ಅಂಧರ ಕ್ರಿಕೆಟ್: ರಾಜ್ಯದ ಸುನಿಲ್ ಭಾರತ ತಂಡದ ನಾಯಕ
ನೇಪಾಳ ವಿರುದ್ದದ ಸೀಮಿತ ಓವರ್ ಕ್ರಿಕೆಟ್ ಸರಣಿಗೆ ಅಂಧರ ಕ್ರಿಕೆಟ್ ತಂಡ ಪ್ರಕಟಗೊಂಡಿದೆ. ರಾಜ್ಯದ ಸುನಿಲ್ ರಮೇಶ್ ಏಕದಿನ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ತಂಡದಲ್ಲಿರುವ ಇತರ ಕನ್ನಡಿಗರ ವಿವರ ಇಲ್ಲಿದೆ.
ನವದೆಹಲಿ(ನ.27) : ಡಿ.2 ರಿಂದ 8ರ ವರೆಗೆ ನಡೆಯಲಿರುವ ನೇಪಾಳ ವಿರುದ್ಧದ ಸೀಮಿತ ಓವರ್ಗಳ ಸರಣಿಗೆ ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆ (ಸಿಎಬಿಐ) ಆಯ್ಕೆ ಸಮಿತಿ, 10 ರಾಜ್ಯಗಳಿಂದ 14 ಸದಸ್ಯರ ಭಾರತ ತಂಡವನ್ನು ಆಯ್ಕೆ ಮಾಡಿದೆ
ಇದನ್ನೂ ಓದಿ: ಬೆಂಗಳೂರಿನಲ್ಲಿ ಅಂಧರ ಕ್ರಿಕೆಟ್ ಅವಾರ್ಡ್ ಸಮಾರಂಭ- ಇಲ್ಲಿದೆ ಪ್ರಶಸ್ತಿ ಗೆದ್ದವರ ಲಿಸ್ಟ್!
ಕರ್ನಾಟಕದ ಸುನಿಲ್ ರಮೇಶ್ರನ್ನು ಏಕದಿನ ತಂಡದ ನಾಯಕರನ್ನಾಗಿ ನೇಮಿಸಿದೆ. ರಾಜ್ಯದ ಆಟಗಾರರಾದ ಲೋಕೇಶ್, ಏಕದಿನ ನಾಯಕ ಸುನಿಲ್, ಏಕದಿನ ಹಾಗೂ ಟಿ20 ಎರಡೂ ತಂಡಗಳಲ್ಲಿ ಸ್ಥಾನ ಪಡೆದಿದ್ದಾರೆ. ಭಾರತ ಅಂಧರ ಟಿ20 ನಾಯಕರಾಗಿ ಹರ್ಯಾಣದ ದೀಪಕ್ ಮಲಿಕ್ ಆಯ್ಕೆ ಆಗಿದ್ದಾರೆ.
ಇದನ್ನೂ ಓದಿ: ಅಂಧರ ಟಿ20: ಲಂಕಾ ವಿರುದ್ಧ ಭಾರತಕ್ಕೆ ಸರಣಿ!
ಡಿ.2ರಿಂದ 4ರ ವರೆಗೆ ಕಾನ್ಪುರದಲ್ಲಿ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಡಿ.6 ರಿಂದ 8ರ ವರೆಗೆ ಡೆಹ್ರಾಡೂನ್ನಲ್ಲಿ 3 ಪಂದ್ಯಗಳ ಟಿ20 ಸರಣಿ ನಡೆಯಲಿದೆ.