Asianet Suvarna News Asianet Suvarna News

ಯಾವ ಗ್ರಹ ಯಾವ ಮನೆಯಲ್ಲಿದೆ, ಯಾವ ರಾಶಿ ಮೇಲೆ ಹೇಗೆ ಪರಿಣಾಮ ಬೀರುತ್ತೆ?

ಗ್ರಹ ಗತಿಗಳು ಆಗಾಗ ಬದಲಾಗುತ್ತಲೇ ಇರುತ್ತವೆ. ಆ ಗ್ರಹಗಳು ತಮ್ಮ ಸ್ಥಾನವನ್ನು ಒಂದು ಮನೆಯಿಂದ ಮತ್ತೊಂದು ಮನೆಗೆ ಬದಲಾಯಿಸುವುದರಿಂದ ರಾಶಿ ಫಲಗಳ ಮೇಲೆ ವಿಭಿನ್ನವಾದ ಪರಿಣಾಮ ಬೀರುತ್ತದೆ. ಇಂದು ಯಾವ ಗ್ರಹ, ಯಾವ ಮನೆಯಲ್ಲಿದೆ. ಯಾರಿಗೆ ಅದೃಷ್ಟ?

Effect of planets on Sun signs on June 19 2018

19-06-18 - ಮಂಗಳವಾರ

ಶ್ರೀ ವಿಲಂಬಿ ನಾಮ ಸಂವತ್ಸರ

ಉತ್ತರಾಯಣ

ಗ್ರೀಷ್ಮ ಋತು

ನಿಜ ಜ್ಯೇಷ್ಠ ಮಾಸ

ಶುಕ್ಲ ಪಕ್ಷ

ಸಪ್ತಮಿ ತಿಥಿ

ಪೂರ್ವ ಫಲ್ಗುಣಿ ನಕ್ಷತ್ರ


ಮೇಷ ರಾಶಿ: ನಿಮ್ಮ ರಾಶಿಯಿಂದ ತೃತೀಯ ಭಾವದಲ್ಲಿರುವ ರವಿ ಬುಧರ ಯುತಿ ನಿಮ್ಮ ಸಹೋದರರಲ್ಲಿ ಉತ್ತಮ ಬಾಂಧವ್ಯ ರೂಪಿಸಲಿದೆ. ಅಷ್ಟೇ ಅಲ್ಲ ತಂದೆಯಿಂದ ಸಹಾಯವಾಗಲಿದೆ, ತಂದೆಯ ಆರೋಗ್ಯದಲ್ಲಿ ವ್ಯತ್ಯಯವೂ ಆಗಲಿದೆ. ಸುಖ ಸ್ಥಾನದಲ್ಲಿರುವ ಶುಕ್ರ ಸ್ತ್ರೀಯರಿಂದ ತೊಂದರೆಯನ್ನು ತರಲಿದ್ದಾನೆ. 

ದೋಷ ಪರಿಹಾರ - ಸುಬ್ರಹ್ಮಣ್ಯನಿಗೆ ಜೇನು ಅಭಿಷೇಕ ಮಾಡಿಸಿ, ಕೆಂಪು ಹೂವನ್ನು ಸಮರ್ಪಿಸಿ ಬನ್ನಿ ಶುಕ್ರ ದೋಷ ನಿವಾರಣೆಗೆ ಕಮಲ ಪುಷ್ಪವನ್ನು ದೇವಿ ದೇವಸ್ಥಾನಕ್ಕೆ ಸಮರ್ಪಣೆ ಮಾಡಿ. 


ವೃಷಭ : ಧನಸ್ಥಾನದಲ್ಲಿರುವ ರವಿ-ಬುಧರು ಹಣವನ್ನು ತಂದುಕೊಡುತ್ತಾರೆ. ಹಾಸ್ಯಮಾತುಗಳಿಂದ ಸನಿಹದಲ್ಲಿರುವವರನ್ನು ಚಕಿತಗೊಳಿಸುತ್ತೀರಿ. ಕುಟುಂಬದಲ್ಲಿ ಸಾಮರಸ್ಯ, ಸ್ವಲ್ಪ ಮಟ್ಟಿಗೆ ಆರೋಗ್ಯ ಬಾಧೆಯೂ ಕಾಡಲಿದೆ. ಹೊರಗಿನ ಊಟ ಮಾಡದಿದ್ದರೆ ಒಳಿತು.

ದೋಷ ಪರಿಹಾರ: ಶನೈಶ್ಚರನಿಗೆ ಹಾಗೂ ಶುಕ್ರನಿಗೆ ಕ್ರಮವಾಗಿ 7 ಹಾಗೂ 4 ಪ್ರದಕ್ಷಿಣೆ ಹಾಕಿಬನ್ನಿ 


ಮಿಥುನ: ನಿಮ್ಮ ರಾಶಿಯಿಂದ ಧನಸ್ಥಾನದಲ್ಲಿ ಶುಕ್ರ-ರಾಹುಯುತಿ ನಿಮ್ಮ ಕುಟುಂಬದಲ್ಲಿ ಕಲಹವನ್ನೂ ಧನ ಹಾನಿಯನ್ನೂ ಮಾಡಲಿದೆ. ಆದರೆ ಗುರು ದೃಷ್ಟಿಯಿಂದ ಹಾಗೇ ಸಮಾಧಾನವೂ ಆಗಲಿದೆ. ಚಿಂತಿಸುವ ಅಗತ್ಯವಿಲ್ಲ.

ದೋಷ ಪರಿಹಾರ : ಶುಕ್ರನಿಗೆ ಬಿಳಿವಸ್ತ್ರವನ್ನೂ ಹಾಗೂ ರಾಹುವಿಗೆ ಉದ್ದಿನ ಕಾಳನ್ನೂ ದಾನ ಮಾಡಿಬನ್ನಿ.


ಕಟಕ: ಕೇಂದ್ರದಲ್ಲಿರುವ ಗುರು ನಿಮ್ಮ ಸಕಲ ಸುಖವನ್ನು ಸಮೃದ್ಧಿ ಮಾಡಲಿದ್ದಾನೆ, ಪಂಚಮಾಧಿಪತಿ ಉಚ್ಛನಾಗಿದ್ದು ಮಕ್ಕಳಿಂದ, ಮಕ್ಕಳ ಪ್ರತಿಭೆಯಿಂದ  ಪ್ರಶಂಸೆಗೆ ಒಳಗಾಗುವಿರಿ. ಇಂದು ಚೈತನ್ಯಶೀಲರಾಗಿರಲಿದ್ದೀರಿ

ದೋಷ ಪರಿಹಾರ: ಸ್ನಾನ ಮಾಡಿ ನಿಮ್ಮ ಮನೆ ದೇವರಿಗೆ ತುಪ್ಪದ ದೀಪವನ್ನು ಹಚ್ಚಿ

ಸಿಂಹ: ನಿಮ್ಮ ರಾಶಿಯಲ್ಲಿರುವ ಚಂದ್ರನಿಂದ ಸುಖ ಭೋಜನ ನಿಮ್ಮಪಾಲಿಗಿದೆ. ಬರಬೇಕಿದ್ದ ಹಣವೂ ಪ್ರಾಪ್ತವಾಗಲಿದೆ. ನೆಮ್ಮದಿಯ ದಿನ, ಹೆಣ್ಣುಮಕ್ಕಳು ಸ್ವಲ್ಪ ಎಚ್ಚರದಿಂದಿರಬೇಕು. 

ದೋಷ ಪರಿಹಾರ : ಶಿವ ದೇವಸ್ಥಾನಕ್ಕೆ ಹೋಗಿ 11 ಬಿಲ್ವಪತ್ರೆ ಅರ್ಪಿಸಿ ಬನ್ನಿ 

ಕನ್ಯಾ: ಧನ ಸ್ಥಾನದಲ್ಲಿರುವ ಗುರುವಿನಿಂದ ಧನ ಪ್ರಾಪ್ತಿ. ಲಾಭಾಧಿಪತಿ ವ್ಯಯಕ್ಕೆ ಬಂದಿರುವುದರಿಂದ ಬಂದ ಹಣ ಖಂಡಿತ ಉಳಿಯುವುದಿಲ್ಲ. ಯೋಚಿಸಬೇಡಿ ಈ ದಿನ ಹಣ ಖರ್ಚಾದರೂ ದೇಹಕ್ಕೆ ತೊಂದರೆಯಿಲ್ಲ. ಹಣ ಮುಖ್ಯವೇ ಆದರೂ ದೇಹ ಸೌಖ್ಯ ಮುಖ್ಯ. ಹಾಗಾಗಿ ಊಟದಲ್ಲಿ ಮಿತ ಆಸಕ್ತಿ ಇದ್ದರೆ ಒಳಿತು.

ದೋಷ ಪರಿಹಾರ: ಗಳಿಸಿದ ಹಣ ಉಳಿಯುವುದಕ್ಕಾಗಿ ಕನಕಧಾರಾ ಸ್ತೋತ್ರ ಪಠಿಸಿ, ಇಲ್ಲವಾದರೆ ಸ್ವರ್ಣಾಕರ್ಷಣ ಯಂತ್ರವನ್ನ ಮಾಡಿಸಿ ನಿತ್ಯವೂ ಕುಂಕುಮಾರ್ಚನೆ ಮಾಡಿ.

ತುಲಾ: ರಾಶಿಯಲ್ಲೇ ಗುರುವು ಇರುವುದರಿಂದ ದೈಹಿಕ ಸಾಮರ್ಥ್ಯ ಹೆಚ್ಚಲಿದೆ, ಭಾಗ್ಯ ಸ್ಥಾನದಲ್ಲಿ ಲಾಭಾಧಿಪತಿ ಇರುವುದರಿಂದ ಉಡುಗೊರೆ ಲಭ್ಯವಾಗಲಿದೆ. ಶುಭದಿನ. ಹೆಚ್ಚು ಯೋಚಿಸಿ ದಿನವನ್ನು ಹಾಳುಮಾಡಿಕೊಳ್ಳುವುದು ಬೇಡ.

ದೋಷ ಪರಿಹಾರ: ನಿಮ್ಮ ಮನೆ ದೇವರಿಗೆ 5 ತುಪ್ಪದ ದೀಪ ಹಚ್ಚಿದಲ್ಲಿ ದಿನವು ನೆಮ್ಮದಿಯಿಂದ ಕೂಡಿರುತ್ತದೆ.

ವೃಶ್ಚಿಕ: ಧನಾಧಿಪತಿ ವ್ಯಯಸ್ಥಾನದಲ್ಲಿರುವುದಲ್ಲದೆ , ಧನಸ್ಥಾನದಲ್ಲಿ ಶನಿ ಇದ್ದಾನೆ. ಒಬ್ಬ ಕಪ್ಪು ಬಣ್ಣದ ವ್ಯಕ್ತಿಯಿಂದ ಮೋಸಹೋಗುವ ಸಾಧ್ಯತೆ ಇದೆ. ಹಣ ಕಳೆದುಕೊಳ್ಳುವ ಸಾಧ್ಯತೆ, ಜಾಗರೂಕರಾಗಿದ್ದರೆ ಒಳಿತು. ಒಂದು ನಿರ್ಧಾರ ತೆಗೆದುಕೊಳ್ಳುವ ಮುನ್ನ 10 ಸಲ ಯೋಚಿಸಿ. ಗಡಿಬಿಡಿ ಮಾಡಿಕೊಳ್ಳಬೇಡಿ

ದೋಷ ಪರಿಹಾರ : ದುರ್ಗಾ ದೇವಿಗೆ ಅರ್ಚನೆ ಮಾಡಿಸಿಕೊಂಡು ಬನ್ನಿ. ಸಾಧ್ಯವಾದರೆ 3 ಕೆಂಪು ಹೂವನ್ನು ದುರ್ಗಾ ದೇವಿಗೆ ಸಮರ್ಪಿಸಿ  

ಧನಸ್ಸು: ಬಾಧಾ ಸ್ಥಾನದಲ್ಲಿ ರವಿ-ಬುಧರ ಯುತಿ ದಾಂಪತ್ಯದಲ್ಲಿ ಕಲಹ ತರುವುದಲ್ಲದೆ ಹೆಚ್ಚು ಮಾತಿನಿಂದ ಕೋಪ ಬರಲಿದೆ.  ಸುಮಂಗಲಿಯರು ಸ್ವಲ್ಪ ಸಮಾಧಾನವಾಗಿದ್ದರೆ ಮನೆ ಶಾಂತವಾಗಿರುತ್ತದೆ. ಗುರುಚರಿತ್ರೆ ಪಾರಾಯಣ ಮಾಡಿ ನಿಮ್ಮ ಸಮಸ್ಯೆ ಖಂಡಿತ ನಿವಾರಣೆಯಾಗಲಿದೆ.

ದೋಷ ಪರಿಹಾರ : ಗುರುಗಳ ದರ್ಶನವೇ ಸಕಲ ಕಷ್ಟ ಪರಿಹಾರ ಮಾಡಲಿದೆ, ಸಾಧ್ಯವಾದರೆ 5 ಜನಿವಾರಗಳನ್ನು ದಾನ ಮಾಡಿ.

ಮಕರ : ಕರ್ಮಸ್ಥಾನದಲ್ಲಿರುವ ಗುರು ಉದ್ಯೋಗ ಲಾಭವನ್ನೂ ಉದ್ಯೋಗದಲ್ಲಿ ನೆಮ್ಮದಿಯನ್ನೂ ತರುತ್ತಾನೆ. ಸ್ವಲ್ಪಮಟ್ಟಿಗೆ ಧನ ವ್ಯಯವಾಗುವ ಸಾಧ್ಯತೆ ಇದೆ.  ಸ್ವಲ್ಪ ಅಸಮಧಾನದ ದಿನ.

ದೋಷ ಪರಿಹಾರ : ಶಿವನಿಗೆ ಭಸ್ಮಾಭಿಷೇಕ ಮಾಡಿಸಿ ಬನ್ನಿ, ಸಾಧ್ಯವಾದರೆ ಕಪ್ಪು ವಸ್ತ್ರ ದಾನ ಮಾಡಿ

ಕುಂಭ : ಇಂದು ಯಾವುದೇ ತೊಡಕಿಲ್ಲದೆ ಕೆಲಸಗಳು ನೆರವೇರುತ್ತವೆ. ಹೆಚ್ಚು ಯೋಚಿಸುವ ಅಗತ್ಯವಿಲ್ಲ, ನಿಮಗೇನಾದರೂ ತೊಂದರೆ ಇದ್ದರೆ ಅದು ಸ್ತ್ರೀಯರಿಂದ ಹಾಗಾಗಿ ಸ್ವಲ್ಪ ಅಂತರ ಕಾಯ್ದುಕೊಳ್ಳಿ. ಇನ್ನು ಸ್ತ್ರೀಯರಿಗೆ ಉತ್ತಮ ದಿನವಾಗಿರಲಿದೆ. ನೀವು ಹೇಳಿದ್ದೇ ನಡೆಯುತ್ತೆ ಯೋಚಿನೆ ಬಿಟ್ಟು ಕಾರ್ಯ ಸಾಧಸಿ.

ದೋಷ ಪರಿಹಾರ : ದುರ್ಗಾ ದೇವಿಗೆ ಕುಂಕುಮ ಸಮರ್ಪಣೆ ಮಾಡಿಬನ್ನಿ

ಮೀನ : ಕರ್ಮಸ್ಥಾನದಲ್ಲಿರುವ ಶನಿಯಿಂದ ನಿಮ್ಮ ಉದ್ಯೋಗದಲ್ಲಿ ತೊಡಕನ್ನುಂಟು ಮಾಡಬಹುದು. ಸುಖಸ್ಥಾನದಲ್ಲಿರುವ ಬುಧ-ರವಿಯರು ಸುಖವನ್ನು ಇಮ್ಮಡಿಗೊಳಿಸಲಿದ್ದಾರೆ. ಹೆಚ್ಚು ಯೋಚಿಸುವ ಅಗತ್ಯವಿಲ್ಲ

ದೋಷ ಪರಿಹಾರ : ಶನೈಶ್ಚರನಿಗೆ ಎಳ್ಳಿನ ದೀಪ ಹಚ್ಚಿಬನ್ನಿ. ಸಾಧ್ಯವಾದರೆ ತಿದಾನ ಮಾಡಿ

ಗೀತಾಸುತ. ಸಂಪರ್ಕ ಸಂಖ್ಯೆ - 9164408090
 

Follow Us:
Download App:
  • android
  • ios