Asianet Suvarna News Asianet Suvarna News

ಅಂಧರ ಕ್ರಿಕೆ​ಟ್‌: ರಾಜ್ಯ​ದ ಸುನಿಲ್‌ ಭಾರತ ತಂಡದ ನಾಯ​ಕ

ನೇಪಾಳ ವಿರುದ್ದದ ಸೀಮಿತ ಓವರ್ ಕ್ರಿಕೆಟ್ ಸರಣಿಗೆ ಅಂಧರ ಕ್ರಿಕೆಟ್ ತಂಡ ಪ್ರಕಟಗೊಂಡಿದೆ. ರಾಜ್ಯದ ಸುನಿಲ್ ರಮೇಶ್ ಏಕದಿನ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ತಂಡದಲ್ಲಿರುವ ಇತರ ಕನ್ನಡಿಗರ ವಿವರ ಇಲ್ಲಿದೆ.
 

India blind cricket squad announces for nepal series
Author
Bengaluru, First Published Nov 27, 2019, 9:37 AM IST

ನವ​ದೆ​ಹ​ಲಿ(ನ.27) : ಡಿ.2 ರಿಂದ 8ರ ವರೆಗೆ ನಡೆ​ಯ​ಲಿ​ರುವ ನೇಪಾಳ ವಿರು​ದ್ಧದ ಸೀಮಿತ ಓವ​ರ್‌​ಗಳ ಸರ​ಣಿಗೆ ಭಾರತೀಯ ಅಂಧರ ಕ್ರಿಕೆಟ್‌ ಸಂಸ್ಥೆ (ಸಿಎ​ಬಿ​ಐ) ಆಯ್ಕೆ ಸಮಿತಿ, 10 ರಾಜ್ಯ​ಗ​ಳಿಂದ 14 ಸದ​ಸ್ಯರ ಭಾರತ ತಂಡ​ವನ್ನು ಆಯ್ಕೆ ಮಾಡಿದೆ

ಇದನ್ನೂ ಓದಿ: ಬೆಂಗಳೂರಿನಲ್ಲಿ ಅಂಧರ ಕ್ರಿಕೆಟ್ ಅವಾರ್ಡ್ ಸಮಾರಂಭ- ಇಲ್ಲಿದೆ ಪ್ರಶಸ್ತಿ ಗೆದ್ದವರ ಲಿಸ್ಟ್!

ಕರ್ನಾ​ಟ​ಕದ ಸುನಿಲ್‌ ರಮೇಶ್‌ರನ್ನು ಏಕ​ದಿನ ತಂಡದ ನಾಯ​ಕ​ರ​ನ್ನಾಗಿ ನೇಮಿ​ಸಿದೆ. ರಾಜ್ಯದ ಆಟ​ಗಾರರಾದ ಲೋಕೇಶ್‌, ಏಕ​ದಿನ ನಾಯಕ ಸುನಿಲ್‌, ಏಕದಿನ ಹಾಗೂ ಟಿ20 ಎರಡೂ ತಂಡ​ಗ​ಳಲ್ಲಿ ಸ್ಥಾನ ಪಡೆ​ದಿ​ದ್ದಾ​ರೆ. ಭಾರ​ತ ಅಂಧರ ಟಿ20 ನಾಯ​ಕ​ರಾಗಿ ಹರ್ಯಾ​ಣದ ದೀಪಕ್‌ ಮಲಿಕ್‌ ಆಯ್ಕೆ​ ಆಗಿದ್ದಾರೆ.

ಇದನ್ನೂ ಓದಿ:  ಅಂಧರ ಟಿ20: ಲಂಕಾ ವಿರುದ್ಧ ಭಾರತಕ್ಕೆ ಸರಣಿ!

ಡಿ.2ರಿಂದ 4ರ ವರೆಗೆ ಕಾನ್ಪು​ರ​ದಲ್ಲಿ 3 ಪಂದ್ಯ​ಗಳ ಏಕ​ದಿನ ಸರಣಿ ನಡೆ​ಯ​ಲಿದೆ. ಡಿ.6 ರಿಂದ 8ರ ವರೆಗೆ ಡೆಹ್ರಾ​ಡೂ​ನ್‌​ನಲ್ಲಿ 3 ಪಂದ್ಯ​ಗಳ ಟಿ20 ಸರಣಿ ನಡೆ​ಯ​ಲಿ​ದೆ.

Follow Us:
Download App:
  • android
  • ios