* ಐಪಿಎಲ್ ಟೂರ್ನಿಯಲ್ಲಿ ಈ ಬಾರಿ ಕಿರಿಕ್ ಆಟಗಾರರ ಮೇಲೆ ಎಲ್ಲರ ಚಿತ್ತ* ಈ ಹಿಂದೆ ಕಿತ್ತಾಡಿಕೊಂಡವರು, ಈಗ ಒಂದೇ ತಂಡದ ಪರ ಕಣಕ್ಕೆ* ಅಶ್ವಿನ್‌-ಬಟ್ಲರ್ ರನೌಟ್‌ ವಿವಾದ ಯಾರಾದರೂ ಮರೆಯಲು ಸಾಧ್ಯವಾ..?

ಬೆಂಗಳೂರು(ಮಾ.28): ಕ್ರಿಕೆಟ್ ಅಂದ್ರೆ ಕಿರಿಕ್. ಒಂದು ಪಂದ್ಯ ನಡೆದ್ರೆ ಅಲ್ಲಿ ಕಿರಿಕ್ ಇದ್ದೇ ಇರುತ್ತೆ. ಇಂಟರ್​ ನ್ಯಾಷನಲ್ ಮ್ಯಾಚ್​ಗಳಲ್ಲಿ ಕಿರಿಕ್ ಕಾಮನ್. ಕ್ರಿಕೆಟ್ ಫ್ಯಾನ್ಸ್​ ರೆಕಾರ್ಡ್​ಗಳನ್ನ ಮರೆಯಬಹುದು. ಆದ್ರೆ ಕ್ರಿಕೆಟರ್ಸ್ ಕಿತ್ತಾಡಿಕೊಂಡಿದ್ದನ್ನ ಮಾತ್ರ ಮರೆಯಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಕಿತ್ತಾಟಗಳು ಜಾಸ್ತಿ. ಆದ್ರೆ ಐಪಿಎಲ್ ಮತ್ತು ಡೊಮೆಸ್ಟಿಕ್ ಕ್ರಿಕೆಟ್​ನಲ್ಲಿ ಕಿರಿಕ್​ಗಳು ಕಮ್ಮಿ. ಆದ್ರೂ ಕಿರಿಕ್​ಗಳು ಆಗಿದ್ರೆ ಅವನ್ನ ಯಾರೂ ಮರೆತಿಲ್ಲ. ಈಗ ಐಪಿಎಲ್ (IPL) ಹಾಗೂ ಡೊಮೆಸ್ಟಿಕ್ ಕ್ರಿಕೆಟ್​ನಲ್ಲಿ ಕಿತ್ತಾಡಿಕೊಂಡ ಆಟಗಾರರು ಐಪಿಎಲ್​ನಲ್ಲಿ ಒಂದೇ ತಂಡ ಸೇರಿಕೊಂಡಿದ್ದಾರೆ. ಅಂದು ದುಷ್ಮನ್​ಗಳು, ಇಂದು ಟೀಮೆಂಟ್ಸ್ ಆಗಿದ್ದಾರೆ.

ಅಂದು ಮಂಕಡ್​ ರನೌಟ್ ಕಿರಿಕ್. ಇಂದು ರಾಯಲ್ಸ್​ನಲ್ಲಿ ಕಿರಿಕ್ ಬಾಯ್ಸ್​:

2019ರ ಐಪಿಎಲ್​ನಲ್ಲಿ ರವಿಚಂದ್ರನ್ ಅಶ್ವಿನ್ (Ravichandran Ashwin) ಪಂಜಾಬ್ ಕಿಂಗ್ಸ್ ಕ್ಯಾಪ್ಟನ್ ಆಗಿದ್ದರು. ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಜೋಸ್ ಬಟ್ಲರ್ (Jos Buttler) ಅವರನ್ನ ಮಂಕಡ್ ರನೌಟ್​ ಮಾಡಿದ್ರು. ನಾನ್​​ಸ್ಟ್ರೈಕ್​​ನಲ್ಲಿದ್ದ ಜೋಸ್​ ಬಟ್ಲರ್​, ಅಶ್ವಿನ್ ಬಾಲ್ ಎಸೆಯಲು ಮುನ್ನವೇ ಕ್ರೀಸ್​​ ಬಿಟ್ಟಿದ್ದರು. ಇದನ್ನ ಗಮನಿಸಿದ ಅಶ್ವಿನ್ ಬಾಲ್ ಎಸೆಯದೇ ವಿಕೆಟ್​​​ ಎಗರಿಸಿ ರನೌಟ್​​ಗಾಗಿ ಅಂಪೈರ್​​​ಗೆ ಮನವಿ ಮಾಡಿದ್ರು. ಥರ್ಡ್​ ಅಂಪೈರ್​ ಔಟ್​ ಎಂದು ತೀರ್ಪು ನೀಡಿದ್ರು. ರೂಲ್ಸ್ ಪ್ರಕಾರ ಬ್ಯಾಟ್ಸ್​​ಮನ್, ಬೌಲರ್ ಬೌಲ್ ಹಾಕೋಕು ಮುನ್ನವೇ ಕ್ರೀಸ್​​​ ಬಿಡುವಂತಿಲ್ಲ. ಇದನ್ನ ಎನ್​ಕ್ಯಾಶ್ ಮಾಡಿಕೊಂಡ ಅಶ್ವಿನ್​, ಮಂಕಡ್ ಅಸ್ತ್ರ ಬಳಸಿ ಬಟ್ಲರ್​ ಅವರನ್ನ ಔಟ್ ಮಾಡಿದ್ರು.

ಅಶ್ವಿನ್ ಔಟ್​ ಮಾಡೋಕು ಮುನ್ನ ಬಟ್ಲರ್​​​,​​​​​ ವಾರ್ನ್​ ಮಾಡಿ ಕ್ರೀಡಾಸ್ಫೂರ್ತಿ ಮೆರೆಯಬಹುದಿತ್ತು. ಆದ್ರೆ ಅಶ್ವಿನ್ ಹಾಗೆ ಮಾಡಲಿಲ್ಲ. ಬಟ್ಲರ್ ಔಟಾದ್ಮೇಲೆ ಅಶ್ವಿನ್ ವಿರುದ್ಧ ವಾಗ್ದಾಳಿ ನಡೆಸಿದ್ರು. ಅಶ್ವಿನ್​ರ ಈ ರನೌಟ್​​ಗೆ ಕ್ರಿಕೆಟಿಗರು ಸೇರಿದಂತೆ ಅಭಿಮಾನಿಗಳು ಅಸಮಾಧಾನ ಹೊರಹಾಕಿ ಭಾರೀ ಟೀಕೆ ಮಾಡಿದ್ದರು. ಪಂದ್ಯದ ಮುಗಿದ ಬಳಿಕ ಎರಡು ತಂಡದ ಪ್ಲೇಯರ್ಸ್​ ಶೇಕ್​​​ಹ್ಯಾಂಡ್​​ ಮಾಡುವ ಸಮಯದಲ್ಲಿ ಬಟ್ಲರ್​​ ಕೈಕುಲುಕಲು ಅಶ್ವಿನ್ ಬಂದಾಗ, ಬಟ್ಲರ್ ನಿರಾಕರಿಸಿದ್ರು. ಇದರಿಂದ ಅಶ್ವಿನ್​ಗೆ ಶೇಪ್ ಔಟ್ ಆಯ್ತು. ಈ ಸಲ ಬಟ್ಲರ್ ಅವರನ್ನ ರಾಜಸ್ತಾನ ರಾಯಲ್ಸ್ (Rajasthan Royals) ರಿಟೈನ್​​ ಮಾಡಿಕೊಂಡಿದೆ. ಪ್ಲೇಯರ್ಸ್ ಬಿಡ್​ನಲ್ಲಿ ಆರ್. ಅಶ್ವಿನ್ ಅವರನ್ನ 5 ಕೋಟಿ ಕೊಟ್ಟು ರಾಯಲ್ಸ್ ಖರೀದಿಸಿದೆ. ಈ ಸಲದ ಐಪಿಎಲ್​ನಲ್ಲಿ ಈ ಇಬ್ಬರು ಆಟಗಾರರು ರಾಜಸ್ಥಾನದಲ್ಲಿ ಆಡಬೇಕು. ಅಂದು ಕಿತ್ತಾಡಿಕೊಂಡು ದುಷ್ಮನ್​ಗಳಾಗಿದ್ದ ಪ್ಲೇಯರ್ಸ್​, ಇಂದು ಫ್ರಾಂಚೈಸಿಗಳಿಗಾಗಿ ಒಂದಾಗಿ ಆಡ್ತಾರಾ ಅನ್ನೋ ಪ್ರಶ್ನೆ ಉದ್ಭವಿಸಿದೆ.

ಬರೋಡದಲ್ಲಿ ಕಿತ್ತಾಡಿಕೊಂಡವರು, ಲಕ್ನೋದಲ್ಲಿ ಒಂದಾಗ್ತಾರಾ..?:

ಡೊಮೆಸ್ಟಿಕ್ ಕ್ರಿಕೆಟ್​ನಲ್ಲಿ ಬರೋಡ ಪರ ಆಡುವ ಕೃನಾಲ್ ಪಾಂಡ್ಯ (Krunal Pandya) ಮತ್ತು ದೀಪಕ್ ಹೂಡಾ (Deepak Hooda) ಕಳೆದ ವರ್ಷ ಕಿತ್ತಾಡಿಕೊಂಡಿದ್ದರು. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಗೆ ಅಭ್ಯಾಸ ನಡೆಸುವ ವೇಳೆ ಈ ಇಬ್ಬರು ನೆಟ್ಸ್​ನಲ್ಲೇ ಜಗಳ ಆಡಿದ್ದರು. ಬಯೋಬಬಲ್ ತೊರೆದಿದ್ದ ಆಲ್​ರೌಂಡರ್​ ಹೂಡಾ, ಕ್ಯಾಪ್ಟನ್ ಕೃನಾಲ್ ಬಗ್ಗೆ ಸಾಲು ಸಾಲು ಟೀಕೆ ಮಾಡಿ ಬರೋಡ ಕ್ರಿಕೆಟ್ ಸಂಸ್ಥೆಗೆ ಮೇಲ್ ಮಾಡಿದ್ದರು. ಜೊತೆಗೆ ಮತ್ತೆ ಬರೋಡ ಪರ ಆಡೋಲ್ಲ ಅಂತಲೂ ಹೇಳಿ ಬರೋಡಗೆ ಗುಡ್ ಬೈ ಹೇಳಿದ್ದರು.

RCB ಪರ ಪ್ಲಾಫ್​ ಶೋ, ಬೇರೆ ಫ್ರಾಂಚೈಸಿ ಪರ ತ್ರಿಮೂರ್ತಿಗಳ ಸೂಪರ್ ಶೋ..!

ಈಗ ಈ ಇಬ್ಬರು ಆಲ್​ರೌಂಡರ್​ಗಳು ಈಗ ಲಖನೌ ಸೂಪರ್ ಜೈಂಟ್ಸ್ ತಂಡದಲ್ಲಿದ್ದಾರೆ. ಈ ಇಬ್ಬರು ಲಖನೌ ಟೀಂ ಸೇರಿಕೊಳ್ತಿದ್ದ ಹಾಗೆ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ (Virender Sehwag) ಟ್ವೀಟ್ ಮಾಡಿ ಇಬ್ಬರ ಕಾಲೆಳೆದಿದ್ದಾರೆ. ಹೂಡಾ ಮತ್ತು ಕೃನಲ್ ಉತ್ತಮ ಜೋಡಿ. ಡಿವೈಡೆಡ್​ ಬೈ ಬರೋಡಾ, ಯುನೈಟೆಡ್​ ಬೈ ಲಕ್ನೋ ಎಂದು ಬರೆದುಕೊಂಡಿದ್ದರು. ಬರೋಡದಲ್ಲಿ ಕಿತ್ತಾಡಿಕೊಂಡಿದ್ದವರು, ಲಕ್ನೋದಲ್ಲಿ ಒಂದಾಗ್ತಾರಾ..? ಅನ್ನೋ ಪ್ರಶ್ನೆಗೆ ಈ ಐಪಿಎಲ್​ನಲ್ಲಿ ಉತ್ತರ ಸಿಗಲಿದೆ.