ಚಿರಂಜೀವಿಗೆ 'ಲೆಜೆಂಡ್' ಬಿರುದು ನೀಡುವ ವಿಚಾರದಲ್ಲಿ ಮೋಹನ್ ಬಾಬು ಅಸಮ್ಮತಿ ವ್ಯಕ್ತಪಡಿಸಿದರು. ಚಿರಂಜೀವಿ ಬಿರುದು ಸ್ವೀಕರಿಸಲು ನಿರಾಕರಿಸಿದರು. ಬಾಲಕೃಷ್ಣ ತಾವೇ ನಿಜವಾದ ಲೆಜೆಂಡ್ ಎಂದು ಹೇಳಿಕೊಂಡರು. ಐವತ್ತು ವರ್ಷಗಳ ಚಿತ್ರರಂಗದ ಅನುಭವದೊಂದಿಗೆ ವಿವಿಧ ಪಾತ್ರಗಳನ್ನು ನಿರ್ವಹಿಸಿರುವುದನ್ನು ಉಲ್ಲೇಖಿಸಿದರು.

`ಲೆಜೆಂಡ್‌` ಪಟ್ಟ ಚಿರುಗೆ ಸಿಗುತ್ತಾ ಅಂತ ಎಲ್ಲರೂ ಅಂದುಕೊಂಡಿದ್ರು. ಆದ್ರೆ ಮೋಹನ್ ಬಾಬು ವಿರೋಧ ವ್ಯಕ್ತಪಡಿಸಿದ್ರು. 500ಕ್ಕೂ ಹೆಚ್ಚು ಸಿನಿಮಾ, ವಿವಿಧ ಪಾತ್ರಗಳು, ನಿರ್ಮಾಪಕ, ಶಿಕ್ಷಣ ಸಂಸ್ಥೆ, ಸಮಾಜ ಸೇವೆ, ರಾಜಕೀಯ ಅಂತೆಲ್ಲಾ ಮಾಡಿದ್ದೀನಿ ನಾನು ಲೆಜೆಂಡ್ ಅಲ್ವಾ ಅಂದ್ರು.

Add Asianetnews Kannada as a Preferred SourcegooglePreferred

ಚಿರುಗೆ ಮೋಹನ್ ಬಾಬು ಟಾಂಗ್ ಕೊಟ್ಟಿದ್ರು. ಲೆಜೆಂಡ್ ಬಿರುದು ಕೊಡೋಕೆ ಇಂಡಸ್ಟ್ರಿ ಮುಂದಾಗಿದ್ರು. ಆದ್ರೆ ಚಿರು ಸತ್ಕಾರಕ್ಕೆ ಹೋಗಲಿಲ್ಲ. ಬಾಕ್ಸ್‌ನಲ್ಲಿ ಇಡ್ತೀನಿ ಅರ್ಹತೆ ಬಂದಾಗ ತಗೋತೀನಿ ಅಂದ್ರಂತೆ. ಲೆಜೆಂಡ್ ಅಂದ್ರೆ ಏನು? ಎಲ್ಲರಿಗೂ ಗೊತ್ತಾ ಅದರ ಅರ್ಥ? ಅಂತ ಬಾಲಯ್ಯ ಪ್ರಶ್ನೆ ಮಾಡಿದ್ದಾರೆ. ಎನ್‌.ಟಿ.ಆರ್. ಪ್ರಶಸ್ತಿ ಸಮಾರಂಭದಲ್ಲಿ ಚಿರು ಈ ಬಗ್ಗೆ ಮಾತಾಡಿದ್ರು. ಈಗ ಬಾಲಯ್ಯ ಈ ವಿಷಯ ಮತ್ತೆ ಎತ್ತಿದ್ದಾರೆ.

ನಾನೇ ಲೆಜೆಂಡ್ ಅಂತ ಬಾಲಯ್ಯ ಹೇಳಿಕೊಂಡಿದ್ದಾರೆ. 50 ವರ್ಷಗಳಲ್ಲಿ ನಾನು ಎಷ್ಟೋ ಪಾತ್ರಗಳು ಮಾಡಿದ್ದೀನಿ. ಗ್ರಾಮೀಣ, ಫ್ಯಾಕ್ಷನ್, ಪೌರಾಣಿಕ, ಜಾನಪದ, ಸೈನ್ಸ್ ಫಿಕ್ಷನ್ ಹೀಗೆ ಎಲ್ಲಾ ರೀತಿ ಸಿನಿಮಾ ಮಾಡಿದ್ದೀನಿ ಅಂತ ಹೇಳಿದ್ದಾರೆ.

ಗೆಳತಿ ಕಾರಣಕ್ಕೆ ಸುದ್ದಿಯಲ್ಲಿ ಶಾರುಖ್ ಪುತ್ರ, ಪಾರ್ಟಿಯಲ್ಲಿರೋ ವಿಡಿಯೋ ಲೀಕ್!

ಚಿರು, ಮೋಹನ್ ಬಾಬುಗೆ ಬಾಲಯ್ಯ ಟಾಂಗ್ ಕೊಟ್ಟಿದ್ದಾರೆ. ಲೆಜೆಂಡ್‌ಗಾಗಿ ಜಗಳ ಆಯ್ತು ಅಂತೆ. ನಾನೇ ನಿಜ ಲೆಜೆಂಡ್, ಜನರ ಹೃದಯದಲ್ಲಿ ನಾನಿದ್ದೀನಿ ಅಂತ ಹೇಳಿದ್ದಾರೆ. 

ನಂದಮೂರಿ ಬಾಲಕೃಷ್ಣ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ದಿಗ್ಗಜ ನಟ ಎನ್‌ಟಿ ರಾಮರಾವ್ ಅವರ ಪುತ್ರ. ಇವರ ವಿವಾದಗಳು ಒಂದೆರಡಲ್ಲ 2024ರಲ್ಲಿ 'ಗ್ಯಾಂಗ್ಸ್ ಆಫ್ ಗೋದಾವರಿ' ಚಿತ್ರದ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ನಟ ಅಂಜಲಿಯನ್ನು ತಳ್ಳಿದ ಇತ್ತೀಚಿನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿದ್ದು, ಅನೇಕ ಜನರು ಕೋಪಗೊಂಡಿದ್ದರು.

2016ರಲ್ಲಿ ‘ಸಾವಿತ್ರಿ’ ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮಹಿಳೆಯರ ವಿರುದ್ಧ ಅಸಭ್ಯವಾಗಿ ಮಾತನಾಡಿದ ನಂದಮೂರಿ ಬಾಲಕೃಷ್ಣ ವಿರುದ್ಧ ಪೊಲೀಸ್ ದೂರು ದಾಖಲಾಗಿತ್ತು . ಈವ್ ಟೀಸಿಂಗ್ ಪಾತ್ರಗಳನ್ನು ಮಾಡಿ ಸುಮ್ಮನೆ ಹುಡುಗಿಯರನ್ನು ಹಿಂಬಾಲಿಸಿದರೆ ನನ್ನ ಅಭಿಮಾನಿಗಳು ಒಪ್ಪಿಕೊಳ್ಳುವುದಿಲ್ಲ, ಒಂದೋ ಮುತ್ತು ಕೊಡಬೇಕು, ಇಲ್ಲವೇ ಅವರನ್ನು ಗರ್ಭಿಣಿಯನ್ನಾಗಿ ಮಾಡಬೇಕು. ಅಷ್ಟೆ.. ನಾವೇ ಕಮಿಟ್ ಆಗಬೇಕು’ ಎಂದು ಕಾರ್ಯಕ್ರಮದಲ್ಲಿ ಹೇಳಿದ್ದರು.

ತೈಮೂರ್ ಹೆಸರಿನ ವಿವಾದ ಕೊನೆಗೂ ಮೌನ ಮುರಿದ ಕರೀನಾ ಕಪೂರ್‌, ಟ್ರೋಲ್‌ ಬಗ್ಗೆ ಬೇಸರ

ನಂದಮೂರಿ ಬಾಲಕೃಷ್ಣ ಅವರ ಅಭಿಮಾನಿಗಳಿಗೆ ಕಪಾಳಮೋಕ್ಷ ಮಾಡುತ್ತಿರುವ ಹಲವು ವಿಡಿಯೋಗಳು ಆಗಾಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತದೆ. 2021 ರಲ್ಲಿ ಹಿಂದೂಪುರದಲ್ಲಿ ತನ್ನ ಫೋನ್ ಕ್ಯಾಮೆರಾವನ್ನು ತನ್ನತ್ತ ಗುರಿಯಿಟ್ಟುಕೊಂಡಿದ್ದಕ್ಕಾಗಿ ಅಭಿಮಾನಿಯೊಬ್ಬನಿಗೆ ಕಪಾಳಮೋಕ್ಷ ಮಾಡಿದ್ದರು.

2004 ರಲ್ಲಿ, ಬಾಲಕೃಷ್ಣ ಅವರು ತಮ್ಮ ಪತ್ನಿ ವಸುಂಧರಾ ದೇವಿ ಅವರ ಹೆಸರಿನಲ್ಲಿ ನೋಂದಾಯಿಸಲಾದ ರಿವಾಲ್ವರ್ ಬಳಸಿ ಚಲನಚಿತ್ರ ನಿರ್ಮಾಪಕ ಬೆಲ್ಲಂಕೊಂಡ ಸುರೇಶ್ ಮತ್ತು ಅವರ ಸಹಚರ ಸತ್ಯನಾರಾಯಣ ಚೌಧರಿ ಮೇಲೆ ಗುಂಡು ಹಾರಿಸಿದ ಘಟನೆಯಲ್ಲಿ ಭಾಗಿಯಾಗಿದ್ದರು. 

2017 ರಲ್ಲಿ ತನ್ನ ಚಿತ್ರದ ಚಿತ್ರೀಕರಣದ ಸಮಯದಲ್ಲಿ, ಬಾಲಕೃಷ್ಣ ತನ್ನ ಸಹಾಯಕನನ್ನು ನಿಂದಿಸಿದ್ದು, ತನ್ನ ಶೂಲೇಸ್‌ಗಳನ್ನು ಕಟ್ಟುವಂತೆ ಹೇಳಿ ತನ್ನ ಸಹಾಯಕನ ತಲೆಗೆ ಹೊಡೆದದ್ದು ಇವೆಲ್ಲವೂ ಕ್ಯಾಮರಾದಲ್ಲಿ ಸೆರೆಯಾಗಿದೆ. ನಂದಮೂರಿ ಬಾಲಕೃಷ್ಣ ಅವರೊಂದಿಗೆ ತಾವು ನಟಿಸಿದ ಎರಡು ತೆಲುಗು ಚಿತ್ರಗಳಾದ 'ಲೆಜೆಂಡ್' ಮತ್ತು 'ಲಯನ್' ನಲ್ಲಿ ಕೆಲಸ ಮಾಡಿದ್ದ ನಟಿ ರಾಧಿಕಾ ಆಪ್ಟೆ ಒಮ್ಮೆ ತೆಲುಗು ಚಿತ್ರರಂಗದಲ್ಲಿ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡು ಅಸಭ್ಯವಾಗಿ ವರ್ತಿಸಿದರ ಬಗ್ಗೆ ಹೇಳಿಕೊಂಡಿದ್ದರು.