ಇಂದಿನಿಂದ ಇರಾನಿ ಕಪ್ ಪಂದ್ಯ ಆರಂಭಗ್ವಾಲಿಯರ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಶೇಷ ಭಾರತಕ್ಕೆ ಮಧ್ಯಪ್ರದೇಶ ಸವಾಲುಶೇಷ ಭಾರತ ತಂಡವನ್ನು ಮುನ್ನಡೆಸಲಿರುವ ಮಯಾಂಕ್‌ ಅಗರ್‌ವಾಲ್‌

ಗ್ವಾಲಿ​ಯ​ರ್‌(ಮಾ.01): 2022-23ರ ಇರಾನಿ ಕಪ್‌ ಕ್ರಿಕೆಟ್‌ ಟೂರ್ನಿ​ ಬುಧ​ವಾರ ಆರಂಭ​ವಾ​ಗ​ಲಿದ್ದು, ಶೇಷ ಭಾರತ ತಂಡ 2021-22ರ ಋುತು​ವಿನ ರಣಜಿ ಟ್ರೋಪಿ ಚಾಂಪಿ​ಯನ್‌ ಮಧ್ಯ​ಪ್ರ​ದೇಶ ವಿರುದ್ಧ ಸೆಣ​ಸಾ​ಡ​ಲಿದೆ. ಕೋವಿಡ್‌ನಿಂದ ಮುಂದೂಡಿಕೆಯಾಗಿದ್ದ 2021-22ರ ಋುತು​ವಿನ ಪಂದ್ಯ ಇದಾಗಿದ್ದು, ಶೇಷ ಭಾರತ ತಂಡ​ಕ್ಕೆ ಕರ್ನಾ​ಟ​ಕದ ಮಯಾಂಕ್‌ ಅಗ​ರ್‌​ವಾಲ್‌ ನಾಯ​ಕತ್ವ ವಹಿ​ಸ​ಲಿ​ದ್ದಾ​ರೆ. 

ಮತ್ತೊಮ್ಮೆ ಭಾರತ ತಂಡ​ದಲ್ಲಿ ಸ್ಥಾನ ಗಿಟ್ಟಿ​ಸಲು ಎದುರು ನೋಡು​ತ್ತಿ​ರುವ ಮಯಾಂಕ್‌ ತಂಡ​ವನ್ನು ಚಾಂಪಿ​ಯನ್‌ ಪಟ್ಟ​ಕ್ಕೇ​ರಿ​ಸುವ ನಿರೀ​ಕ್ಷೆ​ಯ​ಲ್ಲಿ​ದ್ದಾರೆ. ಅಭಿ​ಮನ್ಯು ಈಶ್ವ​ರನ್‌, ಯಶಸ್ವಿ ಜೈಸ್ವಾಲ್‌, ಹಾರ್ವಿಕ್‌ ದೇಸಾಯಿ, ಚೇತನ್‌ ಸಕಾ​ರಿ​ಯಾ, ಯಶ್‌ ಧುಳ್‌ ಸೇರಿ​ದಂತೆ ಪ್ರಮು​ಖ​ರು ತಂಡ​ದಲ್ಲಿ ಸ್ಥಾನ ಪಡೆ​ದಿ​ದ್ದಾರೆ. ಮಧ್ಯ​ಪ್ರ​ದೇಶ ತಂಡವನ್ನು ಹಿಮಾಂಶು ಮಂತ್ರಿ ಮುನ್ನ​ಡೆ​ಸ​ಲಿ​ದ್ದು, ರಜತ್‌ ಪಾಟೀ​ದಾರ್‌, ಆದಿತ್ಯ ಶ್ರಿವಾ​ಸ್ತವ ಅನು​ಪ​ಸ್ಥಿತಿ ತಂಡ​ವನ್ನು ಕಾಡ​ಬ​ಹುದು. ಆದರೆ ವೆಂಕ​ಟೇಶ್‌ ಅಯ್ಯರ್‌, ಆವೇಶ್‌ ಖಾನ್‌, ಕುಮಾರ್‌ ಕಾರ್ತಿ​ಕೇ​ಯ, ಯಶ್‌ ದುಬೆ ತಂಡ​ದ​ಲ್ಲಿ​ದ್ದಾರೆ.

ಇತ್ತೀಚೆಗಷ್ಟೇ ಮುಕ್ತಾಯವಾದ ರಣಜಿ ಟ್ರೋಫಿ ಟೂರ್ನಿಯಲ್ಲಿ ಮಯಾಂಕ್ ಅಗರ್‌ವಾಲ್ 13 ಇನಿಂಗ್ಸ್‌ಗಳನ್ನಾಡಿ 990 ರನ್ ಬಾರಿಸುವ ಮೂಲಕ ರನ್ ಮಳೆ ಹರಿಸಿದ್ದರು. ಮಯಾಂಕ್‌ ಅಗರ್‌ವಾಲ್ ನೇತೃತ್ವದ ಕರ್ನಾಟಕ ತಂಡವು ರಣಜಿ ಟ್ರೋಫಿ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿತ್ತಾದರೂ, ಸೌರಾಷ್ಟ್ರ ಎದುರು ಮುಖಭಂಗ ಅನುಭವಿಸುವ ಮೂಲಕ ಫೈನಲ್‌ಗೇರುವ ಅವಕಾಶ ಕೈಚೆಲ್ಲಿತ್ತು. ಮಯಾಂಕ್‌ ಅಗರ್‌ವಾಲ್‌ 2022ರ ಮಾರ್ಚ್‌ನಲ್ಲಿ ಶ್ರೀಲಂಕಾ ವಿರುದ್ದ ಕೊನೆಯ ಬಾರಿಗೆ ಟೀಂ ಇಂಡಿಯಾ ಪರ ಕಾಣಿಸಿಕೊಂಡಿದ್ದರು. ರಣಜಿ ಟ್ರೋಫಿ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿರುವ ಮಯಾಂಕ್‌ ಅಗರ್‌ವಾಲ್, ಇದೀಗ ಇರಾನಿ ಟ್ರೋಫಿಯಲ್ಲೂ ಮಿಂಚಿ, ಟೀಂ ಇಂಡಿಯಾಗೆ ಭರ್ಜರಿಯಾಗಿಯೇ ಕಮ್‌ಬ್ಯಾಕ್ ಮಾಡಲು ಎದುರು ನೋಡುತ್ತಿದ್ದಾರೆ.

Irani Cup: ಶೇಷ ಭಾರತ ತಂಡಕ್ಕೆ ಮಯಾಂಕ್‌ ಅಗರ್‌ವಾಲ್‌ ನಾಯಕ

ಇರಾನಿ ಟ್ರೋಫಿಯು ಇಂದೋರ್‌ನ ಹೋಲ್ಕರ್ ಮೈದಾನದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಬಾರ್ಡರ್‌-ಗವಾಸ್ಕರ್ ಟೆಸ್ಟ್‌ ಸರಣಿಯ ಮೂರನೇ ಪಂದ್ಯವು ಧರ್ಮಶಾಲಾದಿಂದ ಇಂದೋರ್‌ಗೆ ಸ್ಥಳಾಂತರವಾದ ಹಿನ್ನೆಲೆಯಲ್ಲಿ ಇರಾನಿ ಕಪ್ ಪಂದ್ಯವನ್ನು ಇಂದೋರ್‌ನಿಂದ ಗ್ವಾಲಿಯರ್‌ಗೆ ಶಿಫ್ಟ್‌ ಮಾಡಲಾಗಿದೆ. 

ಶೇಷ ಭಾರತ ತಂಡ: ಮಯಾಂಕ್‌ ಅಗರ್‌ವಾಲ್(ನಾಯಕ), ಸುದೀಪ್‌ ಕುಮಾರ್‌, ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್, ಹಾರ್ವಿಕ್‌ ದೇಸಾಯಿ, ಮುಕೇಶ್‌, ಅತಿತ್‌, ಚೇತನ್ ಸಕಾರಿಯಾ, ನವದೀಪ್ ಸೈನಿ, ಉಪೇಂದ್ರ ಯಾದವ್‌, ಮಯಾಂಕ್‌ ಮರ್ಕಂಡೆ, ಸೌರಭ್‌, ಆಕಾಶ್‌, ಇಂದ್ರಜಿತ್‌, ಪುಲ್ಕಿತ್‌, ಯಶ್‌ ಧುಳ್‌.

ಮಧ್ಯಪ್ರದೇಶ ತಂಡ: ಹಿಮಾಂಶು ಮಂತ್ರಿ(ನಾಯಕ& ವಿಕೆಟ್ ಕೀಪರ್), ರಜತ್ ಪಾಟೀದಾರ್, ಯಶ್ ದುಬೆ, ಹರ್ಷ್‌ ಗೌಲಿ, ಶುಭಂ ಶರ್ಮಾ, ವೆಂಕಟೇಶ್ ಅಯ್ಯರ್, ಅಕ್ಷಾಂತ್ ರಘುವಂಶಿ, ಅಮನ್ ಸೋಲಂಕಿ, ಕುಮಾರ್ ಕಾರ್ತಿಕೇಯ, ಸಾರಾಂಶ್‌ ಜೈನ್, ಆವೇಶ್ ಖಾನ್, ಅಂಕಿತ್ ಕುಶ್ವಾ, ಗೌರವ್ ಯಾದವ್, ಅನುಭವ್ ಅಗರ್‌ವಾಲ್, ಮಿಹಿರ್ ಹಿರ್ವಾನಿ.

ಪಂದ್ಯ: ಬೆಳಗ್ಗೆ 9.30ಕ್ಕೆ