ಲಕ್ಕುಂಡಿ ಕೋಟೆ ವೀರಭದ್ರೇಶ್ವರ ಸ್ವಾಮಿಗೂ ಕೊರೋನಾ ಕಾಟ: ಜಾತ್ರೆ ರದ್ದು
ಭಾರತ ಲಾಕ್ಡೌನ್ ಪರಿಣಾಮ| ಲಕ್ಕುಂಡಿ ಕೋಟೆ ವೀರಭದ್ರೇಶ್ವರ ಜಾತ್ರೆ ರದ್ದು| ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಐತಿಹಾಸಿಕ ಕೋಟೆ ವೀರಭದ್ರೇಶ್ವರ ದೇವಸ್ಥಾನ| ಈ ಕುರಿತು ಪ್ರಕಟಣ ಹೊರಡಿಸಿದ ಜಾತ್ರಾ ಸಮಿತಿ|
ಗದಗ(ಮಾ.29): ಕೊರೋನಾ ವೈರಸ್ ತಡೆಗಟ್ಟಲು ದೇಶಾದ್ಯಂತ ಏಪ್ರಿಲ್ 14 ರ ವರೆಗೆ ಲಾಕ್ಡೌನ್ ಇದೆ. ಹೀಗಾಗಿ ಏಪ್ರಿಲ್ 5 ಮತ್ತು 6ರಂದು ಜರುಗಬೇಕಾಗಿದ್ದ ತಾಲೂಕಿನ ಲಕ್ಕುಂಡಿ ಗ್ರಾಮದ ಐತಿಹಾಸಿಕ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಜಾತ್ರೆಯನ್ನು ರದ್ದುಪಡಿಸಲಾಗಿದೆ.
ಈ ಕುರಿತು ವೀರಭದ್ರೇಶ್ವರ ಜಾತ್ರಾ ಸಮಿತಿಯ ಸದಸ್ಯರಾದ ರಮೇಶ ಹಳ್ಳಿ ಹಾಗೂ ಈರಣ್ಣ ಬಂಕಾಪುರ ಪ್ರಕಟಣೆ ಹೊರಡಿಸಿದ್ದಾರೆ.
'ಛತ್ತೀಸ್ಗಡದಲ್ಲಿ ಸಿಲುಕಿದ ರಾಜ್ಯದ ವಿದ್ಯಾರ್ಥಿಗಳು: ಮರಳಿ ಕರೆತರಲು ಸಿಎಂ ಜತೆ ಚರ್ಚೆ'
ಕೊರೋನಾ ವೈರಸ್ ತಡೆಗಟ್ಟಲು ಸರಕಾರದ ಮುಂಜಾಗ್ರತಾ ಕ್ರಮವನ್ನು ಪಾಲಿಸಲು ಜಿಲ್ಲಾಡಳಿತದ ಆದೇಶ ಮೇರೆಗೆ ಈ ವರ್ಷ ಏ. 5 ಮತ್ತು 6ರಂದು ಜರುಗಬೇಕಾಗಿದ್ದ ಜಾತ್ರಾ ಮಹೋತ್ಸವವನ್ನು ರದ್ದುಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.