ದೇಶವನ್ನು ಕಾಡುತ್ತಿರುವ 2 ಬೃಹತ್ ಸಮಸ್ಯೆಗಳು| ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಮೋದಿ ಉಪಾಯ| ಉದ್ಯೋಗಾವಕಾಶ ಸೃಷ್ಟಿ ಮತ್ತು ಆರ್ಥಿಕ ಅಭಿವೃದ್ಧಿಗೆ ಮೋದಿ ನೇತೃತ್ವದಲ್ಲಿ 2 ಸಮಿತಿ| ಉನ್ನತ ಮಟ್ಟದ ಸಚಿವರ ಸಮಿತಿ ರಚಿಸಿದ ಪ್ರಧಾನಿ ಮೋದಿ| ಮೋದಿ ರಚಿಸಿದ ಸಮಿತಿಯಲ್ಲಿ ಘಟಾನುಘಟಿ ನಾಯಕರು| ಕೇಂದ್ರ ಬಜೆಟ್‌ಗೂ ಮುನ್ನ ಸಮಿತಿಯಿಂದ ವರದಿ ಸಲ್ಲಿಕೆ|  

ನವದೆಹಲಿ(ಜೂ.05): ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಮರುಕ್ಷಣವೇ ತೀವ್ರ ಚಟುವಟಿಕೆ ಆರಂಭಿಸಿರುವ ನರೇಂದ್ರ ಮೋದಿ, ದೇಶವನ್ನು ಕಾಡುತ್ತಿರುವ ಎರಡು ಪ್ರಮುಖ ಸಮಸ್ಯೆಗಳತ್ತ ತಮ್ಮ ಚಿತ್ತ ಹರಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉದ್ಯೋಗಾವಕಾಶ ಸೃಷ್ಟಿ ಮತ್ತು ಆರ್ಥಿಕ ಅಭಿವೃದ್ಧಿಯತ್ತ ಪ್ರಧಾನಿ ಮೋದಿ ತಮ್ಮ ಗಮನ ಕೇಂದ್ರೀಕರಿಸಿದ್ದು, ಈ ಎರಡು ಗಂಭೀರ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ಉನ್ನತ ಮಟ್ಟದ ಸಚಿವರ ಸಮಿತಿ ರಚಿಸಿದ್ದಾರೆ.

ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಬೆಳವಣಿಗೆ ಎರಡಕ್ಕೂ ಪ್ರತ್ಯೇಕ ಸಮಿತಿ ರಚಿಸಲಾಗಿದ್ದು, ಈ ಸಮಿತಿಗಳಿಗೆ ಖುದ್ದು ಪ್ರಧಾನಿ ಮೋದಿ ಅವರೇ ಮುಖ್ಯಸ್ಥರಾಗಿದ್ದಾರೆ.

ಕ್ಷಿಪ್ರಗತಿಯಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಮತ್ತು ತ್ವರಿತ ಆರ್ಥಿಕ ಬೆಳವಣಿಗೆ ದಾಖಲಿಸುವುದು ಈ ಎರಡೂ ಸಮಿತಿಗಳ ಜವಾಬ್ದಾರಿಯಾಗಿದೆ.

ಇನ್ನು ಪ್ರಧಾನಿ ಮೋದಿ ನೇತೃತ್ವದ ಉನ್ನತ ಮಟ್ಟಿದ ಸಚಿವರ ಸಮಿತಿಯತ್ತ ಗಮನಹರಿಸುವುದಾದರೆ...

ಆರ್ಥಿಕ ಬೆಳವಣಿಗೆ ಸಮಿತಿ:
ನರೇಂದ್ರ ಮೋದಿ
ಅಮಿತ್ ಶಾ
ನಿರ್ಮಲಾ ಸೀತಾರಾಮನ್
ನಿತಿನ್ ಗಡ್ಕರಿ
ಪಿಯೂಷ್ ಗೋಯಲ್

ಉದ್ಯೋಗಾವಕಾಶ ಸೃಷ್ಟಿ ಸಮಿತಿ:
ನರೇಂದ್ರ ಮೋದಿ
ಅಮಿತ್ ಶಾ
ನಿರ್ಮಾಲಾ ಸೀತಾರಾಮನ್
ಪಿಯೂಷ್ ಗೋಯಲ್
ನರೇಂದ್ರ ಸಿಂಗ್ ಥೋಮರ್
ರಮೇಶ್ ಪೋಕ್ರಿಯಾಲ್ ನಿಶಾಂಕ್
ಧರ್ಮೇಂದ್ರ ಪ್ರಧಾನ್
ಮಹೇಂದ್ರನಾಥ್ ಪಾಂಡೆ
ಸಂತೋಷ್ ಕುಮಾರ್ ಗಂಗ್ವಾರ್
ಹರ್ದಿಪ್ ಸಿಂಗ್ ಪುರಿ

ಮುಂಬರುವ ಜುಲೈ 5 ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದ್ದು, ಈ ಎರಡೂ ಸಮಿತಿಗಳು ಅದಕ್ಕೆ ಪೂರಕವಾಗಿ ಕೆಲಸ ಮಾಡಲಿವೆ ಎಂದು ಹೇಳಲಾಗಿದೆ.