Asianet Suvarna News Asianet Suvarna News

'ಋಣ ಹೇಗೆ ತೀರಿಸಲಿ?' ಅಗಲಿದ ಜೈನ ಗುರು ನೆನೆದು ನಟಿ ಅಂಕಿತಾ ಲೋಖಂಡೆ ಭಾವುಕ

ಜನಪ್ರಿಯ ನಟಿ ಅಂಕಿತಾ ಲೋಖಂಡೆ ಅವರ ಇತ್ತೀಚಿನ ಸಾಮಾಜಿಕ ಮಾಧ್ಯಮ ಪೋಸ್ಟ್ ವೈರಲ್ ಆಗಿದೆ. ಅವರು ಭಾನುವಾರ ಅಗಲಿದ ಜೈನ ಗುರುವನ್ನು ಸ್ಮರಿಸಿ ಬಹಳ ಭಾವುಕ ಪೋಸ್ಟ್ ಬರೆದಿದ್ದಾರೆ. 

Ankita Lokhande and Vicky Jain mourn the demise of Jain seer Acharya Vidyasagar Maharaj skr
Author
First Published Feb 19, 2024, 11:30 AM IST

ಜೈನ ಗುರು ಆಚಾರ್ಯ ಶ್ರೀ ವಿದ್ಯಾಸಾಗರ್ ಮಹಾರಾಜ್ ಜಿ ಭಾನುವಾರ ಮೋಕ್ಷ ಪಡೆದಿದ್ದಾರೆ. 3 ದಿನ ಉಪವಾಸ ಮಾಡಿ 'ಸಲ್ಲೇಖನ'ವನ್ನು ಆಚರಿಸಿ 77ನೇ ವಯಸ್ಸಿನಲ್ಲಿ ಇಹಲೋಕ ಸೇರಿದ ಗುರುಗಳ ಅಗಲಿಕೆ ಜೈನ ಸಮುದಾಯದಲ್ಲಿ ದುಃಖ ತಂದಿದೆ. ಕಿರುತೆರೆ ನಟಿ ಅಂಕಿತಾ ಲೋಖಂಡೆ ಮತ್ತು ಪತಿ ವಿಕ್ಕಿ ಜೈನ್ ಕೂಡಾ ಗುರುಗಳನ್ನು ನೆನೆದು ಭಾವುಕರಾಗಿದ್ದಾರೆ. ಗುರುಗಳ ಒಡನಾಟದ ಬಗ್ಗೆ ಅಂಕಿತಾ  ಹಂಚಿಕೊಂಡ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 
ಇದರಲ್ಲಿ ಜೈನ ಗುರುಗಳಿಗೆ ಭಾವನಾತ್ಮಕ ಶ್ರದ್ಧಾಂಜಲಿ ಸಲ್ಲಿಸುವ ಜೊತೆಗೆ, ಅವರೊಂದಿಗೆ ತಮ್ಮ ಮತ್ತು ವಿಕ್ಕಿಯ ಹಳೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. 

ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್ ಅವರ ಪೋಸ್ಟ್
ಈ ಸ್ಮರಣೀಯ ಫೋಟೋಗಳನ್ನು ಹಂಚಿಕೊಳ್ಳುವಾಗ, ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್ ಬರೆದಿದ್ದಾರೆ, 'ನಮೋಸ್ತು ಆಚಾರ್ಯಶ್ರೀ! ನಿನ್ನ ಕರುಣೆಯನ್ನು ನನ್ನ ಮೇಲೆ ಧಾರೆಯೆರೆದೆ ನೀನು, ಇದು ನನಗೆ ಉಪಕಾರವಾಗಿತ್ತು. ನಾನು ನಿನ್ನ ಋಣವನ್ನು ಹೇಗೆ ತೀರಿಸಲಿ? ಪ್ರತಿ ಜನ್ಮದಲ್ಲಿಯೂ ಋಣಿಯಾಗಿಯೇ ಉಳಿಯುತ್ತೇನೆ. ಸದಾ ಹರಿಯುವ ಗಂಗೆಯಲ್ಲಿ ಒಂದು ಹನಿಯನ್ನೂ ನೀಡಲಾರೆವು. ನಿಮ್ಮ ಕರುಣೆಯನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ಭಾವಪೂರ್ಣ ಶ್ರದ್ಧಾಂಜಲಿ. #vidhyasagarjimaharaj' 

ಕೆಚಪ್ ಸೇರಿ ಈ ಮೂರು ಆಹಾರ ಸ್ಲೋ ಪಾಯ್ಸನ್, ಮಕ್ಕಳಿಗೆ ಕೊಡಲೇಬೇಡಿ!
 

ಈಗ ಅವರ ಈ ಭಾವನಾತ್ಮಕ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಭಿಮಾನಿಗಳೆಲ್ಲರೂ ಈಗ ಈ ಪೋಸ್ಟ್‌ಗೆ ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ ಮತ್ತು ಜೈನ ಗುರು ಆಚಾರ್ಯ ಶ್ರೀ ವಿದ್ಯಾಸಾಗರ್ ಜಿ ಮಹಾರಾಜ್ ಅವರಿಗೆ ಗೌರವ ಸಲ್ಲಿಸುತ್ತಿದ್ದಾರೆ. ಇವರಿಬ್ಬರನ್ನು ಹೊರತು ಪಡಿಸಿ ಪ್ರಧಾನಿ ನರೇಂದ್ರ ಮೋದಿ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಜೈನ ಗುರುಗಳನ್ನು ಸ್ಮರಿಸಿ ಈ ಸುದ್ದಿಗೆ ಸಂತಾಪ ಸೂಚಿಸಿದ್ದಾರೆ.

 

ಏನಿದು ಸಲ್ಲೇಖನಾ?
'ಸಲ್ಲೇಖನಾ' ಎಂಬುದು ಜೈನ ಧಾರ್ಮಿಕ ಆಚರಣೆಯಾಗಿದ್ದು, ಆಧ್ಯಾತ್ಮಿಕ ಶುದ್ಧೀಕರಣಕ್ಕಾಗಿ ಸ್ವಯಂಪ್ರೇರಿತ ಉಪವಾಸವನ್ನು ಒಳಗೊಂಡಿರುತ್ತದೆ ಎಂದು ತೀರ್ಥರ ಹೇಳಿಕೆ ತಿಳಿಸಿದೆ.

Follow Us:
Download App:
  • android
  • ios