ಬೇಲಿ ಮುಳ್ಳಿನಕಾಯಿಗೆ ಬಾರಿ ಡಿಮ್ಯಾಂಡ್‌ ಆರಂಭವಾಗಿದ್ದು, ಕೊರೋನಾ ವೈರಾಣುವಿನ ಮಾದರಿಯನ್ನೇ ಹೋಲುವ ಈ ಕಾಯಿಯನ್ನು ತಂದು ಮನೆಗೆ ಕಟ್ಟಿಪೂಜಿಸಲಾಗುತ್ತಿದೆ. ಬೇಲಿ ಮುಳ್ಳಿನ ಕಾಯಿಗೆ ಕೊರೋನಾ ಕಾಯಿ ಎಂದು ನಾಮಕರಣ ಮಾಡಲಾಗಿದೆ. 

ಮೈಸೂರು(ಏ.04): ಕೊರೋನಾ ವೈರಾಣು ವ್ಯಾಪಕವಾಗಿ ಹರುಡುತ್ತಲೇ ಮೈಸೂರು ನಗರ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ಹೊಸ ಮೌಢ್ಯಾಚರಣೆಯೊಂದು ಬೆಳಕಿಗೆ ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೇಲಿ ಮುಳ್ಳಿನಕಾಯಿಗೆ ಬಾರಿ ಡಿಮ್ಯಾಂಡ್‌ ಆರಂಭವಾಗಿದ್ದು, ಕೊರೋನಾ ವೈರಾಣುವಿನ ಮಾದರಿಯನ್ನೇ ಹೋಲುವ ಈ ಕಾಯಿಯನ್ನು ತಂದು ಮನೆಗೆ ಕಟ್ಟಿಪೂಜಿಸಲಾಗುತ್ತಿದೆ. ಬೇಲಿ ಮುಳ್ಳಿನ ಕಾಯಿಗೆ ಕೊರೋನಾ ಕಾಯಿ ಎಂದು ನಾಮಕರಣ ಮಾಡಲಾಗಿದೆ.

'ಚಹಾಕ್ಕೆ ಬೆಲ್ಲ, ಅರಿಶಿಣ ಹಾಕಿ ಕುಡಿದ್ರೆ ಕೊರೋನಾ ಬರಲ್ಲ'..!

ಮುಳ್ಳು ಮುತ್ತಿಗೆ ಗಿಡ ಅಥವಾ ಊಜಿ ಗಿಡ ಎಂತಲೂ ಗ್ರಾಮಾಂತರ ಪ್ರದೇಶದಲ್ಲಿ ಕರೆಯುವ ಈ ಗಿಡದ ಕಾಯಿಯನ್ನು ಈ ಹಿಂದೆ ಮಕ್ಕಳು ಆಟವಾಡುವಾಗ ಬಲ್ಪ… ನಂತೆ ಬಳಸುತ್ತಿದ್ದರು. ಅದರ ಹೂವನ್ನು ಬ್ಯಾಟರಿ ಎಂದು ತಿಳಿದು ಆಟವಾಡುತ್ತಿದ್ದರು. ಆದರೆ ದುರಾದೃಷ್ಟವಶಾತ್‌ ಈಗ ಆ ಗಿಡಕ್ಕೆ ಬೇಡಿಕೆ ಹೆಚ್ಚಿದೆ. ತಾಲೂಕಿನ ರಮ್ಮನಹಳ್ಳಿ, ಹಂಚ್ಯಾ ಸುತ್ತಮುತ್ತಲ ಪ್ರದೇಶದಲ್ಲಿ ಬೇಲಿ ಕಾಯಿಗಾಗಿ ಜನ ಹುಡುಕಾಟ ಆರಂಭಿಸಿದ್ದಾರೆ. ಮನೆ ಮುಂದೆ ಒಂದು ಕಾಯಿ, ಜೊತೆಗೆ ಮಾವು, ಬೇವಿನ ಸೊಪ್ಪನ್ನು ತೋರಣವನ್ನಾಗಿಸಿ ಕಟ್ಟಿಕುಂಕುಮವಿಟ್ಟು ಗಂಧದ ಕಟ್ಟಿಹಚ್ಚಿ ಪೂಜಿಸುತ್ತಿದ್ದಾರೆ.

ಹೆಚ್ಚುತ್ತಿರುವ ಕೊರೋನಾ ಪ್ರಕರಣ: ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ

ಹೀಗೆ ಪೂಜಿಸಿದರೆ ಕೊರೋನಾ ಬರುವುದಿಲ್ಲ ಎಂಬ ಸುದ್ದಿಯನ್ನು ಯಾರೋ ಹಬ್ಬಿಸಿದ್ದರಿಂದ ಸಾರ್ವಜನಿಕರು ಆ ಕಾಯಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ರಮ್ಮನಹಳ್ಳಿ ಸುತ್ತಮುತ್ತ ಅನೇಕ ಮನೆಗಳ ಮುಂದೆ ಅದನ್ನು ಕಟ್ಟಿಪೂಜಿಸಲಾಗುತ್ತಿದೆ.