ವೈಕುಂಠ ಏಕಾದಶಿ: ಹೇಗಿತ್ತು ಸಂಭ್ರಮ?
ವೈಕುಂಠ ಏಕಾದಶಿ: ಆಸ್ತಿಕರಿಗೂ ಸೈ, ನಾಸ್ತಿಕರಿಗೂ ಜೈ
ವಿಷ್ಣುವಿನ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ವೈಕುಂಠ ಏಕಾದಶಿಯನ್ನು ಆಚರಿಸಲಾಗುತ್ತದೆ.
ಇಂದು ಉಪವಾಸ ಮಾಡಿದರೆ ವರ್ಷದಲ್ಲಿ ಬರುವ 23 ಏಕಾದಶಿಗೆ ಸಮವಾಗಿದ್ದು, ಹಿಂದೂಗಳಿಗೆ ವಿಶೇಷವಾದ ಈ ದಿನವನ್ನು ಜೈನರೂ ಆಚರಿಸುತ್ತಾರೆ.
ಹರಿಯನ್ನು ಜಪಿಸಿ... ವೇದ ಪುರಾಣದ ಪ್ರಕಾರ ಕಲಿಯುಗದಲ್ಲಿ ಶ್ರೀ ಕೃಷ್ಣನನ್ನು ಜಪಿಸಿದರೆ, ಶ್ರೇಷ್ಠ ಎಂಬ ನಂಬಿಕೆ ಇದೆ. ಈ ಮಂತ್ರ ಜಪಿಸುವುದರಿಂದ ಮನಸ್ಸಿಗೆ ನೆಮ್ಮದಿ ನೀಡುತ್ತದೆ ಹಾಗೂ ಮಾನಸಿಕವಾಗಿ ಮನುಷ್ಯನನ್ನು ಗಟ್ಟಿಯಾಗಿಸುತ್ತದೆ.
ಭಗವದ್ ಗೀತ ಓದ ಬೇಕು ಗೀತಾ ಜಯಂತಿಯೂ ವೈಕುಂಠ ಏಕಾದಶಿ ದಿನವೇ ಬರುತ್ತದೆ.
ಗೀತ ಜಯಂತಿ ಆಚರಿಸಲು ಕಾರಣ ಏನೆಂದರೆ ಈ ದಿನದಂದು ಶ್ರೀ ಕೃಷ್ಣ ಅರ್ಜುನನಿಗೆ ಆಧ್ಯಾತ್ಮಕ ಜ್ಞಾನ ಕಲ್ಪಿಸುತ್ತಾನೆ.
ಈ ದಿನ ಪರಮಾತ್ಮನ ದರ್ಶನ ಪಡೆಯುವ ಜನರು ಜೀವನ ಸಾರ್ಥಕವಾಯಿತೆಂದೇ ಭಾವಿಸುತ್ತಾರೆ.
ವಿಷ್ಣುವನ್ನು ದರ್ಶಿಸಿ.... ಇಂದು ವಿಷ್ಣುವಿನ ದೇವಸ್ಥಾನ ಅಥವಾ ಅವನ ಅವತಾರದಲ್ಲಿ ಒಂದಾಗಿರುವ ಗುಡಿಗೆ ಭೇಟಿ ನೀಡಬೇಕು.
ಉಪವಾಸ ಕಡ್ಡಾಯ ನೀವು ನಾಸ್ತಿಕರಾದರೂ ಈ ದಿನ ಉಪವಾಸ ಮಾಡುವುದು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು.
ದೇವಾಲಯದೊಳಗೆ ಪ್ರವೇಶಿಸಿದಾಕ್ಷಣ ದ್ವಾರವನ್ನು ದಾಟಿ ಹೊರ ಬರಬೇಕು.