ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಮ್ಮ ಇನ್ನಿಲ್ಲ ಆಸ್ಪತ್ರೆಗೆ ದಾಖಲಾಗಿದ್ದ ನಟನ ತಾಯಿ ನಿಧನ

ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್ ಅವರ ತಾಯಿ ಅರುಣಾ ಭಾಟಿಯಾ ಬುಧವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ. ಟ್ವಿಟರ್‌ನಲ್ಲಿ ಈ ವಿಚಾರವನ್ನು ತಿಳಿಸಿದ ನಟ ನೋವನ್ನು ಹಂಚಿಕೊಂಡಿದ್ದಾರೆ. ಅವರು ನನ್ನ ಮೂಲವಾಗಿದ್ದರು. ನನ್ನ ಅಸ್ತಿತ್ವದ ಮೂಲದ ಬಗ್ಗೆ ನನಗೆ ತಡೆಯಲಾಗದ ನೋವಾಗುತ್ತಿದೆ. ನನ್ನ ಅಮ್ಮ ಶ್ರೀಮತಿ ಅರುಣಾ ಭಾಟಿಯಾ ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ಬೇರೆ ಜಗತ್ತಿನಲ್ಲಿರುವ ನನ್ನ ತಂದೆಯ ಜೊತೆ ಸೇರಿಕೊಂಡಿದ್ದಾರೆ. ನಾನು ಹಾಗೂ ನನ್ನ ಕುಟುಂಬ ಈ ನೋವಿನಲ್ಲಿರುವಾ ನಿಮ್ಮ ಪ್ರಾರ್ಥನೆಯನ್ನು ನಾನು ಗೌರವಿಸುತ್ತೇನೆ. ಓಂ ಶಾಂತಿ ಎಂದು ಬರೆದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಂಗಳವಾರ ತನ್ನ ಕುಟುಂಬಕ್ಕೆ ಇದು ಕಷ್ಟದ ಸಮಯ. ನನ್ನ ಅಮ್ಮನಿಗಾಗಿ ಪ್ರಾರ್ಥಿಸಿ ಎಂದು ನಟ ಹೇಳಿದ್ದರು. ನನ್ನ ಅಮ್ಮನ ಆರೋಗ್ಯದ ಕುರಿತು ನಿಮ್ಮ ಕಾಳಜಿಗೆ ಮನಸು ತುಂಬಿ ಬಂದಿದೆ. ನಮ್ಮ ಕುಟುಂಬಕ್ಕೆ ಇದು ಕಷ್ಟದ ಸಮಯ. ನಿಮ್ಮ ಪ್ರತಿಯೊಬ್ಬರ ಪ್ರಾರ್ಥನೆಯೂ ನಮಗೆ ನೆರವಾಗುತ್ತದೆ ಎಂದು ಟ್ವೀಟ್ ಮಾಡಿದ್ದರು.

ನಟ ಅಕ್ಷಯ್ ಕುಮಾರ್ ತಾಯಿ ಆರೋಗ್ಯ ಸ್ಥಿತಿ ಗಂಭೀರ; ಆಸ್ಪತ್ರೆಗೆ ದಾಖಲು

ಯುಕೆಯಲ್ಲಿ ತನ್ನ ಮುಂಬರುವ ಸಿಂಡ್ರೆಲ್ಲಾ ಸಿನಿಮಾ ಚಿತ್ರೀಕರಣದಲ್ಲಿದ್ದ ಅಕ್ಷಯ್ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ತನ್ನ ತಾಯಿಯೊಂದಿಗೆ ಇರಲು ಸೋಮವಾರ ಬೆಳಗ್ಗೆ ಮುಂಬೈಗೆ ಮರಳಿದ್ದರು. ಕೆಲವು ದಿನಗಳಿಂದ ಆಕೆ ಅಸ್ವಸ್ಥರಾಗಿದ್ದರು. ಅವರನ್ನು ಹಿರಾನಂದನಿ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು.

Scroll to load tweet…

2015 ರಲ್ಲಿ, ಅಕ್ಷಯ್ ತನ್ನ ತಾಯಿಯೊಂದಿಗಿನ ತನ್ನ ಸಂಬಂಧದ ಬಗ್ಗೆ ಸಂದರ್ಶನವೊಂದರಲ್ಲಿ ತಾಯಿ ಮತ್ತು ಅವಳ ಮಗನ ನಡುವಿನ ಬಾಂಧವ್ಯವು ತುಂಬಾ ಬಲವಾಗಿದೆ. ಆದರೆ ತುಂಬಾ ಸೌಮ್ಯವಾಗಿದೆ. ನಮ್ಮ ನಡುವೆ ಏನೂ ಬರಲು ಸಾಧ್ಯವಿಲ್ಲ, ಯಾವುದೇ ಮೈಲಿ ಅಥವಾ ಖಂಡಗಳು ಪ್ರತಿದಿನವೂ ನಾನು ಒಬ್ಬರಿಗೊಬ್ಬರು ಅರಿಯದಂತೆ ತಡೆಯಲು ಸಾಧ್ಯವಿಲ್ಲ ಎಂದಿದ್ದರು.

ಅಕ್ಷಯ್ ಕುಮಾರ್ ಇತ್ತೀಚೆಗೆ ಸ್ಪೈ ಥ್ರಿಲ್ಲರ್, ಬೆಲ್ ಬಾಟಂನಲ್ಲಿ ಕಾಣಿಸಿಕೊಂಡರು. ಇದು ಕೋವಿಡ್ -19 ಸಾಂಕ್ರಾಮಿಕ ರೋಗದ ಎರಡನೇ ಅಲೆಯ ನಂತರ ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಮೊದಲ ಪ್ರಮುಖ ಬಾಲಿವುಡ್ ಸಿನಿಮಾವಾಗಿದೆ. ಈ ಚಿತ್ರದಲ್ಲಿ ವಾಣಿ ಕಪೂರ್, ಹುಮಾ ಖುರೇಶಿ ಮತ್ತು ಲಾರಾ ದತ್ತಾ ಕೂಡ ನಟಿಸಿದ್ದಾರೆ.

ಅಕ್ಷಯ್ ಅವರ ಮುಂಬರುವ ಇತರ ಪ್ರಾಜೆಕ್ಟ್‌ಗಳಲ್ಲಿ ರೋಹಿತ್ ಶೆಟ್ಟಿಯ ಸೂರ್ಯವಂಶಿ ಇದೆ. ಇದರಲ್ಲಿ ಕತ್ರಿನಾ ಕೈಫ್, ಆನಂದ್ ಎಲ್ ರಾಯ್ ಅವರ ಅಟ್ರಾಂಗಿ ರೇಯಲ್ಲಿ ಧನುಷ್ ಮತ್ತು ಸಾರಾ ಅಲಿ ಖಾನ್, ಪೃಥ್ವಿರಾಜ್‌ನಲ್ಲಿ ಮಾನುಷಿ ಚಿಲ್ಲರ್, ಬಚ್ಚನ್ ಪಾಂಡೆಯಲ್ಲಿ ಕೃತಿ ಸನೋನ್ ಮತ್ತು ಜಾಕ್ವೆಲಿನ್ ಫರ್ನಾಂಡೀಸ್, ಮತ್ತು ರಕ್ಷಾ ಬಂಧನ್‌ನಲ್ಲಿ ಭೂಮಿ ಪೆಡ್ನೇಕರ್ ನಟಿಸಲಿದ್ದಾರೆ.