Asianet Suvarna News Asianet Suvarna News

ಟೆಸ್ಟ್‌ ನಲ್ಲಿ ಕೊರೋನಾ ರೀಪ್ಲೇಸ್‌ಮೆಂಟ್‌: ಚೆಂಡಿಗೆ ಎಂಜಲು ಹಚ್ಚಿದರೆ 5 ರನ್ ಪೆನಾಲ್ಟಿ..!

ಕೊರೋನಾ ವೈರಸ್ ಭೀತಿಯ ನಡುವೆಯೇ ಕ್ರಿಕೆಟ್ ಚಟುವಟಿಕೆಗಳು ಗರಿಗೆದರಲಾರಂಭಿಸಿವೆ. ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಐಸಿಸಿ ಕೆಲವೊಂದು ಮಹತ್ವದ ತೀರ್ಮಾನಗಳನ್ನು ತೆಗೆದುಕೊಂಡಿದೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

Coronavirus Threat ICC approved Interim regulation changes
Author
Dubai - United Arab Emirates, First Published Jun 10, 2020, 2:08 PM IST

ದುಬೈ(ಜೂ.10): ಟೆಸ್ಟ್‌ ಪಂದ್ಯ​ಗಳ ವೇಳೆ ಯಾವುದೇ ಆಟ​ಗಾರನಲ್ಲಿ ಕೊರೋನಾ ಸೋಂಕು ದೃಢ​ಪ​ಟ್ಟರೆ ಇಲ್ಲವೇ ಸೋಂಕಿನ ಲಕ್ಷಣಗಳು ಕಂಡ​ರೂ ಅಂತಹ ಆಟ​ಗಾ​ರ​ರ ಬದ​ಲಿಗೆ ಬೇರೊಬ್ಬ ಆಟ​ಗಾ​ರ​ನನ್ನು ಕಣ​ಕ್ಕಿ​ಳಿ​ಸಲು ಅಂತಾ​ರಾ​ಷ್ಟ್ರೀಯ ಕ್ರಿಕೆಟ್‌ ಸಮಿತಿ (ಐ​ಸಿ​ಸಿ​) ಅನು​ಮತಿ ನೀಡಿದೆ.

ಭಾರ​ತದ ಮಾಜಿ ನಾಯಕ ಅನಿಲ್‌ ಕುಂಬ್ಳೆ ನೇತೃ​ತ್ವದ ಐಸಿಸಿ ಕ್ರಿಕೆಟ್‌ ಸಮಿತಿ ಈ ನಿಯ​ಮ​ವನ್ನು ಜಾರಿ ಮಾಡು​ವಂತೆ ಪ್ರಸ್ತಾ​ಪಿ​ಸಿ​ತ್ತು. ಆದರೆ ಆಟಗಾರರ ರೀಪ್ಲೇಸ್‌ಮೆಂಟ್ ನಿಯಮ ಏಕ​ದಿನ ಹಾಗೂ ಟಿ20 ಪಂದ್ಯ​ಗ​ಳಿಗೆ ಅನ್ವಯವಾಗು​ವು​ದಿಲ್ಲ ಎಂದು ಐಸಿಸಿ ಸ್ಪಷ್ಟ​ಪ​ಡಿ​ಸಿದೆ.

ಕ್ರಿಕೆಟ್ ಕ್ರಾಂತಿ; ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್‌ಗೆ ಬಂದಳಿದ ವೆಸ್ಟ್ ಇಂಡೀಸ್!

ಚೆಂಡಿಗೆ ಎಂಜಲು ಹಚ್ಚುವುದು ನಿಷೇಧ: ಕೊರೋನಾ ಭೀತಿಯಿಂದಾಗಿ ಚೆಂಡಿಗೆ ಎಂಜಲು ಹಚ್ಚುವುದನ್ನು ಐಸಿಸಿ ನಿಷೇಧಿಸಿದೆ. ಒಂದುವೇಳೆ ಆಟಗಾರರು ಎಂಜಲು ಹಚ್ಚಿದರೆ ಅಂಪೈರ್ ವಾರ್ನಿಂಗ್ ನೀಡಲಿದ್ದಾರೆ. ಎರಡು ಬಾರಿ ತಂಡ ವಾರ್ನಿಂಗ್  ತೆಗೆದುಕೊಳ್ಳಬಹುದು. ಇದಾದ ಬಳಿಕ ಮತ್ತದೇ ತಪ್ಪು ಮರುಕಳಿಸಿದರೆ ಎದುರಾಳಿ ತಂಡಕ್ಕೆ ಪೆನಾಲ್ಟಿ ರೂಪದಲ್ಲಿ ನೀಡಲಾಗುತ್ತದೆ.

ಐಸಿಸಿಯ ಈ ನೂತನ ನಿಯಮದ ಬಗ್ಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್, ಆಸೀಸ್ ಮಾಜಿ ವೇಗಿ ಬ್ರೆಟ್ ಲೀ ಅವರೊಂದಿಗೆ ವಿಡಿಯೋ ಸಂವಾದ ನಡೆಸಿದ್ದಾರೆ. ಬೆವರು ಹಾಗೂ ಎಂಜಲು ಹಚ್ಚುವುದರಿಂದ ಬೌಲಿಂಗ್‌ನಲ್ಲಿ ಸ್ವಿಂಗ್ ಮಾಡುವ ಬಗ್ಗೆ ಚರ್ಚೆ ನಡೆಸಿದ್ದಾರೆ. 

ಟಿ20 ವಿಶ್ವ​ಕಪ್‌ ನಿರ್ಧಾ​ರ ವಿಳಂಬ​ಕ್ಕೆ ಬಿಸಿ​ಸಿಐ ಬೇಸರ

ನವ​ದೆ​ಹ​ಲಿ​: ಅಕ್ಟೋ​ಬರ್‌-ನವೆಂಬರ್‌ನಲ್ಲಿ ಆಸ್ಪ್ರೇ​ಲಿ​ಯಾ​ದಲ್ಲಿ ನಡೆ​ಯ​ಬೇ​ಕಿ​ರುವ ಟಿ20 ವಿಶ್ವ​ಕಪ್‌ ಟೂರ್ನಿಯ ಬಗ್ಗೆ ನಿರ್ಧಾರ ಪ್ರಕ​ಟಿ​ಸಲು ಅಂತಾ​ರಾ​ಷ್ಟ್ರೀಯ ಕ್ರಿಕೆಟ್‌ ಸಮಿತಿ (ಐ​ಸಿ​ಸಿ) ಅನ​ಗ​ತ್ಯ​ವಾಗಿ ವಿಳಂಬ ಮಾಡು​ತ್ತಿದೆ. 

ಐಸಿಸಿ ತನ್ನ ನಿರ್ಧಾರವನ್ನು ಶೀಘ್ರ ಪ್ರಕ​ಟಿ​ಸ​ಬೇಕು ಎಂದು ಬಿಸಿ​ಸಿಐ ಖಜಾಂಚಿ ಅರುಣ್‌ ಧುಮಾಲ್‌ ಒತ್ತಾ​ಯಿ​ಸಿ​ದ್ದಾರೆ. ಟಿ20 ವಿಶ್ವ​ಕಪ್‌ ಮುಂದೂ​ಡಿ​ದರೆ ಇಲ್ಲವೇ ರದ್ದು​ಗೊಂಡರೆ ಆ ಅವ​ಧಿ​ಯಲ್ಲಿ ಐಪಿ​ಎಲ್‌ ಟೂರ್ನಿ ನಡೆ​ಸಲು ಬಿಸಿ​ಸಿಐ ಯೋಜನೆ ರೂಪಿ​ಸಿದೆ. ಬುಧ​ವಾರ ಐಸಿಸಿ ಸಭೆ ನಡೆ​ಯ​ಲಿದ್ದು, ನಿರ್ಧಾರ ಕೈಗೊ​ಳ್ಳುವ ಸಾಧ್ಯತೆ ಇದೆ. ಆದರೆ ಮೂಲ​ಗಳು ನೀಡಿ​ರುವ ಮಾಹಿತಿ ಪ್ರಕಾರ ಐಸಿಸಿ ತಕ್ಷಣ ನಿರ್ಧಾರ ಪ್ರಕ​ಟಿ​ಸು​ವು​ದಿಲ್ಲ ಎಂದು ಮಾಧ್ಯ​ಮ​ವೊಂದು ವರದಿ ಮಾಡಿದೆ.

Follow Us:
Download App:
  • android
  • ios