Asianet Suvarna News Asianet Suvarna News

ಗೋಪಾಲಯ್ಯಗೆ ಟಿಕೆಟ್‌ : ಹರೀಶ್‌ ಬೆಂಬಲಿಗರಿಂದ ಕಚೇರಿ ಮುತ್ತಿಗೆ

ಮಹಾಲಕ್ಷ್ಮೀ ಲೇಔಟ್‌ ವಿಧಾನಸಭಾ ಕ್ಷೇತ್ರದಿಂದ ಅನಹರ್ ಶಾಸಕ ಕೆ.ಗೋಪಾಲಯ್ಯ ಅವರಿಗೆ ಪಕ್ಷದ ಟಿಕೆಟ್‌ ನೀಡಿದ್ದರಿಂದ ಆಕ್ರೋಶಗೊಂಡ ಮಾಜಿ ಉಪಮೇಯರ್‌ ಎಸ್‌.ಹರೀಶ್‌ ಮತ್ತವರ ಬೆಂಬಲಿಗರು ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. 

Harish Supporters unhappy over Gopalaiah Get Mahalakshmi Layout Ticket
Author
Bengaluru, First Published Nov 15, 2019, 7:54 AM IST

ಬೆಂಗಳೂರು [ನ. 15]: ಮಹಾಲಕ್ಷ್ಮೀ ಲೇಔಟ್‌ ವಿಧಾನಸಭಾ ಕ್ಷೇತ್ರದಿಂದ ಅನಹರ್ ಶಾಸಕ ಕೆ.ಗೋಪಾಲಯ್ಯ ಅವರಿಗೆ ಪಕ್ಷದ ಟಿಕೆಟ್‌ ನೀಡಿದ್ದರಿಂದ ಆಕ್ರೋಶಗೊಂಡ ಮಾಜಿ ಉಪಮೇಯರ್‌ ಎಸ್‌.ಹರೀಶ್‌ ಮತ್ತವರ ಬೆಂಬಲಿಗರು ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗುರುವಾರ ಮಧ್ಯಾಹ್ನ ಗೋಪಾಲಯ್ಯ ಅವರಿಗೆ ಟಿಕೆಟ್‌ ಘೋಷಣೆಯಾದ ಬಳಿಕ ಸಂಜೆ ಆಕಾಂಕ್ಷಿಯೂ ಆಗಿದ್ದ ಹರೀಶ್‌ ಅವರು ತಮ್ಮ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಗೆ ಆಗಮಿಸಿದರು. 

ಅನೇಕರು ಪಕ್ಷದ ಕಚೇರಿ ಪ್ರವೇಶಿಸಿ ಘೋಷಣೆ ಕೂಗಿದರು. ನಂತರ ಹರೀಶ್‌ ಅವರೊಂದಿಗೆ ಸಚಿವರಾದ ವಿ.ಸೋಮಣ್ಣ ಮತ್ತಿತರ ಮುಖಂಡರು ಮಾತುಕತೆ ನಡೆಸಿ ಮನವೊಲಿಸುವ ಪ್ರಯತ್ನ ನಡೆಸಿದರು.

Follow Us:
Download App:
  • android
  • ios