ಆಯುಷ್ಮಾನ್ ಭಾರತ್ ಯೋಜನೆಯಡಿ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ. ಅರ್ಹತೆ, ಅರ್ಜಿ ಸಲ್ಲಿಕೆ ಮತ್ತು ಪ್ರಯೋಜನಗಳ ಕುರಿತು ಮಾಹಿತಿ.
ಭಾರತ ಸರ್ಕಾರದ ವೈದ್ಯಕೀಯ ವಿಮಾ ಯೋಜನೆಯಾದ ಆಯುಷ್ಮಾನ್ ಭಾರತ್ ಯೋಜನೆ (PMJAY) ಅಡಿಯಲ್ಲಿ ರೂ.5 ಲಕ್ಷದವರೆಗೆ ನಗದು ರಹಿತ ಚಿಕಿತ್ಸೆ ನೀಡಲಾಗುತ್ತದೆ. ಆಯುಷ್ಮಾನ್ ಕಾರ್ಡ್ಗೆ ಅರ್ಹತೆ, ಅರ್ಜಿ ಪ್ರಕ್ರಿಯೆ ಮತ್ತು ಸೌಲಭ್ಯಗಳ ಬಗ್ಗೆ ಎಲ್ಲ ಮಾಹಿತಿ ಇಲ್ಲಿದೆ.
ಆಯುಷ್ಮಾನ್ ಭಾರತ್ ಯೋಜನೆ ಭಾರತ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯನ್ನು ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (PMJAY) ಎಂದೂ ಕರೆಯಲಾಗುತ್ತದೆ. ಆರ್ಥಿಕವಾಗಿ ಹಿಂದುಳಿದವರು ಆಯುಷ್ಮಾನ್ ಭಾರತ್ ಯೋಜನೆಯ ಲಾಭ ಪಡೆಯಬಹುದು. ದೇಶದ ಕೋಟಿಗಟ್ಟಲೆ ಜನರು ಈ ಯೋಜನೆಯನ್ನು ಬಳಸುತ್ತಿದ್ದಾರೆ. ಆಯುಷ್ಮಾನ್ ಭಾರತ್ ಕಾರ್ಡ್ನ ಸಹಾಯದಿಂದ, 30 ಸಾವಿರಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ರೂ.5 ಲಕ್ಷದವರೆಗೆ ನಗದು ರಹಿತ ಚಿಕಿತ್ಸೆ ಪಡೆಯಬಹುದು. ನೀವಿನ್ನೂ ಈ ಯೋಜನೆಯನ್ನು ಬಳಸಿಕೊಳ್ಳದಿದ್ದರೆ, ಈ ಮುಖ್ಯ ವಿಷಯಗಳ ಬಗ್ಗೆ ತಿಳಿದುಕೊಳ್ಳಿ.
ಆಯುಷ್ಮಾನ್ ಭಾರತ್ ವೈದ್ಯ ವಿಮಾ ಯೋಜನೆ ಎಂದರೇನು?
ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (PMJAY) ಅಡಿಯಲ್ಲಿ ನೋಂದಾಯಿಸಿದವರಿಗೆ ಆಯುಷ್ಮಾನ್ ಕಾರ್ಡ್ ನೀಡಲಾಗುತ್ತದೆ. ಆಯುಷ್ಮಾನ್ ಭಾರತ್ ಯೋಜನೆ ಭಾರತದಲ್ಲಿ ಶೇ.40 ಬಡವರಿಗೆ ಉಚಿತ ಆರೋಗ್ಯ ವಿಮೆ ನೀಡುತ್ತದೆ. ಈ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 23, 2018 ರಂದು ಜಾರ್ಖಂಡ್ನ ರಾಂಚಿಯಲ್ಲಿ ಪ್ರಾರಂಭಿಸಿದರು. ಈ ಯೋಜನೆ ಅಡಿಯಲ್ಲಿ, ಕುಟುಂಬಗಳಿಗೆ ಪ್ರತಿ ವರ್ಷ ರೂ.5 ಲಕ್ಷದವರೆಗೆ ಉಚಿತ ನಗದು ರಹಿತ ಚಿಕಿತ್ಸಾ ಸೌಲಭ್ಯ ನೀಡಲಾಗುತ್ತದೆ. ಮಹಿಳೆಯರು ನಾರ್ಮಲ್ ಡೆಲಿವರಿಯನ್ನು ಉಚಿತವಾಗಿ ಮಾಡಿಕೊಳ್ಳಬಹುದು. ಕಾರ್ಡಿನಲ್ಲಿ 9000 ರೋಗಗಳಿಗೆ ಚಿಕಿತ್ಸೆ ನೀಡಬಹುದಾಗಿದ್ದು, ಇದು ವಿಶ್ವದ ಅತಿದೊಡ್ಡ ಸರ್ಕಾರಿ ಆರೋಗ್ಯ ನಿಧಿ ಯೋಜನೆಯಾಗಿದೆ.
ಬಳಕೆದಾರ ಪೋರ್ಟಲ್ನಲ್ನಲ್ಲಿ ಲಭ್ಯವಿರುವ ವೈಶಿಷ್ಟ್ಯಗಳು
ಆಧಾರ್ ಲಿಂಕ್: ಆಯುಷ್ಮಾನ್ ಕಾರ್ಡ್ ಬಳಕೆದಾರರು ಆಧಾರ eKYC ಪ್ರಕ್ರಿಯೆಗೆ ಹೋಗದೇ ತಮ್ಮ ಆಧಾರ್ ಸಂಖ್ಯೆಯನ್ನು ನೀಡಿದ ಕಾರ್ಡಿನೊಂದಿಗೆ ಲಿಂಕ್ ಮಾಡಬಹುದು.
ಸದಸ್ಯರ ಸೇರ್ಪಡೆ: ಈ ವೈಶಿಷ್ಟ್ಯವು ಬಳಕೆದಾರರಿಗೆ ಈಗಾಗಲೇ ಇರುವ ಕುಟುಂಬದಲ್ಲಿ ಹೊಸ ಸದಸ್ಯರನ್ನು ಸೇರಿಸುವ ಆಯ್ಕೆಯನ್ನು ನೀಡುತ್ತದೆ.
eKYC ನವೀಕರಣ: ಬಳಕೆದಾರರು ಹೊಸ ಫೋಟೋ ಮತ್ತು ವಿಳಾಸವನ್ನು ನವೀಕರಿಸಲು eKYC ಪ್ರಕ್ರಿಯೆಯನ್ನು ಮತ್ತೆ ಮಾಡಬಹುದು.
ಆಯುಷ್ಮಾನ್ ಕಾರ್ಡ್ ಸ್ಥಿತಿ: ಈ ಆಯ್ಕೆಯ ಸಹಾಯದಿಂದ, ಆಯುಷ್ಮಾನ್ ಕಾರ್ಡ್ಗೆ ಅಪ್ಲೈ ಮಾಡಿದ್ದಾರೆ ಸ್ಟೇಟಸ್ ಪರಿಶೀಲಿಸಬಹುದು.
ಯಾರು ಅರ್ಜಿ ಸಲ್ಲಿಸಬಹುದು?
ಗ್ರಾಮೀಣ ಪ್ರದೇಶದವರಿಗೆ ಅರ್ಹತೆ: ಮಣ್ಣಿನ ಗೋಡೆ ಮತ್ತು ಛಾವಣಿ ಹೊಂದಿರುವ ಒಂದು ಕೋಣೆಯ ಮನೆಗಳನ್ನು ಹೊಂದಿರುವ ಗ್ರಾಮೀಣ ಜನರು.
ನಗರ ಪ್ರದೇಶದವರಿಗೆ ಅರ್ಹತೆ: ಕಸ ಸಂಗ್ರಹಕಾರರು, ಭಿಕ್ಷುಕರು, ಮನೆ ಸಹಾಯಕರು, ಸ್ವಚ್ಛತಾ ಕಾರ್ಯಕರ್ತರು, ಎಲೆಕ್ಟ್ರೀಷಿಯನ್ಸ್, ಮೆಕಾನಿಕ್ಸ್, ದುರಸ್ತಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ಮುಂತಾದವರು ಅರ್ಜಿ ಸಲ್ಲಿಸಬಹುದು.
ಆಯುಷ್ಮಾನ್ ಕಾರ್ಡ್ ಪ್ರಯೋಜನಗಳು
- ಆಸ್ಪತ್ರೆ ಚಿಕಿತ್ಸೆಗಾಗಿ ಒಂದು ಕುಟುಂಬಕ್ಕೆ ವರ್ಷಕ್ಕೆ ರೂ.5 ಲಕ್ಷದವರೆಗೆ ವಿಮಾ.
- 12 ಕೋಟಿ ಕುಟುಂಬಗಳು, ಅಂದರೆ ಸುಮಾರು 50 ಕೋಟಿ ಜನರು ಈ ಸೌಲಭ್ಯದ ಲಾಭವನ್ನು ಪಡೆಯಬಹುದು.
- ಆಸ್ಪತ್ರೆಗಳಲ್ಲಿ ನಗದು ರಹಿತ ಮತ್ತು ಪೇಪರ್ಲೆಸ್ ಚಿಕಿತ್ಸೆಗೆ ನೆರವಾಗಲಿದೆ.
- ಆಸ್ಪತ್ರೆಯಲ್ಲಿ ಉಳಿಯಲು ಹೆಚ್ಚು ಹಣ ಖರ್ಚಾಗುವುದಿಲ್ಲ.
- ಯಾವುದೇ ಆರ್ಥಿಕ ಸಮಸ್ಯೆ ಇಲ್ಲದೆ ಅಗತ್ಯ ಆರೋಗ್ಯ ಸೇವೆಗಳನ್ನು ಪಡೆಯಬಹುದು.
ದಾಖಲೆಗಳೇನು ಬೇಕು?
- ಆಧಾರ್ ಕಾರ್ಡ್
- ಕುಟುಂಬದ ಐಡಿ ಕಾರ್ಡ್
- ಆದಾಯ ಪ್ರಮಾಣಪತ್ರ
- ವಿಳಾಸ ಪ್ರಮಾಣಪತ್ರ
- ಬ್ಯಾಂಕ್ ಸಂಬಂಧಿಸಿದ ಮುಖ್ಯ ದಾಖಲೆಗಳು
ನೋಂದಾಯಿಸುವುದು ಹೇಗೆ?
ಆನ್ಲೈನ್ ಅರ್ಜಿ ಪ್ರಕ್ರಿಯೆ: PMJAY ಅಧಿಕೃತ ವೆಬ್ಸೈಟ್ಗೆ ಹೋಗಿ 'ನಾನು ಅರ್ಹನೇ?' ಎಂಬುದನ್ನು ಕ್ಲಿಕ್ ಮಾಡಿ. ಅರ್ಹರಾಗಿದ್ದರೆ, NHA ಪೋರ್ಟಲ್ಗೆ ಮರುನಿರ್ದೇಶಿಸಲಾಗುತ್ತದೆ. ಅಲ್ಲಿ ಬಳಕೆದಾರ ಆಯ್ಕೆ ಆರಿಸಿ. ನಿಮ್ಮ ಮೊಬೈಲ್ ಸಂಖ್ಯೆ, ಕ್ಯಾಪ್ಚಾ ಕೋಡ್ ನಮೂದಿಸಿ. OTP ನಮೂದಿಸಿ ಲಾಗಿನ್ ಮಾಡಿ.
ಆಫ್ಲೈನ್ ಪ್ರಕ್ರಿಯೆ: ಹತ್ತಿರದ ಸರ್ಕಾರಿ ಆಸ್ಪತ್ರೆ ಅಥವಾ ಪಟ್ಟಿ ಮಾಡಲಾದ ಖಾಸಗಿ ಆಸ್ಪತ್ರೆಗೆ ಹೋಗಿ ಆಯುಷ್ಮಾನ್ ಕಾರ್ಡ್ ಪಡೆಯಬಹುದು.
ಸ್ಟೇಟಸ್ ಚೆಕ್ ಮಾಡೋದು ಹೇಗೆ?
*PMJAY ಬಳಕೆದಾರ ಪೋರ್ಟಲ್ಗೆ ಲಾಗಿನ್ ಮಾಡಿ.
*ಕ್ಯಾಪ್ಚಾ ಕೋಡ್ ಮತ್ತು ಮೊಬೈಲ್ ಸಂಖ್ಯೆ ನಮೂದಿಸಿ 'ಲಾಗಿನ್' ಬಟನ್ ಕ್ಲಿಕ್ ಮಾಡಿ. ಮೊಬೈಲ್ಗೆ OTP ಬರುತ್ತದೆ.
*OTP ಮತ್ತು ಇನ್ನೊಂದು ಕ್ಯಾಪ್ಚಾ ಕೋಡ್ ನಮೂದಿಸಿ. ನಂತರ 'ಲಾಗಿನ್' ಬಟನ್ ಕ್ಲಿಕ್ ಮಾಡಿ.
*'Search' ಆಯ್ಕೆಯಲ್ಲಿ, ನಿಮ್ಮ ರಾಜ್ಯ, ಜಿಲ್ಲೆ, ಉಪ ಯೋಜನೆ ಮತ್ತು ಗುರುತಿಸುವಿಕೆ ವಿಧಾನವನ್ನು ಆರಿಸಿ.
*ಈಗ ನಿಮ್ಮ ಹೆಸರನ್ನು ಹುಡುಕಿ, 'ಕಾರ್ಡ್ ಸ್ಥಿತಿ' ಕಾಲಮ್ನಲ್ಲಿ PMJAY ಕಾರ್ಡ್ ಸ್ಟೇಟಸ್ ಪರಿಶೀಲಿಸಿ.
ಆಯುಷ್ಮಾನ್ ಕಾರ್ಡ್ ಸಹಾಯ ಸಂಖ್ಯೆ
ಆಯುಷ್ಮಾನ್ ಕಾರ್ಡ್ ಸಂಬಂಧಿತಸಿದ ಯಾವುದೇ ಮಾಹಿತಿಯನ್ನು ತಿಳಿಯಲು, 14555 ಸಹಾಯ ಸಂಖ್ಯೆಗೆ ಕರೆ ಮಾಡಿ. ಔಷಧ ಅಥವಾ ಸೇವೆ ಸಂಬಂಧಿಸಿದ ಯಾವುದೇ ಸಮಸ್ಯೆಗೆ, ತಕ್ಷಣ 1800-111-565 ಸಂಖ್ಯೆಗೆ ಕರೆ ಮಾಡಬಹುದು. ಆಸ್ಪತ್ರೆಯಲ್ಲಿ ಹೆಚ್ಚು ಹಣ ಕೇಳಿದರೆ, ಅದರ ಬಗ್ಗೆ ದೂರು ನೀಡಿ.
FAQ
ಇಡೀ ಕುಟುಂಬವೂ ಆಯುಷ್ಮಾನ್ ಕಾರ್ಡ್ ಬಳಸಬಹುದೇ?
ಹೌದು, ಇಡೀ ಕುಟುಂಬವೂ ಆಯುಷ್ಮಾನ್ ಕಾರ್ಡ್ ಬಳಸಬಹುದು. ಕುಟುಂಬದ ಸದಸ್ಯ ಯಾರಾದರೂ ಅನಾರೋಗ್ಯಕ್ಕೆ ಒಳಗಾದರೆ ರೂ.1 ಲಕ್ಷದವರೆಗೆ ವೈದ್ಯಕೀಯ ವಿಮಾ ನೀಡಲಾಗುತ್ತದೆ.
ಆಯುಷ್ಮಾನ್ ಕಾರ್ಡ್ ಅಡಿಯಲ್ಲಿ ಯಾವ ಸೇವೆಗಳು ಲಭ್ಯ?
ಆಯುಷ್ಮಾನ್ ಕಾರ್ಡ್ ಅಡಿಯಲ್ಲಿ ದ್ವಿತೀಯ ಮತ್ತು ತೃತೀಯ ಮಟ್ಟದ ಆಸ್ಪತ್ರೆಗಳಲ್ಲಿ ರೂ.5 ಲಕ್ಷದವರೆಗೆ ವೈದ್ಯಕೀಯ ವಿಮಾ ಲಭ್ಯವಿದೆ.
ವಯಸ್ಕರು ಆಯುಷ್ಮಾನ್ ಕಾರ್ಡಿಗೆ ಅರ್ಹರೇ?
70 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲ ವಯಸ್ಕರು ಆಯುಷ್ಮಾನ್ ಕಾರ್ಡಿನ ಲಾಭ ಪಡೆಯಬಹುದು.
ಇದನ್ನೂ ಓದಿ:ಎಷ್ಟು ವರ್ಷದ ಬಳಿಕ ಆಧಾರ್ ಕಾರ್ಡ್ ಫೋಟೋ ಚೇಂಜ್ ಮಾಡಿಸಬೇಕು?
ಆಯುಷ್ಮಾನ್ ಕಾರ್ಡ್ ನಗದು ರಹಿತ ಚಿಕಿತ್ಸೆ ನೀಡುತ್ತದೆಯೇ?
ಹೌದು! ಆಯುಷ್ಮಾನ್ ಭಾರತ್ ಯೋಜನೆಯ ಸೌಲಭ್ಯವನ್ನು ನೀಡುವ ಆಸ್ಪತ್ರೆಗಳು ನಗದು ರಹಿತ ಚಿಕಿತ್ಸೆ ನೀಡುತ್ತವೆ. ಇದರ ಅರ್ಥ ಯಾವುದೇ ಅನಾರೋಗ್ಯಕ್ಕೆ ಒಳಗಾದ ವ್ಯಕ್ತಿಯು ಆಸ್ಪತ್ರೆಯಲ್ಲಿ ಹಣ ಠೇವಣಿ ಮಾಡುವ ಅಗತ್ಯವಿಲ್ಲ. ಕಾರ್ಡಿನ ಸಹಾಯದಿಂದ ಮಾತ್ರ, ಆಸ್ಪತ್ರೆಯಲ್ಲಿ ರೂ.5 ಲಕ್ಷದವರೆಗೆ ಚಿಕಿತ್ಸೆ ನೀಡಲಾಗುತ್ತದೆ.
ಆಯುಷ್ಮಾನ್ ಭಾರತ್ ಯೋಜನೆ ಕಾರ್ಡಿನ ಸಹಾಯದಿಂದ ಎಲ್ಲ ವೈದ್ಯಕೀಯ ಖರ್ಚುಗಳನ್ನು ಪಡೆಯಬಹುದೇ?
ಅದು ಹಾಗಲ್ಲ. ಆಯುಷ್ಮಾನ್ ಭಾರತ್ ಯೋಜನೆ ಕಾರ್ಡಿನಿಂದ ಎಲ್ಲ ರೀತಿಯ ಆರೋಗ್ಯ ಖರ್ಚುಗಳನ್ನು ಭರ್ತಿ ಮಾಡಲಾಗುವುದಿಲ್ಲ. ಈ ಸೇವೆ ರೂ.5 ಲಕ್ಷದವರೆಗೆ ಮಾತ್ರ ವಿಮಾ ನೀಡುತ್ತದೆ. ಒಬ್ಬ ವ್ಯಕ್ತಿ ರೂ.5 ಲಕ್ಷಕ್ಕಿಂತ ಹೆಚ್ಚು ಖರ್ಚು ಮಾಡಿದರೆ, ಆಯುಷ್ಮಾನ್ ಕಾರ್ಡ್ನಿಂದ ಪಡೆಯಲು ಸಾಧ್ಯವಿಲ್ಲ. ಆದರೆ ಖಾಸಗಿ ಆರೋಗ್ಯ ವಿಮಾ ಕಂಪನಿಗಳು ವ್ಯಾಪಕ ವಿಮೆ ನೀಡುತ್ತವೆ. ಇದರಲ್ಲಿ ರೂ.6 ಕೋಟಿಯವರೆಗಿನ ಮೊತ್ತವನ್ನು ಆಯ್ಕೆ ಮಾಡಬಹುದು. ನೀವು ಹೆಚ್ಚುವರಿ ವಿಮೆ ಬಯಸಿದರೆ, ಖಾಸಗಿ ಆರೋಗ್ಯ ವಿಮಾ ಕಂಪನಿಯಿಂದ ವಿಮಾ ಪಡೆಯಬೇಕು.
ಆಯುಷ್ಮಾನ್ ಭಾರತ್ ಯೋಜನೆ ಕಾರ್ಡ್ ಬಳಸದಿದ್ದರೆ ಅದು ಕಾಲಾವಧಿ ಮುಗಿಯುತ್ತದೆಯೇ?
ನೀವು 1 ವರ್ಷದೊಳಗೆ ಕಾರ್ಡ್ ಅನ್ನು ಬಳಸದಿದ್ದರೂ ಅದು ಕಾಲಾವಧಿ ಮುಗಿಯುವುದಿಲ್ಲ. ಕಾರ್ಡ್ ಸ್ವಯಂಚಾಲಿತವಾಗಿ ನವೀಕರಣಗೊಳ್ಳುತ್ತದೆ. ಅಂದರೆ ನೀವು ಚಿಂತಿಸುವ ಅಗತ್ಯವಿಲ್ಲ. ನೀವು ಬಯಸಿದಾಗಲೆಲ್ಲಾ ಕಾರ್ಡ್ ಅನ್ನು ಬಳಸಿ ಈ ಸೌಲಭ್ಯವನ್ನು ಪಡೆಯಬಹುದು.
ಇದನ್ನೂ ಓದಿ: 12 ಅಂಕೆಯ ಆಧಾರ್ ಕಾರ್ಡ್ ಕುರಿತ ಸಂಪೂರ್ಣ ಮಾಹಿತಿ
