Asianet Suvarna News Asianet Suvarna News

ಈ ರಾಶಿಗೆ ಯಶಸ್ಸು ಖಚಿತ : ಉಳಿದ ರಾಶಿ ಹೇಗಿದೆ..?

ಈ ರಾಶಿಗೆ ಯಶಸ್ಸು ಖಚಿತ : ಉಳಿದ ರಾಶಿ ಹೇಗಿದೆ..?
 

Special Bhavishya 10 November 2018
Author
Bengaluru, First Published Nov 10, 2018, 7:10 AM IST

ಈ ರಾಶಿಗೆ ಯಶಸ್ಸು ಖಚಿತ : ಉಳಿದ ರಾಶಿ ಹೇಗಿದೆ..?

10-11-18 - ಶನಿವಾರ

ಶ್ರೀ ವಿಲಂಬಿ ನಾಮ ಸಂವತ್ಸರ
ದಕ್ಷಿಣಾಯನ
ಶರದೃತು
ಕಾರ್ತಿಕ ಮಾಸ
ಶುಕ್ಲ ಪಕ್ಷ
ತೃತೀಯ ತಿಥಿ
ಜ್ಯೇಷ್ಠಾ ನಕ್ಷತ್ರ 

ರಾಹುಕಾಲ  09.10 ರಿಂದ 10.37
ಯಮಗಂಡ ಕಾಲ  01.30 ರಿಂದ 02.57
ಗುಳಿಕ ಕಾಲ  06.17 ರಿಂದ 07.44
 

ಮೇಷ ರಾಶಿ : ಶುಭ ಸುದ್ದಿ ಕೇಳಲಿದ್ದೀರಿ, ಆದರೆ ತಾಯಿಯ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯ ಕಾಣಲಿದ್ದೀರಿ, ದೂರದ ಊರಿನವರ ಸಹಾಯ ಸಿಗಲಿದೆ, ಅನವಶ್ಯಕ ಮಾತುಕತೆ ನಿಮ್ಮ ಕಾರ್ಯಕ್ಕೆ ತೊಂದರೆ ಮಾಡಲಿದೆ.

ದೋಷಪರಿಹಾರ : ದುರ್ಗಾ ದೇವಿಗೆ ದಾಸವಾಳದ ಹೂವು ಸಮರ್ಪಿಸಿ

ವೃಷಭ : ಮಾನಸಿಕ ಖಿನ್ನತೆ, ಕಾಲು ನೋವು ಬಾಧಿಸಲಿದೆ, ಉದ್ಯೋಗದಲ್ಲಿ ಅನುಕೂಲವೂ ಇದೆ, ಶತ್ರುಗಳ ಕಾಟವೂ ಇದೆ, ಗಂಟಲು ತೊಂದರೆ ಬಾಧಿಸಲಿದೆ, ಕೆಲವರಿಗೆ ಉತ್ತಮರ ಸಹವಾಸ ಲಭಿಸುತ್ತದೆ.      
ದೋಷ ಪರಿಹಾರ : ಖಡ್ಗಮಾಲಾ ಸ್ತೋತ್ರ ಪಠಿಸಿ

ಮಿಥುನ : ಮಾತಿನಲ್ಲಿ ವಕ್ರತೆ, ಇತರರಲ್ಲಿ ಮಾತಿನ ವ್ಯವಹಾರ ಮಾಡುವಾಗ ಎಚ್ಚರವಿರಲಿ, ಮನೆಯಲ್ಲಿ ಸ್ತ್ರೀಯರಿಂದ ಪ್ರಮಾದ, ಇತರರ ಅಹಿತಕರ ವರ್ತನೆ ನಿಮ್ಮನ್ನು ಬಲಿಪಶುವನ್ನಾಗಿಸುತ್ತದೆ. ಎಚ್ಚರವಾಗಿರಿ.

ದೋಷ ಪರಿಹಾರ : ನೃಸಿಂಹ ಮಂತ್ರ ಪಠಿಸಿ

ಕಟಕ : ತಲೆ ಭಾಗಕ್ಕೆ ಪೆಟ್ಟು ಬೀಳುವ ಸಾಧ್ಯತೆ ಇದೆ, ಬಂಧುಗಳಿಂದ ಸಹಾಯ ಹಸ್ತ, ಧನ ಸಹಾಯ, ದಾಂಪತ್ಯದಲ್ಲಿ ಸ್ವಲ್ಪ ತೊಂದರೆ, ಮಿತ್ರರಲ್ಲಿ ವೈಮನಸ್ಸು, ವ್ಯಾಪಾರದಲ್ಲಿ ಕೊಂಚ ಅಪಖ್ಯಾತಿ.
  
ದೋಷ ಪರಿಹಾರ : ದುರ್ಗಾ-ಗಣಪತಿಯರ ಆರಾಧನೆ ಮಾಡಿ

ಸಿಂಹ :  ಆರೋಗ್ಯದಲ್ಲಿ ಕೊಂಚ ವ್ಯತ್ಯಯ, ತಂದೆಯ ಆರೋಗ್ಯದಲ್ಲೂ ಸ್ವಲ್ಪ ತೊಂದರೆ, ಸಾಂಗತ್ಯದಲ್ಲಿ ತೊಂದರೆ, ಮನೆಯಲ್ಲಿ ಮನಸ್ತಾಪ ಮೂಡುತ್ತದೆ, ಕೋರ್ಟು ಕಚೇರಿ ವ್ಯವಹಾರಲ್ಲಿ ಹಿನ್ನಡೆ, ಮಕ್ಕಳಿಗಾಗಿ ತೆಗೆದುಕೊಂಡ ನಿರ್ಧಾರ ತೊಂದರೆ ಉಂಟುಮಾಡಬಹುದು.

ದೋಷ ಪರಿಹಾರ : ಶಿವನಿಗೆ ಭಸ್ಮಾಭಿಷೇಕ ಮಾಡಿಸಿ

ಕನ್ಯಾ : ಧನ ಕೈಸೇರುವ ಹೊತ್ತಿಗೆ ಮನೆಯಲ್ಲಿ ಕಲಹ, ಪುಟ್ಟ ವಿಷಯಕ್ಕೂ ದೊಡ್ಡಮಟ್ಟದ ಮನಸ್ತಾಪ, ನಿಮ್ಮ ಸಾಹಸ ಕ್ರಿಯೆಯಿಂದ ಪ್ರಶಂಸೆ, ಕಾರ್ಯ ಸ್ಥಳದಲ್ಲಿ ನಿಮಗೆ ತೊಂದರೆಯಾಗುವ ದಿನ. ಎಚ್ಚರದಿಂದ ಮಾತನಾಡಿ 
  
ದೋಷ ಪರಿಹಾರ : ಬುಧಾರಾಧನೆ ಮಾಡಿಸಿ

ತುಲಾ : ಮನಸ್ಸಿನ ಉತ್ಸಾಹ ಸ್ತ್ರೀ ಸಂಗಾತಿಯಿಂದ ಇಮ್ಮಡಿಯಾಗುತ್ತದೆ, ಕಾರ್ಯದಲ್ಲಿ ಯಶಸ್ಸು, ಮಕ್ಕಳಿಂದ ನಿಮ್ಮ ಕಾರ್ಯಕ್ಕೆ ಉತ್ಸಾಹ ಸಿಗಲಿದೆ, ಬಾಯಿ ಅಥವಾ ಮುಖದ ಮೇಲೆ ಗಾಯಗಳಾಗುವ ಸಾಧ್ಯತೆ ಇದೆ. ಆದರೆ ಪ್ರಮಾದವಾಗುವುದಿಲ್ಲ. 

ದೋಷ ಪರಿಹಾರ : ಲಕ್ಷ್ಮೀ ನಾರಾಯಣ ಹೃದಯ ಸ್ತೋತ್ರ ಪಠಿಸಿ

ವೃಶ್ಚಿಕ :  ಕುಟುಂಬದಲ್ಲಿ ಕಲಹ, ಮಾನಸಿಕ ಖಿನ್ನತೆ ಎಲ್ಲರನ್ನೂ ಕಾಡಲಿದೆ, ನಿಮ್ಮಮಾತು ಮತ್ತೊಬ್ಬರಿಗೆ ಸಮಾಧಾನ ತರುವುದು, ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಮಾತು ನಡೆಯುವುದಿಲ್ಲ, ಸ್ವಲ್ಪ ಬೇಸರವನ್ನು ಅನುಭವಿಸಬೇಕಾಗುತ್ತದೆ.   

ದೋಷ ಪರಿಹಾರ : ನವಗ್ರಹಗಳ ಪ್ರಾರ್ಥನೆ ಮಾಡಿ

ಧನಸ್ಸು :  ನೀವು ತೆಗೆದುಕೊಳ್ಳುವ ನಿರ್ಧಾರಗಳಿಂದ ಸ್ವಲ್ಪ ಬೇಸರವಾಗಲಿದೆ, ಹಿರಿಯರ ಮಾತು ಕೇಳಿ ಕಾರ್ಯ ಪ್ರಾರಂಭ ಮಾಡಿ, ವೃಥಾ ಓಡಾಟ, ಮನೆಯಲ್ಲಿ ಸ್ವಲ್ಪ ಮಟ್ಟಿಗೆ ಗಂಭೀರ ಚರ್ಚೆಯಿಂದ ಸ್ವಲ್ಪ ದುಗುಡ, ಆತ್ಮೀಯರಲ್ಲಿ ಮನಸ್ತಾಪ.

ದೋಷ ಪರಿಹಾರ : ಓಂಕಾರವನ್ನು 21 ಬಾರಿ ಪಠಿಸಿ

ಮಕರ : ಇಂದು ನಿಮ್ಮ ಉದ್ಯೋಗದಲ್ಲಿ ನಿರಾಳತೆ, ನಿಮ್ಮ ಶ್ರಮಕ್ಕೆ ಹಿರಿಯರಿಂದ ಪ್ರಶಂಸೆ, ಸ್ತ್ರೀಯರಿಂದ ಸಹಾಯ, ಸ್ತ್ರೀಯರ ಸಲಹೆ ನಿಮ್ಮ ಮನಸ್ಸಿಗೆ ಸಮಾಧಾನ ತರಲಿದೆ, ಕೆಲವರು ನಿಮ್ಮನ್ನು ಬೆನ್ನ ಹಿಂದೆ ಆಡಿಕೊಳ್ಳುತ್ತಾರೆ ತಲೆಕೆಡಿಸಿಕೊಳ್ಳಬೇಡಿ. 
  
ದೋಷ ಪರಿಹಾರ : ಲಿಂಗಾಷ್ಟಕ ಪಠಿಸಿ

ಕುಂಭ :   ಮನಸ್ಸಿಗೆ ಹೊಸ ಚಿಂತೆ, ಪಕ್ಕದಲ್ಲಿದ್ದವರೇ ನಿಮಗೆ ಶತ್ರುಗಳಾಗಿ ಕಾಡಲಿದ್ದಾರೆ, ನಿಮ್ಮ ಕಾರ್ಯಕ್ಕೆ ತಕ್ಕ ಪ್ರಶಂಸೆ ದೊರೆಯಲಿದೆ, ವೃಥಾ ಧನ ವ್ಯಯ, ಮಕ್ಕಳಿಂದ ಸ್ವಲ್ಪ ಬೇಸರ, ಸ್ತ್ರೀಯರಲ್ಲಿ ಉತ್ತಮ ಬಾಂಧವ್ಯ.

ದೋಷ ಪರಿಹಾರ : ಭುಜಂಗ ಸ್ತೋತ್ರ ಪಠಿಸಿ
  
ಮೀನ : ಉದ್ಯೋಗದಲ್ಲಿ ಸ್ತ್ರೀಯರಿಂದ ತೊಡಕು, ಕೆಲವರಿಗೆ ಭಾಗ್ಯದ ದಿನವೂ ಆಗಿದೆ, ನಿಮ್ಮ ಮಕ್ಕಳ ಆರೋಗ್ಯದಲ್ಲಿ ಸ್ವಲ್ಪ ಏರುಪೇರು, ಬರುವ ಲಾಭದಲ್ಲಿ ಸ್ವಲ್ಪ ವಂಚನೆಯಾಗಲಿದೆ. ವ್ಯವಹಾರದಲ್ಲಿ ಎಚ್ಚರವಿರಲಿ.
  
ದೋಷ ಪರಿಹಾರ : ಧನಲಕ್ಷ್ಮೀ ಯಂತ್ರ ಪೂಜಿಸಿ.

ವಾಞ್ಮಯೀ.

Follow Us:
Download App:
  • android
  • ios