* ನಟಿ ಶಿಲ್ಪಾ ಶೆಟ್ಟಿಪತಿ ರಾಜ್‌ಕುಂದ್ರಾ ನೀಲಿ ಚಿತ್ರ ಪ್ರಕರಣದಲ್ಲಿ ಬಂಧನ* ಪತಿ ಬಂಧನದ ನಂತರ ಮೊದಲ ಬಾರಿ ಶಿಲ್ಪಾ ‘ಬಹಿರಂಗ ದರ್ಶನ’* ನಿಧಿ ಸಂಗ್ರಹಣೆಗೆಗಾಗಿ ಆಯೋಜಿಸಲಾದ ವರ್ಚುವಲ್‌ ಕಾರ್ಯಕ್ರಮದಲ್ಲಿ ಭಾಗಿ

ಮುಂಬೈ(ಆ.11): ನಟಿ ಶಿಲ್ಪಾ ಶೆಟ್ಟಿಪತಿ ರಾಜ್‌ಕುಂದ್ರಾ ನೀಲಿ ಚಿತ್ರ ಪ್ರಕರಣದಲ್ಲಿ ಬಂಧನವಾದ ನಂತರ ಶಿಲ್ಪಾ ಶೆಟ್ಟಿಮುಖ್ಯವಾಹಿನಿ ಇಂದ ದೂರ ಆಗಿದ್ದರು. ಆಗಸ್ಟ್‌ 15ರಂದು ಕೋವಿಡ್‌ ಸಂತ್ರಸ್ತರಿಗಾಗಿ ಬಾಲಿವುಡ್‌ ನಡೆಸುತ್ತಿರುವ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೋವಿಡ್‌ನಿಂದಾಗಿ ತೊಂದರೆಗೊಳಗಾದವರಿಗೆ ವೆಂಟಿಲೇಟರ್‌, ಆಕ್ಸಿಜಿನ್‌ ಸಿಲಿಂಡರ್‌, ಔಷಧ, ಐಸಿಯು ಒದಗಿಸಲು ನಿಧಿ ಸಂಗ್ರಹಣೆಗೆಗಾಗಿ ಈ ವರ್ಚುವಲ್‌ ಕಾರ್ಯಕ್ರಮವನ್ನು ರಾಜ್‌ಕುಮಾರ್‌ ರಾವ್‌ ಆಯೋಜಿಸುತ್ತಿದ್ದಾರೆ. ಬಾಲಿವುಡ್‌ ತಾರೆಗಳ ಜೊತೆಗೆ ನಟಿ ಶಿಲ್ಪಾ ಶೆಟ್ಟಿಯೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಪತಿಯ ಬಂಧನದ ನಂತರ ಅವರು ಸಾರ್ವಜನಿಕ ಬದುಕಿನಿಂದ ದೂರವಾಗಿದ್ದರು. ಅವರು ಜಡ್ಜ್‌ ಆಗಿದ್ದ ಸೂಪರ್‌ ಡಾನ್ಸರ್‌4 ಕಾರ್ಯಕ್ರಮವನ್ನು ಸಹ ಅರ್ಧಕ್ಕೆ ಬಿಟ್ಟಿದ್ದರು.