ನಗರದ ಕೋಟೆ ಮೇಲೆ 64 ಅಡಿಯ ಕನ್ನಡಧ್ವಜ ಹಾರಾಟ|ನವ ಕರ್ನಾಟಕ ಯುವಶಕ್ತಿ ಸಂಘಟನೆಯ ಕಾರ್ಯಕರ್ತರಿಂದ ಧ್ವಜಾರೋಹಣ|
ಬಳ್ಳಾರಿ[ನ.2]: ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ನಗರದ ಐತಿಹಾಸಿಕ ಕೋಟೆಯ ಮೇಲೆ ನವ ಕರ್ನಾಟಕ ಯುವಶಕ್ತಿ ಸಂಘಟನೆಯ ಕಾರ್ಯಕರ್ತರು 64 ಅಡಿ ಎತ್ತರದ ಬೃಹತ್ ಕನ್ನಡ ಧ್ವಜಾರೋಹಣ ಮಾಡಿದ್ದಾರೆ .
Add Asianetnews Kannada as a Preferred Source

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಶ್ರೀಧರ್ ಮಲ್ನಾಡು ಧ್ವಜಾರೋಹಣ ಮಾಡಿದರು. ನವ ಕರ್ನಾಟಕ ಯುವಶಕ್ತಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಸಿದ್ಮಲ್ ಮಂಜುನಾಥ್, ಜಿಲ್ಲಾಧ್ಯಕ್ಷ ರಮೇಶ್, ಕೇಣಿ ಬಸವರಾಜ್, ಹಲುಕುಂದಿ ರವಿಕುಮಾರ್, ರಾಮಚಂದ್ರ, ಬಿ. ಚಂದ್ರಶೇಖರ ಆಚಾರಿ, ಕೇದಾರನಾಥ, ಪಂಪಾಪತಿ, ಸೂರಜ್ ಮತ್ತಿತರರಿದ್ದರು.
