Asianet Suvarna News Asianet Suvarna News

Vijay Sethupathi: ನಟನ ಮೇಲೆ ಹಲ್ಲೆ ಮಾಡಿದವನಿಗೆ ನಗದು ಬಹುಮಾನ ಘೋಷಣೆ!

ವಿಜಯ್ ಸೇತುಪತಿ ಪ್ರತಿ ಹೊಡೆತಕ್ಕೂ ನಗದು ಬಹುಮಾನ ಫೋಷಿಸಿದ ಹಿಂದುಪರ ಸಂಘಟನೆ.....

Hindu Makkal Katchi announced cash prize for kicking tamil actor Vijay Sethupathi vcs
Author
Bangalore, First Published Nov 8, 2021, 5:05 PM IST

ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ ಇಂದಿಗೆ 11 ದಿನಗಳು ಕಳೆದಿವೆ. ಪುನೀತ್ ಅಂತ್ಯಸಂಸ್ಕಾರ ನಡೆದ ದಿನದಿಂದಲೂ ಪರ ಭಾಷೆ ನಟ-ನಟಿಯರು ಅವರ ನಿವಾಸಕ್ಕೆ ಮತ್ತು ಸಮಾಧಿಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವಾನ ಹೇಳುತ್ತಿದ್ದಾರೆ. ಈ ವೇಳೆ ತಮಿಳು ಖ್ಯಾತ ನಟ ವಿಜಯ್ ಸೇತುಪತಿ ಕೂಡ ಆಗಮಿಸಿದ್ದರು.

ಕೆಲವು ದಿನಗಳ ಹಿಂದೆ ವಿಜಯ್ ಸೇತುಪತಿ ಬೆಂಗಳೂರಿಗೆ ಆಗಮಿಸಿ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ಆನಂತರ ಅವರ ನಿವಾಸಕ್ಕೆ ತೆರಳಿ ರಾಜ್ ಕುಟುಂಬಸ್ಥರ ಜೊತೆಯೂ ಸಮಯ ಕಳೆದು ಆನಂತರ ಹೊರಟಿದ್ದರು. ಚೆನ್ನೈಗೆ ವಿಮಾನ ತೆಗೆದುಕೊಳ್ಳಲು ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ಈ ವೇಳೆ ಹಿಂದಿನಿಂದ ಆಗಮಿಸಿದ ಯುವಕನೊಬ್ಬ ನಟನಿಗೆ ಥಳಿಸಿದ್ದಾನೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಘಟನೆ ನಡೆದ ಎರಡು ಮೂರು ಗಂಟೆಗಳಲ್ಲಿ ಆ ಯುವಕನನ್ನು ಬಂಧಿಸಲಾಗಿದೆ.

ಬಹುಮಾನ ಫೋಷಣೆ:
ಹಿಂದು ಮಕ್ಕಳ ಕಚ್ಚಿ ಹೆಸರಿನ ಹಿಂದುಪರ ಸಂಘಟನೆ ಮುಖಂಡ ಅರ್ಜುನ್ ಅವರು ಈ ಬಹುಮಾನ ಫೋಷಣೆ ಮಾಡಿದ್ದಾರೆ. ನಟ ಸೇತುಪತಿ ಮೇಲಿನ ಪ್ರತಿಯೊಂದೂ ಹೊಡೆತಕ್ಕೂ ಸಾವಿರ ರೂಪಾಯಿ ನೀಡುವುದಾಗಿ ಹೇಳಿದ್ದಾರೆ. 'ಬೆಂಗಳೂರಿನಲ್ಲಿ ವಿಜಯ್ ಮೇಲೆ ಹಲ್ಲೆ ನಡೆದಾಗ ಅವರೊಂದಿಗೆ ಇದ್ದ ವ್ಯಕ್ತಿಯನ್ನು ನಾನು ಮಾತನಾಡಿಸಿ, ಅಂದು ವಿಮಾನದಲ್ಲಿ ಏನಾಯಿತು ಎಂಬುದನ್ನು ಕೇಳಿ ತಿಳಿದುಕೊಂಡೆ. ನಂತರ ಈ ಆಫರ್ ಘೋಷಿಸಿದೆ, ಎಂದು ಅರ್ಜುನ್ ಅವರು ಹೇಳಿದ್ದಾರೆ ಎನ್ನಲಾಗಿದೆ. 

Hindu Makkal Katchi announced cash prize for kicking tamil actor Vijay Sethupathi vcs

'ವಿಜಯ್ ರಾಷ್ಟ್ರ ಪ್ರಶಸ್ತಿ ಪಡೆದದ್ದಕ್ಕೆ ಮಾಹಾ ಗಾಂಧಿ ಅವರು ಶುಭಾಶಯಗಳನ್ನು ತಿಳಿಸಲು ಇಚ್ಛಿಸಿದ್ದರು. ಆದರೆ ವಿಜಯ್ ವ್ಯಂಗ್ಯವಾಗಿ ಇದು ರಾಷ್ಟ್ರವೇ ಅಲ್ಲ ಎಂದರು. ಆದರೂ ಮಹಾ ಗಾಂಧಿ ಅವರು ಸಣ್ಣ ಕಾರ್ಯಕ್ರಮ ಹಮ್ಮಿಕೊಂಡು, ನೀವು ದಕ್ಷಿಣ ಚಿತ್ರರಂಗಕ್ಕೆ ಸೇರಿದವರು. ಬರಲೇ ಬೇಕು ಎಂದು ಮನವಿ ಮಾಡಿಕೊಂಡರೂ, ವಿಜಯ್ ಕೊಂಕು ಮಾತನಾಡಿದ್ದಾರೆ. ಭೂಮಿ ಮೇಲೆ ಇರುವುದು ಒಂದೇ ದೇವರು. ಅದು Jesus ಎಂದಿದ್ದಾರೆ. ನಮ್ಮ ಸಂಸ್ಕ್ರೃತಿ ನಾಡು ಬಗ್ಗೆ ಗೌರವವೇ ಇಲ್ಲ. ಹೀಗಾಗಿ ಸೇತುಪತಿ ಜೊತೆ ಈ ಹಿಂದೆಯೂ ಗಾಂಧಿ ಜಗಳವಾಡಿದ್ದರು,' ಎಂದು ಅರ್ಜುನ್ ಸಂಪತ್ ಖಾಸಗಿ ಮಾಧ್ಯಮಕ್ಕೆ ಹೇಳಿದ್ದಾರೆ.

ವಿಜಯ್ ಸೇತುಪತಿ ಮೇಲೆ ಹಲ್ಲೆ ಮಾಡಿದ ಪುಂಡನ ಬಂಧನ!

'ವಿಜಯ್ ಅವರು ಪಸುಂಪೋನ್ ಮುತುರಮಾಲಿಂಗಮ್‌ ಅವರನ್ನು ಹಾಗೂ ಭಾರತವನ್ನು ಅವಮಾನ ಮಾಡಿದ್ದಾರೆ. ಹೀಗಾಗಿ ಅವರು ಕ್ಷಮೆ ಕೇಳುವವರೆಗೂ ಅವರಿಗೆ ಯಾರು ಹೊಡೆಯುತ್ತಾರೋ, ಅವರಿಗೆಲ್ಲಾ ನಾನು ಒಂದು ಹೊಡೆತಕ್ಕೆ ಒಂದು ಸಾವಿರ ನೀಡುತ್ತೇನೆ,' ಎಂದಿದ್ದಾರೆ. 

ನಟಿ ಕೃತಿ ನನ್ನ ಮಗಳಿದ್ದಂತೆ, ಗಂಡನ ಪಾತ್ರ ಮಾಡುವುದಿಲ್ಲ: ವಿಜಯ್ ಸೇತುಪತಿ

ವಿಜಯ್ ಸೇತುಪತಿ ಸ್ಪಷ್ಟನೆ:
ವಿಮಾನ ನಿಲ್ದಾಣದಲ್ಲಿ ನಡೆದ ಘಟನೆ ಬಗ್ಗೆ ವಿಜಯ್ ಪ್ರತಿಕ್ರಿಯೆ ನೀಡಿದ್ದಾರೆ. 'ಅದೊಂದು ಬಹಳ ಸಣ್ಣ ಘಟನೆ. ಆದರೆ ಅಲ್ಲಿದ್ದ ಯಾರೋ ವ್ಯಕ್ತಿ ಮೊಬೈಲ್‌ನಲ್ಲಿ ವಿಡಿಯೋ ಸೆರೆ ಹಿಡಿದಿದ್ದಾರೆ. ಅದಕ್ಕೆ ಈ ಘಟನೆ ಹೆಚ್ಚು ಮಹತ್ವ ಪಡೆದುಕೊಂಡಿದೆ. ಮೊಬೈಲ್ ಇದ್ದವರೆಲ್ಲ ಈಗ ಕ್ಯಾಮೆರಾಮನ್‌ಗಳಾಗಿದ್ದಾರೆ. ಇಂಥ ಸಣ್ಣ ಘಟನೆಗಳಿಗೂ ಪ್ರಾಮುಖ್ಯತೆ ಸಿಗುತ್ತಿದೆ. ಆ ಯುವಕ ಕುಡಿದಿದ್ದ. ವ್ಯಕ್ತಿಯೊಬ್ಬ ತನ್ನ ನಿಯಂತ್ರಣದಲ್ಲಿ ಇಲ್ಲದೇ ಇದ್ದಾಗ ನಡೆದ ಅಚಾತುರ್ಯವಿದು. ಮಾಸ್ಕ್ ಹಾಕಿರುವ ಕಾರಣ ಇತ್ತೀಚಿನ ದಿನಗಳಲ್ಲಿ ಯಾರು ಕುಡಿದಿದ್ದಾರೆ, ಯಾರು ಕುಡಿದಿಲ್ಲ ಎಂಬುವುದು ಹೇಳುವುದೂ ಕಷ್ಟ. ನನ್ನ ಮೇಲೆ ಹಲೆ ಮಾಡಿದ ಯುವಕನೂ ಅದೇ ವಿಮಾನದಲ್ಲಿ ಪ್ರಯಾಣಿಸಲು ಬಂದಿದ್ದ. ವಿಮಾನದಲ್ಲಿ ನಮ್ಮೊಂದಿಗೆ ಜಗಳ ಆರಂಭಿಸಿದ್ದ. ವಿಮಾನದಿಂದ ಇಳಿದ ಮೇಲೂ ಜಗಳ ಮುಂದುವರೆಸಿದ್ದ,' ಎಂದು ವಿಜಯ್ ಹೇಳಿದ್ದಾರೆ.

Follow Us:
Download App:
  • android
  • ios