Asianet Suvarna News Asianet Suvarna News

ಈ ರಾಶಿಯವರಿಗೆ ಅಹಿತಕರ ವರ್ತಮಾನ ಸಾಧ್ಯತೆ ಎಚ್ಚರ!

ಈ ರಾಶಿಯವರಿಗೆ ಅಹಿತಕರ ವರ್ತಮಾನ ಸಾಧ್ಯತೆ ಎಚ್ಚರ!

Special Horoscope 9 november 2018
Author
Bengaluru, First Published Nov 9, 2018, 6:56 AM IST

ಈ ರಾಶಿಯವರಿಗೆ ಅಹಿತಕರ ವರ್ತಮಾನ ಸಾಧ್ಯತೆ ಎಚ್ಚರ!

09-11-18 - ಶುಕ್ರವಾರ

ಶ್ರೀ ವಿಲಂಬಿ ನಾಮ ಸಂವತ್ಸರ
ದಕ್ಷಿಣಾಯನ
ಶರದೃತು
ಕಾರ್ತಿಕ ಮಾಸ
ಶುಕ್ಲ ಪಕ್ಷ
ದ್ವಿತೀಯ ತಿಥಿ
ಅನುರಾಧ ನಕ್ಷತ್ರ 

ರಾಹುಕಾಲ  10.37 ರಿಂದ 12.03
ಯಮಗಂಡ ಕಾಲ  02.57 ರಿಂದ 04.23
ಗುಳಿಕ ಕಾಲ  07.43 ರಿಂದ 09.10
 

ಮೇಷ ರಾಶಿ : ಆತ್ಮ ಸ್ಥೈರ್ಯ ಹೆಚ್ಚಲಿದೆ, ಹಣ ವ್ಯಯವಾಗಿ ಅದೇ ಹಣ ಮತ್ತೆ ಮರಳಿಬರಲಿದೆ, ಮಾನಸಿಕ ಖಿನ್ನತೆ ಉಂಟಾಗುತ್ತದೆ, ಕಾಲಿನ ನೋವು ತುಂಬ ಬಾಧಿಸಲಿದೆ, ದೂರದ ಊರಿಂದ ಬಂದ ಹೊಸ ವ್ಯಕ್ತಿಗಳು ಭೇಟಿಯಾಗುತ್ತಾರೆ.

ದೋಷಪರಿಹಾರ : ಅರ್ಧನಾರೀಶ್ವರ ದರ್ಶನ ಮಾಡಿ

ವೃಷಭ : ಮೂರು ಬಗೆಯ ವ್ಯಾಪಾರ ಸಿದ್ಧಿ, ಎರಡು ವ್ಯಾಪಾರದಲ್ಲಿ ಲಾಭ,  ಪ್ರಯಾಣದಲ್ಲಿ ಅನ್ನಪಾನಾದಿಗಳ ಅನುಕೂಲವಾಗುತ್ತದೆ,  ಮನೆ ಭಾಗದಲ್ಲಿ ಸ್ವಲ್ಪ ತೊಂದರೆ, ಅಶುಚಿಯಿಂದಾಗಿ ಮನಸಿಗೆ ಖಿನ್ನತೆ ಆವರಿಸಬಹುದು.     
ದೋಷ ಪರಿಹಾರ : ಗಣಪತಿ ಆರಾಧನೆ ಮಾಡಿ ಓಂ ಗಂ ಗಣಪತಯೇ ನಮ: ಪಠಿಸಿ

ಮಿಥುನ : ಬಲಗಣ್ಣಿಗೆ ಸ್ವಲ್ಪ ತೊಂದರೆಯಾಗಬಹುದು, ಅನ್ನ ವ್ಯತ್ಯಾಸದಿಂದ ಆರೋಗ್ಯ ಹದಗೆಡುವ ಸಾಧ್ಯತೆ ಇದೆ, ನಿಮ್ಮ ಬುದ್ಧಿಶಕ್ತಿಯಲ್ಲಿ ಹಿನ್ನಡೆ, ಚಿಂತನೆಗಳಲ್ಲಿ ಗೊಂದಲ ಮೂಡಿ ಕಾರ್ಯ ವ್ಯತ್ಯಯವಾಗುವ ಸಾಧ್ಯತೆ ಇದೆ.
ದೋಷ ಪರಿಹಾರ : ತುಳಸಿ ಮಾಲೆಯನ್ನು ಶ್ರೀನಿವಾಸ ದೇಗುಲಕ್ಕೆ ಕೊಡಿ.

ಕಟಕ : ಒಂದು ಅಹಿತಕರ ವರ್ತಮಾನ ಬರಲಿದೆ, ಸೋದರ ಸಂಬಂಧಿಗಳ ಭೇಟಿ, ಅನುಕೂಲ, ಸ್ತ್ರೀಯರಿಗೆ ಲಾಭದ ದಿನ, ಶತ್ರಗಳ ಮಾತು ನಿಮ್ಮನ್ನು ಕುಗ್ಗಿಸುತ್ತದೆ, ಸಂಗಾತಿಯಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಮೂಡಬಹುದು, ಮಾತು ಎಚ್ಚರವಾಗಿರಲಿ.
  
ದೋಷ ಪರಿಹಾರ :  ನಾಗ ದೇವರ ಆರಾಧನೆ ಮಾಡಿ

ಸಿಂಹ :  ಎಡಗಣ್ಣಿಗೆ ಸ್ವಲ್ಪ ತೊಂದರೆ, ಪೆಟ್ಟು ಬೀಳುವ ಸಾಧ್ಯತೆ, ಸ್ವಲ್ಪ ಮಟ್ಟಿಗೆ ಬೇರೆಯವರ ದಾಸ್ಯಕ್ಕೆ ತುತ್ತಾಗಲೂ ಬಹುದು, ನಿಮ್ಮ ಸಹೋದರಿ ನಿಮ್ಮ ಸಹಾಯಕ್ಕೆ ಬರುತ್ತಾರೆ. ಮಕ್ಕಳಿಂದ ಸ್ವಲ್ಪ ಮಟ್ಟಿಗೆ ಅಸಮಧಾನ.

ದೋಷ ಪರಿಹಾರ : ಶಿವನಿಗೆ ರುದ್ರಾಭಿಷೇಕ ಮಾಡಿಸಿ

ಕನ್ಯಾ : ಮನೆಯಲ್ಲಿ ಸಮಾಧಾನ, ತಂದೆಯಿಂದ ಸ್ವಲ್ಪ ಕಿರಿಕಿರಿ, ಹಿರಿಯರ ಮಾತು ನಿಮ್ಮಲ್ಲಿ ಬೇಸರ ತರಬಹುದು, ಸಹೋದರರಿಂದ ದೊಡ್ಡ ಮಟ್ಟದ ಸಹಾಯ, ಮನಸ್ಸಿಗೆ ಸಮಾಧಾನವೂ ಇದೆ, ವಾಹನದಲ್ಲಿ ಅವಘಡ ಸಂಭವ, ಮಕ್ಕಳಿಂದ ಅಸಮಧಾನ, ಮಿಶ್ರ ಫಲ. 
  
ದೋಷ ಪರಿಹಾರ : ಶ್ರೀಚಕ್ರಕ್ಕೆ ಕುಂಕುಮಾರ್ಚನೆ ಮಾಡಿ

ತುಲಾ : ಆತ್ಮಶಕ್ತಿ ಕುಂದಲಿದೆ, ಬೇಸರ ದಿನ, ಸ್ತ್ರೀಯರಿಗೆ ಸ್ವಲ್ಪ ಮಟ್ಟಿಗೆ ಸಮಾಧಾನ, ಲಾಭ ಕೈಗೆ ಬರುವ ಮುನ್ನ ಕರಗಲಿದೆ, ಅಂದುಕೊಂಡದ್ದು ಕನಸಾಗೇ ಉಳಿಯುತ್ತದೆ, ವಿಷ್ಣು ಸಹಸ್ರನಾಮ ಪಠಿಸಿ.

ದೋಷ ಪರಿಹಾರ : ಶ್ರೀನಿವಾಸ ದರ್ಶನ ಮಾಡಿ

ವೃಶ್ಚಿಕ :   ನಿಮ್ಮ ಆಲೋಚನೆಗಳೇ ನಿಮನ್ನು ಮೇಲಿನ ಹಂತಕ್ಕೆ ಕರೆದೊಯ್ಯುತ್ತವೆ, ನಿಮ್ಮ ಕುಟುಂಬದಲ್ಲಿ ಸ್ವಲ್ಪ ಭಿನ್ನಾಭಿಪ್ರಾಯಗಳು ಮೂಡಬಹದು, ಸಂಜೆ ವೇಳೆಗೆ ಸಮಾಧಾನವಾಗಲಿದೆ. ಕಚೇರಿಗೆ ಹೊರಡುವ ಮುನ್ನ  ದುರ್ಗಾ ದೇವಸ್ಥಾನಕ್ಕೆ ಹೋಗಿಬನ್ನಿ.  

ದೋಷ ಪರಿಹಾರ : ಶ್ರೀಚಕ್ರ ಉಪಾಸನೆ ಮಾಡಿ

ಧನಸ್ಸು :  ಇಂದು ನಿಮ್ಮ ಹೆಂಡತಿಯಿಂದ ಸಹಕಾರ ಸಿಗಲಿದೆ, ಆ ಸಹಕಾರ ಅಪೂರ್ಣವಾಗಿರಲಿದೆ, ನಿಮ್ಮ ಮಕ್ಕಳಿಂದ ಸಹಾಯ ಸಿಗುವ ಸಾಧ್ಯತೆ ಇದೆ. ನಿಮ್ಮ ಹಣ ನಷ್ಟವಾಗುವ ಸಾಧ್ಯತೆ ಇದೆ. ಹಣದ ವಿಷಯದಲ್ಲಿ ಎಚ್ಚರವಾಗಿರಿ.  

ದೋಷ ಪರಿಹಾರ : ಮತ್ಯುಂಜಯ ಮಂತ್ರ ಪಠಿಸಿ

ಮಕರ : ಇಂದು ನಿಮ್ಮ ಸಹೋದರರು ನಿಮ್ಮ ಸಹಾಯಕ್ಕೆ ಬರುತ್ತಾರೆ. ನಿಮ್ಮ ದಿನದ ಮುಖ್ಯ ಕಾರ್ಯದಲ್ಲಿ ಅವರ ಸಹಕಾರ ಇರಲಿದೆ. ಕುಜನರು ನಿಮ್ಮ ಧನ ವ್ಯಯಕ್ಕೆ ಕಾರಣವಾಗಬಹುದು ಎಚ್ಚರವಾಗಿರಿ.
  
ದೋಷ ಪರಿಹಾರ : ಶನಿ ಆರಾಧನೆ ಮಾಡಿ, ಗಣಪತಿ ಆರಾಧನೆ ಮಾಡಿ

ಕುಂಭ :   ಹೊಸ ಕಾರ್ಯಕ್ಕೆ ಚಾಲನೆ ಸಿಗುತ್ತದೆ, ಮನಸ್ಸಿನಲ್ಲಿ ಅಂದುಕೊಂಡ ಹೊಸ ಯೋಜನೆನೆಗೆ ಹಿರಿಯರಿಂದ ಸಹಕಾರ, ನಿಮ್ಮ ಮನೋ ಇಚ್ಛೆಯಂತೆ ಉದ್ಯೋಗದಲ್ಲಿ ಬದಲಾವಣೆ ಆಗಲಿದೆ ಆದರೆ ಕೆಲ ಶತ್ರುಗಳು ಬೆನ್ನ ಹಿಂದೆ ತೊಂದರೆ ಕೊಡುತ್ತಾರೆ. 

ದೋಷ ಪರಿಹಾರ : ದುರ್ಗಾ ಸಪ್ತಶತಿ ಪಠಿಸಿ
  
ಮೀನ : ಕಾರ್ಯ ಯೋಜನೆಗೆ ಗುರುಗಳ ಸಹಾಯ ಸಿಗಲಿದೆ, ಉದ್ಯೋಗದಲ್ಲಿ ಭರವಸೆ, ಉತ್ತಮ ಪ್ರಯಾಣ, ಅನುಕೂಲದ ದಿನವಾಗಿದ್ದರೂ ಸ್ವಲ್ಪ ಮಾನಸಿಕ ಬೇಸರ ಕಾಡಲಿದೆ. ನಿಮ್ಮ ಯೋಜನೆಗೆ ಮಿತ್ರರ ಸಹಾಯ ದೊರೆಯಲಿದೆ. 
  
ದೋಷ ಪರಿಹಾರ : ದತ್ತಾತ್ರೇಯ ದರ್ಶನ ಮಾಡಿ

ವಾಞ್ಮಯೀ.

Follow Us:
Download App:
  • android
  • ios