ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಶುಭಾರಂಭಆಸ್ಟ್ರೇಲಿಯಾ ಎದುರಿನ ನಾಗ್ಪುರ ಟೆಸ್ಟ್ ಪಂದ್ಯ ಗೆದ್ದು ಬೀಗಿದ ಟೀಂ ಇಂಡಿಯಾವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೇರುವ ರೋಹಿತ್ ಶರ್ಮಾ ಪಡೆಯ ಹಾದಿ ಮತ್ತಷ್ಟು ಸುಗಮ

ನಾಗ್ಪುರ(ಫೆ.12): ನಿರೀ​ಕ್ಷೆ​ಯಂತೆಯೇ ಸ್ಪಿನ್‌ ಪರಾ​ಕ್ರ​ಮಕ್ಕೆ ಸಾಕ್ಷಿ​ಯಾದ ಭಾರತ ಹಾಗೂ ಆಸ್ಪ್ರೇ​ಲಿಯಾ ನಡು​ವಿನ ಮೊದಲ ಟೆಸ್ಟ್‌ ಪಂದ್ಯ ಮೂರೇ ದಿನಕ್ಕೆ ಮುಕ್ತಾ​ಯ​ಗೊಂಡಿದೆ. ಕಠಿಣ ಅಭ್ಯಾ​ಸದ ಹೊರತಾ​ಗಿ​ಯೂ ಆರ್‌.​ಅ​ಶ್ವಿನ್‌ ಹಾಗೂ ರವೀಂದ್ರ ಜಡೇಜಾರ ಸ್ಪಿನ್‌ ದಾಳಿ ಎದು​ರಿ​ಸಲು ಪರ​ದಾ​ಡಿದ ಆಸೀಸ್‌ 2ನೇ ಇನ್ನಿಂಗ್‌್ಸ​ನಲ್ಲಿ ಕೇವಲ 91 ರನ್‌ಗೆ ಗಂಟು​ಮೂಟೆ ಕಟ್ಟಿಇನ್ನಿಂಗ್‌್ಸ ಹಾಗೂ 132 ರನ್‌​ಗಳ ಹೀನಾಯ ಸೋಲುಂಡಿದೆ. ಇದ​ರೊಂದಿಗೆ ರೋಹಿತ್‌ ಬಳಗ 4 ಪಂದ್ಯ​ಗಳ ಮಹ​ತ್ವದ ಸರ​ಣಿ​ಯಲ್ಲಿ 1-0 ಮುನ್ನಡೆ ಪಡೆ​ದಿದೆ.

ಆಸ್ಪ್ರೇ​ಲಿಯಾ ವಿರುದ್ಧ ಭರ್ಜರಿ ಗೆಲುವು ಸಾಧಿ​ಸಿದ ಭಾರತ ಐಸಿಸಿ ಟೆಸ್ಟ್‌ ಚಾಂಪಿ​ಯ​ನ್‌​ಶಿ​ಪ್‌​ನಲ್ಲಿ ಫೈನ​ಲ್‌ಗೆ ಇನ್ನಷ್ಟು ಹತ್ತಿ​ರ​ವಾ​ಗಿದೆ. ಸದ್ಯ ಭಾರತ 61.67 ಗೆಲುವಿನ ಪ್ರತಿ​ಶ​ತ​ದೊಂದಿಗೆ ಪಟ್ಟಿ​ಯಲ್ಲಿ 2ನೇ ಸ್ಥಾನ​ದ​ಲ್ಲಿ​ದ್ದರೆ, ಆಸ್ಪ್ರೇ​ಲಿ​ಯಾ(ಶೇ.70.83) ಅಗ್ರ​ಸ್ಥಾ​ನ​ದ​ಲ್ಲಿದೆ. 

ಉಳಿದ 3 ಪಂದ್ಯ​ಗ​ಳಲ್ಲಿ ಭಾರ​ತ 2ರಲ್ಲಿ ಗೆದ್ದರೆ 2ನೇ ಸ್ಥಾನ​ದಲ್ಲೇ ಉಳಿ​ಯ​ಲಿದೆ. ಒಂದು ವೇಳೆ ಭಾರತ 4-0ಯಲ್ಲಿ ಕ್ಲೀನ್‌​ಸ್ವೀಪ್‌ ಮಾಡಿ​ದರೆ ಭಾರತ ಅಗ್ರ​ಸ್ಥಾ​ನ​ಕ್ಕೇರಲಿದ್ದು, ಆಗ 2ನೇ ಸ್ಥಾನಕ್ಕೆ ಆಸ್ಪ್ರೇ​ಲಿಯಾ, ಶ್ರೀಲಂಕಾ ನಡುವೆ ಪೈಪೋಟಿ ಎದು​ರಾ​ಗ​ಲಿದೆ. ನ್ಯೂಜಿ​ಲೆಂಡ್‌ ವಿರುದ್ಧ ಲಂಕಾ 2-0ಯಿಂದ ಗೆದ್ದರೆ ಆಗ ಆಸ್ಪ್ರೇ​ಲಿ​ಯಾ​ವನ್ನು ಹಿಂದಿಕ್ಕಿ ಲಂಕಾ 2ನೇ ಸ್ಥಾನ​ಕ್ಕೇ​ರುವ ಸಾಧ್ಯ​ತೆ​ಯಿದೆ.

ಚೊಚ್ಚಲ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಟೂರ್ನಿಯಲ್ಲೂ ಭಾರತ ಫೈನಲ್ ಪ್ರವೇಶಿಸಿತ್ತಾದರೂ ಪ್ರಶಸ್ತಿ ಗೆಲ್ಲಲು ವಿಫಲವಾಗಿತ್ತು. 2021ರಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, ನ್ಯೂಜಿಲೆಂಡ್ ಎದುರು 8 ವಿಕೆಟ್‌ಗಳ ಹೀನಾಯ ಸೋಲು ಕಾಣುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇದೀಗ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಮತ್ತೊಮ್ಮೆ ಟೆಸ್ಟ್‌ ವಿಶ್ವಕಪ್ ಫೈನಲ್‌ ಆಡಲು ಮತ್ತಷ್ಟು ಹತ್ತಿರವಾಗುತ್ತಿದೆ.

Scroll to load tweet…

ಆಸ್ಟ್ರೇಲಿಯಾದಿಂದ ಒತ್ತಡ ತಡೆ​ಯದೆ ಪಿಚ್‌ ಬಗ್ಗೆ ದೂರು: ರೋಹಿ​ತ್‌

ಕೇವಲ ಒಂದೇ ಅವ​ಧಿ​ಯಲ್ಲಿ ಆಸೀಸ್‌ ಆಲೌಟ್‌ ಆಗುತ್ತೆ ಎಂದು ಊಹಿ​ಸಿ​ರ​ಲಿಲ್ಲ. ಪಿಚ್‌ ನಿಧಾ​ನ​ವಾಗಿ ವರ್ತಿ​ಸಲು ಶುರು ಮಾಡಿ​ದರೂ ಆಸೀಸ್‌ ಪೈಪೋಟಿ ನೀಡುವ ನಿರೀ​ಕ್ಷೆ​ಯಿತ್ತು. ಆಸೀಸ್‌ ಆಟ​ಗಾ​ರರು ಒತ್ತಡ ತಡೆ​ಯದೆ ಪಿಚ್‌ ಬಗ್ಗೆ ದೂರು​ತ್ತಿ​ದ್ದಾ​ರೆ. ಇದೇ ಪಿಚ್‌​ನಲ್ಲಿ ನಾವು 3-4 ವರ್ಷ​ಗ​ಳಿಂದ ಆಡು​ತ್ತೇವೆ. ಹೀಗಾಗಿ ಪಿಚ್‌ ಬಗ್ಗೆ ಇನ್ನು ಏನೂ ಮಾತ​ನಾ​ಡು​ವು​ದಿಲ್ಲ. ಆಸ್ಪ್ರೇ​ಲಿಯಾ ಬಲಿಷ್ಠ ತಂಡ. ಖಂಡಿತಾ ಕಮ್‌​ಬ್ಯಾಕ್‌ ಮಾಡು​ತ್ತಾ​ರೆ - ರೋಹಿತ್‌ ಶರ್ಮಾ, ಭಾರ​ತದ ನಾಯ​ಕ

IND vs AUS ಆಸ್ಟ್ರೇಲಿಯಾ ವಿರುದ್ಧ 1ನೇ ಟೆಸ್ಟ್ ಗೆದ್ದ ಬೆನ್ನಲ್ಲೇ ಭಾರತಕ್ಕೆ ಶಾಕ್, ಜಡೇಜಾಗೆ ದಂಡ!

ರಾಹುಲ್‌ ಆಯ್ಕೆಯಲ್ಲಿ ಪಕ್ಷ​ಪಾ​ತ: ವೆಂಕ​ಟೇ​ಶ್‌

ಬೆಂಗ​ಳೂ​ರು: ಹಲವು ಅವ​ಕಾ​ಶ​ಗಳು ಸಿಕ್ಕರೂ ಸತ​ತ​ವಾಗಿ ವೈಫಲ್ಯ ಅನು​ಭ​ವಿ​ಸು​ತ್ತಿ​ರುವ ಕೆ.ಎ​ಲ್‌.​ರಾ​ಹುಲ್‌ ಬಗ್ಗೆ ಭಾರ​ತದ ಮಾಜಿ ವೇಗಿ, ಕನ್ನ​ಡಿ​ಗ​ ವೆಂಕ​ಟೇಶ್‌ ಪ್ರಸಾದ್‌ ಕಿಡಿ​ಕಾ​ರಿದ್ದು, ರಾಹುಲ್‌ರನ್ನು ಪಕ್ಷ​ಪಾ​ತ​ದಿಂದಾಗಿ ತಂಡ​ದಲ್ಲಿ ಉಳಿ​ಸಿ​ಕೊ​ಳ್ಳ​ಲಾ​ಗಿದೆ. ಪ್ರದ​ರ್ಶ​ನದ ಆಧಾ​ರ​ದಲ್ಲಿ ಆಯ್ಕೆ ಮಾಡಿಲ್ಲ ಎಂದಿ​ದ್ದಾರೆ. 

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿ​ರುವ ಅವರು, ರಾಹುಲ್‌ ವಿಫ​ಲ​ತೆ​ಯಲ್ಲೇ ಸ್ಥಿರತೆ ಕಾಯ್ದು​ಕೊಂಡಿ​ದ್ದಾರೆ. ಉತ್ತಮ ಪ್ರದ​ರ್ಶನ ನೀಡ​ದಿ​ದ್ದರೂ ಸತತ 8 ವರ್ಷದಿಂದ ಅವ​ಕಾಶ ನೀಡ​ಲಾ​ಗು​ತ್ತಿದೆ. ಹೀಗಾಗಿ ಶುಭ್‌​ಮನ್‌ ಗಿಲ್‌, ಸರ್ಫ​ರಾಜ್‌ ಖಾನ್‌ ಸೇರಿ ಹಲ​ವರು ಅವ​ಕಾಶ ವಂಚಿ​ತ​ರಾ​ಗಿ​ದ್ದಾರೆ. ರಾಹುಲ್‌ಗೆ ಉಪ​ನಾ​ಯಕ ಪಟ್ಟವೂ ಸೂಕ್ತ​ವಲ್ಲ. ಅವರ ಬದಲು ಅಶ್ವಿನ್‌, ಪೂಜಾರ ಉತ್ತಮ ನಾಯ​ಕ​ತ್ವದ ಗುಣ ಹೊಂದಿ​ದ್ದಾರೆ ಎಂದು ಟೀಕಿ​ಸಿ​ದ್ದಾರೆ.

ಧರ್ಮ​ಶಾ​ಲಾದಲ್ಲಿ 3ನೇ ಟೆಸ್ಟ್‌ ಡೌಟ್‌!

3ನೇ ಟೆಸ್ಟ್‌ ಪಂದ್ಯ ಮಾರ್ಚ್‌ 1ರಿಂದ ಧರ್ಮ​ಶಾಲಾ ಕ್ರೀಡಾಂಗ​ಣ​ದಲ್ಲಿ ನಿಗ​ದಿ​ಯಾ​ಗಿ​ದ್ದರೂ ಪಂದ್ಯ ಅಲ್ಲಿಂದ ಬೇರೆ​ಡೆಗೆ ಸ್ಥಳಂತ​ರ​ಗೊ​ಳ್ಳುವ ಸಾಧ್ಯತೆಯಿದೆ ಎಂದು ವರ​ದಿ​ಯಾ​ಗಿದೆ. ಧರ್ಮ​ಶಾಲಾ ಮೈದಾ​ನ​ದಲ್ಲಿ ನವೀ​ಕ​ರಣ ಕಾಮ​ಗಾರಿ ನಡೆ​ಯು​ತ್ತಿದ್ದು, ಇನ್ನೂ ಪೂರ್ಣ​ಗೊಂಡಿಲ್ಲ. ಹೀಗಾಗಿ ಫೆಬ್ರವರಿ 12ರಂದು ಬಿಸಿ​ಸಿಐ ತಂಡ ಮೈದಾ​ನಕ್ಕೆ ಆಗ​ಮಿಸಿ ಪರಿ​ಶೀ​ಲನೆ ನಡೆ​ಸ​ಲಿದ್ದು, ಬಳಿಕ ಅಂತಿಮ ನಿರ್ಧಾರ ಕೈಗೊ​ಳ್ಳ​ಲಿದೆ. 

ಒಂದು ವೇಳೆ ಧರ್ಮ​ಶಾಲಾ ಕ್ರೀಡಾಂಗಣ ಆಡಲು ಫಿಟ್‌ ಎನಿ​ಸ​ದಿ​ದ್ದರೆ ಪಂದ್ಯ ಮೊಹಾ​ಲಿಗೆ ಸ್ಥಳಾಂತ​ರ​ಗೊ​ಳ್ಳುವ ಸಾಧ್ಯತೆ ಇದೆ. ಬೆಂಗ​ಳೂ​ರಿನ ಚಿನ್ನ​ಸ್ವಾಮಿ ಕ್ರೀಡಾಂಗಣ ಕೂಡಾ ಆತಿ​ಥ್ಯ ರೇಸ್‌​ನ​ಲ್ಲಿದೆ. 2ನೇ ಮತ್ತು 4ನೇ ಪಂದ್ಯ ಕ್ರಮ​ವಾಗಿ ಡೆಲ್ಲಿ, ಅಹ​ಮ​ದಾ​ಬಾ​ದ್‌​ನಲ್ಲಿ ನಡೆ​ಯ​ಬೇ​ಕಿ​ದೆ.