Asianet Suvarna News Asianet Suvarna News

ಕೊರೋನಾ ಭೀತಿ: ಸುರ​ಕ್ಷತಾ ಕ್ರಮ​ ಕೈ​ಗೊ​ಳ್ಳದ ಆಹಾರ ಸಾಮಗ್ರಿ ವಿತ​ರ​ಕರು

ಮುಂಜಾ​ಗ್ರತೆ ವಹಿ​ಸ​ದೇ ಬಿಸಿ​ಯೂಟದ ಸಾಮಗ್ರಿಗಳನ್ನು ವಿತ​ರಿ​ಸಲು ಬಂದ​ವ​ರಿಗೆ ಗ್ರಾಪಂ ಸದಸ್ಯರ ವಿರೋಧ| ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಲ್ಲಿ ನಡೆದ ಘಟನೆ| ಗ್ರಾಪಂ ಅಭಿವೃದ್ಧಿ ಅಧಿಕಾರಿ, ಬಿಸಿಯೂಟದ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವ ಘಟನೆಗಳ ಬಗ್ಗೆ ಬೇಸರ|

Food supplies Distributor Did Not Wear Mask in joida in Uttara Kannada District
Author
Bengaluru, First Published Apr 2, 2020, 7:36 AM IST

ಜೋಯಿಡಾ(ಏ.02): ಸುರ​ಕ್ಷತಾ ಕ್ರಮ ಅನು​ಸ​ರಿ​ಸ​ದೇ ಬಿಸಿ​ಯೂ​ಟದ ಸಾಮಗ್ರಿ ವಿತ​ರಿ​ಸ​ಲು ಬಂದ ಧಾರವಾಡದ ಏಜೆನ್ಸಿಯ ವ್ಯಕ್ತಿಗಳ ವಾಹನ ತಡೆದು ಜೋಯಿಡಾ ಆಸ್ಪತ್ರೆಯಲ್ಲಿ ಕೊರೋನಾ ಚಿಕಿತ್ಸೆಗೆ ಒಳಪಡಿಸಿದ ಘಟನೆ ಬುಧ​ವಾರ ನಡೆದಿದೆ. 

ಮುಂಜಾ​ಗ್ರತೆ ವಹಿ​ಸ​ದೇ ಬಿಸಿ​ಯೂಟದ ಸಾಮಗ್ರಿಗಳನ್ನು ವಿತ​ರಿ​ಸಲು ಬಂದ​ವ​ರಿಗೆ ಗ್ರಾಪಂ ಸದಸ್ಯರು ವಿರೋಧ ವ್ಯಕ್ತಪಡಿಸಿದರ​ಲ್ಲ​ದೇ, ಗ್ರಾಪಂ ಅಭಿವೃದ್ಧಿ ಅಧಿಕಾರಿ, ಬಿಸಿಯೂಟದ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವ ಘಟನೆಗಳ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ.

ಕೊಳೆಯಲಾರಂಭಿಸಿದೆ 70 ಟನ್‌ ಕಲ್ಲಗಂಡಿ, 300 ಲೋಡ್ ಅನನಾಸು

ಈ ಕುರಿ​ತು ಜೋಯಿಡಾ ತಹಸೀಲ್ದಾರರಿಗೆ ಮಾಹಿತಿ ನೀಡಿದ್ದು, ಹೊರ ಜಿಲ್ಲೆಯಿಂದ ಆಹಾರ ಸಾಮಗ್ರಿ ಪೂರೈ​ಸಲು ಬರು​ವ​ವರು ಸರ​ಕ್ಷತಾ ಕ್ರಮ ಅನು​ಸ​ಪ​ರಿ​ಸಲು ಸೂಚಿ​ಸ​ಬೇ​ಕು. ಇಂತಹ ವ್ಯಕ್ತಿ​ಗ​ಳಿಂದ ಆತಂಕದ ವಾತಾವರಣ ನಿರ್ಮಾಣವಾದಲ್ಲಿ ತಾಲೂಕು ಆಡಳಿತವೇ ಜವಾಬ್ದಾರಿಯಾಗ​ಬೇ​ಕಾ​ಗು​ತ್ತದೆ ಎಂದು ಎಚ್ಚ​ರಿ​ಸಿ​ದ್ದಾ​ರೆ.
 

Follow Us:
Download App:
  • android
  • ios