Asianet Suvarna News Asianet Suvarna News

ಇಂಗ್ಲೆಂಡ್​​​ ಟೂರ್​​​ ರೋಹಿತ್​​​-ದ್ರಾವಿಡ್​​​ ಜೋಡಿಗೆ ಅಗ್ನಿಪರೀಕ್ಷೆ..!

* ಭಾರತ-ಇಂಗ್ಲೆಂಡ್ ನಡುವಿನ ಏಕೈಕ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ
* ಜುಲೈ 01ರಿಂದ ಆರಂಭವಾಗಲಿದೆ ಇಂಗ್ಲೆಂಡ್ ಎದುರಿನ ಮಹತ್ವದ ಟೆಸ್ಟ್ ಪಂದ್ಯ
* ನಾಯಕನಾಗಿ ರೋಹಿತ್ ಶರ್ಮಾಗೆ ಅಗ್ನಿಪರೀಕ್ಷೆ

India tour of England Real test for Rahul Dravid and Rohit Sharma pair kvn
Author
Bengaluru, First Published Jun 26, 2022, 11:53 AM IST

ಲಂಡನ್(ಜೂ.26): ಮೆನ್​ ಇನ್​​ ಬ್ಲೂ ಪಡೆಯಲ್ಲಿ ಬದಲಾವಣೆಯ ಪರ್ವ ಶುರುವಾಗಿದೆ. ಕ್ಯಾಪ್ಟನ್ಸಿ, ಕೋಚ್​​​ ಹಾಗೂ ಪ್ಲೇಯರ್ಸ್​ ಯಿಂದ ಹಿಡಿದು ಕಳೆದ 9 ತಿಂಗಳಲ್ಲಿ ಸಾಕಷ್ಟು ಚೇಂಜಸ್ ಆಗಿವೆ. ಹೀಗೆ ತಂಡದಲ್ಲಿ ಸಾಲು ಬದಲಾವಣೆಯಾಗ್ತಿದ್ರೂ, ಕ್ಯಾಪ್ಟನ್ ರೋಹಿತ್​ ಮತ್ತು ಕೋಚ್​​ ದ್ರಾವಿಡ್​​​​ಗೆ ಒಂದಿಲ್ಲೊಂದು ಅಗ್ನಿಪರೀಕ್ಷೆ ಎದುರಾಗುತ್ತಲೇ ಇವೆ. ಐಪಿಎಲ್​ ಬಳಿಕ ಭಾರತ ತಂಡ ಫುಲ್​​ ಫ್ಲೆಡ್ಜ್​​​ ಪ್ರವಾಸ ಕೈಗೊಳ್ತಿದೆ. ಜುಲೈ 1 ರಿಂದ ಭಾರತ-ಇಂಗ್ಲೆಂಡ್​​​​​​ ಸರಣಿಗೆ ಕಿಕ್ಅಪ್ ಸಿಗಲಿದೆ. ಈ ಟೂರ್​​  ಕೋಚ್​​ ಮತ್ತು ಕ್ಯಾಪ್ಟನ್ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಹೌದು, ಹೊಸ ಕೋಚ್​​​​ ಮತ್ತು ಹೊಸ ಕ್ಯಾಪ್ಟನ್​ ಕಂಡ ಬಳಿಕ ಟೀಂ​ ಇಂಡಿಯಾ (Team India) ಮೊದಲ ಆಂಗ್ಲರ ನಾಡಿಗೆ ಕಾಲಿಟ್ಟಿದೆ. ತವರಿನಲ್ಲಿ ರೋಹಿತ್​​​-ರಾಹುಲ್​ ಜೋಡಿ ಮೆರಿಟ್​​ನಲ್ಲಿ ಪಾಸಾಗಿ ಸೈ ಅನ್ನಿಸಿಕೊಂಡಿದೆ ನಿಜ. ಆದ್ರೆ ಅಸಲಿ ಆಟ, ಅಸಲಿ ಚಾಲೆಂಜಸ್​ ಇರೋದೆ ಇಂಗ್ಲೆಂಡ್​​ ನೆಲದಲ್ಲಿ. ಯಾಕಂದ್ರೆ ಇಂಗ್ಲೆಂಡ್​ ಟೂರ್​​ನಿಂದಲೇ ರೋಹಿತ್​​​ ಆ್ಯಂಡ್​​ ಗ್ಯಾಂಗ್​ ಮುಂಬರೋ ಟಿ20 ವಿಶ್ವಕಪ್​​ಗೆ ರಣಕಹಳೆ ಊದಲಿದೆ. 

ಆಟಗಾರ, ನಾಯಕನಾಗಿ ಪಾಸಾಗ್ತಾರಾ ರೋಹಿತ್​​..? : 

ಕಿಂಗ್ ಕೊಹ್ಲಿ ​ಬಳಿಕ ರೋಹಿತ್​​​ ಶರ್ಮಾ ತಂಡದ ಚುಕ್ಕಾಣಿ ಹಿಡಿದಿದ್ದಾರೆ. ಇಂತಹ ಹಿಟ್​ಮ್ಯಾನ್​​​​​​ ಪ್ಲೇಯರ್​ ಮತ್ತು ನಾಯಕನಾಗಿ ಇಂಗ್ಲೆಂಡ್​​​​ ನೆಲದಲ್ಲಿ ಸಕ್ಸಸ್​ ಕಾಣಬೇಕಾದ ಒತ್ತಡದಲ್ಲಿದ್ದಾರೆ. ಆಟಗಾರನಾಗಿ ಪ್ರತಿ ಸರಣಿಯಲ್ಲೂ ಪ್ಲಾಫ್​ ಶೋ ನೀಡಿದ್ದಾರೆ. ಈ ವರ್ಷ ಎಲ್ಲಾ ಮಾದರಿ ಸೇರಿ ಒಟ್ಟು 11 ಪಂದ್ಯಗಳನ್ನ ಆಡಿದ್ದು, 23.66ರ ಸರಾಸರಿಯಲ್ಲಿ ಬರೀ 284 ರನ್​ನ್ನಷ್ಟೇ ಗಳಿಸಿದ್ದಾರೆ. ಆಂಗ್ಲರ ವಿರುದ್ಧ ಬ್ಯಾಡ್ ಫಾರ್ಮ್​ ನಿಂದ ಹೊರಬಂದು ರನ್​ ಕೊಳ್ಳೆ ಹೊಡೆಯಬೇಕಾದ  ಸವಾಲು ಎದುರಾಗಿದೆ.

ಇನ್ನು ಫುಲ್​ ಟೈಮ್​ ಕ್ಯಾಪ್ಟನ್ ತವರಿನಲ್ಲಿ ಗೆದ್ದಿರೋ ರೋಹಿತ್​​ಗೆ ಆಂಗ್ಲರ ನಾಡಿನಲ್ಲಿ ಸರಣಿ ಗೆಲ್ಲಿಸಿಕೊಡಬೇಕಾದ ಅಗ್ನಿಪರೀಕ್ಷೆ ಎದುರಾಗಿದೆ. ಈಗಾಗ್ಲೇ ಸರಣಿಯಲ್ಲಿ ಭಾರತ 2-1 ರ ಮುನ್ನಡೆ  ಸಾಧಿಸಿದೆ. ಗೆದ್ದರೆ ಇತಿಹಾಸ ಬರೆಯಲಿದೆ. ಒಂದು ವೇಳೆ ಸೋತರೆ ಸಿರೀಸ್ ಗೆಲ್ಲುವ ಆಸೆ ಕಮರಲಿದೆ. ಜೊತೆಗೆ ಕ್ಯಾಪ್ಟನ್​ ಆಗಿ ಮೊದಲ ವಿದೇಶಿ ಟೂರ್​​ನಲ್ಲಿ ಹಿನ್ನಡೆ ಅನುಭವಿಸಲಿದ್ದಾರೆ.

ವಿದೇಶಿ ನೆಲದಲ್ಲಿ ಮೊದಲ ಸಿರೀಸ್ ಗೆಲ್ಲಿಸಿಕೊಡ್ತಾರಾ ದ್ರಾವಿಡ್​​..? : 

ಇನ್ನು ಕ್ಯಾಪ್ಟನ್​​ ನಷ್ಟೇ ಚಾಲೆಂಜಸ್​​ ಹೆಡ್​ ಕೋಚ್​​ ದ್ರಾವಿಡ್​​​​​​​​​ ಮೇಲೂ ಇದೆ. ದ್ರಾವಿಡ್​​​​​​ ಮಾರ್ಗದರ್ಶನದಲ್ಲಿ ಭಾರತ ತಂಡ ಆಫ್ರಿಕಾ ನೆಲದಲ್ಲಿ ಈಗಾಗ್ಲೇ ಮುಖಭಂಗ ಅನುಭವಿಸಿದೆ. ಆ ನೋವನ್ನ ಮರೆಸಬೇಕಾದ್ರೆ ಇಂಗ್ಲೆಂಡ್​​​ ವಿರುದ್ಧ ಸರಣಿ ಗೆಲ್ಲಿಸಿ ಕೊಡಬೇಕಿದೆ. ಇದಕ್ಕೆ ಕ್ಯಾಪ್ಟನ್​ ಜೊತೆಗೂಡಿ ಸೂಕ್ತ ತಂತ್ರಗಳನ್ನ ಹಣೆಯಬೇಕಿದೆ. ಜೊತೆಗೆ ಅಳೆದು ತೂಗಿ ಆಡುವ ಹನ್ನೊಂದರ ಬಳಗವನ್ನ ಕಟ್ಟಿ ರಿಯಲ್​​ ಟ್ಯಾಲೆಂಟ್​ಗಳಿಗೆ ಚಾನ್ಸ್​​ ಕೊಡಬೇಕಾದ ಚಾಲೆಂಜ್​​ ಕೋಚ್ ರಾಹುಲ್​ ದ್ರಾವಿಡ್​ ಮುಂದಿದೆ.

Follow Us:
Download App:
  • android
  • ios