ವೇದಗಳಲ್ಲಿ ಬರುವ ಸಾಮುದ್ರಿಕಾ ಶಾಸ್ತ್ರ ಎಂಥವನನ್ನು ಪತಿಯಾಗಿ ಆರಿಸಬೇಕೆಂದು ತಿಳಿಸುವಾಗ ಆತನಲ್ಲಿರಬೇಕಾದ 20 ಲಕ್ಷಣಗಳನ್ನು ಹೇಳಿದೆ. ಅವುಗಳಲ್ಲಿ ಕನಿಷ್ಠ 12 ಲಕ್ಷಣ ಹುಡುಗನಲ್ಲಿದ್ದರೂ ಕಣ್ಣು ಮುಚ್ಚಿ ಕೊರಳೊಡ್ಡಬಹುದು.
ಹಿಂದೆ ರಾಜ ಮಹಾರಾಜರು ತಮ್ಮ ಪುತ್ರಿಗೆ ಸ್ವಯಂವರ ಏರ್ಪಡಿಸುತ್ತಿದ್ದಾಗ, ಎಂಥ ಯುವಕರು ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂಬ ಒಂದಿಷ್ಟು ನಿಯಮಾವಳಿಗಳಿರುತ್ತಿದ್ದವು. ಒಂದಿಷ್ಟು ಸ್ಪರ್ಧೆಗಳನ್ನಿಡಲಾಗುತ್ತಿತ್ತು. ಈ ಎಲ್ಲವನ್ನೂ ಯೋಜಿಸುವಲ್ಲಿ ರಾಜರಿಗೆ ಸಲಹೆ ನೀಡುತ್ತಿದ್ದುದು ಅಂದಿನ ಋಷಿಮುನಿಗಳು. ಈ ನಿಯಮಗಳನ್ನೇ ಶಾಸ್ತ್ರವಾಗಿಸಿ ಸಾಮುದ್ರಿಕಾ ಶಾಸ್ತ್ರ ಅಥವಾ ಲಕ್ಷಣ ಶಾಸ್ತ್ರವೆಂದು ಮುಂದಿನ ತಲೆಮಾರುಗಳ ಸಹಾಯಕ್ಕಾಗಿ ರೂಪಿಸಲಾಗಿದೆ. ಅದರಂತೆ ಸಕಲ ಗುಣ ವಲ್ಲಭನ 20 ಮುಖ್ಯ ಗುಣಗಳನ್ನು ನೀಡಲಾಗಿದೆ. ಅವುಗಳಲ್ಲಿ ಕನಿಷ್ಠ ಅರ್ಧದಷ್ಟು ನೀವು ನೋಡುವ ಹುಡುಗನಲ್ಲಿದ್ದರೆ ಕಣ್ಣು ಮುಚ್ಚಿಕೊಂಡು ತಾಳಿಗೆ ಕೊರಳೊಡ್ಡಬಹುದು.
ತಾಯಿಯಾದ ಮೇಲೂ ತ್ವಚೆಯ ರಂಗು ಕಾಪಾಡಿಕೊಳ್ಳುವುದು ಹೇಗೆ?
1. ಗಂಡಿಗೆ ಧೈರ್ಯವೇ ಲಕ್ಷಣ. ಆತ ಕೆಲಸ ಎಷ್ಟೇ ಸಣ್ಣದಿರಲಿ, ದೊಡ್ಡದಿರಲಿ- ಸಿಂಹದ ಚೈತನ್ಯದಲ್ಲಿ ಧೈರ್ಯದಿಂದ ನಿಭಾಯಿಸಬಲ್ಲವನಾಗಿರಬೇಕು.
2. ಬೆಳಗ್ಗೆ ಬೇಗ ಏಳುವ ಅಭ್ಯಾಸ ಹೊಂದಿದ್ದು, ಇತರರಿಗೂ ಬೇಗ ಏಳುವಂತೆ ಸ್ಪೂರ್ತಿ ತುಂಬುವವನು, ಇದರ ಆರೋಗ್ಯ ಲಾಭಗಳನ್ನು ಬಲ್ಲವನು ಖಂಡಿತವಾಗಿಯೂ ಒಳ್ಳೆಯ ಯುವಕ.
3. ತನ್ನ ಜೀವನ ಹಾಗೂ ಅದರಲ್ಲಿರುವ ಪ್ರಮುಖರ ಬಗ್ಗೆ ಬಹಳ ಎಚ್ಚರದಿಂದಿದ್ದು, ಯಾವುದೇ ಸಮಸ್ಯೆ ಬಂದರೂ ಅದಕ್ಕೆ ಪರಿಹಾರ ಕಂಡುಕೊಳ್ಳುವ ಮನಸ್ಥಿತಿ ಹೊಂದಿರಬೇಕು.
4. ಉದಾಸೀನತೆ ಇಲ್ಲದ ಜೀವವಾಗಿರಬೇಕು. ಕಷ್ಟ ಪಡಲು ಹೆದರದೆ, ಎಂಥ ಕೆಲಸವನ್ನು ಕೂಡಾ ಮಾಡಬಲ್ಲೆ ಎಂಬ ಹಾರ್ಡ್ ವರ್ಕರ್ ಆಗಿರಬೇಕು.
5. ಯಾರು ತನ್ನ ಆಹಾರ, ಆಸ್ತಿಯನ್ನು ಕುಟುಂಬ ಸದಸ್ಯರಿಗೆ ಸಮನಾಗಿ ಹಂಚಿಕೊಳ್ಳಲು ಬಯಸುವನೋ, ಗೆಳೆಯರ ಉದ್ಧಾರಕ್ಕಾಗಿ ಯೋಚಿಸುವನೋ, ಆತ ತನ್ನ ಜೀವನಸಂಗಾತಿಯೊಡನೆಯೂ ನೋವುನಲಿವುಗಳನ್ನು ಸಮನಾಗಿ ಹಂಚಿಕೊಳ್ಳುವ ಮನಸ್ಸು ಹೊಂದಿರುತ್ತಾನೆ.

ರಾಶಿ ಅನುಸಾರ ನಿಮ್ಮ ಈ ಅಂಗಗಳು ಆಕರ್ಷಕವಾಗಿರುತ್ತವೆ!
17. ದೂರ್ತರು ದಾಳಿ ನಡೆಸಿದಾಗ ಕೇವಲ ಹೇಡಿತನದಿಂದ ಓಡಿಹೋಗುವುದಕ್ಕೆ ಯತ್ನಿಸುವ ಬದಲು, ಅವರನ್ನೆದುರಿಸುವ, ಅದಕ್ಕಾಗಿ ಇತರೆ ಉಪಾಯ ಮಾಡುವವನು.
18. ಕೆಲಸದ ಮೇಲೆ ಪ್ರೀತಿ ಇರುವವನು. ಹೊರಗಿನ ಸಮಯ ಸಮಯ, ಸನ್ನಿವೇಶಗಳು ಪ್ರತಿಕೂಲವಿದ್ದರೂ ಇಚ್ಛೆಯಿಂದ ಕೆಲಸೋಚಿಸಬಲಲ್ಲವನು. ಮಾಡುವವನು.
19. ಎಂಥ ಕಠಿಣ ಸ್ಥಿತಿಯಲ್ಲೂ ತಾಳ್ಮೆಗೆಡದೆ, ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಲ್ಲವನು. ವಿಷಯವನ್ನು ಬಹಳ ಬೇಗ ಗ್ರಹಿಸಿ, ಯೋಚಿಸಬಲ್ಲವನು. ಗೆಳೆಯರು ಹಾಗೂ ಕುಟುಂಬದೊಡನೆ ಜಗಳವಾಡುವಾಗ, ವಾದಿಸುವಾಗ ಹಿಂಸಾತ್ಮಕ ಕೃತ್ಯಕ್ಕೆ ಇಳಿಯದವನು.
20. ಸಕಾರಾತ್ಮಕ ಯೋಚನೆಯುಳ್ಳವನಾಗಿದ್ದು, ಮುಂದೆ ಒಳಿತಾಗಲಿದೆ ಎಂದು ನಂಬಿ ಕನಸುಗಳನ್ನು ಕಾಣುವವನು.
