ಮಹಾನಗರದ ನಾಗರಿಕರಿಗೆ ಬೆಂಗಳೂರಿನ ಇತಿಹಾಸ ಅರಿಯಲು, ತಿಳಿಯಲು ಒಂದೊಳ್ಳೆ ಅವಕಾಶ ಲಭ್ಯವಾಗಿದೆ. ಏನು ಮತ್ತು ಹೇಗೆ ಇಲ್ಲಿದೆ ಫುಲ್ ಡಿಟೇಲ್ಸ್..

ಮಹಾನಗರದ ನಾಗರಿಕರಿಗೆ ಬೆಂಗಳೂರಿನ ಇತಿಹಾಸ ಅರಿಯಲು, ತಿಳಿಯಲು ಒಂದೊಳ್ಳೆ ಅವಕಾಶ ಲಭ್ಯವಾಗಿದೆ. ಏನು ಮತ್ತು ಹೇಗೆ ಇಲ್ಲಿದೆ ಫುಲ್ ಡಿಟೇಲ್ಸ್..

Add Asianetnews Kannada as a Preferred SourcegooglePreferred

ಬೆಂಗಳೂರು[ನೇ. 15] ಮೇ 26 ಭಾನುವಾರ ಮುಂಜಾನೆ ನಿಮ್ಮ ಸಮಯವನ್ನು ಇದಕ್ಕಾಗಿ ಮೀಸಲಿಡುವುದು ಒಳಿತು. ಬೆಂಗಳೂರಿನ ಪುರಾತನ ಇತಿಹಾಸ ಮತ್ತು ದೇವಾಲಯಗಳ ಭವ್ಯ ಪರಂಪರೆ ತಿಳಿದುಕೊಳ್ಳಲು ಒಂದೊಳ್ಳೆ ಅವಕಾಶ ನಿಮ್ಮ ಮುಂದೆ ಇದೆ.

ಮೇ. 26 ರಂದು ಬೆಳಗ್ಗೆ 6.30ಕ್ಕೆ ಚಾಮರಾಜಪೇಟೆ ಕೋಟೆ ವೆಂಕಟೇಶ್ವರ ದೇವಾಯದಿಂದ 5 ಕಿಮೀ ದೂರ ಹೆರಿಟೆಜ್ ವಾಕ್ ಕ್ರಮಿಸಲಿದೆ. ವೆಂಕಟೇಶ್ವರ ದೇವಾಲಯ, ಗವಿ ಗಂಗಾಧರೇಶ್ವರ ದೇವಾಲಯ, ರಾಮಾಂಜನೇಯ ಗುಡ್ಡ, ದೊಡ್ಡ ಗಣಪತಿ ದೇವಾಲಯ, ಬಸವನಗುಡಿ, ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಸಮಗ್ರ ಮಾಹಿತಿ ಪಡೆದುಕೊಂಡು ನಿಮ್ಮ ತಿಳಿವಳಿಕೆ ಆಳವನ್ನು ವಿಸ್ತರಿಸಿಕೊಳ್ಳಬಹುದು. ಹೂಂ ಮತ್ತೆ ಮರೆಯಬೇಡಿ ವಿದ್ಯಾರ್ಥಿ ಭವನದ ದೋಸೆಯೂ ನಿಮಗೆ ಕಾದಿದೆ.. 

ಭಾಗವಹಿಸಲು ಇಚ್ಛಿಸುವವರು 200 ರೂ. ಕೊಟ್ಟು ನೋಂದಣಿ ಮಾಡಿಕೊಳ್ಳಬೇಕಿದೆ. ಹೆಚ್ಚಿನ ಮಾಹಿತಿಗೆ 91 9108630444 ವಾಟ್ಸಪ್ 91 9900821000 ಮತ್ತು https://www.pureprayer.com/ ಕ್ಕೆ ವಿಸಿಟ್ ಮಾಡಬಹುದು.