ವಿಶೇಷ ಭವಿಷ್ಯ : ಭಾಗ್ಯೋದಯ ಕಾಣಲಿದೆ ಈ ರಾಶಿಗೆ
ವಿಶೇಷ ಭವಿಷ್ಯ : ಭಾಗ್ಯೋದಯ ಕಾಣಲಿದೆ ಈ ರಾಶಿಗೆ
ವಿಶೇಷ ಭವಿಷ್ಯ : ಭಾಗ್ಯೋದಯ ಕಾಣಲಿದೆ ಈ ರಾಶಿಗೆ
ಮೇಷ ರಾಶಿ : ರಾಶ್ಯಾಧಿಪತಿ ಸ್ವಕ್ಷೇತ್ರಕ್ಕೆ ಬಂದಿದ್ದಾನೆ ಹಾಗಾಗಿ ಕಾರ್ಯ ಸಾಧನೆ, ಸಾಹಸ ಕಾರ್ಯಗಳಲ್ಲಿ ಮುನ್ನಡೆ, ಮುಂತಾದ ಶುಭ ಫಲವಿದೆ, ಮನೆ ಖರೀದಿ, ಗೃಹ ನಿರ್ಮಾಣದಂಥ ಕಾರ್ಯಗಳಿಗೆ ಚಾಲನೆ ದೊರೆಯಲಿದೆ. ಶುಭದಿನ.
ದೋಷ ಪರಿಹಾರ : ಸುಬ್ರಹ್ಮಣ್ಯ ಸ್ವಾಮಿ ಪ್ರಾರ್ಥನೆ ಮಾಡಿ.
ವೃಷಭ : ಮಂಗಳಕಾರ್ಯ ಸಾಗಲಿದೆ, ಮನಸ್ಸಿಗೆ ನೆಮ್ಮದಿ ಆದರೆ ಆರೋಗ್ಯ ಬಾಧೆ ಸ್ವಲ್ಪ ಮಟ್ಟಿಗೆ ಬಾಧಿಸಲಿದೆ, ದಾಂಪತ್ಯದಲ್ಲಿ ಹೊಂದಾಣಿಕೆ, ನಿಮ್ಮ ವ್ಯಾಪಾರ ವೃದ್ಧಿ, ಸಹೋದರ ಭಾವರದಲ್ಲಿ ಸ್ವಲ್ಪ ತೊಂದರೆಗಳಾಗುವ ಸಾಧ್ಯತೆ. ಎಚ್ಚರವಾಗಿರಿ.
ದೋಷ ಪರಿಹಾರ : ಶ್ರೀಧರ ಸ್ವಾಮಿಗಳ ಪ್ರಾರ್ಥನೆ ಮಾಡಿ.
ಮಿಥುನ : ಪತಿ-ಪತ್ನಿಯರಲ್ಲಿ ಹೊಂದಾಣಿಕೆ ಅಸಾಧ್ಯ, ಆದರೆ ಸ್ವಲ್ಪ ನಿರಾಳತೆಯೂ ಸಿಗಲಿದೆ. ಅನವಶ್ಯಕ ಖರ್ಚುಗಳು, ವ್ಯಾಪಾರದಲ್ಲಿ ಹೊಂದಾಣಿಕೆ, ಸ್ತ್ರೀಯರ ಸಹಕಾರ, ಹೊಸ ಸಾಲ ಸಂಭವ, ಹಿರಿಯ ಅಧಿಕಾರಿಗಳಿಂದ ತೊಂದರೆ.
ದೋಷ ಪರಿಹಾರ : ಹರಿಹರ ಪ್ರಾರ್ಥನೆ ಮಾಡಿ
ಕಟಕ : ದೇಹದಲ್ಲಿ ಸ್ವಲ್ಪ ಬಾಧೆ ಕಾಣಿಸಿಕೊಳ್ಳುತ್ತದೆ, ಆದರೆ ಮನಸ್ಸಿಗೆ ಸಮಾಧಾನವಾಗುವ ಮಾತಾಡುತ್ತಾರೆ ನಿಮ್ಮ ಸಂಗಾತಿ. ಮಾತಿನಿಂದ ಗೆಲ್ಲುವ ದಿನ, ಕೆಲ ನಿರ್ಧಾರಗಳು ನಿಮ್ಮನ್ನು ಪಶ್ಚಾತ್ತಾಪ ಪಡುವಂತೆ ಮಾಡುತ್ತದೆ.
ದೋಷ ಪರಿಹಾರ : ಲಲಿತಾ ದೇವಿ ಸ್ಮರಣೆ ಮಾಡಿ.
ಸಿಂಹ : ಇಂದು ನಿಮ್ಮ ದೇಹದಲ್ಲಿ ಸ್ವಲ್ಪ ಸಮಸ್ಯೆ ಕಾಣಿಸಿಕೊಳ್ಳಲಿದೆ, ಮಾತಿನಿಂದ ತೊಂದರೆ, ಒಂದು ಗಂಭೀರ ಸಮಸ್ಯೆಯಿಂದ ನಿಮ್ಮ ಆತ್ಮ ಶಕ್ತಿ ಕುಂದಿಹೋಗಲಿದೆ. ಧನವ್ಯಯ, ಸ್ತ್ರೀಯರಿಂದ ಸ್ವಲ್ಪ ಗಂಭೀರ ಸಮಸ್ಯೆ ಉಂಟಾಗಲಿದೆ. ಮಾತಿನಲ್ಲಿ ಎಚ್ಚರವಿರಲಿ.
ದೋಷ ಪರಿಹಾರ : ಶಿವನಿಗೆ ಜಲಾಭಿಷೇಕ ಮಾಡಿಸಿ.
ಕನ್ಯಾ : ನಿಮ್ಮ ಮನೆಯಲ್ಲಿ ಹಾಗೂ ಕುಟುಂಬದವರಲ್ಲಿ ಭಿನ್ನಾಭಿಪ್ರಾಯ, ಪ್ರಯಾಣ ಸಂದರ್ಭದಲ್ಲಿ ಸ್ತ್ರೀಯರಿಂದ ಸಹಾಯ, ಮಕ್ಕಳಲ್ಲಿ ಭಿನ್ನಾಭಿಪ್ರಾಯ ಮೂಡಬಹುದು, ದೇವಸ್ಥಾನ ದರ್ಶನ.
ದೋಷ ಪರಿಹಾರ : ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ
ತುಲಾ : ಧನಾಗಮನ, ಗುರು ವಚನದಿಂದ ಬದುಕು ಉತ್ತಮ ಮಾರ್ಗಕ್ಕೆ ಬರಲಿದೆ, ಸಹೋದರಿ ನಿಮ್ಮ ಜಗಳಕ್ಕೆ ಕಾರಣಳಾಗಬಹುದು, ಯಾವ ಭರವಸೆಯನ್ನೂ ಕೊಡಬೇಡಿ. ಉತ್ತಮರ ಭೇಟಿ, ಅನುಕೂಲದ ದಿನ.
ದೋಷ ಪರಿಹಾರ : ದುರ್ಗಾ ಪರಮೇಶ್ವರಿ ಪ್ರಾರ್ಥನೆ ಮಾಡಿ.
ವೃಶ್ಚಿಕ : ಸ್ತ್ರೀಯರೊಡನೆ ಮಾತನಾಡುವಾಗ ಎಚ್ಚರವಿರಲಿ, ನಿಮ್ಮ ಮಾತು ಪ್ರಮಾದವನ್ನೇ ತರಬಹುದು, ಅನ್ಯರ ಸಹಾಯ ಬೇಡುವ ಸಾಧ್ಯತೆ ಇದೆ, ನಿಮ್ಮ ಆರೋಗ್ಯ ವೃದ್ಧಿಯಾಗಲಿದೆ, ಉತ್ತಮ ದಿನ ಹೆದರುವ ಅವಶ್ಯಕತೆ ಇಲ್ಲ.
ದೋಷ ಪರಿಹಾರ : ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ.
ಧನಸ್ಸು : ಕಾಲಿನ ಭಾಗದಲ್ಲಿ ಹಾಗೂ ಗುಹ್ಯ ಭಾಗದಲ್ಲಿ ತೊಂದರೆ ಕಾಣಿಸಲಿದೆ, ಮಾತಿನಲ್ಲಿ ತೊಡಕು, ಸಹೋದರಿ ಸಹಾಯಕ್ಕೆ ಬರುವುದಿಲ್ಲ, ನಿಮ್ಮ ಪ್ರತಿಭೆಯಿಂದ ಸಾಹಸಕಾರ್ಯ ಮಾಡುತ್ತೀರಿ.
ದೋಷ ಪರಿಹಾರ : ಗುರು ಪ್ರಾರ್ಥನೆ ಮಾಡಿ
ಮಕರ : ರಾಶಿಯಲ್ಲಿರುವ ರವಿ ಬುಧರ ಯುತಿಯಿಂದ ಪ್ರಶಂಸೆ, ಆದರೆ ತಂದೆ ಮಕ್ಕಳಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಉಂಟಾಗಲಿದೆ. ಕೊಟ್ಟ ಸಾಲ ಮರಳಿ ಬರಲಿದೆ, ವಾಹನ ಖರೀದಿ, ಹಾಗೂ ಮನೆ ಖರೀದಿ ಸಾಧ್ಯತೆ.
ದೋಷ ಪರಿಹಾರ : ಶಿವ ಪ್ರಾರ್ಥನೆ ಮಾಡಿ
ಕುಂಭ : ಸುಗ್ರಾಸ ಭೋಜನ, ಸಹೋದರರ ಸಹಕಾರ, ದಾಂಪತ್ಯದಲ್ಲಿ ವಿರಸ, ವ್ಯಾಪಾರದಲ್ಲಿ ಭಿನ್ನಾಭಿಪ್ರಾಯ ಸಾಧ್ಯತೆ. ಆದರೆ ಧನ ಸಹಾಯ ಹಾಗೂ ಆರ್ಥಿಕ ಪ್ರಗತಿ ಕಾಣಲಿದ್ದೀರಿ. ಸಮಧಾನದ ದಿನ.
ದೋಷ ಪರಿಹಾರ : ನವ ಧಾನ್ಯ ದಾನ ಮಾಡಿ
ಮೀನ : ಉತ್ತಮ ದಿನ, ಭಾಗ್ಯೋದಯವಾಗುವ ಕಾಲ, ಧನಾಗಮನ, ಮನೆ ಹಾಗೂ ಮುಖ್ಯ ಕಾಗದ ಪತ್ರಗಳ ಲಭ್ಯವಾಗುತ್ತವೆ. ಕುಟುಂಬ ಸೌಖ್ಯ, ಸಮಾಧಾನದ ದಿನ. ಚಿಂತೆಗಳು ದೂರವಾಗುತ್ತವೆ.
ದೋಷ ಪರಿಹಾರ : ಕಡಲೆ ಕಾಳು ದಾನ ಮಾಡಿ