಲಿ​ದ್ದೇವೆ ಎಂದು ಶುಕ್ರ​ವಾರ ಮಾಧ್ಯ​ಮ​ಗಳಿಗೆ ಪ್ರತಿ​ಕ್ರಿ​ಯಿ​ಸಿ​ದ್ದಾರೆ. 

ಡಬ್ಲ್ಯು​ಪಿ​ಎ​ಲ್‌ ಈಗ ತನ್ನದೇ ಆದ ಅಭಿಮಾನಿಗಳ ಬಳಗ ಹೊಂದಿದೆ. ಅಭಿಮಾನಿಗಳ ಸಂಖ್ಯೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾ​ಗ​ಲಿದೆ ಎಂದು ತಿಳಿ​ಸಿ​ದ್ದಾರೆ. ಈ ವರ್ಷದ ಟೂರ್ನಿ ಮಾರ್ಚ್‌ 4ರಿಂದ 26ರ ವರೆಗೆ ಮುಂಬೈನ ಡಿ.ವೈ.ಪಾ​ಟೀಲ್‌ ಹಾಗೂ ಬ್ರೆಬೋರ್ನ್‌ ಕ್ರೀಡಾಂಗ​ಣ​ಗ​ಳಲ್ಲಿ ಆಯೋ​ಜಿಸ​ಲಾ​ಗಿ​ತ್ತು. ಡೆಲ್ಲಿ ತಂಡ​ವನ್ನು ಫೈನ​ಲ್‌​ನಲ್ಲಿ ಸೋಲಿಸಿ ಮುಂಬೈ ಚಾಂಪಿ​ಯನ್‌ ಆಗಿ​ತ್ತು.

ಏಷ್ಯಾ​ಕಪ್‌ ಸ್ಥಳಾಂತ​ರಕ್ಕೆ ಅಭಿ​ಪ್ರಾಯ ಸಂಗ್ರ​ಹ

ಏಷ್ಯಾ​ಕಪ್‌ ಸ್ಥಳಾಂತ​ರದ ಬಗ್ಗೆ ಇತರ ದೇಶ​ಗಳ ಜೊತೆ ಮಾತು​ಕತೆ ನಡೆ​ಸು​ತ್ತಿ​ದ್ದೇವೆ. ಎಲ್ಲರ ಅಭಿ​ಪ್ರಾಯ ಆಧ​ರಿಸಿ ಟೂರ್ನಿ ನಡೆಯುವ ಸ್ಥಳ ಹಾಗೂ ಭಾರ​ತ-ಪಾಕಿ​ಸ್ತಾನ ಪಂದ್ಯ ಆಯೋ​ಜನೆ ಬಗ್ಗೆ ಅಂತಿಮ ನಿರ್ಧಾರ ಕೈಗೊ​ಳ್ಳ​ಲಿ​​ದ್ದೇವೆ ಎಂದು ಏಷ್ಯನ್‌ ಕ್ರಿಕೆ​ಟ್‌ ಸಮಿತಿ​(​ಎ​ಸಿ​ಸಿ​) ಮುಖ್ಯ​ಸ್ಥರೂ ಆಗಿ​ರುವ ಜಯ್‌ ಶಾ ಪ್ರತಿ​ಕ್ರಿ​ಯಿ​ಸಿ​ದ್ದಾ​ರೆ. ಈ ಮೊದಲು ಶಾ ಭಾರತ ತಂಡ ಪಾಕಿ​ಸ್ತಾ​ನಕ್ಕೆ ತೆರ​ಳು​ವು​ದಿಲ್ಲ ಎಂದು ಸ್ಪಷ್ಟ​ಪ​ಡಿ​ಸಿ​ದ್ದರು. ಆದರೆ ಪಾಕ್‌ ಕ್ರಿಕೆಟ್‌ ಮಂಡಳಿ ಟೂರ್ನಿ ಪಾಕ್‌​ನಲ್ಲೇ ನಡೆ​ಯ​ಲಿದೆ ಎಂದು ಖಚಿ​ತ​ಪ​ಡಿ​ಸಿದೆ. ಈ ಬಗ್ಗೆ ಎಸಿಸಿ ಸದ್ಯದಲ್ಲೇ ಅಂತಿಮ ನಿರ್ಧಾರ ಕೈಗೊ​ಳ್ಳ​ಲಿದೆ.

IPL 2023 ಕುಗ್ಗಿರುವ ಡೆಲ್ಲಿಯನ್ನು ಬಗ್ಗುಬಡಿಯುತ್ತಾ ಆರ್‌ಸಿಬಿ?

ಹಾರ್ದಿ​ಕ್‌ ಪಾಂಡ್ಯಗೆ 12 ಲಕ್ಷ ರುಪಾಯಿ ದಂಡ

ಮೊ​ಹಾ​ಲಿ: ಐಪಿ​ಎ​ಲ್‌ನ ಪಂಜಾಬ್‌ ಕಿಂಗ್‌್ಸ ವಿರು​ದ್ಧದ ಪಂದ್ಯ​ದಲ್ಲಿ ನಿಧಾ​ನ​ಗತಿ ಬೌಲಿಂಗ್‌​ಗಾಗಿ ಗುಜ​ರಾತ್‌ ಟೈಟಾನ್ಸ್‌ ನಾಯಕ ಹಾರ್ದಿಕ್‌ ಪಾಂಡ್ಯಗೆ 12 ಲಕ್ಷ ರುಪಾಯಿ ದಂಡ ವಿಧಿ​ಸ​ಲಾ​ಗಿದೆ. ಇದು ಗುಜ​ರಾ​ತ್‌ನ ಮೊದಲ ನಿಯಮ ಉಲ್ಲಂಘನೆಯಾಗಿದ್ದು, 2ನೇ ಬಾರಿ ನಿಯಮ ಉಲ್ಲಂಘಿಸಿದರೆ ನಾಯ​ಕ​ನಿಗೆ 24 ಲಕ್ಷ ರುಪಾಯಿ ದಂಡ ಹಾಕಲಾಗುತ್ತದೆ. 3ನೇ ಬಾರಿ ಉಲ್ಲಂಘಿಸಿ​ದರೆ ಹಾರ್ದಿಕ್‌ ಒಂದು ಪಂದ್ಯ ನಿಷೇ​ಧ​ಕ್ಕೊ​ಳ​ಗಾ​ಗ​ಲಿ​ದ್ದಾರೆ.

ಏಪ್ರಿಲ್ 23ರಂದು ಹಸಿರು ಜೆರ್ಸಿ ಧರಿಸಿ ಆಡ​ಲಿ​ರುವ ಆರ್‌​ಸಿ​ಬಿ

ಬೆಂಗ​ಳೂ​ರು: ಏಪ್ರಿಲ್‌ 23ರಂದು ಚಿನ್ನ​ಸ್ವಾಮಿ ಕ್ರೀಡಾಂಗ​ಣ​ದಲ್ಲಿ ನಡೆ​ಯ​ಲಿ​ರುವ ರಾಜ​ಸ್ಥಾ​ನ ರಾಯಲ್ಸ್‌ ವಿರುದ್ಧದ ಪಂದ್ಯ​ದಲ್ಲಿ ಆರ್‌​ಸಿಬಿ ಆಟ​ಗಾ​ರರು ಹಸಿರು ಜೆರ್ಸಿ ಧರಿಸಿ ಆಡ​ಲಿ​ದ್ದಾರೆ. ವಿರಾಟ್‌ ಕೊಹ್ಲಿ, ಫಾಫ್ ಡು ಪ್ಲೆಸಿಸ್ ಹಸಿ​ರು ಜೆರ್ಸಿ​ ಧರಿ​ಸಿ​ರುವ ಫೋಟೋ​ವನ್ನು ಆರ್‌​ಸಿಬಿ ಈಗಾ​ಗಲೇ ಟ್ವೀಟ​ರ್‌​ನಲ್ಲಿ ಹಂಚಿ​ಕೊಂಡಿದೆ. 

ಪರಿ​ಸರ ಜಾಗೃ​ತಿ​ಗಾಗಿ ಹಲವು ವರ್ಷಗಳಿಂದಲೂ ಆರ್‌​ಸಿಬಿ ಆಟ​ಗಾ​ರರು ಟೂರ್ನಿಯ ಒಂದು ಪಂದ್ಯದಲ್ಲಿ ಹಸಿರು ಜೆರ್ಸಿ ಧರಿ​ಸಿ ಆಡುವ ಸಂಪ್ರ​ದಾಯ ಬೆಳೆ​ಸಿ​ಕೊಂಡಿ​ದ್ದಾರೆ. 2021ರಲ್ಲಿ ಕೋವಿಡ್‌ ವಾರಿ​ಯ​​ರ್ಸ್‌​ಗಾಗಿ ನೀಲಿ ಜೆರ್ಸಿ ಧರಿಸಿ ಆಡಿ​ದ್ದರು.