ನಿವೃತ್ತಿ ಕುರಿತಂತೆ ಅಚ್ಚರಿಯ ಹೇಳಿಕೆ ನೀಡಿದ ಧೋನಿಇನ್ನೂ ಕೆಲಕಾಲ ಮುಂದುವರೆಯುತ್ತಾರಾ ಮಹಿಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿರುವ ಧೋನಿ
ಲಖನೌ(ಮೇ.04): ಕಳೆದರಡು ವರ್ಷಗಳಿಂದ ಕೇಳಿ ಬರುತ್ತಿರುವ ನಿವೃತ್ತಿ ವದಂತಿ ಬಗ್ಗೆ ಇನ್ನೂ ಗುಟ್ಟು ಬಿಟ್ಟುಕೊಡದ ಎಂ.ಎಸ್.ಧೋನಿ ಮತ್ತೊಮ್ಮೆ ತಮ್ಮ ಹೇಳಿಕೆ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ್ದಾರೆ. ಬುಧವಾರ ಲಖನೌ ವಿರುದ್ಧದ ಪಂದ್ಯಕ್ಕೂ ಮುನ್ನ ಟಾಸ್ ವೇಳೆ ವೀಕ್ಷಕ ವಿವರಣೆಗಾರ ಡ್ಯಾನಿ ಮೊರಿಸ್ಸನ್ ‘ನಿಮ್ಮ ಕೊನೆ ಐಪಿಎಲ್ ಅನ್ನು ಹೇಗೆ ಎಂಜಾಯ್ ಮಾಡುತ್ತಿದ್ದೀರಿ ಎಂದು ಕೇಳಿದ ಪ್ರಶ್ನೆಗೆ, ‘ಇದು ನನ್ನ ಕೊನೆ ಐಪಿಎಲ್ ಎಂಬುದು ನೀವೇ ನಿರ್ಧರಿಸಿದ್ದೀರಿ’ ಎಂದು ಧೋನಿ ಉತ್ತರಿಸಿದರು.
ಈ ಆವೃತ್ತಿಯಲ್ಲಿ ಹಲವು ಬಾರಿ ನಿವೃತ್ತಿ ಬಗ್ಗೆ ಸುಳಿವು ನೀಡಿದ್ದ ಧೋನಿ ಈಗ ನಿವೃತ್ತಿ ವದಂತಿ ಅಲ್ಲಗಳೆಯುವ ರೀತಿ ಮಾತನಾಡಿದ್ದು, ಹಲವು ರೀತಿಯ ವಿಶ್ಲೇಷಣೆಗೆ ಕಾರಣವಾಗಿದೆ. ಮಹೇಂದ್ರ ಸಿಂಗ್ ಧೋನಿ 2020ರ ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದರು. ಇದಾದ ಬಳಿಕ ಕೇವಲ ಐಪಿಎಲ್ ಟೂರ್ನಿಯಲ್ಲಿ ಮಾತ್ರ ಪಾಲ್ಗೊಳ್ಳುತ್ತಾ ಬಂದಿದ್ದಾರೆ. ಧೋನಿಯ ಕೆಲವು ಮಾತುಗಳು ಅವರ ನಿವೃತ್ತಿ ವದಂತಿಯನ್ನು ಪುಷ್ಠಿಗೊಳಿಸುತ್ತಿದ್ದರೆ, ಮತ್ತೆ ಕೆಲವು ಮಾತುಗಳು ಇನ್ನೂ ಧೋನಿ ಕ್ರಿಕೆಟ್ನಲ್ಲಿ ಮುಂದುವರೆಯಲಿದ್ದಾರೆ ಎನ್ನುವಂತಹ ಸೂಚನೆಗಳು ಸಿಗುತ್ತಿವೆ.
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಆಡಿದ 10 ಪಂದ್ಯಗಳ ಪೈಕಿ 5 ಗೆಲುವು, ನಾಲ್ಕು ಸೋಲು ಮತ್ತು ಒಂದು ಪಂದ್ಯ ಫಲಿತಾಂಶವಿಲ್ಲದೇ ರದ್ದಾಗಿದ್ದು, ಒಟ್ಟು 11 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದು ಎಂದು ಗುರುತಿಸಿಕೊಂಡಿದೆ.
ಧೋನಿ ನಿವೃತ್ತಿ ಸೂಚನೆ ನೀಡಿಲ್ಲ: ಕೋಚ್ ಸ್ಟಿಫನ್ ಫ್ಲೆಮಿಂಗ್
ಚೆನ್ನೈ: ಎಂ.ಎಸ್.ಧೋನಿ ಈ ಆವೃತ್ತಿ ಐಪಿಎಲ್ ಬಳಿಕ ನಿವೃತ್ತಿಯಾಗಲಿದ್ದಾರೆ ಎಂಬ ವದಂತಿಗಳನ್ನು ಸ್ವತಃ ಚೆನ್ನೈ ತಂಡದ ಕೋಚ್ ಸ್ಟಿಫನ್ ಫ್ಲೆಮಿಂಗ್ ಅಲ್ಲಗಳೆದಿದ್ದು, ಧೋನಿ ತಮ್ಮ ನಿವೃತ್ತಿ ಬಗ್ಗೆ ಯಾವುದೇ ಸೂಚನೆ ನೀಡಿಲ್ಲ ಎಂದಿದ್ದಾರೆ. ಈಗಾಗಲೇ ತಮ್ಮ ನಿವೃತ್ತಿ ಬಗ್ಗೆ ಧೋನಿಯೇ ಹಲವು ಬಾರಿ ಸುಳಿವು ನೀಡಿದ್ದರು.
IPL 2023 ಕೋಲ್ಕತಾ ನೈಟ್ ರೈಡರ್ಸ್- ಸನ್ರೈಸರ್ಸ್ ಹೈದರಾಬಾದ್ ಫೈಟ್ಗೆ ಕ್ಷಣಗಣನೆ
ಇತ್ತೀಚೆಗಷ್ಟೇ ಕ್ರಿಕೆಟ್ ಬದುಕಿನ ಕೊನೆ ಹಂತದಲ್ಲಿದ್ದೇನೆ ಎಂದಿದ್ದ ಧೋನಿ, ಕಳೆದ ವಾರ ಕೋಲ್ಕತಾ ವಿರುದ್ಧದ ಪಂದ್ಯದ ಬಳಿಕ, ಅಭಿಮಾನಿಗಳು ನನಗೆ ಬೀಳ್ಕೊಡುಗೆ ನೀಡಲು ಪ್ರಯತ್ನಿಸಿದರು ಎಂದಿದ್ದರು. ಇದು ಹಲವು ಊಹಾಪೋಹಗಳಿಗೆ ಕಾರಣವಾಗಿತ್ತು.
ವಿದಾಯದ ಸುಳಿವು ನೀಡಿದ್ದ ಎಂ.ಎಸ್.ಧೋನಿ!
ಕೋಲ್ಕತಾ: ದಿನಗಳ ಹಿಂದಷ್ಟೇ ‘ಕ್ರಿಕೆಟ್ ಬದುಕಿನ ಕೊನೆ ಹಂತದಲ್ಲಿದ್ದೇನೆ’ ಎಂದಿದ್ದ ಸಿಎಸ್ಕೆ ನಾಯಕ ಎಂ.ಎಸ್.ಧೋನಿ, ಭಾನುವಾರ ಕೋಲ್ಕತಾ ವಿರುದ್ಧದ ಪಂದ್ಯದ ಬಳಿಕ ಮತ್ತೊಮ್ಮೆ ವಿದಾಯದ ಸುಳಿವು ನೀಡಿದಂತ ಹೇಳಿಕೆ ನೀಡಿದ್ದಾರೆ. ಪಂದ್ಯ ವೀಕ್ಷಣೆಗೆ ಅಪಾರ ಪ್ರಮಾಣದಲ್ಲಿ ಚೆನ್ನೈ, ಧೋನಿ ಅಭಿಮಾನಿಗಳು ಕ್ರೀಡಾಂಗಣದಲ್ಲಿ ನೆರೆದಿದ್ದರು.
ಈ ಬಗ್ಗೆ ಪಂದ್ಯದ ಬಳಿಕ ಪ್ರತಿಕ್ರಿಯಿಸಿದ ಧೋನಿ, ‘ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳಿಗೆ ಧನ್ಯವಾದಗಳು. ಇವರು ಮುಂದಿನ ಬಾರಿ ಕೆಕೆಆರ್ ತಂಡದ ಜೆರ್ಸಿ ಧರಿಸಿ ಬರಲಿದ್ದಾರೆ. ಅವರು ಈ ಪಂದ್ಯದಲ್ಲಿ ನನಗೆ ಬೀಳ್ಕೊಡುಗೆ ನೀಡಲು ಪ್ರಯತ್ನಿಸಿದರು. ನೆರೆದ ಅಷ್ಟೂ ಪ್ರೇಕ್ಷಕರಿಗೆ ಮತ್ತೊಮ್ಮೆ ಧನ್ಯವಾದ’ ಎಂದು ಹೇಳಿದ್ದಾರೆ.
