Asianet Suvarna News Asianet Suvarna News

ಗೋಧಿ ರಫ್ತಿನ ಮೇಲೆ ಭಾರತದ ನಿಷೇಧ, ಜಗತ್ತಿನ ಆಹಾರ ಬಿಕ್ಕಟ್ಟಿಗೆ ಕಾರಣವಾಗುತ್ತದೆ ಎಂದ ವಿಶ್ವ ನಾಯಕರು!

ಭಾರತವು ತಕ್ಷಣದಿಂದ ಜಾರಿಯಾಗುವಂತೆ ಗೋಧಿ ರಫ್ತಿಗೆ ನಿಷೇಧ ಹೇರಿದೆ. ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧದ ಕಾರಣದಿಂದಾಗಿ ಈಗಾಗಲೇ ಜಗತ್ತಿನಲ್ಲಿ ಗೋಧಿ ರಫ್ತು ಪ್ರಮಾಣ ದಾಖಲೆಯ ಮಟ್ಟದಲ್ಲಿ ಇಳಿಕೆಯಾಗಿದೆ. ಇನ್ನೊಂದೆಡೆ ಗೋಧಿ ರಫ್ತು ಮಾಡುವ ವಿಶ್ವದ ಅಗ್ರ ದೇಶಗಳಲ್ಲಿ ಒಂದಾಗಿರುವ ಭಾರತ ಕೂಡ ನಿಷೇಧ ಹೇರಿರುವುದು ಜಿ 7 ನಾಯಕರ ಆತಂಕಕ್ಕೆ ಕಾರಣವಾಗಿದೆ.

will increase the food crisis in the world says G 7 Nations on Indias action on wheat export stirred the world san
Author
Bengaluru, First Published May 15, 2022, 12:26 PM IST

ನವದೆಹಲಿ (ಮೇ.15): ಭಾರತ ಸರ್ಕಾರವು (Central government) ತಕ್ಷಣವೇ ಜಾರಿಗೆ ಬರುವಂತೆ ಗೋಧಿ ರಫ್ತು ನಿಷೇಧಿಸಿದೆ. ದೇಶದಲ್ಲಿ ಇದರ ಪರಿಣಾಮ ಬಗ್ಗೆ ಈಗ ತಾನೇ ಚರ್ಚೆಗಳು ಪ್ರಾರಂಭವಾಗಿದೆ. ಪ್ರಪಂಚದಾದ್ಯಂತ ಗೋಧಿ (Wheat) ಬೆಲೆ ಹೆಚ್ಚುತ್ತಿರುವಾಗ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ.

ಇದಲ್ಲದೆ, ರಷ್ಯಾ-ಉಕ್ರೇನ್ (Russia-Ukraine War) ಯುದ್ಧದಿಂದಾಗಿ ವಿಶ್ವಾದ್ಯಂತ ಗೋಧಿ ಪೂರೈಕೆಯು ದಾಖಲೆ ಮಟ್ಟದಲ್ಲಿ ಕಡಿಮೆಯಾಗಿದೆ. ಈ ನಡುವೆ, ಗೋಧಿ ರಫ್ತು ನಿಲ್ಲಿಸುವ ಭಾರತ ಸರ್ಕಾರದ ನಿರ್ಧಾರವನ್ನು ಜಿ-7 ದೇಶಗಳ (G7 Nations) ಗುಂಪು ಟೀಕಿಸಿದೆ. ಭಾರತದ ಈ ನಡೆ ವಿಶ್ವದಲ್ಲಿ ಆಹಾರ ಬಿಕ್ಕಟ್ಟನ್ನು ಹೆಚ್ಚಿಸಲಿದೆ ಎಂದು ಜರ್ಮನಿಯ ಕೃಷಿ ಸಚಿವ ಕೆಮ್ ಒಜ್ಡೆಮಿರ್ (Germany's Agriculture Minister Kem Ozdemir) ಹೇಳಿದ್ದಾರೆ. ಜಿ20 ಸದಸ್ಯ ರಾಷ್ಟ್ರವಾಗಿ ತನ್ನ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ನಾವು ಭಾರತಕ್ಕೆ ಕರೆ ನೀಡುತ್ತೇವೆ.

ವಿಶ್ವದಲ್ಲಿಯೇ ಗರಿಷ್ಠ ಪ್ರಮಾಣದ ಗೋಧಿಯನ್ನು ಉತ್ಪಾದನೆ ಮಾಡುವ ರಾಷ್ಟ್ರಗಳ ಪೈಕಿ ರಷ್ಯಾ ಹಾಗೂ ಉಕ್ರೇನ್ ಕೂಡ ಇವೆ. ಈ ನಡುವೆ, ಈ ಎರಡೂ ದೇಶಗಳ ನಡುವಿನ ಯುದ್ಧದಿಂದಾಗಿ ಗೋಧಿ ರಫ್ತಿನಲ್ಲಿ ದೊಡ್ಡ ಪ್ರಮಾಣದ ಕುಸಿತ ಕಂಡು ಬಂದಿದೆ. ಅದೇ ಸಮಯದಲ್ಲಿ, ಉಕ್ರೇನ್ ಮತ್ತು ರಷ್ಯಾದಿಂದ ಸರಬರಾಜಿನ ಮೇಲೆ ಪರಿಣಾಮ ಬೀರಿದ ನಂತರ ಭಾರತದಿಂದ ಗೋಧಿಯ ಬೇಡಿಕೆ ಹೆಚ್ಚಾಗಿದೆ. ಉಕ್ರೇನ್ ತನ್ನ ಬಳಿ 20 ಮಿಲಿಯನ್ ಟನ್ ಗೋಧಿ ಇದೆ ಎಂದು ಹೇಳುತ್ತಿದ್ದರೂ, ಅದರ ವ್ಯಾಪಾರ ಮಾರ್ಗವು ಯುದ್ಧದಿಂದ ಸಂಪೂರ್ಣವಾಗಿ ನಾಶವಾಗಿದೆ.

ಮುಂದಿನ ತಿಂಗಳು ಜರ್ಮನಿಯಲ್ಲಿ ನಡೆಯಲಿರುವ ಜಿ-7 ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸುವ ಸಂದರ್ಭದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗುವುದು ಎಂದು ಕೆಮ್ ಒಜ್ಡೆಮಿರ್ ಹೇಳಿದ್ದಾರೆ. "ರಫ್ತು ನಿಷೇಧವು ಬಾಂಗ್ಲಾದೇಶ ಮತ್ತು ನೇಪಾಳದಂತಹ ದೇಶಗಳ ಮೇಲೆ ಪರಿಣಾಮ ಬೀರುತ್ತದೆ, ಇದು ತುರ್ತು ಅಗತ್ಯವಾಗಿದೆ.

ಈ ವಿಷಯದ ಬಗ್ಗೆ ಜಿ 7 ಸಭೆಯಲ್ಲಿ ಕಾಂಕ್ರೀಟ್ ನಿರ್ಧಾರ ತೆಗೆದುಕೊಳ್ಳುವಂತೆ ನಾವು ಶಿಫಾರಸು ಮಾಡುತ್ತೇವೆ, ಇದಕ್ಕೆ ಭಾರತವನ್ನು ಆಹ್ವಾನಿಸಲಾಗುತ್ತದೆ" ಎಂದು ಅವರು ಹೇಳಿದರು.
ಭಾರತದಲ್ಲಿ ಗೋಧಿ ಬೆಲೆಗಳು ಕೆಲವು ಮಾರುಕಟ್ಟೆಗಳಲ್ಲಿ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿವೆ ಎಂದು ವರದಿಯಾಗಿವೆ. ತಮ್ಮ "ಆಹಾರ ಭದ್ರತೆ ಅಗತ್ಯಗಳನ್ನು" ಪೂರೈಸಲು ಸರಬರಾಜುಗಳನ್ನು ಕೋರುವ ದೇಶಗಳಿಗೆ ರಫ್ತು ಮಾಡಲು ಅವಕಾಶ ನೀಡುವುದಾಗಿ ಭಾರತ ಸರ್ಕಾರ ಹೇಳಿದೆ. ಇನ್ನೊಂದೆಡೆ, ಹೆಚ್ಚುತ್ತಿರುವ ಇಂಧನ ಮತ್ತು ಸಾರಿಗೆ ವೆಚ್ಚಗಳು ಭಾರತದಲ್ಲಿ ಗೋಧಿ ಬೆಲೆಗಳನ್ನು ಮತ್ತಷ್ಟು ಹೆಚ್ಚಿಸಿವೆ.

ಭಾರತವು ಮಾರ್ಚ್‌ನಲ್ಲಿ ಅಂದರೆ ಕಳೆದ ಹಣಕಾಸು ವರ್ಷದಲ್ಲಿ 70 ಲಕ್ಷ ಟನ್‌ಗಳಷ್ಟು ಗೋಧಿಯನ್ನು ರಫ್ತು ಮಾಡಿದೆ, ಇದು ಕಳೆದ ವರ್ಷಕ್ಕಿಂತ 250 ಪಟ್ಟು ಹೆಚ್ಚು. ಅದೇ ಸಮಯದಲ್ಲಿ, ಏಪ್ರಿಲ್ ಅಲ್ಲಿ, ದೇಶವು 14 ಲಕ್ಷ ಟನ್ ಗೋಧಿಯನ್ನು ರಫ್ತು ಮಾಡಿದೆ. ಈಗ ಭಾರತವು ಗೋಧಿಯ ರಫ್ತನ್ನು 'ನಿರ್ಬಂಧಿತ' ಸರಕುಗಳ ವರ್ಗಕ್ಕೆ ಸೇರಿಸಿದೆ.
ಬೆಲೆ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ತಿಳಿಸಿದೆ. ಮತ್ತೊಂದೆಡೆ, ಎಂಟು ರಾಜ್ಯಗಳಲ್ಲಿ ಮುಂದಿನ ತಿಂಗಳಿನಿಂದ ಉಚಿತ ಪಡಿತರದಲ್ಲಿ ನೀಡುವ ಗೋಧಿಯನ್ನು ಕಡಿತಗೊಳಿಸಲು ನಿರ್ಧರಿಸಲಾಗಿದೆ. 

Price Hike: ಬ್ರೆಡ್,ಬಿಸ್ಕೆಟ್,ಚಪಾತಿಯನ್ನೂ ಬಿಡದ ಬೆಲೆಯೇರಿಕೆ ಭೂತ; ಗೋಧಿ ಹಿಟ್ಟಿನ ಬೆಲೆ ಗಗನಕ್ಕೆ!

ಸರ್ಕಾರಿ ಗೋಧಾಮಿನಲ್ಲಿ ದಾಸ್ತಾನಿ ಭಾರೀ ಪ್ರಮಾಣದಲ್ಲಿ ಇಳಿಕೆ: 
ಉಚಿತ ಆಹಾರ ಧಾನ್ಯಗಳ ಯೋಜನೆಯಲ್ಲಿ ಗೋಧಿಯನ್ನು ಕಡಿತ ಮಾಡುವ ಅಗತ್ಯವೇನಿತ್ತು ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು ಕೂಡ ಇಲ್ಲಿ ಮುಖ್ಯ. ಸರ್ಕಾರವು ರೈತರಿಂದ ಎಂಎಸ್‌ಪಿ ದರದಲ್ಲಿ ಗೋಧಿಯನ್ನು ಖರೀದಿಸುತ್ತದೆ ಮತ್ತು ಉಚಿತ ಆಹಾರ ಧಾನ್ಯಗಳ ಯೋಜನೆಯಡಿ ಸಾರ್ವಜನಿಕರಿಗೆ ತಲುಪಿಸುತ್ತದೆ. ಈ ಬಾರಿ ರಷ್ಯಾ-ಉಕ್ರೇನ್ ಯುದ್ಧದ ನಡುವೆ ಜಾಗತಿಕ ಮಾರುಕಟ್ಟೆಯಲ್ಲಿ ಗೋಧಿ ಬೆಲೆ ಏರಿಕೆಯಾಗಿದೆ. ಏಕೆಂದರೆ ರಷ್ಯಾ ಮತ್ತು ಉಕ್ರೇನ್ ಎರಡೂ ಗೋಧಿಯ ದೊಡ್ಡ ರಫ್ತುದಾರರು. ಬೆಲೆ ಹೆಚ್ಚಾದರೆ ಸರ್ಕಾರಿ ಮಾರುಕಟ್ಟೆ ಬದಲು ವರ್ತಕರು ರೈತರಿಂದಲೇ ನೇರವಾಗಿ ಗೋಧಿಯನ್ನು ಹೆಚ್ಚು ಖರೀದಿಸುತ್ತಾರೆ.

Ban On Wheat Export:ಹಣದುಬ್ಬರ ಏರಿಕೆಗೆ ಕಡಿವಾಣ ಹಾಕಲು ಗೋಧಿ ರಫ್ತಿನ ಮೇಲೆ ನಿಷೇಧ ಹೇರಿದ ಕೇಂದ್ರ ಸರ್ಕಾರ

ಇದರಿಂದಾಗಿ ಮೇ 1ರವರೆಗಿನ ಅಂಕಿ ಅಂಶಗಳ ಪ್ರಕಾರ ಸರ್ಕಾರಿ ಗೋದಾಮಿನಲ್ಲಿ ಗೋಧಿ ದಾಸ್ತಾನು ಐದು ವರ್ಷಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ತಲುಪಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸರ್ಕಾರದ ಗೋಧಿ ಸಂಗ್ರಹಣೆಯಲ್ಲಿ ಶೇ 30ರಷ್ಟು ಕಡಿಮೆಯಾಗಿದೆ ಎಂದು ಅಂದಾಜಿಸಲಾಗಿದೆ. ಭವಿಷ್ಯದಲ್ಲಿ ಇದು ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. 

Follow Us:
Download App:
  • android
  • ios