ಅರಿಷಿಣ ಚಹಾ ಕುಡಿದರೆ ಮಹಾಮಾರಿ ಕೊರೋನಾ ಸೋಂಕು ತಟ್ಟುವದಿಲ್ಲ ಎಂಬ ಗಾಳಿಸುದ್ದಿ| ರಾತ್ರಿಯಿಡಿ ಚಹಾ ಕುಡಿದ ಜನರು| ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡದಲ್ಲಿ ನಡೆದ ಘಟನೆ| ಕೆಲವರು ರಾತ್ರಿ ಮನೆಯ ಮುಂದೆ ರಂಗೋಲಿ ಹಾಕಿ, ದೀಪ ಹಚ್ಚಿ ಮನೆಯ ಮುಂದೆ ಕುಳಿತ ಜನತೆ|
ವಿಜಯಪುರ(ಮಾ.27): ಕೊರೋನಾ ವೈರಸ್ ಬರುವುದಿಲ್ಲ ಎಂದು ಇಡೀ ರಾತ್ರಿ ಎಚ್ಚರವಿದ್ದು ಶುಂಠಿ, ಅರಿಷಿಣ ಚಹಾ ಕುಡಿದ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡದಲ್ಲಿ ನಡೆದಿದೆ.
ಹೌದು, ಅರಿಷಿಣ ಚಹಾ ಕುಡಿದರೆ ಮಹಾಮಾರಿ ಕೊರೋನಾ ಸೋಂಕು ತಟ್ಟುವದಿಲ್ಲ ಎಂಬ ಗಾಳಿಸುದ್ದಿ ಪಟ್ಟಣದಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆಯೇ ಪಟ್ಟಣದ ನಿವಾಸಿಗಳು ಮಂಗಳವಾರ ರಾತ್ರಿ 12ರಿಂದ ಬುಧವಾರ ಬೆಳಗಿನ ಜಾವ 4, 5 ಗಂಟೆವರೆಗೆ ಪಟ್ಟಣದ ಬಹುತೇಕ ಓಣಿಗಳ ನಿವಾಸಿಗಳು ಬೆಲ್ಲದಿಂದ ಚಹಾ ಮಾಡಿ ಅದರ ಮೇಲೆ ಅರಿಷಿಣ ಪುಡಿ ಹಾಕಿಕೊಂಡು ಕುಡಿದಿದ್ದಾರೆ. ಶುಂಠಿ ಚಹಾ ಮಾಡಿ ಸೇವಿಸಿದ್ದಾರೆ.
ಮಹಾಮಾರಿ ಕೊರೋನಾ ನಿಯಂತ್ರಣಕ್ಕೆ ಸರ್ಕಾರಿ ನೌಕರರಿಂದ 200 ಕೋಟಿ
ಇನ್ನು ಕೆಲವರು ರಾತ್ರಿ ಮನೆಯ ಮುಂದೆ ರಂಗೋಲಿ ಹಾಕಿ, ದೀಪ ಹಚ್ಚಿ ಮನೆಯ ಮುಂದೆ ಕುಳಿತು ಚಹಾ ಕುಡಿದಿದ್ದಾರೆ. ಮಹಿಳೆಯರು ರಾತ್ರಿಯಲ್ಲ ನಿದ್ರೆಗೆಟ್ಟು ಚಹಾ ಮಾಡಿ ಮನೆ ಮಂದಿಗೆ ಕೊಟ್ಟಿದ್ದಾರೆ. ಈ ಸುದ್ದಿ ಬುಧವಾರ ಪಟ್ಟಣದಾದ್ಯಂತ ಹರಿದಾಡಿದೆ.
ಮಂತ್ರಿಗಳಿಗೆ ಕೊರೋನಾ ಜತೆ ಮೋದಿ ಭಯ! ಗಡ್ಕರಿಗೆ ಪತ್ನಿಯಿಂದ ಗೃಹಬಂಧನ
ಅರಿಷಿನ ಹಾಕಿ ಚಹಾ ಕುಡಿದರೆ ನೆಗಡಿ, ಕೆಮ್ಮು ಬರುವುದಿಲ್ಲ ಮತ್ತು ಕೊರೋನಾ ರೋಗ ಕೂಡ ಬರುವುದಿಲ್ಲ ಎಂಬ ಸುದ್ದಿ ಪಟ್ಟಣದಲ್ಲಿ ಹರಿದಾಡಿದ್ದರಿಂದ ನಾವು ಕೂಡ ಬುಧವಾರ ಬೆಳಗಿನ ಜಾವ 4 ಗಂಟೆಗೆ ಬೆಲ್ಲದ ಚಹಾ ಮಾಡಿ ಅದರಲ್ಲಿ ಅರಿಷಿನ ಪುಡಿ ಹಾಕಿ ಸೇವೆಸಿದ್ದೇವೆ ಎಂದು ಪಟ್ಟಣದ ನಿವಾಸಿ ಬಸವರಾಜ ಹೆಳವರ ಹೇಳಿದ್ದಾರೆ.
