Asianet Suvarna News Asianet Suvarna News

ಈ ದಿನ ನಿಮಗೆ ನೆಮ್ಮದಿಯ ದಿನ : ಉಳಿದ ರಾಶಿಗೆ..?

ಈ ದಿನ ನಿಮಗೆ ನೆಮ್ಮದಿಯ ದಿನ : ಉಳಿದ ರಾಶಿಗೆ..?

Special  Bhavishya 21 December 2018
Author
Bengaluru, First Published Dec 21, 2018, 6:48 AM IST

ಈ ದಿನ ನಿಮಗೆ ನೆಮ್ಮದಿಯ ದಿನ : ಉಳಿದ ರಾಶಿಗೆ..?

ಮೇಷ ರಾಶಿ : ಸ್ವಲ್ಪ ದುಡುಕಿನ ಸ್ವಭಾವ, ಸ್ವಲ್ಪ ಆರೋಗ್ಯವ್ಯತ್ಯಯ ಆಗಬಹುದು. ಆದರೆ ಮನಸ್ಸು ಪ್ರಶಾಂತವಾಗಲಿದೆ, ಯಾವ ಯೋಚನೆಯೂ ಇರಲಾರದು, ನೆಮ್ಮದಿಯ ನಿಮ್ಮದಾಗಲಿದೆ. 
  
ದೋಷ ಪರಿಹಾರ - ತೊಗರಿಬೇಳೆ ದಾನ ಮಾಡಿ

ವೃಷಭ : ಮನೆಯ ಕಾರಣದಿಂದ ಆಲೋಚನೆಗಳ ಸುಳಿಯಲ್ಲಿ ಸಿಲುಕುತ್ತೀರಿ, ಮನಸ್ಸು ನಿರಾಳವಾಗಲಿದೆ, ಉದ್ಯೋಗ ಸ್ಥಳದಲ್ಲಿ ಸ್ವಲ್ಪ ಕಿರಿಕಿರಿ, ದುರ್ಜನರು ನಿಮ್ಮ ಮೇಲೆ ಕಣ್ಣಿಡಲಿದ್ದಾರೆ.
 
ದೋಷ ಪರಿಹಾರ : ಕುಲದೇವತಾ ದರ್ಶನ ಮಾಡಿ

ಮಿಥುನ : ನಿಮ್ಮ ಮನಸ್ಸಿಗೆ ಸ್ವಲ್ಪ ದು:ಖ, ಹೆಚ್ಚು ಕೊರಗುವ ಅವಶ್ಯಕತೆ ಇಲ್ಲ. ಹೋದುದ್ದರ ಬಗ್ಗೆ ಹೆಚ್ಚು ಯೋಚನೆ ಬೇಡ. ಇಂದು ಹೊಸ ಕಾರ್ಯದಲ್ಲಿ ತೊಡಗುವ ದಿನ. ದಾಂಪತ್ಯದಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಇದ್ದೇ ಇದೆ. 

ದೋಷ ಪರಿಹಾರ : ತಾವರೆ ಹೂವನ್ನು ಲಕ್ಷ್ಮೀ ದೇವಸ್ಥಾನಕ್ಕೆ ಕೊಟ್ಟುಬನ್ನಿ. 

ಕಟಕ : ಮನಸ್ಸಿನಲ್ಲೇ ಲಕ್ಷ್ಮಿಯನ್ನು ಪ್ರಾರ್ಥಿಸಿ ಮುಂದಿನ ಕೆಲಸ ಮಾಡಿ. ತಾಯಿಗೆ ಅನುಕೂಲ, ಮಕ್ಕಳಿಂದ ಪ್ರಶಂಸೆ ಹಾಗೂ ಲಾಭವಾಗಲಿದೆ, ಆದರೆ ನಿಮ್ಮ ಆರೋಗ್ಯದಲ್ಲಿ ವ್ಯತ್ಯಯವಾಗಿ ದವಾಖಾನೆ ಸೇರುವ ದಿನವಾಗಿರಲಿದೆ, ಎಚ್ಚರ.
 
ದೋಷ ಪರಿಹಾರ : ಸೂರ್ಯ ಪ್ರಾರ್ಥನೆ ಮಾಡಿ

ಸಿಂಹ :  ತಂದೆಯಿಂದ ಕಟು ಮಾತುಗಳನ್ನು ಕೇಳುತ್ತೀರಿ. ಉದ್ಯೋಗ ಸ್ಥಳದಲ್ಲಿ ಸಹಕಾರ ಮನೋಭಾವ, ಆತ್ಮೀಯರಿಂದ ಸಮಾಧಾನಕರ  ಮಾತುಗಳು. ಗುಟ್ಟು ಹಂಚಿಕೊಳ್ಳುವ ಸಂದರ್ಬ ಬರಲಿದೆ.
 
ದೋಷ ಪರಿಹಾರ : ಗಣಪತಿ ಸ್ಮರಣೆ ಮಾಡಿ

ಕನ್ಯಾ : ಧನ ಸಹಾಯದ ದಿನ, ನೀವು ನಂಬಿದ ಸ್ತ್ರೀಯರು ನಿಮಗೆ ಸಂತಸವನ್ನು ತರುತ್ತಾರೆ. ವಿದ್ಯಾರ್ಥಿನಿಯರಿಗೆ ಹಾಸ್ಯದ ದಿನ, ವಾದದಲ್ಲಿ ಗೆಲುವು ನಿಮ್ಮದೇ ಆಗಿರುತ್ತದೆ. ಮಿತ್ರ ಸಹಕಾರದಿಂದ ಕಾರ್ಯ ಸಾಧನೆ.

ದೋಷ ಪರಿಹಾರ : ನವಗ್ರಹ ಪ್ರಾರ್ಥನೆ ಮಾಡಿ

ತುಲಾ :   ಪ್ರೀತಿ ಪಾತ್ರರಿಂದ ತಿಳಿವಳಿಕೆ, ಅಪೇಕ್ಷೆ ಈಡೇರುವುದಿಲ್ಲ. ಆದರೆ ನಿಮಗೆ ಸೋಲಾಗಲಿ, ಸಮಸ್ಯೆಯಾಗಲಿ ಇಲ್ಲ. ಯೋಚಿಸುವ ಅಗತ್ಯ ಇಲ್ಲ. ನಿಮ್ಮ ತಾಯಿಗೆ ನಮಸ್ಕಾರ ಮಾಡಿ ದಿನವನ್ನು ಪ್ರಾರಂಭಿಸಿ.

ದೋಷ ಪರಿಹಾರ : ಶುಕ್ರಗ್ರಹ ಪ್ರಾರ್ಥನೆ ಮಾಡಿ

ವೃಶ್ಚಿಕ : ಕಾರ್ಯಗಳಲ್ಲಿ ಪ್ರಗತಿ, ಆರೋಗ್ಯ ಕುಂಠಿತವಾಗಲಿದೆ, ಮನಸ್ಸು ದೃಢವಾಗಿದ್ದರೂ ಆರೋಗ್ಯ ಕುಗ್ಗಿಸಲಿದೆ, ಮಾತಿನಿಂತ, ಹಣದಿಂದ ಮನಸ್ಸಿಗೆ ಅಸಮಾಧಾನವಾಗುವ ಸಾಧ್ಯತೆ, ವಾಹನದಲ್ಲಿ ಎಚ್ಚರ.
 
ದೋಷ ಪರಿಹಾರ : ಕುಕ್ಕೆ ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಧನಸ್ಸು : ಒಣಕೆಪ್ಪು ಹಾಗೂ ವಾತ ಸಂಬಂಧಿ ದೋಷ ಕಾಡಲಿದೆ, ಹೊಟ್ಟೆ ಭಾಗದಲ್ಲಿ ಹಾಗೂ ಗಂಟಲು ಭಾಗದಲ್ಲಿ ನೋವು ಕಾಣಿಸಲಿದೆ, ವ್ಯಾಪಾರದಲ್ಲಿ ವ್ಯಯ ಸಂಭವ, ಆದರೆ ಶಿವ ಪ್ರಾರ್ಥನೆಯಿಂದ ಅನುಕೂಲ. 
 
ದೋಷ ಪರಿಹಾರ : ದತ್ತಾತ್ರೇಯ ದರ್ಶನ ಮಾಡಿ 

ಮಕರ : ಈ ದಿನ ನಿಮಗೆ ಮಾನಸಿಕ ಬೇಸರ.  ನಿಮಗೆ ನೀವೇ ಆಸರೆ ಎಂಬ ಭಾವನೆ ಮೂಡುವುದು. ನಿಮ್ಮ ಮನೋ ಸ್ಥೈರ್ಯ ಇಮ್ಮಡಿಯಾಗಲಿಕ್ಕೆ ಗಣಪತಿಗೆ ಕೆಂಪು ಹೂವನ್ನು ಕೊಟ್ಟು ಅನನ್ಯ ಭಕ್ತಿಯಿಂದ ಪ್ರಾರ್ಥನೆ ಮಾಡಿ.  

ದೋಷ ಪರಿಹಾರ : ಗಣಪತಿಗೆ ಮೋದಕ ಸಮರ್ಪಣೆ  ಮಾಡಿ

ಕುಂಭ : ಅನುಕೂಲದ ದಿನ, ಉದ್ಯೋಗದಲ್ಲಿ ಪ್ರಗತಿ, ಹಿರಿಯರಿಂದ ಅನುಕೂಲವಾಗಲಿದೆ, ಕೋರ್ಟು ವ್ಯಾಜ್ಯದಲ್ಲಿ ಹಿನ್ನಡೆ, ವಾಹನ ಲಾಭ, ನಿಮ್ಮ ತಾಯಿಯ ಸಹಕಾರಸಿಗಲಿದೆ, ಮಿಶ್ರಫಲ ಪ್ರಾಪ್ತಿ.
  
ದೋಷ ಪರಿಹಾರ : ಶನೈಶ್ಚರ ದರ್ಶನ ಮಾಡಿ.
  
ಮೀನ : ಇಂದು ವಿಶಿಷ್ಟ ದಿನವಾಗಿ ಮಾರ್ಪಡಲಿದೆ. ಗೊಂದಲದ ಮನಸ್ಸಿನಿಂದ ಹೊರಬನ್ನಿ. ಸಾಧ್ಯವಾದರೆ ನಿಮ್ಮ ಹಿತೈಷಿಗಳ ಸಲಹೆ ಪಡೆಯಿರಿ. ಮನೆಯಲ್ಲಿ ಶುಭಕಾರ್ಯಗಳಿಗೆ ತಯಾರಿ. 

ದೋಷ ಪರಿಹಾರ : ದಕ್ಷಿಣಾಮೂರ್ತಿ ಸ್ಮರಣೆ ಮಾಡಿ.


ವಾಞ್ಮಯೀ

Follow Us:
Download App:
  • android
  • ios