Asianet Suvarna News Asianet Suvarna News

ಮೇಷ ರಾಶಿಯವರಿಗಿಂದು ಕುದುರುತ್ತೆ ವ್ಯಾಪಾರ, ಉಳಿದವರ ರಾಶಿ ಫಲ ಹೇಗಿದೆ?

ಮೇಷ ರಾಶಿಯವರಿಗಿಂದು ಕುದುರುತ್ತೆ ವ್ಯಾಪಾರ, ಉಳಿದವರ ರಾಶಿ ಫಲ ಹೇಗಿದೆ?

Special Bhavishya 7 December 2018
Author
Bengaluru, First Published Dec 7, 2018, 6:49 AM IST

7-12-18 - ಶುಕ್ರವಾರ
====================
ಶ್ರೀ ವಿಲಂಬಿ ನಾಮ ಸಂವತ್ಸರ
ದಕ್ಷಿಣಾಯನ
ಶರದೃತು
ಕಾರ್ತೀಕ ಮಾಸ
ಕೃಷ್ಣ ಪಕ್ಷ
ಅಮಾವಾಸ್ಯೆ
ಜ್ಯೇಷ್ಠಾ
====================
ರಾಹುಕಾಲ : 10.46 ರಿಂದ 12.11
ಯಮಗಂಡ ಕಾಲ : 03.01 ರಿಂದ 04.27
ಗುಳಿಕ ಕಾಲ : 07.56 ರಿಂದ 09.21
=============================

ಮೇಷ ರಾಶಿ : ನಿಮ್ಮ ವ್ಯಾಪಾರ ಲಾಭದಾಯಕವಾಗಿರುತ್ತದೆ, ಹೃದಯ ಸಂಬಂಧಿ ಸಮಸ್ಯೆ ಕಾಡಬಹುದು, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಮೂಡಲಿದೆ, ಆದರೆ ಬಹುಬೇಗ ಸರಿಹೋಗಲಿದೆ,  ಸ್ವಲ್ಪದರಲ್ಲಿ ನಿಮ್ಮ ಅದೃಷ್ಟ ಕೈಕೊಡುತ್ತದೆ. 

ದೋಷಪರಿಹಾರ : ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವೃಷಭ : ಸ್ತ್ರೀಯರ ಮಾತು ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸುತ್ತದೆ, ಶತ್ರುಗಳ ದೃಷ್ಟಿ ನಿಮ್ಮ ಮೇಲಿರುವುದರಿಂದ ಎಚ್ಚರವಾಗಿರಿ, ಉದ್ಯೋಗದಲ್ಲಿ ಮಿತ್ರರೇ ಶತ್ರುಗಳಾಗುತ್ತಾರೆ, ನಿಮ್ಮ ಮಾತಿಗೆ ಮೌಲ್ಯವಿಲ್ಲದಾಗುತ್ತದೆ.   
      
ದೋಷ ಪರಿಹಾರ : ದುರ್ಗಾ ಸಪ್ತಶತಿ ಪಾರಾಯಣ ಮಾಡಿಸಿ

ಮಿಥುನ :  ಅನ್ಯೋನ್ಯ ಮಿತ್ರರೂ ದೂರವಾಗುತ್ತಾರೆ, ನಿಮ್ಮ ಮಾತು-ಚತುರತೆ ಶತ್ರುಗಳನ್ನೂ ಮಿತ್ರರನ್ನಾಗಿಸುತ್ತದೆ, ಮಿಶ್ರಫಲದ ದಿನವಾಗಿರಲಿದೆ, ಕಾರ್ಯ ಪ್ರಾರಂಭಕ್ಕೂ ಮುನ್ನ ಯೋಚಿಸಿ. ವೃಥಾ ತಿರುಗಾಟ, ವ್ಯಾಪಾರದಲ್ಲಿ ಶತ್ರುತ್ವ , ಬೇಸರ ಉಂಟುಮಾಡಲಿದೆ.
 
ದೋಷ ಪರಿಹಾರ : ವಿಷ್ಣುವಿಗೆ ತುಳಸಿಹಾರ ಸಮರ್ಪಣೆ ಮಾಡಿ

ಕಟಕ : ನಿಮ್ಮ ಆಲೋಚನೆ ಫಲ ರಹಿತವಾಗಬಹುದು, ದೃಢ ನಿರ್ಧಾರ ಸಾಧ್ಯವಾಗದು, ಗೊಂದಲದ ವಾತಾವರಣ, ಉದ್ಯೋಗದಲ್ಲಿ ಕಿರಿಕಿರಿ, ಹಿರಿಯ ಅಧಿಕಾರಿಗಳು ನಿಮ್ಮನ್ನು ಕಾಡಲಿದ್ದಾರೆ. ಎಚ್ಚರ ಇರಲಿ.  
  
ದೋಷ ಪರಿಹಾರ : ದೇವಿ ಕವಚ ಪಠಿಸಿ

ಸಿಂಹ :  ಕಿಬ್ಬೊಟ್ಟೆ ಭಾಗದಲ್ಲಿ ಸ್ವಲ್ಪ ನೋವು ಕಾಣಿಸಿಕೊಳ್ಳಬಹುದು, ತಾಯಿಯಿಂದ, ಹಿರಿಯರಿಂದ ಧನಾನುಕೂಲ, ಆದರೆ ಮಾನಸಿಕ ಬೇಸರವೂ ಇರಲಿದೆ,  ಕುಟುಂಬ ಸೌಖ್ಯ, ನಿಮ್ಮ ಮನಸ್ಸಿಗೆ ಸಾಮಾಧಾನದ ದಿನ, ಆದರೆ ಕೊಂಚ ಸಮಸ್ಯೆಗಳೂ ಇವೆ.  

ದೋಷ ಪರಿಹಾರ : ಶಿವನಿಗೆ ರುದ್ರಾಭಿಷೇಕ ಮಾಡಿಸಿ

ಕನ್ಯಾ : ನಿಮ್ಮ ಸಹೋದರರಿಂದ ಸಮಾಧಾನದ ಮಾತುಗಳು, ಧನ ಸಹಾಯವೂ ಇದೆ, ಓರ್ವ ಸ್ತ್ರೀ ಆಪದ್ಧನವನ್ನು ಕೊಡುತ್ತಾರೆ, ಮನಸ್ಸು ನಿರಾಳವಾಗುತ್ತದೆ, ಆದರೆ ತಂದೆಯಿಂದ ಸ್ವಲ್ಪ ವಿರೋಧದ ಮಾತು ಕೇಳುತ್ತೀರಿ.
  
ದೋಷ ಪರಿಹಾರ : ಸುಮಂಗಲೆಯರಿಗೆ ಮಂಗಲದ್ರವ್ಯ ದಾನ ಮಾಡಿ

ತುಲಾ : ಶುಭ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತೀರಿ, ನಿಮ್ಮ ಮಾತು ಉತ್ಕೃಷ್ಟ ಫಲ ತರಲಿದೆ, ಉಪನ್ಯಾಸಕರಿಗೆ ಕವಿಗಳಿಗೆ ಉತ್ತಮ ದಿನ, ಬರಹಗಾರರಿಗೆ ವಿವಿಧ ಮೂಲದ ಆದಾಯ ಬರಲಿದೆ, ಬಟ್ಟೆ ವ್ಯಾಪಾರಿಗಳಿಗೆ  ಧನ ಸಮೃದ್ಧಿ.

ದೋಷ ಪರಿಹಾರ : ಲಕ್ಷ್ಮೀ ಸ್ತೋತ್ರ ಪಠಿಸಿ.

ವೃಶ್ಚಿಕ :  ಲೋಹ ವ್ಯಾಪಾರಿಗಳಿಗೆ, ಬಂಗಾರ ತಯಾರಕರಿಗೆ ಲಾಭದ ದಿನ, ಗೃಹ ಸೌಖ್ಯ, ವಾಹನ ಖರೀದಿ, ನಿಮ್ಮಸೇವಕರಿಂದ ಸಹಾಯವಾಗುವ ದಿನ, ಮನೆ ಕೆಲಸದವರ ಜೊತೆ ಕಲಹ, ಸಣ್ಣ ಪುಟ್ಟ ಅವಘಡ. ಎಚ್ಚರವಿರಲಿ.      
ದೋಷ ಪರಿಹಾರ : ಶನಿ ದೇವರ ಪ್ರಾರ್ಥನೆ ಮಾಡಿ.

ಧನಸ್ಸು : ನಿಮ್ಮ ಮನಸ್ಸಿಗೆ ಸಮಾಧಾನ, ಅತ್ಯುತ್ತಮರ ಭೇಟಿ, ಸ್ತ್ರೀಯರಿಂದಾಗಿ ಕಲಹ ಪ್ರಾಪ್ತಿ, ಮನೋ ಕಾಮನೆ ಈಡೇರುವ ಮುನ್ನ ನಿಮ್ಮ ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ. 

ದೋಷ ಪರಿಹಾರ : ಕುಲ ದೇವರ ಪ್ರಾರ್ಥನೆ ಮಾಡಿ

ಮಕರ : ಈ ದಿನ ನಿಮ್ಮ ಸಂಪೂರ್ಣಕಾರ್ಯಗಳಲ್ಲಿ ಜಯ ಹಾಗೂ ಲಾಭ ಸಿಗಲಿದೆ. ನಿಮ್ಮ ಮಕ್ಕಳಿಂದ ಸ್ವಲ್ಪ ದಿನದ ಕಾರ್ಯಗಳಲ್ಲಿ ವ್ಯತ್ಯಾಸವಾಗಲಿದೆ. ಉಗ್ರ ಸ್ವಭಾವ ಸ್ವಲ್ಪ ಶಾಂತವಾಗಲಿ. ನಿಮ್ಮ ಯೋಚನೆ ಸರಿ ಇರಬಹುದು ಆದರೂ ಅಭಿಪ್ರಾಯ ಹಂಚಿಕೆಯಾಗುವಾಗ ಸ್ವಲ್ಪ ಸಮಾಧಾನವಿರಲಿ

ದೋಷ ಪರಿಹಾರ : ಶಿವ ತಾಂಡವ ಸ್ತೋತ್ರ ಪಠಿಸಿ

ಕುಂಭ :   ಉತ್ತಮ ದಿನವಾಗಿರಲಿದೆ, ಮಾಡುವ ಕಾರ್ಯದಲ್ಲಿ ಜಯ, ನಿಮ್ಮ ಬಂಧುಗಳ ಸಹಕಾರ ದೊರೆಯಲಿದೆ, ಆದರೆ ಕಟು ಮಾತುಗಳನ್ನೂ ಕೇಳಬೇಕಾಗುತ್ತದೆ. ಎಚ್ಚರವಾಗಿರುವುದು ಒಳಿತು.  

ದೋಷ ಪರಿಹಾರ : ದೀಪ ನಮಸ್ಕಾರ ಮಾಡಿ
  
ಮೀನ : ಉದ್ಯೋಗದಲ್ಲಿ, ವ್ಯಾಪಾರದಲ್ಲಿ ಲಾಭದ ದಿನ, ನಿಮ್ಮ ಅನುಕೂಲಕ್ಕೆ ಕಾರ್ಯ ಸಿದ್ಧಿಸುತ್ತದೆ, ಪ್ರಯಾಣ ಸುಖಕರವಾಗಿರಲಿದೆ, ಉತ್ತಮರ ಸಹವಾಸ ಒದಗಲಿದೆ, ದೂರ ದೇಶಕ್ಕೆ ಪ್ರಯಾಣ ಸಾಧ್ಯತೆ. ಮಂಗಲ ಕಾರ್ಯ ಯೋಜನೆ.  

ದೋಷ ಪರಿಹಾರ : ದಕ್ಷಿಣಾಮೂರ್ತಿ ಸ್ತೋತ್ರ ಪಠಿಸಿ.

ವಾಞ್ಮಯೀ.

Follow Us:
Download App:
  • android
  • ios