Asianet Suvarna News Asianet Suvarna News

ಅಮಿತಾಭ್ ಆಸ್ಪತ್ರೆಗೆ ದಾಖಲಾಗ್ಲೇ ಇಲ್ವಾ? ಅಭಿ-ಐಷ್​ ಡಿವೋರ್ಸ್​ ಸುದ್ದಿ ಬೆನ್ನಲ್ಲೇ ಇದೇನಿದು ಹೊಸ ವಿಷ್ಯ?

ಅಮಿತಾಭ್​ ಬಚ್ಚನ್​ ಆಸ್ಪತ್ರೆಗೆ ದಾಖಲಾಗಿರುವುದಾಗಿ ವರದಿಯಾಗುತ್ತಲೇ ಕ್ರಿಕೆಟ್​ ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿರುವ ಅವರು ಎಲ್ಲವೂ ಫೇಕ್​ ಎಂದಿದ್ದಾರೆ. ನಿಜಕ್ಕೂ ನಡೀತಿರೋದೇನು?
 

Actor Amitabh Bachchan attends ISPL finale and calls angioplasty report fake news suc
Author
First Published Mar 16, 2024, 12:46 PM IST

ಬಿಗ್​-ಬಿ ಅಮಿತಾಭ್​ ಬಚ್ಚನ್​ ಕುಟುಂಬ ದಿನದಿಂದ ದಿನಕ್ಕೆ ಕುತೂಹಲದ ತಾಣವಾಗುತ್ತಲೇ ಸಾಗಿದೆ. ಇತ್ತೀಚೆಗಷ್ಟೇ ಮಗ ಅಭಿಷೇಕ್​  ಮತ್ತು ಐಶ್ವರ್ಯ ರೈ ನಡುವಿನ ಡಿವೋರ್ಸ್​ ಸುದ್ದಿ ದಿನದಿಂದ ದಿನಕ್ಕೆ ರೆಕ್ಕೆಪುಕ್ಕದೊಂದಿಗೆ ಹರಡುತ್ತಲೇ ಇತ್ತು. ಡಿವೋರ್ಸ್​ ಆದವರಂತೆ ಖುದ್ದು ಈ ಜೋಡಿ ಪೋಸ್ಟ್​ ಹಾಕುವುದು, ನಂತರ ಭಾರಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಲೇ ಒಟ್ಟಿಗೇ ಕಾಣಿಸಿಕೊಳ್ಳುವುದು, ಸ್ವಲ್ಪ ದಿನದ ಅಂತರದಲ್ಲಿ ಮತ್ತೊಂದು ಭಾವನಾತ್ಮಕ ಪೋಸ್ಟ್​ ಹಾಕಿ ಮತ್ತೆ ಪ್ರಚಾರಕ್ಕೆ ಬರುವುದು, ಈ ಬಗ್ಗೆ ಖುದ್ದು ಅಮಿತಾಭ್​ ಬಚ್ಚನ್​ ಕೂಡ ಅಡ್ಡ ಗೋಡೆಯ ಮೇಲೆ ದೀಪ ಇಟ್ಟವರಂತೆ ಉತ್ತರಿಸುವುದು... ಇವೆಲ್ಲವೂ ನಡೆಯುತ್ತಲೇ ಇದೆ.  ಇಷ್ಟೆಲ್ಲಾ ವರದಿಯಾಗುತ್ತಿದ್ದರೂ ಖುದ್ದು ಅಮಿತಾಭ್​ ಆಗಲೀ, ಐಶ್ವರ್ಯ, ಅಭಿಷೇಕ್​ ಆಗಲಿ ಈ ವಿಷಯ ಹೌದೋ, ಅಲ್ಲವೋ ಎಂದು ನೇರವಾಗಿ ಸ್ಪಷ್ಟನೆ ಕೊಡದೇ ಪ್ರಚಾರ ಆದಷ್ಟು ಆಗಲಿ ಎಂಬಂತೆ ದಿನಕ್ಕೊಂದು ರೀತಿಯಲ್ಲಿ ವರ್ತಿಸುತ್ತಿದ್ದಾರೆ.

ಡಿವೋರ್ಸ್​ ವಿಷಯ ತಣ್ಣಗಾಗುತ್ತಿರುವಂತೆ ನಿನ್ನೆಯಷ್ಟೇ ಬಿಗ್​-ಬಿ ಅಮಿತಾಭ್​ ಬಚ್ಚನ್​ ಫ್ಯಾನ್ಸ್​ಗೆ ಬಿಗ್​ ಶಾಕ್​ ಎದುರಾಗಿತ್ತು. ಅಮಿತಾಭ್​ ಬಚ್ಚನ್​ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಕಾಲಿನಲ್ಲಿ ಹೆಪ್ಪುಗಟ್ಟುವಿಕೆಗಾಗಿ ಆಂಜಿಯೋಪ್ಲಾಸ್ಟಿ ಪ್ರಕ್ರಿಯೆಗೆ ಒಳಗಾಗಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದವು. ಅಮಿತಾಭ್​ ಅವರ ಆರೋಗ್ಯದಲ್ಲಿ ದಿಢೀರ್​ ಏರುಪೇರಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎನ್ನಲಾಗಿತ್ತು. ಅಮಿತಾಭ್​ ಬಚ್ಚನ್​ ಅವರು ಸಾಮಾನ್ಯ ತಪಾಸಣೆಗಾಗಿ ಕೋಕಿಲಾಬೆನ್​ ಧೀರೂಭಾಯ್​ ಅಂಬಾನಿ ಆಸ್ಪತ್ರೆಗೆ ಹೋಗಿದ್ದಾರೆ ಎಂದು ಕೆಲ ವರದಿಗಳು ಆಗಿದ್ದರೆ, ಇನ್ನೂ ಕೆಲವು ಆಂಜಿಯೋಪ್ಲಾಸ್ಟಿಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ವರದಿಗಳು ಪ್ರಸಾರವಾಗುವ ಮೂಲಕ ಈ ವದಂತಿ ಹಬ್ಬಲು ಪ್ರಾರಂಭವಾಗಿತ್ತು.  ಬಿಗಿ ಭದ್ರತೆಯ ನಡುವೆ  ಆಸ್ಪತ್ರೆಗೆ ದಾಖಲಿಸಲಾಗಿದೆ.  ಆಸ್ಪತ್ರೆಗೆ ದಾಖಲಾಗುವ ಸ್ವಲ್ಪ ಮುಂಚೆ ‘ಯಾವಾಗಲೂ ಕೃತಜ್ಞರಾಗಿರುತ್ತೇನೆ’ ಎಂದು ಬರೆದುಕೊಂಡಿದ್ದಾರೆ ಎಂದೂ ಹೇಳಲಾಗಿತ್ತು.

ಅಮಿತಾಭ್-ಅಭಿಷೇಕ್​ ಒಟ್ಟಿಗೇ ಇಲ್ವಾ? ಇನ್​ಸ್ಟಾದಲ್ಲಿನ ಚಾಟ್​ ನೋಡಿ ಇದೆಲ್ಲಾ ಯಾಕೆ ಬೇಕು ಕೇಳ್ತಿದ್ದಾರೆ ಫ್ಯಾನ್ಸ್​!
 
ಈ ಸುದ್ದಿ ಕಾಳ್ಗಿಚ್ಚಿನಂತೆ ಸೋಷಿಯಲ್​ ಮೀಡಿಯಾದಲ್ಲಿ ವರದಿಯಾಗುತ್ತಿದ್ದರೂ ಕುಟುಂಬಸ್ಥರು ಯಾವೊಂದು ಸ್ಪಷ್ಟನೆ ಕೊಟ್ಟಿರಲಿಲ್ಲ. ಆದರೆ ಇದೀಗ ಕುತೂಹಲ ಎಂಬಂತೆ, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿಯ ಕೆಲವೇ ಗಂಟೆಗಳ ಬಳಿಕ ಮಗ ಅಭಿಷೇಕ್​ ಜೊತೆಗೆ ಥಾಣೆಯ ದಾಡೋಜಿ ಕೊಂಡದೇವ್ ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿದ್ದದಾರೆ.  ಇಂಡಿಯನ್​ ಸ್ಟ್ರೀಟ್​ ಪ್ರೀಮಿಯರ್​ ಲೀಗ್​ನ ಮಝಿ ಮುಂಬೈ ಮತ್ತು ಕೋಲ್ಕತಾದ ಟೈಗರ್ಸ್​ ನಡುವಿನ ಅಂತಿಮ ಪಂದ್ಯದ ವೇಳೆ ಇವರು ಫುಲ್​ ಜೋಷ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ತೆಂಡೂಲ್ಕರ್ ಅವರನ್ನೂ ಭೇಟಿಯಾಗಿದ್ದು, ಅದನ್ನು  ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾಗಿರುವ ವರದಿಯ ಕುರಿತು ಅಲ್ಲಿಯೇ ಅಭಿಮಾನಿಯೊಬ್ಬರು ಪ್ರಶ್ನೆ ಕೇಳಿದಾಗ, ನಗುತ್ತಲೇ ಅಮಿತಾಭ್​ ಬಚ್ಚನ್​ ಫೇಕ್​ ನ್ಯೂಸ್​ ಎಂದಿದ್ದಾರೆ! ಎಲ್ಲರ ಬಳಿಯೂ ಕೈಮಾಡಿ, ಚೆನ್ನಾಗಿದ್ದೇನೆ ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ. ತಮ್ಮ ಮತ್ತು ಕುಟುಂಬದ ಬಗ್ಗೆ ಎಚ್ಚರ ವಹಿಸಿ ಎಂದು ಎಲ್ಲರಿಗೂ ಪರೋಕ್ಷವಾಗಿ ಬಿಗ್​-ಬಿ ಹೇಳಿದಂತಿದೆ. ಅಷ್ಟಕ್ಕೂ ಇವರ ಆಸ್ಪತ್ರೆಗೆ ದಾಖಲಾದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಕ್ಕೆ ಬಂದಿರಲಿಲ್ಲ. ಆದರೆ ಈ ಸುದ್ದಿ ಕಾಳ್ಗಿಚ್ಚಿನಂತೆ ಹರಡಿದ್ದು ಹೇಗೆ ಎನ್ನುವುದು ಮಾತ್ರ ತಿಳಿದಿಲ್ಲ. ಅದೇ ರೀತಿ, ಬಿಗ್​ ಬಿ ಕುಟುಂಬದಲ್ಲಿ ಈಚಿನ ದಿನಗಳಲ್ಲಿ ಎಲ್ಲವೂ ನಿಗೂಢದಂತೆ ಕಾಣುತ್ತಿವೆ! 

ಕುಟುಂಬಕ್ಕಾಗಿ ಸಿನಿಮಾ ತೊರೆಯುವ ನಿರ್ಧರಿಸಿದ್ದ ಆಮೀರ್ ಖಾನ್​ ಇಬ್ಬರೂ ಪತ್ನಿಯರಿಂದ ದೂರವಾಗಿದ್ದೇಕೆ?

Follow Us:
Download App:
  • android
  • ios