ಖಿನ್ನತೆಗೆ ಜಾರಿದ್ದ ದೀಪಿಕಾ ಮಾತು ಕೇಳಿ ನೊಂದುಕೊಂಡ ಬಿಗ್‌ಬಿ ಬದುಕುವುದೇ ಬೇಡವೆನಿಸದ್ದೇಕೆ ? 

ದೀಪಿಕಾ ಪಡುಕೋಣೆ, ಫರಾ ಖಾನ್ ಜೊತೆಗೆ, ಕೌನ್ ಬನೇಗಾ ಕರೋಡ್ಪತಿ 13 ರ ಎಪಿಸೋಡ್‌ನಲ್ಲಿ ಕಾಣಿಸಿಕೊಂಡರು. ಸಂಚಿಕೆಯ ಸಮಯದಲ್ಲಿ, ನಟಿ ಖಿನ್ನತೆಯೊಂದಿಗಿನ ತನ್ನ ಹೋರಾಟದ ಬಗ್ಗೆ ಮಾತನಾಡಿದ್ದಾರೆ. ಕಾರ್ಯಕ್ರಮದ ನಿರೂಪಕ ಅಮಿತಾಬ್ ಬಚ್ಚನ್ ಅವರಿಗೆ ಇದರ ಬಗ್ಗೆ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

2014 ರಲ್ಲಿ ನಾನು ಖಿನ್ನತೆಗೆ ಹೋಗಿದ್ದೆ. ಜನರು ಅದರ ಬಗ್ಗೆ ಮಾತನಾಡುವುದಿಲ್ಲಎ ನ್ನುವುದು ನನಗೆ ವಿಚಿತ್ರವೆನಿಸುತ್ತಿತ್ತು. ಇದು ಕೆಟ್ಟದ್ದು ಎಂದು ಜನ ಅಂದುಕೊಳ್ಳುತ್ತಾರೆ. ಜನರಿಗೆ ಇದರ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ಆ ಸಮಯದಲ್ಲಿ, ನಾನು ಇದನ್ನು ಅನುಭವಿಸುತ್ತಿದ್ದಾಗ, ಖಿನ್ನತೆಯನ್ನು ಎದುರಿಸುತ್ತಿರುವ ಅನೇಕ ಜನರು ಇದ್ದಾರೆ ಎಂದು ತಿಳಿಯುತು ಎಂದಿದ್ದಾರೆ.

ಡಿವೋರ್ಸ್ ವದಂತಿ ನಿಜವಾ? ಕೋರ್ಟ್ ಮೆಟ್ಟಿಲೇರಿದ್ರಾ ಸಮಂತಾ-ನಾಗ ಚೈತನ್ಯ ?

ನಾನು ತುಂಬಾ ವಿಚಿತ್ರವಾದ ಭಾವನೆಯಲ್ಲಿದ್ದೆ. ನನ್ನೊಳಗೆ ಒಂದು ಶೂನ್ಯತೆ ಇದ್ದ ಹಾಗೆ. ನನಗೆ ಕೆಲಸಕ್ಕೆ ಹೋಗಲು ಅಥವಾ ಯಾರನ್ನು ಭೇಟಿಯಾಗಲು ಮನಸಿರಲಿಲ್ಲ. ನನಗೆ ಹೊರಗೆ ಹೋಗಲು ಇಷ್ಟವಿರಲಿಲ್ಲ. ನನಗೆ ಏನನ್ನೂ ಮಾಡಲು ಮನಸ್ಸಾಗಲಿಲ್ಲ. ಅನೇಕ ಬಾರಿ, ನಾನು ಇದನ್ನು ಹೇಳಬೇಕೆ ಬೇಡವೇ ಎಂದೂ ನನಗೆ ಗೊತ್ತಿರಲಿಲ್ಲ. ಆದರೆ ಹೀಗೆಯೇ ಇನ್ನು ಮುಂದೆ ಬದುಕಬೇಕು ಎಂದು ಅನಿಸಲಿಲ್ಲ. ಬದುಕಿಗೆ ಯಾವುದೇ ಉದ್ದೇಶವಿಲ್ಲ ಎಂದು ನನಗೆ ಅನಿಸಿತು ಎಂದಿದ್ದಾರೆ.

ನನ್ನ ಹೆತ್ತವರು ಒಮ್ಮೆ ಬೆಂಗಳೂರಿನಿಂದ ಮುಂಬೈಗೆ ನನ್ನನ್ನು ಭೇಟಿ ಮಾಡಲು ಬಂದಿದ್ದರು. ಹಾಗಾಗಿ, ಅವರು ವಿಮಾನ ನಿಲ್ದಾಣಕ್ಕೆ ಹೊರಡುವಾಗ, ನಾನು ಇದ್ದಕ್ಕಿದ್ದಂತೆ ಅಳಲು ಪ್ರಾರಂಭಿಸಿದೆ. ನನ್ನ ತಾಯಿ ನನ್ನಲ್ಲಿ ಏನೋ ನೋವಿದೆ ಎಂದು ಗಮನಿಸಿದರು. ಅವರಿಗೆ ಏನೋ ಅನಿಸಿತು. ನಾನು ಅಳುವ ರೀತಿ, ಇದು ಸಹಾಯಕ್ಕಾಗಿ ಅಳುವ ಹಾಗೆ. ಅವರು ನನ್ನನ್ನು ಮನೋವೈದ್ಯರನ್ನು ಭೇಟಿ ಮಾಡಲು ಹೇಳಿದರು. ನಾನು ಅದನ್ನು ಮಾಡಿದ್ದೇನೆ ಮತ್ತು ಹಲವು ತಿಂಗಳ ನಂತರ ಚೇತರಿಸಿಕೊಂಡೆ. ಮಾನಸಿಕ ಆರೋಗ್ಯ ನೀವು ಚೇತರಿಸಿಕೊಂಡ ನಂತರವೂ ಅದನ್ನು ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ.

ದೀಪಿಕಾ ಪಡುಕೋಣೆ ಮಾನಸಿಕ ಆರೋಗ್ಯ ಜಾಗೃತಿಯಲ್ಲಿ ಸಕ್ರಿಯರಾಗಿದ್ದರು. 2015 ರಲ್ಲಿ ಖಿನ್ನತೆಯೊಂದಿಗೆ ಹೋರಾಡಿದ ನಟಿ ಲೈವ್ ಲವ್ ಲಾಫ್ ಫೌಂಡೇಶನ್ ಅನ್ನು ನಡೆಸುತ್ತಿದ್ದಾರೆ. ಇದು ಮಾನಸಿಕ ಆರೋಗ್ಯದೊಂದಿಗೆ ಹೋರಾಡುತ್ತಿರುವವರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿದೆ.
View post on Instagram