ಇಂಗ್ಲೆಂಡ್ ಕ್ರಿಕೆಟಿಗ ಸ್ಯಾಮ್ ಬಿಲ್ಲಿಂಗ್ಸ್ಗೆ ಚರ್ಮದ ಕ್ಯಾನ್ಸರ್ ದೃಢಕಳೆದ ವರ್ಷ 2 ಬಾರಿ ಎದೆಯ ಭಾಗದ ಚರ್ಮದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಬಿಲ್ಲಿಂಗ್ಸ್ಬಿಸಿಲಿನ ಬಗ್ಗೆ ಜಾಗೃತಿ ಮೂಡಿಸಲು ಮುಂದಾದ ಬಿಲ್ಲಿಂಗ್ಸ್
ಲಂಡನ್(ಮೇ.10): ಇಂಗ್ಲೆಂಡ್ನ ವಿಕೆಟ್ಕೀಪರ್ ಬ್ಯಾಟರ್ ಸ್ಯಾಮ್ ಬಿಲ್ಲಿಂಗ್ ತಾವು ಚರ್ಮದ ಕ್ಯಾನ್ಸರ್ನಿಂದ ಬಳಲುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ಅವರು ಮಂಗಳವಾರ ಸಾಮಾಜಿಕ ತಾಣಗಳಲ್ಲಿ ಮಾಹಿತಿ ನೀಡಿದ್ದು, ಕಳೆದ ವರ್ಷ 2 ಬಾರಿ ಎದೆಯ ಭಾಗದ ಚರ್ಮದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾಗಿ ತಿಳಿಸಿದ್ದಾರೆ. ಅಲ್ಲದೇ ‘ಬಿಸಿಲಿನಲ್ಲಿ ತುಂಬಾ ಸಮಯ ಕಳೆಯುವುದು ಅಪಾಯಕಾರಿ. ನನ್ನ ಸ್ಥಿತಿ ನೋಡಿಯಾದರೂ ಯೋಚಿಸಿ’ ಎಂದು ಆಟಗಾರರರಲ್ಲಿ ವಿನಂತಿಸಿದ್ದಾರೆ.
ನನಗೆ ಚರ್ಮದ ಮೇಲೆ ಮಚ್ಚೆಯಂತ ಕಲೆಗಳು ಕಾಣಿಸಿಕೊಂಡಿತ್ತು. ಅದು 0.6 ಮಿಲಿಮೀಟರ್ನಷ್ಟು ಆಳವಾಗಿತ್ತು. ಅದು 0.7 ಮಿಲಿಮೀಟರ್ ಆಳಕ್ಕೆ ಇಳಿದಾಗ ಮತ್ತಷ್ಟು ಗಂಭೀರವಾಯಿತು. "ನಾನು ಅದನ್ನು ನಿರ್ಲಕ್ಷಿಸಿದ್ದರೇ, ಮುಂದಿನ ಆರೇಳು ತಿಂಗಳಿನಲ್ಲಿ ಮತ್ತಷ್ಟು ಗಂಭೀರವಾಗುತ್ತಿತ್ತು. ಅಂತರ ಕಡಿಮೆಯಿದ್ದರೂ, ಸಾಕಷ್ಟು ಪರಿಣಾಮಕಾರಿಯಾಗುತ್ತಿತ್ತು ಎಂದು 31 ವರ್ಷದ ಸ್ಯಾಮ್ ಬಿಲ್ಲಿಂಗ್ಸ್ ಹೇಳಿದ್ದಾರೆ.
ಸ್ಯಾಮ್ ಬಿಲ್ಲಿಂಗ್ಸ್, ಇಂಗ್ಲೆಂಡ್ ಪರ 3 ಟೆಸ್ಟ್, 28 ಏಕದಿನ ಹಾಗೂ 37 ಟಿ20 ಪಂದ್ಯಗಳನ್ನಾಡಿದ್ದಾರೆ. ಸದ್ಯ ಸ್ಯಾಮ್ ಬಿಲ್ಲಿಂಗ್ಸ್ ಕೌಂಟಿ ಕ್ರಿಕೆಟ್ ಆಡುತ್ತಿದ್ದಾರೆ. ಕ್ಯಾನ್ಸರ್ ಎದುರಿನ ಹೋರಾಟದ ಬಗ್ಗೆ ಇದನ್ನು ನೋಡುವ ದೃಷ್ಟಿಕೋನವೇ ಬದಲಾಗಿದೆ ಎಂದು ಬಿಲ್ಲಿಂಗ್ಸ್ ಹೇಳಿದ್ದಾರೆ.
ನಮ್ಮದು ಮಾತ್ರವಲ್ಲ, ಅದು ಕ್ಲಬ್ ಕ್ರಿಕೆಟರ್ ಆಗಿರಲಿ ಅಥವಾ ಪಂದ್ಯವನ್ನು ವೀಕ್ಷಿಸುವ ಅಭಿಮಾನಿಗಳೇ ಆಗಿರಲಿ, ಅತಿಯಾದ ಬಿಸಿಲಿನಲ್ಲಿ ಇರುವುದು ಒಳ್ಳೆಯದಲ್ಲ. ನಾನು ಇತ್ತೀಚೆಗಷ್ಟೇ ಲಾರ್ಡ್ಸ್ನಲ್ಲಿ ಪಂದ್ಯವನ್ನಾಡಿದೆ, ಆಗ ಸೂರ್ಯನ ತಾಪಮಾನ 25 ಡಿಗ್ರಿ ಸೆಲ್ಸಿಯಸ್ನಷ್ಟೂ ಇರಲಿಲ್ಲ. ಹೆಚ್ಚೆಂದರೆ 18 ಡಿಗ್ರಿ ಸೆಲ್ಸಿಯಸ್ನಷ್ಟಿತ್ತು, ಹೀಗಿದ್ದೂ ಸೂರ್ಯನ ಶಾಖ ತಡೆಯಲಾಗಲಿಲ್ಲ ಎಂದು ಬಿಲ್ಲಿಂಗ್ಸ್ ಹೇಳಿದ್ದಾರೆ.
IPL 2023 ಬೃಹತ್ ಮೊತ್ತ ಸಿಡಿಸಿದರೂ ಆರ್ಸಿಬಿಗೆ ಸೋಲು, ಪ್ಲೇ ಆಫ್ಗೆ ಇದೆಯಾ ಅವಕಾಶ?
ನಾವು ಬಿಸಿಲಿಗೆ ಸನ್ಕ್ರೀಮ್ ಹಚ್ಚಿಕೊಳ್ಳುತ್ತೇವೆ. ಆದರೆ ಅದು ತಾತ್ಕಾಲಿಕವಷ್ಟೇ. ಆದರೆ ಸನ್ಬರ್ನ್ ಕುರಿತಾಗಿ ಆಸ್ಟ್ರೇಲಿಯಾದಂತ ದೇಶಗಳಲ್ಲಿ ಸಿಗುತ್ತಿರುವ ಶಿಕ್ಷಣ/ಮಾಹಿತಿ ಬೇರೆ ಕಡೆ ಸರಿಯಾಗಿ ಸಿಗುತ್ತಿಲ್ಲ. ಈ ಕುರಿತಂತೆ ಎಲ್ಲಾ ಕ್ರಿಕೆಟಿಗರು ಒಟ್ಟಾಗಿ ಜಾಗೃತಿ ಮೂಡಿಸಬೇಕಿದೆ. ಸೂರ್ಯ ಹೊರಬಂದಿದ್ದಾನೆ ಎಂದರೆ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕಿದೆ ಎಂದು ಸ್ಯಾಮ್ ಬಿಲ್ಲಿಂಗ್ಸ್ ಮನವಿ ಮಾಡಿಕೊಂಡಿದ್ದಾರೆ.
ಆರ್ಚರ್ ಔಟ್: ಮುಂಬೈಗೆ ಕ್ರಿಸ್ ಜೋರ್ಡನ್ ಸೇರ್ಪಡೆ
ಮುಂಬೈ: ಅನುಭವಿ ವೇಗಿಗಳ ಕೊರತೆ ಎದುರಿಸುತ್ತಿರುವ ಮುಂಬೈ ಇಂಡಿಯನ್ಸ್ಗೆ ಮತ್ತೊಂದು ಆಘಾತ ಎದುರಾಗಿದ್ದು, ಪ್ರಮುಖ ವೇಗಿ ಜೋಫ್ರಾ ಆರ್ಚರ್ 16ನೇ ಆವೃತ್ತಿ ಐಪಿಎಲ್ನಿಂದಲೇ ಹೊರಬಿದ್ದಿದ್ದಾರೆ. ಅವರ ಬದಲು ಇಂಗ್ಲೆಂಡ್ನವರೇ ಆದ ವೇಗಿ ಕ್ರಿಸ್ ಜೊರ್ಡನ್ರನ್ನು ತಂಡಕ್ಕೆ ಸೇರ್ಪಡೆಗೊಳಿಸಿದೆ.
ಜೋರ್ಡನ್ರನ್ನು ಕಳೆದ ವಾರವೇ ತಂಡಕ್ಕೆ ಸೇರಿಸಿಕೊಂಡಿದ್ದಾಗಿ ಫ್ರಾಂಚೈಸಿ ಮಾಹಿತಿ ನೀಡಿತ್ತು. ಆದರೆ ಯಾವ ಆಟಗಾರನ ಬದಲಿಗೆ ಕ್ರಿಸ್ ಜೊರ್ಡನ್ ಮುಂಬೈ ಇಂಡಿಯನ್ಸ್ ತಂಡ ಕೂಡಿಕೊಂಡಿದ್ದಾರೆ ಎಂಬುದನ್ನು ಬಹಿರಂಗಪಡಿಸಿರಲಿಲ್ಲ. ಜೊರ್ಡನ್ ಐಪಿಎಲ್ನಲ್ಲಿ ಆರ್ಸಿಬಿ ಸೇರಿದಂತೆ ವಿವಿಧ ತಂಡಗಳ ಪರ 28 ಪಂದ್ಯಗಳಲ್ಲಿ 27 ವಿಕೆಟ್ ಪಡೆದಿದ್ದಾರೆ.
ಕೆಕೆಆರ್ ನಾಯಕ ನಿತೀಶ್ ರಾಣಾಗೆ 12 ಲಕ್ಷ ರುಪಾಯಿ ದಂಡ
ನವದೆಹಲಿ: ಪಂಜಾಬ್ ಕಿಂಗ್್ಸ ವಿರುದ್ಧದ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್ ಮಾಡಿದ್ದಕ್ಕೆ ಕೋಲ್ಕತಾ ನೈಟ್ ರೈಡರ್ಸ್ ನಾಯಕ ನಿತೀಶ್ ರಾಣಾಗೆ 12 ಲಕ್ಷ ರುಪಾಯಿ ದಂಡ ವಿಧಿಸಲಾಗಿದೆ. ಇದು ಟೂರ್ನಿಯಲ್ಲಿ ಕೆಕೆಆರ್ನ ಮೊದಲ ನಿಯಮ ಉಲ್ಲಂಘನೆಯಾಗಿದ್ದು, ಮತ್ತೊಮ್ಮೆ ಉಲ್ಲಂಘಿಸಿದರೆ ದಂಡದ ಮೊತ್ತ ದುಪ್ಪಟ್ಟಾಗಲಿದೆ. 3ನೇ ಬಾರಿ ನಿಯಮ ಉಲ್ಲಂಘಿಸಿದರೆ ನಾಯಕನಿಗೆ ದಂಡದ ಜೊತೆ ಒಂದು ಪಂದ್ಯ ನಿಷೇಧ ಹೇರಲಾಗುತ್ತದೆ. ಸೋಮವಾರದ ಪಂದ್ಯದಲ್ಲಿ ಕೆಕೆಆರ್ ಕೊನೆ ಬಾಲ್ನಲ್ಲಿ ಗೆಲುವು ತನ್ನದಾಗಿಸಿಕೊಂಡಿತ್ತು.
