Asianet Suvarna News Asianet Suvarna News

ಆರ್ಥಿಕ ಸಮಸ್ಯೆಯಿಂದ ಹೊರಗೆ ಬರಲಿದ್ದೀರಿ, ಶುಭ ಫಲ‘ ಹೀಗಿದೆ ಭವಿಷ್ಯ

ಸೆಪ್ಟೆಂಬರ್ 19 ಗುರುವಾರ, ಯಾವ ರಾಶಿಗೆ ಯಾವ ಫಲ, ಹೇಗಿದೆ ಇಂದಿನ ಭವಿಷ್ಯ 

Daily Bhavishya Of 19 September 2019
Author
Bangalore, First Published Sep 19, 2019, 7:08 AM IST

ಮೇಷ: ಅಪ್ರಬುದ್ಧರ ನಡುವೆ ವಾದ ಮಾಡುವುದಕ್ಕಿಂತ ಸುಮ್ಮನೆ ಇದ್ದು ಬಿಡುವುದು ಲೇಸು. ಹೊಸ ಅವಕಾಶಗಳು ಹುಡುಕಿಕೊಂಡು ಬರಲಿ

ವೃಷಭ: ಕಷ್ಟಗಳು ನನಗೆ ಮಾತ್ರ ಯಾಕೆ ಬರುತ್ತವೆ ಎಂದು ಚಿಂತಿಸುತ್ತಾ ಕೂರುವುದು ಬೇಡ. ಹೊಸ ದಾರಿಯನ್ನು ಕಂಡುಕೊಂಡು ಸಾಗಿ.

ಮಿಥುನ: ಮರೆತುಹೋಗಿದ್ದ ಘಟನೆಗಳು ಮತ್ತೆ ನೆನಪಿಗೆ ಬಂದು ಮನಸ್ಸಿಗೆ ಒಂದಷ್ಟು ನೋವು ತಂದ ರೂ ಸಂಜೆ ವೇಳೆಗೆ ಎಲ್ಲವೂ ಸರಿಯಾಗಲಿದೆ.

ಕಟಕ: ಆರ್ಥಿಕ ಸಮಸ್ಯೆಯಿಂದ ಹೊರಗೆ ಬರಲಿದ್ದೀರಿ. ಜೀವನೋತ್ಸಾಹವನ್ನು ಬೆಳೆಸಿಕೊಂಡು ಮುಂದೆ ಸಾಗಿ. ಶುಭ ಫಲ.

ಸಿಂಹ: ಮತ್ತೊಬ್ಬರನ್ನು ಅತಿಯಾಗಿ ಅವಲಂಬಿಸು ವುದು ಬೇಡ. ನಿಮ್ಮ ಕೆಲಸ ಕಾರ್ಯಗಳನ್ನು ನೀವೇ ಮಾಡಿ ಮುಗಿಸಿಕೊಳ್ಳಿ. ಧೈರ್ಯ ಇರಲಿ.

ಕನ್ಯಾ: ಸೂಕ್ತ ತಯಾರಿ ಮಾಡಿಕೊಂಡು, ಸರಿಯಾದ ಮಾರ್ಗದರ್ಶನದಲ್ಲಿ ನಡೆದರೆ ಯಶಸ್ಸು ಖಂಡಿತ ದೊರೆಯುತ್ತದೆ. ಆತುರ ಬೇಡ.

ತುಲಾ: ನಿಮ್ಮ ವ್ಯಕ್ತಿತ್ವಕ್ಕೆ ಬೆಲೆ ಸಿಕ್ಕುವ ಕಡೆಯಲ್ಲಿ ಹೆಚ್ಚು ಸಮಯ ಕಳೆಯಲಿದ್ದೀರಿ. ಪ್ರವಾಸ ತುಲಾ ಹೊರಡುವ ಸಾಧ್ಯತೆಗಳು ಅಧಿಕವಾಗಿವೆ

ವೃಶ್ಚಿಕ: ಜೊತೆಗೇ ಇದ್ದು ಬೆನ್ನಿಗೆ ಚೂರಿ ಹಾಕುವ ಸ್ನೇಹಿತರ ಬಗ್ಗೆ ಎಚ್ಚರಿಕೆಯಿಂದ ಇರಿ. ದೊಡ್ಡ ಪ್ರತಿಫಲಕ್ಕಾಗಿ ದೊಡ್ಡ ಶ್ರಮವನ್ನೇ ಹಾಕಬೇಕು

ಧನುಸ್ಸು: ಆರೋಗ್ಯದಲ್ಲಿ ವೃದ್ಧಿ ಕಾಣಲಿದೆ. ಮನಸ್ಸಿನ ನೆಮ್ಮದಿಗಾಗಿ ಏಕಾಂಗಿಯಾಗಿ ಒಂದಷ್ಟು ಸಮಯ ಕಳೆಯಿರಿ. ಅಹಂಕಾರ ಬೇಡ.

ಮಕರ: ಇಂದು ಹೆಚ್ಚು ಮಾತನಾಡುವುದರಿಂದ ಏನೂ ಪ್ರಯೋಜನವಿಲ್ಲ. ಮೌನವಾಗಿದ್ದಷ್ಟೂ ನಿಮಗೇ ಅನುಕೂಲ. ನೆಮ್ಮದಿ ಹೆಚ್ಚಲಿದೆ

ಕುಂಭ: ಮತ್ತೊಬ್ಬರ ಸಂತೋಷಕ್ಕಾಗಿ ನಿಮ್ಮ ನೆಮ್ಮದಿ ಯನ್ನು ಬಲಿ ಕೊಟ್ಟುಕೊಳ್ಳುವಿರಿ. ಮನೆಯಲ್ಲಿ ಶಾಂತಿ ನೆಲೆಯಾಗಲಿದೆ. ಶುಭ ಫಲವಿದೆ.

ಮೀನ: ದಿನದ ಆರಂಭದಲ್ಲಿಯೇ ಶುಭ ಸುದ್ದಿ ತಿಳಿಯಲಿದೆ. ನೀವು ಹರಿಸಿದ್ದ ಬೆವರಿಗೆ ಇಂದು ಮೀನ ಸೂಕ್ತ ಪ್ರತಿಫಲ ದೊರೆಯುವ ಸಾಧ್ಯತೆ ಇದೆ.

Follow Us:
Download App:
  • android
  • ios