* ಟೀಂ ಇಂಡಿಯಾ ಕ್ಯಾಪ್ಟನ್ಸಿಗಾಗಿ ಮೂವರು ಯುವ ಕ್ರಿಕೆಟಿಗರ ನಡುವೆ ಪೈಪೋಟಿ* ಶ್ರೇಯಸ್ ಅಯ್ಯರ್-ಕೆ.ಎಲ್ ರಾಹುಲ್-ರಿಷಭ್ ಪಂತ್ ನಡುವೆ ಭವಿಷ್ಯದ ನಾಯಕತ್ವಕ್ಕಾಗಿ ಪೈಪೋಟಿ* ಮೊದಲ 3 ಐಪಿಎಲ್ ಪಂದ್ಯದಲ್ಲಿ ನಾಯಕತ್ವ ಗುಣಗಳ ಮೂಲಕ ಗಮನ ಸೆಳೆದ ಅಯ್ಯರ್
ಬೆಂಗಳೂರು(ಏ.05): ಈ ಸಲದ ಐಪಿಎಲ್ (IPL 2022) ಯುವ ಪ್ರತಿಭೆಗಳನ್ನ ಬೆಳಕಿಗೆ ಮಾತ್ರ ತರೋದಿಲ್ಲ. ಭವಿಷ್ಯದ ಟೀಂ ಇಂಡಿಯಾ (Team India) ನಾಯಕನನ್ನೂ ಬೆಳಕಿಗೆ ತರುತ್ತದೆ. ಹೌದು, 10 ಐಪಿಎಲ್ ಟೀಂಗಳ ಪೈಕಿ 8 ತಂಡಗಳಿಗೆ ಭಾರತೀಯರೇ ನಾಯಕರು. ರೋಹಿತ್ ಶರ್ಮಾ ಟೀಂ ಇಂಡಿಯಾ ನಾಯಕ. ಉಳಿದ 7ರಲ್ಲಿ ನಾಲ್ವರು ಟೀಂ ಇಂಡಿಯಾ ಕ್ಯಾಪ್ಟನ್ಸಿ ರೇಸ್ನಲ್ಲಿಲ್ಲ. ಕೆಎಲ್ ರಾಹುಲ್ (KL Rahul), ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಟೀಂ ಇಂಡಿಯಾ ಭವಿಷ್ಯದ ಕ್ಯಾಪ್ಟನ್ ಆಗಲು ಕಾಯ್ತಿದ್ದಾರೆ. ಈ ಮೂವರ ನಡುವೆ ಐಪಿಎಲ್ನಲ್ಲಿ ಆಗ್ಲೇ ಕ್ಯಾಪ್ಟನ್ಸಿ ರೇಸ್ ಶುರುವಾಗಿದೆ.
ಕೆ.ಎಲ್ ರಾಹುಲ್ ನೇತೃತ್ವದ ಲಖನೌ ಸೂಪರ್ ಜೈಂಟ್ಸ್ ತಂಡವು ಮೂರು ಪಂದ್ಯಗಳನ್ನಾಡಿ 2 ಗೆಲುವು ಹಾಗೂ ಒಂದು ಸೋಲಿನೊಂದಿಗೆ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದರೆ, ರಿಷಭ್ ಪಂತ್ (Rishabh Pant) ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡವು 2 ಪಂದ್ಯಗಳನ್ನಾಡಿ ಒಂದು ಗೆಲುವು ಹಾಗೂ ಒಂದು ಸೋಲಿನೊಂದಿಗೆ 2 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಇನ್ನು ಶ್ರೇಯಸ್ ಅಯ್ಯರ್ (Shreyas Iyer) ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.
ಮೂರು ಪಂದ್ಯದಲ್ಲಿ ಗಮನ ಸೆಳೆದ ಶ್ರೇಯಸ್ ಕ್ಯಾಪ್ಟನ್ಸಿ:
ಕೆ.ಎಲ್ ರಾಹುಲ್-ರಿಷಭ್ ಪಂತ್ ಸೈಡಿಗಿರಲಿ. ಕ್ಯಾಪ್ಟನ್ಸಿ ರೇಸ್ನಲ್ಲಿ ಮೂರನೇಯವರಾಗಿದ್ದ ಶ್ರೇಯಸ್ ಅಯ್ಯರ್, ಈಗ ರೇಸ್ನಲ್ಲಿ ಫಸ್ಟ್ನಲ್ಲಿದ್ದಾರೆ. ಹೌದು, ಈ ಸಲದ ಐಪಿಎಲ್ನಲ್ಲಿ ಶ್ರೇಯಸ್, ಕೆಕೆಆರ್ ತಂಡವನ್ನ ಅದ್ಭುತವಾಗಿ ಮುನ್ನಡೆಸುತ್ತಿದ್ದಾರೆ. ಮೂರು ಪಂದ್ಯದಲ್ಲಿ ಶ್ರೇಯಸ್ ಕ್ಯಾಪ್ಟನ್ಸಿಯಲ್ಲಿ KKR ಎರಡು ಗೆದ್ದು ಒಂದು ಸೋತಿದೆ. ಅಯ್ಯೋ ಆಡಿರೋದು ಮೂರೇ ಮ್ಯಾಚ್. ಆಗ್ಲೇ ಶ್ರೇಯಸ್ ದಿ ಬೆಸ್ಟ್ ಕ್ಯಾಪ್ಟನ್ ಅಂತಿದ್ದಾರೆ ಅನ್ನಬೇಡಿ. ನಡೆದಿರೋದು ಮೂರೇ ಮ್ಯಾಚ್ ಆದ್ರೂ ಆ ಮೂರಲ್ಲೂ ಅಯ್ಯರ್ ನಾಯಕತ್ವ ಗುಣಗಳು ಬೆಳಕಿಗೆ ಬಂದಿವೆ.
ಮೂರು ತಂಡಗಳನ್ನೂ 140 ರನ್ ಒಳಗೆ ಕಟ್ಟಿಹಾಕಿರುವ ಶ್ರೇಯಸ್:
ಮೂರರಲ್ಲಿ ಎರಡು ಪಂದ್ಯವನ್ನ ಚೇಸ್ ಮಾಡಿ ಗೆದ್ದಿದೆ ಕೆಕೆಆರ್. ಸಿಎಸ್ಕೆ ತಂಡವನ್ನ 131 ಮತ್ತು ಪಂಜಾಬ್ ತಂಡವನ್ನ 137 ರನ್ಗೆ ಕಟ್ಟಿಹಾಕಿದ್ದಾರೆ KKR ಬೌಲರ್ಸ್. KKR ಬೌಲರ್ಸ್ ಅನ್ನೋದಕ್ಕಿಂತ KKR ನಾಯಕ ಶ್ರೇಯಸ್ ಅಯ್ಯರ್ ಅಂದರೆ ಉತ್ತಮ. ಯಾಕಂದರೆ ತಂಡ ಎಷ್ಟೇ ಬಲಿಷ್ಠವಾಗಿದ್ದರೂ ನಾಯಕತ್ವ ಸರಿಯಿಲ್ಲ ಅಂದರೆ ತಂಡ ಸಕ್ಸಸ್ ಆಗೋದು ಕಷ್ಟ. ಈ ಎರಡು ಪಂದ್ಯಗಳ ಗೆಲುವಿಗೆ ಬೌಲರ್ಸ್ ಕಾರಣರಾಗಿದ್ದರೂ ಕ್ಯಾಪ್ಟನ್ ಶ್ರೇಯಸ್ ನಾಯಕತ್ವ ಅಷ್ಟೇ ಕಾರಣ.
IPL 2022: ಕ್ರಿಕೆಟ್ ಕಿಟ್ ಕೊಳ್ಳಲು ಪರದಾಡಿದ್ದ ತಿಲಕ್ ವರ್ಮಾ, ಈಗ ಮುಂಬೈ ಸೆನ್ಸೇಷನ್ ಪ್ಲೇಯರ್..!
129 ರನ್ ಚೇಸ್ ಮಾಡಲು ಪರದಾಡಿದ್ದ ಆರ್ಸಿಬಿ:
ಆರ್ಸಿಬಿ ವಿರುದ್ಧ ಕೆಕೆಆರ್ ಸೋತರೂ ಶ್ರೇಯಸ್ ನಾಯಕತ್ವದಿಂದ ಎಲ್ಲರ ಗಮನ ಸೆಳೆದರು. ಕೆಕೆಆರ್ ಹೊಡೆದಿದ್ದು 128 ರನ್ ಮಾತ್ರ. ಆರ್ಸಿಬಿ 129 ರನ್ ಗಳನ್ನ ಈಸಿಯಾಗಿ ಚೇಸ್ ಮಾಡಿ ಗೆಲ್ಲುತ್ತೆ ಅಂತ ಎಲ್ಲರೂ ಅಂದುಕೊಂಡಿದ್ದರು. ಆದರೆ ಅಯ್ಯರ್, ಅದ್ಭುತ ಕ್ಯಾಪ್ಟನ್ಸಿಯಿಂದಾಗಿ ಆರ್ಸಿಬಿ ಕೊನೆ ಓವರ್ನಲ್ಲಿ ಪಂದ್ಯ ಗೆಲ್ಲಬೇಕಾಯ್ತು. ಕೊನೆ ಓವರ್ ವರೆಗೂ ಪಂದ್ಯವನ್ನ ಡೋಲಾಯಮಾನವಾಗಿರಿಸಿದ್ದು ಶ್ರೇಯಸ್ ನಾಯಕತ್ವವಲ್ಲದೆ ಬೇರೆ ಯಾರೂ ಅಲ್ಲ. ಹಾಗಾಗಿ ಟೀಂ ಇಂಡಿಯಾ ಕ್ಯಾಪ್ಟನ್ಸಿ ರೇಸ್ನಲ್ಲಿ ರಿಷಭ್ ಹಾಗೂ ರಾಹುಲ್ ಹಿಂದಿಕ್ಕಿ ಶ್ರೇಯಸ್ ಅಯ್ಯರ್ ಮುನ್ನುಗ್ಗುತ್ತಿದ್ದಾರೆ. ಅವರ ನಾಯಕತ್ವ ಹೀಗೆ ಮುಂದುವರೆದ್ರೆ ರೋಹಿತ್ ಶರ್ಮಾ ನಂತರ ಅವರೇ ಟೀಂ ಇಂಡಿಯಾ ನಾಯಕ ಆಗೋದ್ರಲ್ಲಿ ಅನುಮಾನವಿಲ್ಲ.
