Asianet Suvarna News Asianet Suvarna News

L ಶಿವ​ರಾ​ಮ​ಕೃಷ್ಣ BCCI ನೂತನ ಆಯ್ಕೆಗಾರ?

ಲಕ್ಷ್ಮಣ್ ಶಿ​ವ​ರಾ​ಮ​ಕೃ​ಷ್ಣನ್‌ ಟೀಂ ಇಂಡಿಯಾ ಆಯ್ಕೆ ಸಮಿತಿ ಅಧ್ಯಕ್ಷರಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಎಂ.ಎಸ್.ಕೆ ಪ್ರಸಾದ್ ಅವಧಿ ಮುಕ್ತಾಯವಾಗಲಿದ್ದು, ಮಾಜಿ ಸ್ಪಿನ್ನರ್ ಆಯ್ಕೆ ಸಮಿತಿ ಚುಕ್ಕಾಣಿ ಹಿಡಿಯಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..

Indian spinner Laxman Sivaramakrishnan set to replace MSK Prasad as new BCCI chief selector says Report
Author
New Delhi, First Published Nov 21, 2019, 12:36 PM IST

ನವ​ದೆ​ಹ​ಲಿ(ನ.21): ಬಿಸಿ​ಸಿಐ ಪ್ರಧಾನ ಆಯ್ಕೆಗಾರ ಎಂ.ಎಸ್‌.ಕೆ.​ಪ್ರ​ಸಾದ್‌ ಪಾಲಿಗೆ ಗುರು​ವಾರ ನಡೆ​ಯ​ಲಿರುವ ಆಯ್ಕೆ ಸಮಿತಿ ಸಭೆ ಕೊನೆ ಸಭೆ ಆಗ​ಲಿದೆ. ಈ ವರ್ಷಾಂತ್ಯಕ್ಕೆ ಅವರ ಕಾರ್ಯಾ​ವಧಿ ಮುಕ್ತಾ​ಯ​ಗೊ​ಳ್ಳ​ಲಿದೆ. 

ವಿಂಡೀಸ್‌ ವಿರು​ದ್ಧದ ಸರಣಿ ಈ ವರ್ಷ ಭಾರತ ತಂಡದ ಆಡ​ಲಿ​ರುವ ಕೊನೆ ಸರಣಿ ಆಗಿ​ರುವ ಕಾರಣ, ಪ್ರಸಾದ್‌ ಆಯ್ಕೆ ಮಾಡ​ಲಿ​ರುವ ಕೊನೆ ತಂಡ ಇದಾ​ಗ​ಲಿದೆ. ಅವರ ಸ್ಥಾನಕ್ಕೆ ಮಾಜಿ ಸ್ಪಿನ್ನರ್‌ ಎಲ್‌.ಶಿ​ವ​ರಾ​ಮ​ಕೃ​ಷ್ಣನ್‌ ನೇಮ​ಕ​ಗೊ​ಳ್ಳು​ವ ಸಾಧ್ಯತೆ ಇದೆ. ಡಿ.1ರಂದು ನಡೆ​ಯ​ಲಿ​ರುವ ಬಿಸಿ​ಸಿಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಶಿವ​ರಾ​ಮ​ಕೃ​ಷ್ಣನ್‌ ಅವರ ಹೆಸರು ಅಧಿ​ಕೃತಗೊಳ್ಳ​ಲಿದೆ ಎಂದು ರಾಷ್ಟ್ರೀಯ ಮಾಧ್ಯ​ಮ​ವೊಂದು ವರ​ದಿ ಮಾಡಿದೆ.

ಶಿವರಾಮಕೃಷ್ಣನ್‌ ಮಂದಿನ ಆಯ್ಕೆ ಸಮಿತಿ ಮುಖ್ಯಸ್ಥ; MSKಗೆ ಕೊಕ್?

ಆಯ್ಕೆ ಸಮಿ​ತಿಯ ಎಲ್ಲಾ ಸದ​ಸ್ಯ​ರನ್ನು ಕೈಬಿಟ್ಟು ಬಿಸಿ​ಸಿಐ ಹೊಸ​ದಾಗಿ ಸಮಿತಿ ರಚಿ​ಸ​ಲಿದೆ ಎನ್ನ​ಲಾ​ಗಿತ್ತು. ಆದರೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡ​ಳಿಯ ಯೋಜನೆಯಲ್ಲಿ ಸ್ವಲ್ಪ ಬದ​ಲಾ​ವಣೆ ಆಗಿದೆ. ಶಿವ​ರಾ​ಮ​ಕೃ​ಷ್ಣನ್‌ ಜತೆ ಜ್ಞಾನೇಂದ್ರ ಪಾಂಡೆ ಆಯ್ಕೆ ಸಮಿತಿಗೆ ಸೇರಲಿದ್ದು, ಸದ್ಯ ಸಮಿ​ತಿಯ ಸದ​ಸ್ಯ​ರಾ​ಗಿ​ರುವ ಜತಿನ್‌ ಪರಂಜಪೆ, ದೇವಾಂಗ್‌ ಗಾಂಧಿ ಹಾಗೂ ಶರಣ್‌ದೀಪ್‌ ಸಿಂಗ್‌ ಮುಂದಿನ ವರ್ಷದ ವರೆ​ಗೂ ಮುಂದು​ವ​ರಿ​ಯ​ಲಿ​ದ್ದಾರೆ ಎಂದು ವರ​ದಿ​ಯಲ್ಲಿ ಹೇಳ​ಲಾ​ಗಿದೆ.

ಧೋನಿ ನಿವೃತ್ತಿ ಸುದ್ದಿ; BCCI ಆಯ್ಕೆ ಸಮಿತಿ ಸ್ಪಷ್ಟನೆ!

ಲಕ್ಷ್ಮಣ್‌ ಶಿವ​ರಾ​ಮ​ಕೃ​ಷ್ಣನ್‌ ಹಲವು ವರ್ಷ​ಗ​ಳಿಂದ ದೇಸಿ ಟೂರ್ನಿ​ಗಳಲ್ಲೂ ವೀಕ್ಷಕ ವಿವ​ರಣೆಗಾರ​ರಾಗಿ ಕಾರ್ಯ​ನಿ​ರ್ವ​ಹಿ​ಸು​ತ್ತಿರುವ ಕಾರಣ, ಪ್ರತಿಭಾವಂತ ಆಟ​ಗಾ​ರರ ಬಗ್ಗೆ ಹೆಚ್ಚಿನ ಮಾಹಿತಿ ಹೊಂದಿ​ರ​ಲಿ​ದ್ದಾರೆ ಎನ್ನು​ವುದು ಅವರ ಆಯ್ಕೆ ಹಿಂದಿ​ರುವ ಪ್ರಮುಖ ಕಾರಣ ಎನ್ನ​ಲಾ​ಗಿದೆ.

ಬಿಸಿ​ಸಿಐ ವಾರ್ಷಿಕ ಸಭೆ ವೇಳೆ ಆಯ್ಕೆ ಸಮಿತಿ ಸದ​ಸ್ಯರ ವೇತನ ಹೆಚ್ಚಳದ ಬಗ್ಗೆಯೂ ಚರ್ಚೆಯಾಗುವ ಸಾಧ್ಯತೆ ಇದೆ. ಪ್ರಧಾನ ಆಯ್ಕೆಗಾರ​ರಿಗೆ ವಾರ್ಷಿಕ 1.5 ಕೋಟಿ​ಯಿಂದ 2 ಕೋಟಿ ರುಪಾಯಿ, ಸದ​ಸ್ಯ​ರಿಗೆ 1.25 ಕೋಟಿ ರುಪಾಯಿ ವೇತನ ನಿಗ​ದಿ​ಯಾ​ಗ​ಬಹುದು ಎಂದು ಹೇಳ​ಲಾ​ಗಿದೆ.

Follow Us:
Download App:
  • android
  • ios