IPL 2021 ದುಬೈ ಅವತರಣಿ ಪಂದ್ಯ RCB vs KKR ನಡುವಿನ 31ನೇ ಲೀಗ್ ಪಂದ್ಯ ಟಾಸ್ ಗೆದ್ದ ಆರ್‌ಸಿಬಿ ಬ್ಯಾಟಿಂಗ್ ಆಯ್ಕೆ ಅಬು ಧಾಬಿಯಲ್ಲಿ ಆಯೋಜಿಸಿರುವ ಪಂದ್ಯ

ಅಬು ಧಾಬಿ(ಸೆ.20): ಯುಎಇನಲ್ಲಿ ಐಪಿಎಲ್ 2021ರ(IPL 2021) ಎರಡನೆ ಭಾಗ ಅದ್ಧೂರಿಯಾಗಿ ಆರಂಭಗೊಂಡಿದೆ. ಇದೀಗ 31 ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(royal challengers bangalore) ಹಾಗೂ ಕೋಲ್ಕತಾ ನೈಟ್ ರೈಡರ್ಸ್(kolkata knight riders)ಮುಖಾಮುಖಿಯಾಗುತ್ತಿದೆ. ಮಹತ್ವದ ಪಂದ್ಯದಲ್ಲಿಆರ್‌ಸಿಬಿ( RCB) ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

Scroll to load tweet…

ಆರ್‌ಸಿಬಿ ತಂಡಕ್ಕೆ ಕೆಎಸ್ ಭರತ್ ಹಾಗೂ ವಾವಿಂಡು ಹಸರಂಗ ಪದಾರ್ಪಣೆ ಮಾಡಿದ್ದರೆ, ವೆಂಕಟೇಶ್ ಅಯ್ಯರ್ ಕೆಕೆಆರ್ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. 

Scroll to load tweet…

ಆರ್‌ಸಿಬಿ ತಂಡ:
ವಿರಾಟ್ ಕೊಹ್ಲಿ(ನಾಯಕ), ದೇವದತ್ ಪಡಿಕ್ಕಲ್, ಎಸ್ ಭರತ್, ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿವಿಲಿಯರ್ಸ್, ವಾವಿಂಡು ಹಸರಂಗ, ಸಚಿನ್ ಬೇಬಿ, ಕೈಲ್ ಜಾಮಿನ್ಸನ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಯಜುವೇಂದ್ರ ಚಹಾಲ್

ಕೆಕೆಕಆರ್ ತಂಡ:
ಶುಭಮನ್ ಗಿಲ್, ನಿತೀಶ್ ರಾಣ, ರಾಹುಲ್ ತ್ರಿಪಾಠಿ, ಇಯಾನ್ ಮಾರ್ಗನ್(ನಾಯಕ), ಆ್ಯಂಡ್ರೆ ರಸೆಲ್, ದಿನೇಶ್ ಕಾರ್ತಿಕ್, ಸುನಿಲ್ ನರೈನ್, ವೆಂಕಟೇಶನ್ ಐಯ್ಯರ್, ಲಾಕಿ ಫರ್ಗ್ಯಸನ್, ವರಣ್ ಚಕ್ರವರ್ತಿ, ಪ್ರಸಿದ್ಧ ಕೃಷ್ಣ

Scroll to load tweet…

ವಿರಾಟ್ ಕೊಹ್ಲಿ ಬಳಿಕ RCB ನಾಯಕರಾಗೋರು ಯಾರು..? ಇಲ್ಲಿವೆ 5 ಉತ್ತಮ ಆಯ್ಕೆಗಳು..!

ವಿರಾಟ್ ಕೊಹ್ಲಿ(Virat Kohli)ನಾಯಕತ್ವದ ಬೆಂಗಳೂರು ತಂಡ ಈ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಮೊದಲ ಭಾಗದಲ್ಲಿ ಆಡಿದ 7 ಪಂದ್ಯದಲ್ಲಿ 5 ಗೆಲುವು, 2 ಸೋಲು ಕಂಡಿದೆ. ಈ ಮೂಲಕ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.

Scroll to load tweet…

ಐಪಿಎಲ್ 2021ರ ಆವೃತ್ತಿಯಲ್ಲಿ ಕೆಕೆಆರ್(KKR) ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಆಡಿದ 7 ಪಂದ್ಯದಲ್ಲಿ ಕೇವಲ 2 ಗೆಲುವು ಹಾಗೂ 5 ಸೋಲು ಕಂಡಿದೆ. ಈ ಮೂಲಕ 4 ಅಂಕ ಸಂಪಾದಿಸಿರುವ ಕೆಕೆಆರ್ 7ನೇ ಸ್ಥಾನದಲ್ಲಿದೆ.

ಅಬು ಧಾಬಿ ಹವಾಮಾನ:
ಅಬು ಧಾಬಿ ಬಿಸಿಲ ಬೇಗೆಗೆ ಉಭಯ ತಂಡಗಳು ಬಳಲಿ ಬೆಂಡಾಗಲಿದೆ. ಸದ್ಯ 40 ಡಿಗ್ರಿ ಉಷ್ಣತೆ ಇದೆ. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದರೆ 160 ರಿಂದ 165 ರನ್ ಸ್ಕೋರ್ ಉತ್ತಮ ಮೊತ್ತವಾಗಲಿದೆ. 

IPL 2021: ಆರ್‌ಸಿಬಿ ಕುರಿತಂತೆ ಮುತ್ತಿನಂಥ ಮಾತನಾಡಿದ ಕಿಂಗ್‌ ಕೊಹ್ಲಿ..!

ಕೊಹ್ಲಿ ನಾಯಕತ್ವ:
ದುಬೈ ಅವತರಣಿಕೆ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ಆರ್‌ಸಿಬಿ ನಾಯಕತ್ವ ತ್ಯಜಿಸುವುದಾಗಿ ಘೋಷಿಸಿದ್ದಾರೆ. ಐಪಿಎಳ್ 2021ರ ಆವೃತ್ತಿ ಬಳಿಕ ಆರ್‌ಸಿಬಿ ನಾಯಕತ್ವದಿಂದ ಕೆಳಗಿಳಿಯುವುದಾಗಿ ಕೊಹ್ಲಿ ಹೇಳಿದ್ದಾರೆ. ಆದರೆ ಆರ್‌ಸಿಬಿ ಆಟಗಾರನಾಗಿ ಮುಂದುವರಿಯುವುದಾಗಿ ಹೇಳಿದ್ದಾರೆ.

Scroll to load tweet…