Asianet Suvarna News Asianet Suvarna News

ಈ ವಾರ ಹೇಗಿದೆ ನಿಮ್ಮ ರಾಶಿ ಫಲ?

ಈ ವಾರ ಹೇಗಿದೆ ನಿಮ್ಮ ರಾಶಿ ಫಲ?

Weekly Horoscope 23
Author
Bengaluru, First Published Sep 23, 2018, 7:02 AM IST

ಮೇಷ

ಹೊಸ ವ್ಯಕ್ತಿಯ ಪರಿಚಯದಿಂದ ಸಂತಸಗೊಳ್ಳುವಿರಿ.
ಹಳೆಯ ಸಾಲಗಳಿಂದ ಮುಕ್ತಿ ದೊರೆಯಲಿದೆ.
ಉದ್ಯೋಗಸ್ಥರಿಗೆ ಆದಾಯದಲ್ಲಿ ಏರಿಕೆ. ಪೋಷಕರ
ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ಒತ್ತಡದಲ್ಲಿ ಕೆಲಸ ನಿರ್ವ
ಹಿಸಬೇಕಾದ ಅನಿವಾರ್ಯತೆ ಇದೆ. ಖರ್ಚಿನಲ್ಲಿ ಹಿಡಿತವಿರಲಿ.
ಒಳ್ಳೆಯ ಕಾರ್ಯಗಳನ್ನು ಮುಂದೂಡುವುದು ಬೇಡ.

ವೃಷಭ

ತೀರ್ಮಾನಗಳನ್ನು ತೆಗೆದುಕೊಳ್ಳುವ ಮುನ್ನ ಹಿರಿಯರ
ಸಲಹೆ ಪಡೆದುಕೊಳ್ಳಿ. ಕಂಕಣ ಭಾಗ್ಯ ಕೂಡಿಬರಲಿದೆ.
ಆಸಕ್ತಿಯ ಕ್ಷೇತ್ರ ಆಯ್ಕೆ ಮಾಡಿಕೊಳ್ಳಿ. ಹಿಂದೆ ಮಾಡಿದ
ಕೆಲಸಕ್ಕೆ ಒಳ್ಳೆಯ ಫಲ ದೊರಕಲಿದೆ. ದುಡುಕಿನ ನಿರ್ಧಾರ ಬಿಟ್ಟು
ನಿಧಾನವಾಗಿ ಮುಂದುವರೆಯಿರಿ. ರೈತಾಪಿ ವರ್ಗಕ್ಕೆ ಹೆಚ್ಚಿನ
ಅನುಕೂಲವಾಗಲಿದೆ. ಶುಭ ಫಲ ದೊರೆಯಲಿದೆ.

ಮಿಥುನ

ಅನಿರೀಕ್ಷಿತ ಘಟನೆಗಳು ದೀರ್ಘ ಕಾಲದವರೆಗೂ
ಒಳಿತು ಮಾಡಲಿವೆ. ಮಿತವ್ಯಯಕ್ಕೆ ಹೆಚ್ಚು
ಪ್ರಾಮುಖ್ಯತೆ ನೀಡಿ. ಮನೆಯವರೊಂದಿಗೆ ದೂರದ
ಪ್ರಯಾಣ ಸಾಧ್ಯವಾಗಲಿದೆ. ಸ್ವಂತ ಮನೆಯ ಆಸೆಗೆ ಜೀವ
ಬರಲಿದೆ. ಔದ್ಯೋಗಿಕ ಪ್ರಗತಿ. ಬಂಧು ಬಳಗದಿಂದ ನಿಮ್ಮ
ಬೆಳವಣಿಗೆಗೆ ಪ್ರೋತ್ಸಾಹ ದೊರೆಯಲಿದೆ.

ಕಟಕ

ಕೈ ಹಾಕಿದ ಕೆಲಸಗಳೆಲ್ಲಕ್ಕೂ ಒಳ್ಳೆಯ ಫಲಿತಾಂಶ
ಸಿಗಲಿದೆ. ಮಕ್ಕಳ ಬಗ್ಗೆ ಅನಾವಶ್ಯಕ ಅನುಮಾನ ಬೇಡ.
ಹೆಂಡತಿಯ ಸಾಧನೆಗೆ ಹೆಗಲು ಕೊಟ್ಟು ನಿಲ್ಲುವಿರಿ.
ಶುಭ ಕಾರ್ಯಗಳು ಸನ್ನಿಹಿತ ವಾಗಲಿವೆ. ಹೊಸ ಸ್ನೇಹಿತರಿಂದ
ಆರ್ಥಿಕ ಸಹಾಯವಾಗಿದೆ. ಉದ್ದಿಮೆ ಸ್ಥಾಪಿಸುವವರಿಗೆ ಇದು
ಒಳ್ಳೆಯ ಕಾಲ. ವಿನಾಕಾರಣ ಕೋಪ ಬೇಡ.

ಸಿಂಹ

ಸೂಕ್ತ ನಿರ್ಧಾರಗಳಿಂದ ಮುಂದುವರೆಯಿರಿ.
ಅಧಿಕಾರದ ಸ್ಥಾನದಲ್ಲಿರುವವರು ಒತ್ತಡಕ್ಕೆ
ಸಿಲುಕಬೇಕಾಗುತ್ತದೆ. ಆರೋಗ್ಯದ ಕಡೆ
ಗಮನವಿರಲಿ. ಅನಾವಶ್ಯಕ ವಾಗಿ ಯಾವುದೇ ವಿಚಾರಗಳಲ್ಲಿ
ಸಕ್ರಿಯವಾಗು ವುದು ಬೇಡ. ಮಾತಿನ ಮೇಲೆ ಹೆಚ್ಚು ಹಿಡಿತ
ಸಾಧಿಸಿ. ಹಿರಿಯರಿಂದ ಪ್ರಶಂಸೆಗಳು ಹೆಚ್ಚಲಿವೆ.

ಕನ್ಯಾ

ಬಂಧುಗಳಿಗೆ ಆರ್ಥಿಕ ಸಹಾಯ ಮಾಡುವಿರಿ.
ಸರಕಾರಿ ನೌಕರಿ ಸಿಕ್ಕುವ ಅವಕಾಶಗಳು ಅಧಿಕ.
ಗೆಳೆಯರ ಮಾತಿಗೆ ಹೆಚ್ಚು ಬೆಲೆ ನೀಡುವಿರಿ.
ರಾಜಕೀಯದಲ್ಲಿ ಆಸಕ್ತಿ ಹೆಚ್ಚಾಗಲಿದೆ. ತಂದೆ-ತಾಯಿಗಳ
ಬೆಂಬಲದಿಂದ ನೂತನ ಉದ್ಯಮವನ್ನು ಆರಂಭಮಾಡುವಿರಿ.
ಸ್ನೇಹಿತರೊಂದಿಗೆ ಆರ್ಥಿಕ ವ್ಯವಹಾರ ಬೇಡ. 

ತುಲಾ

ಅಳೆದು ತೂಗಿ ನಿರ್ಧಾರ ಕೈಗೊಳ್ಳಿ. ನೆಮ್ಮದಿಯ
ನಾಳೆಗಾಗಿ ಇಂದಿನಿಂದಲೇ ತಯಾರಿ ಮಾಡಿಕೊಳ್ಳಿ.
ಒತ್ತಡದಿಂದ ಹೊರಗೆ ಬರುವಿರಿ. ಅಪರಿಚಿತ ವ್ಯಕ್ತಿಗಳ
ಬಗ್ಗೆ ಎಚ್ಚರಿಕೆ ಇರಲಿ. ದೂರದ ಪ್ರಯಾಣ ಮಾಡುವ ಅಗತ್ಯ
ಬರಲಿದೆ. ತಿ ಭಾವುಕತೆ ಒಳ್ಳೆಯದಲ್ಲ. ತಾಯಿ ಆರೋಗ್ಯದಲ್ಲಿ
ಸುಧಾರಣೆ. ಸಿನಿಮಾ ಕ್ಷೇತ್ರದಲ್ಲಿ ಇರುವವರಿಗೆ ಒಳ್ಳೆಯ ದಿನಗಳು

ವೃಶ್ಚಿಕ

ಓದುವ ಹವ್ಯಾಸ ಹೆಚ್ಚಾಗಲಿದೆ. ಅಗತ್ಯದ
ಖರ್ಚುಗಳಿಗೆ ಮಾತ್ರ ಪ್ರಾಧಾನ್ಯತೆ ನೀಡಿ. ಮಕ್ಕಳ
ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣಲಿದೆ. ಸಿಕ್ಕ ಅವಕಾಶ
ಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಿ. ಎಲ್ಲರೊಂದಿಗೂ
ಅತಿಯಾದ ಸಲುಗೆ ಬೇಡ. ದೂರದ ಪ್ರಯಾಣದಿಂದ ಮನಸ್ಸಿಗೆ
ನೆಮ್ಮದಿ ದೊರೆಯಲಿದೆ. ದುಡುಕಿನ ನಿರ್ಧಾರ ಬೇಡ.

ಧನಸ್ಸು

ಮನೆಯಲ್ಲಿ ಧಾರ್ಮಿಕ ಚಟುವಟಿಕೆಗಳಿಂದ ಶಾಂತಿ
ನೆಲೆಯಾಗ ಲಿದೆ. ಮಕ್ಕಳ ಪ್ರೀತಿಯಿಂದ ಹೆಚ್ಚು
ಸಂತೋಷಪಡುವಿರಿ. ಕೆಲಸ ಕಾರ್ಯಗಳಲ್ಲಿ ಒತ್ತಡ
ಹೆಚ್ಚಾಗಲಿದೆ. ಎಲ್ಲವನ್ನೂ ಶಾಂತ ಚಿತ್ತದಿಂದ ಎದುರಿಸಿದರೆ
ಒಳ್ಳೆಯ ಫಲ ದೊರಕಲಿದೆ. ಮಕ್ಕಳಿಗೆ ಸಮಯ ಮೀಸಲಿಡಿ.

ಮಕರ

ಅಂದುಕೊಂಡಿದ್ದರ ಕಡೆಗೆ ಗಮನ ಹರಿಸಲು
ಸಾಧ್ಯವಾಗುವುದಿಲ್ಲ. ನಿಮ್ಮ ಹತ್ತಿರದವರೊಂದಿಗೆ
ಮೃದುವಾಗಿ ವರ್ತಿಸಿ, ಆರ್ಥಿಕವಾಗಿ
ಲಾಭವಾಗಲಿದೆ. ಮಾಡುವ ಕೆಲಸದಲ್ಲಿ ಶ್ರದ್ಧೆ ಮುಖ್ಯ. ಮದುವೆ
ವಿಚಾರದಲ್ಲಿ ಒಳ್ಳೆಯದಾಗಲಿದೆ. ಹಿತೈಷಿಗಳ ಮಾತಿಗೆ ಬೆಲೆ ನೀಡಿ.

ಕುಂಭ

ದಿನಲ್ಲಿ ಆಸಕ್ತಿ ಹೆಚ್ಚಾಗಲಿದೆ. ನೂತನ ಸಂಬಂಧಗಳಿಂದ
ಹೆಚ್ಚು ಉಪಯೋಗವಾಗಲಿದೆ. ಸ್ನೇಹಿತರಿಗೆ ಸಹಾಯ
ಮಾಡಿ. ಒಂದೇ ದಿನದಲ್ಲಿ ಹೆಚ್ಚು ಓಡಾಟ
ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ.
ಆರೋಗ್ಯದಲ್ಲಿ ಏರುಪೇರು. ಆಸ್ತಿ ಖರೀದಿ ವಿಚಾರದಲ್ಲಿ ಎಚ್ಚರಿಕೆ
ವಹಿಸಿ ಹಾಗೂ ಶೀಘ್ರ ನಿರ್ಧಾರ ಬೇಡ. 

ಮೀನ

ಮಕ್ಕಳ ಬಗ್ಗೆ ಹೆಚ್ಚು ಅನುಮಾನ ಬೇಡ. ಅಗತ್ಯವಾದ
ವಿಚಾರಗಳ ಕಡೆಗೆ ಮಾತ್ರ ನಿಮ್ಮ ಗಮನವಿರಲಿ.
ಖರ್ಚು ಕಡಿಮೆ ಮಾಡಿಕೊಳ್ಳಿ. ಕೋರ್ಟ್ ವ್ಯಾಜ್ಯ
ಗಳಲ್ಲಿ ಮುನ್ನಡೆ ಸಿಗಲಿದೆ. ರಾಜಕೀಯದಲ್ಲಿರುವರಿಗೆ
ಜಂಚಾಟಗಳಿಂದ ಮುಕ್ತಿ ದೊರೆಯಲಿದೆ. ಆರೋಗ್ಯ ವೃದ್ಧಿ

Follow Us:
Download App:
  • android
  • ios