ಹಿಮ್ಮಡಿ ಗಾಯಕ್ಕೆ ಒಳಗಾಗಿರುವ ಆರ್‌ಸಿಬಿ ಕ್ರಿಕೆಟಿಗ ರಜತ್ ಪಾಟೀದಾರ್16ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಿಂದ ಹೊರಬಿದ್ದಿರುವ ರಜತ್ ಪಾಟೀದಾರ್ಇದೀಗ ಶಸ್ತ್ರಚಿಕಿತ್ಸೆಗೆ ಒಳಗಾದ ಪಾಟೀದಾರ್

ಬೆಂಗ​ಳೂ​ರು(ಮೇ.04): ಹಿಮ್ಮಡಿ ಗಾಯ​ಕ್ಕೆ ತುತ್ತಾ​ಗಿ​ದ್ದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಯುವ ಬ್ಯಾಟರ್‌ ರಜತ್‌ ಪಾಟೀ​ದಾರ್‌ ಶಸ್ತ್ರ​ಚಿ​ಕಿ​ತ್ಸೆಗೆ ಒಳ​ಗಾ​ಗಿ​ದ್ದಾರೆ. ಈ ಬಗ್ಗೆ ಸಾಮಾ​ಜಿಕ ತಾಣ​ದಲ್ಲಿ ತಮ್ಮ ಫೋಟೋ ಹಂಚಿ​ಕೊಂಡು ಮಾಹಿತಿ ನೀಡಿ​ರುವ ರಜತ್‌, ‘ಶಸ್ತ್ರ​ಚಿ​ಕಿತ್ಸೆ ಯಶ​ಸ್ವಿ​ಯಾ​ಗಿದೆ. ಚೇತ​ರಿ​ಸಿ​ಕೊ​ಳ್ಳು​ತ್ತಿ​ದ್ದೇ​ನೆ’ ಎಂದಿ​ದ್ದಾರೆ.

 ಐಪಿ​ಎಲ್‌ ಆರಂಭ​ಕ್ಕೂ ಮುನ್ನ ಅಭ್ಯಾಸ ಶಿಬಿ​ರದ ವೇಳೆ ಆರ್‌​ಸಿಬಿ ತಂಡ​ವನ್ನು ಕೂಡಿ​ಕೊಂಡಿ​ದ್ದರೂ ಗಾಯ​ದಿಂದಾಗಿ ಟೂರ್ನಿ​ಯಿಂದಲೇ ಹೊರ​ಬಿ​ದ್ದಿ​ದ್ದರು. ಬಳಿಕ ಬೆಂಗ​ಳೂ​ರಿನ ಎನ್‌​ಸಿ​ಎ​ನಲ್ಲಿ ಪುನ​ಶ್ಚೇ​ತನ ಶಿಬಿ​ರ​ದಲ್ಲಿ ಪಾಲ್ಗೊಂಡಿದ್ದರು.

Scroll to load tweet…

ಯುಪಿ ಪೊಲೀಸ್‌ ಟ್ವೀಟಲ್ಲೂ ‘ಕೊಹ್ಲಿ-ಗಂಭೀರ್‌ ಕದ​ನ​’!

ಲಖ​ನೌ: ಐಪಿ​ಎಲ್‌ ವೇಳೆ ವಿರಾಟ್‌ ಕೊಹ್ಲಿ ಹಾಗೂ ಗೌತಮ್‌ ಗಂಭೀರ್‌ ನಡು​ವಿನ ಕದ​ನವನ್ನು ಇದೀಗ ಉತ್ತರ ಪ್ರದೇಶ ಪೊಲೀ​ಸರು ಟ್ವೀಟ​ರ್‌​ನಲ್ಲಿ ಜಾಗೃ​ತಿ​ಗಾಗಿ ಬಳ​ಸಿ​ಕೊಂಡಿದ್ದು, ಸಾಮಾ​ಜಿಕ ತಾಣ​ಗ​ಳಲ್ಲಿ ವೈರಲ್‌ ಆಗಿದೆ. ತುರ್ತು ಸಹಾಯವಾಣಿ ‘112’ರ ಪ್ರಚಾರದ ಬಗ್ಗೆ ಟ್ವೀಟ್‌ ಮಾಡಿ​ರುವ ಯುಪಿ ಪೊಲೀ​ಸರು, ‘ಯಾವುದೇ ಸಮಸ್ಯೆಯೂ ನಮಗೆ ವಿರಾಟ್‌(ದೊಡ್ಡ), ಗಂಭೀರ್‌(ಗಂಭೀರ) ಅಲ್ಲ. ತುರ್ತು ಸಂದರ್ಭಗಳಲ್ಲಿ 112ಕ್ಕೆ ಕರೆ ಮಾಡಿ’ ಎಂದು ತಿಳಿ​ಸಿ​ದ್ದಾ​ರೆ.

ವೃಷಭ- ವೃಶ್ಚಿಕ ರಾಶಿಯ ಅಪರೂಪದ ಹೊಂದಾಣಿಕೆಯಲ್ಲಿದೆ ವಿರುಷ್ಕಾ ಜೋಡಿಯ ಸುಖ ದಾಂಪತ್ಯದ ಗುಟ್ಟು!

ಮತ್ತೊಂದು ಟ್ವೀಟ್‌​ನಲ್ಲಿ ‘ವಾ​ಗ್ವಾದದಿಂದ ಹಿಂದೆ ಸರಿ​ಯಬೇಕೇ ಹೊರತು ನಮಗೆ ಕರೆ ಮಾಡು​ವು​ದ​ರಿಂದ ಅಲ್ಲ​’ ಎಂದಿದೆ. ಇದೇ ವೇಳೆ ಹುಬ್ಬ​ಳ್ಳಿ-ಧಾರ​ವಾಡ ನಗರ ಪೊಲೀಸರು, ‘ಗಂಭೀರ ಸಮ​ಸ್ಯೆ​ಗ​ಳಿ​ದ್ದಾಗ 112ಕ್ಕೆ ಕರೆ ಮಾಡಿ. ವಿರಾಟ್‌ ರೂಪ​ದಲ್ಲಿ ಸಹಾಯ ಮಾಡು​ತ್ತೇ​ವೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಶಮಿ ವಿರುದ್ಧ ಸುಪ್ರೀಂ ಮೆಟ್ಟಿ​ಲೇ​ರಿದ ಪತ್ನಿ ಹಸಿ​ನ್‌!

ನವ​ದೆ​ಹ​ಲಿ: ಭಾರ​ತದ ವೇಗಿ ಮೊಹ​ಮದ್‌ ಶಮಿಗೆ ಮತ್ತೆ ಸಂಕಷ್ಟಎದು​ರಾ​ಗಿದ್ದು, ಅವರ ವಿರು​ದ್ಧದ ಕ್ರಿಮಿ​ನಲ್‌ ಪ್ರಕ​ರ​ಣ​ಕ್ಕೆ ನೀಡಿ​ದ್ದ ತಡೆ ಪ್ರಶ್ನಿಸಿ ಅವರ ಪತ್ನಿ ಹಸಿನ್‌ ಜಹಾನ್‌ ಸುಪ್ರೀಂ ಕೋರ್ಚ್‌ ಮೆಟ್ಟಿ​ಲೇ​ರಿ​ದ್ದಾ​ರೆ. ಅಲ್ಲದೇ, ಶಮಿ ವಿವಾ​ಹೇ​ತರ ಸಂಬಂಧ​ಗ​ಳನ್ನು ಹೊಂದಿ​ದ್ದಾರೆ ಎಂದು ಹಸಿ​ನ್‌ ಮತ್ತೆ ಆರೋ​ಪಿ​ಸಿ​ದ್ದಾ​ರೆ. 2018ರಲ್ಲಿ ಶಮಿ ತಮಗೆ ದೌರ್ಜನ್ಯ ಎಸ​ಗು​ತ್ತಿ​ದ್ದಾರೆಂದು ಆರೋ​ಪಿಸಿ ಹಸಿನ್‌ ಕೇಸ್‌ ದಾಖ​ಲಿ​ಸಿ​ದ್ದರು. ಹೀಗಾಗಿ ಶಮಿ ವಿರುದ್ಧ 2019ರಲ್ಲಿ ಅಲಿ​ಪು​ರ ನ್ಯಾಯಾ​ಲಯ ಬಂಧನ ವಾರಂಟ್‌ ಹೊರ​ಡಿ​ಸಿತ್ತು. 

ಆದರೆ ಕೋಲ್ಕತಾ ಸೆಷನ್ಸ್‌ ನ್ಯಾಯಾ​ಲಯ ಇದಕ್ಕೆ ತಡೆ ನೀಡಿತ್ತು. ಇದನ್ನು ಪ್ರಶ್ನಿಸಿ ಹಸಿನ್‌ ಸುಪ್ರೀಂಗೆ ಸಲ್ಲಿ​ಸಿ​ರುವ ಅರ್ಜಿ​ಯಲ್ಲಿ, ಶಮಿ ಹಾಗೂ ಕುಟುಂಬ​ಸ್ಥರು ವರ​ದ​ಕ್ಷಿ​ಣೆಗೆ ಒತ್ತಾಯಿಸಿ ದೌರ್ಜನ್ಯ ಎಸ​ಗಿ​ದ್ದಾ​ರೆಂದು ಆರೋ​ಪಿ​ಸಿದ್ದು, ಅವರ ವಿರುದ್ಧ ಬಂಧನ ವಾರಂಟ್‌ ಹೊರಡಿಸಬೇಕು ಎಂದು ಮನವಿ ಮಾಡಿ​ದ್ದಾ​ರೆ. ಶಮಿ-ಹಸಿನ್‌ 2018ರಿಂದಲೂ ಪರ​ಸ್ಪರ ದೂರ​ವಾ​ಗಿ​ದ್ದಾ​ರೆ.

ಏಷ್ಯಾಕಪ್‌ ಕ್ರಿಕೆಟ್‌ಗೆ ಅರ್ಹತೆ ಪಡೆದ ನೇಪಾಳ

ಕಾಠ್ಮಂಡು: 2023ರ ಏಷ್ಯಾಕಪ್‌ ಏಕದಿನ ಕ್ರಿಕೆಟ್‌ ಟೂರ್ನಿಗೆ ನೇಪಾಳ ತಂಡ ಅರ್ಹತೆ ಪಡೆದಿದ್ದು, ಭಾರತ ಹಾಗೂ ಪಾಕಿಸ್ತಾನ ತಂಡಗಳ ಜೊತೆ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಏಷ್ಯಾಕಪ್‌ನ ಅರ್ಹತಾ ಟೂರ್ನಿಯಾದ ಎಸಿಸಿ ಪ್ರೀಮಿಯರ್‌ ಕಪ್‌ ಫೈನಲ್‌ನಲ್ಲಿ ನೇಪಾಳ 7 ವಿಕೆಟ್‌ಗಳಿಂದ ಯುಎಇ ತಂಡವನ್ನು ಸೋಲಿಸಿತು. ಅರ್ಹತಾ ಟೂರ್ನಿಯಲ್ಲಿ 10 ತಂಡಗಳು ಪಾಲ್ಗೊಂಡಿದ್ದವು. ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಏಷ್ಯಾಕಪ್‌ನಲ್ಲಿ ಒಟ್ಟು 6 ತಂಡಗಳು ಸೆಣಸಲಿದ್ದು, ‘ಬಿ’ ಗುಂಪಿನಲ್ಲಿ ಶ್ರೀಲಂಕಾ, ಅಷ್ಘಾನಿಸ್ತಾನ, ಬಾಂಗ್ಲಾದೇಶ ತಂಡಗಳಿವೆ.

ICC Test Rankings: ನಂ.1 ಪಟ್ಟಕ್ಕೇರಿದ ಭಾರತ

ದುಬೈ: ಐಸಿಸಿ ಟೆಸ್ಟ್‌ ಶ್ರೇಯಾಂಕ ಪಟ್ಟಿಯಲ್ಲಿ ಆಸ್ಪ್ರೇಲಿಯಾವನ್ನು ಹಿಂದಿಕ್ಕಿ ಭಾರತ ಅಗ್ರಸ್ಥಾನಕ್ಕೇರಿದೆ. ಎರಡೂ ತಂಡಗಳು ಇತ್ತೀಚೆಗೆ ಯಾವುದೇ ಟೆಸ್ಟ್‌ ಸರಣಿ ಆಡದಿದ್ದರೂ ವಾರ್ಷಿಕ ಶ್ರೇಯಾಂಕ ಪರಿಷ್ಕರಣೆ ವೇಳೆ ಭಾರತದ ರೇಟಿಂಗ್‌ ಅಂಕ 119ರಿಂದ 121ಕ್ಕೆ ಏರಿಕೆಯಾಗಿದ್ದು, ಆಸೀಸ್‌ ರೇಟಿಂಗ್‌ ಅಂಕ 122ರಿಂದ 116ಕ್ಕೆ ಇಳಿಕೆಯಾಗಿದೆ. 2019-20ರ ಋುತುವಿನ ಫಲಿತಾಂಶಗಳ ಮೂಲಕ ಗಳಿಸಿದ್ದ ಅಂಕಗಳನ್ನು ಕೈಬಿಡಲಾಗಿದ್ದು, ಮೇ 2020ರಿಂದ ಮೇ 2022ರ ಅವಧಿಯಲ್ಲಿ ಗಳಿಸಿದ ಅಂಕಗಳ ಶೇ.50ರಷ್ಟು, ಪ್ರಸಕ್ತ ವರ್ಷದಲ್ಲಿ ಗಳಿಸಿದ ಅಂಕಗಳ ಶೇ.100ರಷ್ಟನ್ನು ಒಟ್ಟುಗೂಡಿಸಿ ರೇಟಿಂಗ್‌ ಅಂಕ ನಿರ್ಧರಿಸಲಾಗಿದೆ.