ಎನ್‌ಸಿಬಿ ಆಫೀಸರ್‌ನ ಜೈಲಿಗೆ ಹಾಕ್ತೀನಿ ಎಂದ ಸಂಸದ ಸಮೀರ್ ವಾಂಖೆಡೆ ವಿರುದ್ಧ ವಾಗ್ದಾಳಿ

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ವಲಯ ಮುಖ್ಯಸ್ಥ ಸಮೀರ್ ವಾಂಖೆಡೆ ಮೇಲೆ ನಿರಂತರ ದಾಳಿ ಮಾಡುತ್ತಿರುವ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರು ಅಧಿಕಾರಿಯನ್ನು ಜೈಲಿಗೆ ಹಾಕುವವರೆಗೂ ಸುಮ್ಮನಿರುವುದಿಲ್ಲ ಎಂದಿದ್ದಾರೆ. ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ನಾಯಕ ವಾಂಖೇಡೆ ವಿರುದ್ಧ ಸತತ ಆರೋಪಗಳನ್ನು ಮಾಡುತ್ತಲೇ ಬಂದಿದ್ದಾರೆ.

Add Asianetnews Kannada as a Preferred SourcegooglePreferred

ಭಾರತೀಯ ಜನತಾ ಪಕ್ಷ (ಬಿಜೆಪಿ) ಜೊತೆ ಶಾಮೀಲಾಗಿ ಸುಲಿಗೆ ನಡೆಸುವುದು ಸೇರಿದಂತೆ ಹಲವು ಆರೋಪಗಳನ್ನು ಹೊರಿಸಿದ್ದಾರೆ. ವಾಂಖೇಡೆ ಸೆಲೆಬ್ರಿಟಿಗಳ ವಿರುದ್ಧ ನಕಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಆರೋಪಿಸಿದ ಮಲಿಕ್, ಒಂದು ವರ್ಷದೊಳಗೆ ಎನ್‌ಸಿಬಿ ಅಧಿಕಾರಿ ಕೆಲಸ ಕಳೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಡ್ರಗ್ಸ್‌ ಪಾರ್ಟಿ ರೈಡ್‌ನಲ್ಲಿ BJP ಉಪಾಧ್ಯಕ್ಷ: NCB ವಿರುದ್ಧ ಕೆಂಗಣ್ಣು

ಅವರು (ಬಿಜೆಪಿ) ಕೈಗೊಂಬೆ ಆಗಿದ್ದಾರೆ. ಜನರ ವಿರುದ್ಧ ಬೋಗಸ್ ಪ್ರಕರಣಗಳನ್ನು ದಾಖಲಿಸುತ್ತಾರೆ. ವಾಂಖೆಡೆ ಒಂದು ವರ್ಷದೊಳಗೆ ಕೆಲಸ ಕಳೆದುಕೊಳ್ಳುತ್ತಾನೆ ಎಂದು ನಾನು ಚಾಲೆಂಜ್ ಹಾಕುತ್ತೇನೆ. ನೀವು ನಮ್ಮನ್ನು ಜೈಲಿಗೆ ಹಾಕಲು ಬಂದಿದ್ದೀರಿ, ಈ ರಾಷ್ಟ್ರದ ಜನರು ನಿಮ್ಮನ್ನು ಕಂಬಿಗಳ ಹಿಂದೆ ನೋಡದೆ ಸುಮ್ಮನಿರುವುದಿಲ್ಲ. ನಮ್ಮಲ್ಲಿ ನಕಲಿ ಪ್ರಕರಣಗಳ ಪುರಾವೆಗಳಿವೆ ಎಂದಿದ್ದಾರೆ.

ನಟಿ ರಿಯಾ ಚಕ್ರವರ್ತಿ ಮತ್ತು ಅವರ ಸಹೋದರ ಶೋವಿಕ್ ಬಂಧನಕ್ಕೆ ಕಾರಣವಾದ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದ ಡ್ರಗ್ ತನಿಖೆ ಸೇರಿದಂತೆ ಚಲನಚಿತ್ರ ಉದ್ಯಮವನ್ನು ಒಳಗೊಂಡ ಇತ್ತೀಚಿನ ಎನ್‌ಸಿಬಿ ತನಿಖೆಗಳಲ್ಲಿ ಸಮೀರ್ ವಾಂಖೆಡೆ ಮುಂಚೂಣಿಯಲ್ಲಿದ್ದಾರೆ.

ಮಲಿಕ್ ಅಳಿಯ ಸಮೀರ್ ಖಾನ್ ಕೂಡ ಡ್ರಗ್ಸ್ ಪ್ರಕರಣದಲ್ಲಿ ಏಜೆನ್ಸಿಯಿಂದ ಬಂಧನಕ್ಕೊಳಗಾಗಿದ್ದರೂ ಕಳೆದ ವಾರ ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯವು ಜಾಮೀನು ನೀಡಿತ್ತು.

ನಿಮ್ಮ ತಂದೆ ಯಾರು, ಒತ್ತಡ ಹಾಕುತ್ತಿರುವವರು ಯಾರು ಎಂದು ನಮಗೆ ಹೇಳಿ? ನೀವು ನನ್ನ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದರೂ ನವಾಬ್ ಮಲಿಕ್ ಯಾರಿಗೂ ಹೆದರುವುದಿಲ್ಲ. ನಾನು ನಿಮ್ಮನ್ನು ಜೈಲಿಗೆ ಹಾಕುವವರೆಗೂ ನಾನು ನಿಲ್ಲುವುದಿಲ್ಲ, ನಾನು ಇದನ್ನು ಇಂದು ಸ್ಪಷ್ಟಪಡಿಸಲು ಬಯಸುತ್ತೇನೆ ಎಂದು ಎನ್‌ಸಿಪಿ ನಾಯಕ ಹೇಳಿದ್ದಾರೆ.