Asianet Suvarna News Asianet Suvarna News

ಪ್ರಶಸ್ತಿಯನ್ನೇ ಹರಾಜು ಮಾಡಿದ ವಿಜಯ್​ ದೇವರುಕೊಂಡ: ಅಷ್ಟಕ್ಕೂ ನಟ ಹೇಳಿದ್ದೇನು ಕೇಳಿ...

ತಮಗೆ ಬಂದಿರುವ ಮೊದಲ ಫಿಲ್ಮ್​ಫೇರ್ ಪ್ರಶಸ್ತಿಯನ್ನು ಹರಾಜು ಮಾಡಿದ್ದಾರೆ ನಟ ವಿಜಯ ದೇವರಕೊಂಡ. ಅಷ್ಟಕ್ಕೂ ಅವರು ಹೇಳಿದ್ದೇನು?
 

Vijay Deverakonda auctioned 1st Filmfare Award Nicer memory than piece of stone suc
Author
First Published Apr 1, 2024, 8:45 PM IST

ದಕ್ಷಿಣ ಚಲನಚಿತ್ರ ಸೂಪರ್‌ಸ್ಟಾರ್ ವಿಜಯ್ ದೇವರಕೊಂಡ ಅವರ ನಟನೆಯ ಬಗ್ಗೆ ಅಭಿಮಾನಿಗಳು ಹುಚ್ಚರಾಗಿದ್ದಾರೆ. ಅವರು ತಮ್ಮ ವೃತ್ತಿಜೀವನದಲ್ಲಿ ಅನೇಕ ಉತ್ತಮ ಚಿತ್ರಗಳನ್ನು ಮಾಡಿದ್ದಾರೆ. ಬಾಲಿವುಡ್‌ನಲ್ಲೂ ವಿಜಯ್ ತಮ್ಮ ನಟನಾ ಕೌಶಲ್ಯವನ್ನು ಸಾಬೀತುಪಡಿಸಿದ್ದಾರೆ. ಟಾಲಿವುಡ್ ಯಂಗ್ ಹೀರೋ ಎನಿಸಿಕೊಂಡಿರುವ ಇವರು,  ಸದ್ಯ ಮದುವೆಯಿಂದ ಸದ್ದು ಮಾಡುತ್ತಿದ್ದಾರೆ.  ಕಿರಿಕ್​ ಬ್ಯೂಟಿ ಎಂದೇ ಫೇಮಸ್​ ಆಗಿರೋ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್​ ದೇವರಕೊಂಡ ಅವರ ಮದುವೆಯ ವಿಷಯವಂತೂ ಕೆಲ ವರ್ಷಗಳಿಂದ ಅಭಿಮಾನಿಗಳ ತಲೆ ಕೆಡಿಸುತ್ತಿದೆ. ಇದರ ನಡುವೆಯೇ ಇವರಿಬ್ಬರೂ ಬರುವ ಫೆಬ್ರುವರಿಯಲ್ಲಿ ಎಂಗೇಜ್​ಮೆಂಟ್​ ಆಗಲಿದ್ದಾರೆ ಎಂಬ ಸುದ್ದಿ ಸಕತ್​ ಸದ್ದು ಮಾಡಿತ್ತು.  ಇದೇ ವೇಳೆ,  ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಸೆಲೆಬ್ರಿಟಿ ಜ್ಯೋತಿಷಿ ಎಂದೇ ಖ್ಯಾತಿ ಪಡೆದಿರುವಂತಹ ವೇಣು ಸ್ವಾಮಿ ಈ ಜೋಡಿಯ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟಿದ್ದು ಕೂಡ ಸಾಕಷ್ಟು ವೈರಲ್​ ಆಗಿತ್ತು.  ಸಂದರ್ಶನವೊಂದರಲ್ಲಿ, ವೇಣು ಸ್ವಾಮಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದು, ಈ ವಿಚಾರ ವೈರಲ್ ಆಗಿದೆ.  'ರಶ್ಮಿಕಾ ಹಾಗೂ ವಿಜಯ್ ದೇವರೊಂಡ  ಮದುವೆಯಾಗಲಿದ್ದಾರೆ. ಆದರೆ ವಿವಾಹವಾದ ಬಳಿಕ ಇಬ್ಬರೂ ದೂರಾಗಲಿದ್ದಾರೆ ಎಂಬುದು ಖಚಿತ. ವಿಜಯ್ ದೇವರಕೊಂಡ ಜೊತೆ ಮದುವೆಯಾದರೆ ವಿಚ್ಛೇದನ ಆಗಲಿದೆ ಎಂದು ನಾನು ನೇರವಾಗಿ ರಶ್ಮಿಕಾ ಮಂದಣ್ಣ ಅವರಿಗೆ ಹೇಳಿದ್ದೇನೆ. ಇದೇ ಕಾರಣಕ್ಕೆ ಅವರು ನನ್ನೊಂದಿಗೆ ಮಾತನಾಡುವುದು ಬಿಟ್ಟು, ನನ್ನ ಸಂಪರ್ಕ ಕಡಿದುಕೊಂಡಿದ್ದಾರೆ' ಎಂದು ತಿಳಿಸಿದ್ದರು. 


ಈಚೆಗಷ್ಟೇ, ವಿಜಯ್​ ಅವರು,  ಫ್ಯಾಮಿಲಿ ಸ್ಟಾರ್ ಸಿನಿಮಾದೊಂದಿಗೆ ಬರುತ್ತಿದ್ದಾರೆ. ಅದರ ಕುರಿತು ನಡೆದ  ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ವಿಜಯ್ ದೇವರಕೊಂಡ ಅವರಿಗೆ ಮದುವೆಯ ಬಗ್ಗೆ ಪ್ರಶ್ನೆ ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ವಿಜಯ್, ನನಗೂ ಮದುವೆಯಾಗಿ ತಂದೆಯಾಗುವ ಆಸೆ ಇದೆ. ಆದ್ರೆ ಈಗ ಮಾಡೋಲ್ಲ.. ಇನ್ನು ಕೆಲವು ದಿನ ಬ್ರಹ್ಮಚಾರಿಯಾಗೇ ಇರುತ್ತೇನೆ ಎಂದರು. ಇವರ ಮದುವೆಯ ಬೆನ್ನಲ್ಲೇ ಇದೀಗ ಇವರ ಇನ್ನೊಂದು ಇಂಟರೆಸ್ಟಿಂಗ್​ ವಿಷಯ ಬೆಳಕಿಗೆ ಬಂದಿದೆ. ಅಷ್ಟಕ್ಕೂ  ಇದೆಲ್ಲದರ ನಡುವೆ ವಿಜಯ್ ದೇವರಕೊಂಡ ಇತ್ತೀಚೆಗಷ್ಟೇ ಒಂದು ತಪ್ಪೊಪ್ಪಿಗೆ ಮಾಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಅದೇನೆಂದರೆ,  ವಿಜಯ್ ಅವರು ತಮ್ಮ ಅತ್ಯುತ್ತಮ ನಟನೆಗಾಗಿ ಸಿಕ್ಕ  ಫಿಲ್ಮ್‌ಫೇರ್ ಪ್ರಶಸ್ತಿಯನ್ನು ದೊಡ್ಡ ಮೊತ್ತಕ್ಕೆ ಹರಾಜು ಮಾಡಿರುವುದಾಗಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.  ತಾವು ಯಅವುದೇ  ಪ್ರಶಸ್ತಿಗಳನ್ನು ಇಷ್ಟಪಡುವುದಿಲ್ಲ ಎಂದು ಹೇಳಿದ ವಿಜಯ್​ ಅವರು,   ತಾವು ಪ್ರಶಸ್ತಿಯನ್ನು ಹರಾಜು ಹಾಕಿರುವ ವಿಷಯ ಮಾತನಾಡಿದರು. ಈ  ಹರಾಜಿನಿಂದ ಉತ್ತಮ ಹಣ ಸಿಕ್ಕಿದೆ ಎಂದೂ ಹೇಳಿದರು. 

​ಕಿರಿಕ್​ ಬ್ಯೂಟಿ ರಶ್ಮಿಕಾ ಜೊತೆ ವಿಜಯ್​ ದೇವರಕೊಂಡ ಮದ್ವೆ ಫಿಕ್ಸ್​? ನಟ ಕೊಟ್ಟ ಹಿಂಟ್​ ಏನು?
 
ಗಲಾಟಾ ಪ್ಲಸ್‌ಗೆ ನೀಡಿದ ಸಂದರ್ಶನದಲ್ಲಿ, ಈ ವಿಷಯವನ್ನು ವಿಜಯ್​  ಬಹಿರಂಗಪಡಿಸಿದರು, ಕೆಲವು ಪ್ರಶಸ್ತಿಗಳು ಕಚೇರಿಯಲ್ಲಿವೆ, ಇನ್ನು ಕೆಲವು ಅಮ್ಮನ ಮನೆಯಲ್ಲಿವೆ.  ಇವುಗಳ ಪೈಕಿ  ಫಿಲ್ಮ್‌ಫೇರ್‌ನಿಂದ ನನ್ನ ಮೊದಲ ಅತ್ಯುತ್ತಮ ನಟ ಪ್ರಶಸ್ತಿಯನ್ನು ಹರಾಜು ಹಾಕಿದ್ದೇನೆ. ಇದರಿಂದ ಹಣವೂ ಬಂದಿದೆ.  ಇದು ನನ್ನ ಮನೆಯಲ್ಲಿ ಕಲ್ಲಿನ ತುಂಡಿಗಿಂತ ಉತ್ತಮ ಸ್ಮರಣೆಯಾಗಿದೆ ಎಂದಿದ್ದಾರೆ. ಮಿಡ್-ಡೇ ಪ್ರಕಾರ, ಈ ಪ್ರಶಸ್ತಿಯನ್ನು ಹರಾಜಿಗಾಗಿ ವಿಜಯ್ 25 ಲಕ್ಷ ರೂಪಾಯಿ ಗಳಿಸಿದ್ದಾರೆ.  ವರದಿಗಳ ಪ್ರಕಾರ, ವಿಜಯ್ ಅವರು 2018 ರಲ್ಲಿ ತಮ್ಮ ಮೊದಲ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಹರಾಜು ಹಾಕಿದರು ಮತ್ತು 25 ಲಕ್ಷ ರೂ. ಈ ಹಣವನ್ನು ಅವರು ದೇಣಿಗೆ ನೀಡಿದ್ದರು. ಪ್ರಶಸ್ತಿಯನ್ನು 5 ಲಕ್ಷಕ್ಕೆ ಹರಾಜು ಮಾಡಲಾಯಿತು, ಆದರೆ ದಿವಿ ಲ್ಯಾಬ್ಸ್ ಅವರಿಗೆ ನಾಲ್ಕು ಪಟ್ಟು ಮೊತ್ತವನ್ನು ಆಫರ್ ಮಾಡಿತ್ತು, ಮಾತ್ರವಲ್ಲದೇ  ಟ್ರೋಫಿಯನ್ನು ಉಳಿಸಿಕೊಳ್ಳಲು ಅವರಿಗೆ ಅವಕಾಶ ನೀಡಿತ್ತು.  ಆದರೆ, ವಿಜಯ್ ನಿರಾಕರಿಸಿ ಪ್ರಶಸ್ತಿಯನ್ನು ನೀಡಿದರು. ಇದರಿಂದ ಬಂದ ಹಣವನ್ನು ವಿಜಯ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ (ಸಿಎಂಆರ್‌ಎಫ್) ನೀಡಿದ್ದರು.
 
ವಿಜಯ್​ ಅವರ ಸಿನಿಮಾದ ಕುರಿತು ಮಾತನಾಡುವುದಾದರೆ,   ವಿಜಯ್ ದೇವರಕೊಂಡ ಶೀಘ್ರದಲ್ಲೇ ಪರಶುರಾಮ್ ಪೆಟ್ಲಾ ಅವರ 'ಫ್ಯಾಮಿಲಿ ಸ್ಟಾರ್' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಅವರು ಮೃಣಾಲ್ ಠಾಕೂರ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಅಭಿನಯ್, ವಾಸುಕಿ, ರವಿಬಾಬು ಮುಂತಾದ ಕಲಾವಿದರು ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು 5 ಏಪ್ರಿಲ್ 2024 ರಂದು ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದೆ. ಸದ್ಯ ವಿಜಯ್ 'ಫ್ಯಾಮಿಲಿ ಸ್ಟಾರ್' ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಕೂಡ ಬಿಡುಗಡೆಯಾಗಿದೆ. ನಟ ತಮ್ಮ ಟ್ರೇಲರ್ ಅನ್ನು ಹಂಚಿಕೊಂಡಿದ್ದಾರೆ.

ಸನ್ನಿ ಲಿಯೋನ್​ ಮೇಲೆರಗಿದ ಹಾವು: ಜೀವ ಭಯದಿಂದ ಹಾರಿದ ನಟಿ- ವಿಡಿಯೋ ವೈರಲ್​

Follow Us:
Download App:
  • android
  • ios