ಈ ರಾಶಿಯವರಿಗೆ ಭಾರೀ ಲಾಭ, ಎಲ್ಲಾ ಆತಂಕಗಳಿಗೆ ತೆರೆ
ಯಾವ ರಾಶಿಗೆ ಯಾವ ಫಲ? ಇಲ್ಲಿದೆ ಇಂದಿನ ಭವಿಷ್ಯ
ಮೇಷ: ಕ್ರೀಡೆಯಲ್ಲಿ ಆಸಕ್ತಿ ಹೆಚ್ಚಾಗಲಿದೆ. ಮನೆಯ ತುಂಬಾ ಸಂತೋಷದ ವಾತಾವರಣ ಏರ್ಪಡಲಿದೆ. ಹೊಸ ಕಾರ್ಯಕ್ಕೆ ಕೈ ಹಾಕುವಿರಿ
ವೃಷಭ: ಮಹತ್ವದ ನಿರ್ಧಾರ ತೆಗೆದುಕೊಳ್ಳುವಾಗ ಹಿರಿಯರೊಂದಿಗೆ ಚರ್ಚಿಸಿ. ನಿಮ್ಮ ಮನೋಬಲವೇ ನಿಮ್ಮನ್ನು ಮುನ್ನಡೆಸಲಿದೆ
ಮಿಥುನ: ಮಿಥ್ಯಾರೋಪಗಳಿಂದ ದೂರವಾಗಲಿದ್ದೀರಿ. ನಿಮ್ಮ ಕೆಲಸಕ್ಕೆ ದೊಡ್ಡ ಮಟ್ಟದ ಮೆಚ್ಚುಗೆಯೂ ದೊರೆಯಲಿದೆ. ಆರೋಗ್ಯದಲ್ಲಿ ಸ್ಥಿರತೆ.
ಕಟಕ: ಹೆಚ್ಚು ಆದಾಯ ನಿರೀಕ್ಷೆ ಮಾಡಿದರೂ ಅದು ಸಾಕಾರವಾಗುವುದಿಲ್ಲ. ಸ್ವಂತ ವ್ಯಾಪಾರ ಮಾಡುವವರಿಗೆ ಖರ್ಚು ಹೆಚ್ಚಾಗುವುದು
ಸಿಂಹ: ಮಕ್ಕಳ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಉದ್ಯೋಗ ಸ್ಥಳದಲ್ಲಿ ನೆಮ್ಮದಿ ಸಿಗುವ ಸಾಧ್ಯತೆ ಇದೆ. ಹಣ ಕೈ ಸೇರಲಿದೆ.
ಕನ್ಯಾ: ಬ್ಯಾಂಕಿಂಗ್ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಹೊಸ ವಸ್ತುಗಳನ್ನು ಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಮಾತೆ ಇಂದು ನಿಮಗೆ ಬಂಡವಾಳ.
ತುಲಾ: ನಿಮಗೆ ಸಂಬಂಧಪಡದ ವಿಚಾರಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಕ್ಕೆ ಹೋಗಬೇಡಿ. ನಯ ವಂಚಕರಿಂದ ದೂರವಿದ್ದರೆ ಒಳಿತು
ವೃಶ್ಚಿಕ: ಸಣ್ಣ ಪ್ರಮಾಣದ ವ್ಯಾಪಾರಿಗಳಿಗೆ ಇಂದು ಒಳ್ಳೆಯ ಲಾಭ ದೊರೆಯಲಿದೆ. ಇಷ್ಟವಾದ ವ್ಯಕ್ತಿಗಳೊಂದಿಗೆ ಇಡೀ ದಿನ ಕಳೆಯಲಿದ್ದೀರಿ
ಧನುಸ್ಸು: ಸಂಜೆ ವೇಳೆಗೆ ನಿಮ್ಮ ಎಲ್ಲಾ ಆತಂಕಗಳಿಗೂ ತೆರೆ ಬೀಳಲಿದೆ. ಹಣದ ಮೂಲಕವೇ ಎಲ್ಲವನ್ನೂ ಅಳತೆ ಮಾಡಲು ಹೋಗಬೇಡಿ. ಶುಭ ಫಲ.
ಮಕರ: ಅತಿಯಾದರೆ ಅಮೃತವೂ ವಿಷವಾಗುತ್ತದೆ. ಇದು ಇಂದು ನಿಮ್ಮ ಜೀವನಕ್ಕೂ ಅನ್ವಯ ವಾಗುತ್ತದೆ. ಮೌನವಾಗಿ ಇದ್ದು ಬಿಡಿ
ಕುಂಭ: ನಿಮ್ಮ ಸ್ನೇಹಿತರ ಬಂಡವಾಳ ಏನು ಎನ್ನುವುದು ಇಂದು ನಿಮಗೆ ತಿಳಿಯಲಿದೆ. ಮತ್ತೊಬ್ಬರ ಸಂತೋಷಕ್ಕೆ ನಿಮ್ಮಿಂದ ಹಾನಿಯಾಗದಿರಲಿ.
ಮೀನ: ನೀವೇ ಪಂಡಿತರು ಎಂಬಂತೆ ಆಡುವುದು ಬೇಡ. ಗೊತ್ತಿಲ್ಲದ ವಿಚಾರಗಳನ್ನು ಕೇಳಿ ಮೀನ ತಿಳಿದುಕೊಳ್ಳಿ. ನೆಮ್ಮದಿಗಾಗಿ ಪರಿತಪಿಸುವಿರಿ.