ಈ ರಾಶಿಯವರು ಧೈರ್ಯವಾಗಿ ಮುಂದೆ ಸಾಗಿದರೆ ಶುಭ ಫಲ
ಅಕ್ಟೋಬರ್ 31 ಗುರುವಾರ, ಹೇಗಿದೆ ನಿಮ್ಮ ಇಂದಿನ ರಾಶಿಗಳ ಫಲಾ ಫಲ?
ಮೇಷ: ವಾಹನ ಚಾಲನೆ ಮಾಡುವಾಗ ಎಚ್ಚರ ಇರಲಿ. ಸಣ್ಣ ತಪ್ಪಿಗೂ ದೊಡ್ಡ ಮಟ್ಟದ ದಂಡ ತೆರಲಿದ್ದೀರಿ. ಚಿಂತೆ ಮಾಡುತ್ತಾ ಕೂರದಿರಿ.
ವೃಷಭ: ನಿಮ್ಮಲ್ಲಿರುವ ಸಂತೋಷವನ್ನು ಮತ್ತೊಬ್ಬರಿಗೂ ಹಂಚುವಿರಿ. ಸಣ್ಣ ಸಣ್ಣ ವಿಚಾರಗಳಿಗೂ ಹೆಚ್ಚು ಮಾನ್ಯತೆ ನೀಡಲಿದ್ದೀರಿ.
ಮಿಥುನ: ಗಾಯದ ಮೇಲೆ ಬರೆ ಎಳೆದಂತೆ ಒಂದಷ್ಟು ಕಷ್ಟಗಳು ಎದುರಾಗಲಿವೆ. ಧೈರ್ಯವಾಗಿ ಮುಂದೆ ಸಾಗಿದರೆ ಶುಭ ಫಲ ಖಂಡಿತ ಇದೆ.
ಕಟಕ: ಕೊಟ್ಟ ಮಾತಿಗೆ ಬದ್ಧವಾಗಿ ನಡೆದುಕೊಳ್ಳಿ. ತುಂಬಾ ಹಳೆಯ ಸ್ನೇಹಿತರು ಇಂದು ನಿಮ್ಮನ್ನು ಭೇಟಿಯಾಗಲಿದ್ದಾರೆ. ಶುಭ ಫಲ ಸಿಗಲಿದೆ.
ದೀಪಗಳ ಹಬ್ಬ ನಿಮ್ಮ ಬಾಳಲ್ಲಿ ಬೆಳಕಾಗಲಿ : ವಾರ ಭವಿಷ್ಯ
ಸಿಂಹ: ತಾಯಿ ಮಾಡಿದ ಹಣಕಾಸಿನ ಸಹಾಯದಿಂದ ಹೊಸ ಉದ್ಯಮವನ್ನು ಶುರು ಮಾಡಲಿದ್ದೀರಿ. ಮೋಸ ಮಾಡುವವರಿಂದ ದೂರ ಇರಿ.
ಕನ್ಯಾ: ಶುಚಿತ್ವಕ್ಕೆ ಹೆಚ್ಚು ಆದ್ಯತೆ ನೀಡಿ. ದೂರದ ಬಂಧುಗಳು ಇಂದು ಹತ್ತಿರವಾಗಲಿದ್ದೀರಿ. ಚಿಂತೆ ಮಾಡದೇ ಹಿಡಿದ ಕಾರ್ಯ ಸಾಧಿಸಿ.
ತುಲಾ: ಶುಭ ಸಮಾರಂಭಕ್ಕೆ ಸೂಕ್ತ ತಯಾರಿಗಳನ್ನು ಮಾಡಿಕೊಳ್ಳಲಿದ್ದೀರಿ. ನಿಮ್ಮ ನಗುವು ಮತ್ತೊಬ್ಬರಿಗೆ ನೋವು ಉಂಟು ಮಾಡದಿರಲಿ.
ವೃಶ್ಚಿಕ: ಮತ್ತೊಬ್ಬರ ಗುಣವನ್ನು ನೀವು ಮೆಚ್ಚುವಿರಾದರೆ ನಿಮ್ಮ ಗುಣವನ್ನು ಮತ್ತೊಬ್ಬರು ಮೆಚ್ಚಲು ಸಾಧ್ಯ. ಧೈರ್ಯವಾಗಿ ಮುಂದೆ ಸಾಗಿ.
ಧನಸ್ಸು: ಹಿಂದೆ ಕಂಡ ಜಾಗಗಳು ಇಂದು ಅಪರಿಚಿತವಾಗಿ ಕಾಣಲಿವೆ. ಸೂಕ್ಷ್ಮ ಸಂಗತಿಗಳ ಬಗ್ಗೆ ಎಚ್ಚರಿಕೆಯಿಂದ ಪ್ರತಿಕ್ರಿಯೆ ನೀಡಿ.
ಮಕರ: ನಿಮ್ಮ ಶಕ್ತಿಯ ಮೇಲೆ ನಿಮಗೆ ನಂಬಿಕೆ ಇದ್ದರೆ ಏನು ಬೇಕಾದರೂ ಮಾಡಲು ಸಾಧ್ಯ. ಒಳ್ಳೆಯತನಕ್ಕೆ ಯಾವಾಗಲೂ ಬೆಲೆ ಇದ್ದೇ ಇದೆ.
ಕುಂಭ: ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲಿದ್ದೀರಿ. ನಿಮ್ಮಮ ಇಷ್ಟಗಳನ್ನು ತಂದೆ ತಾಯಿಗಳಿಗೆ ಮುಕ್ತವಾಗಿ ತಿಳಿಸಿ. ದಾರಿ ತಪ್ಪಿ ನಡೆಯುವುದು ಬೇಡ.
ಮೀನ: ಮತ್ತೊಬ್ಬರ ಏಳಿಗೆಯನ್ನು ಕಂಡು ಹೊಟ್ಟೆಕಿಚ್ಚು ಪಡುವುದಕ್ಕೆ ಬದಲಾಗಿ ನೀವು ಸಾಧನೆಯ ಹಾದಿಯತ್ತ ಮುಂದೆ ಸಾಗುತ್ತಿರಿ. ಶುಭ ಫಲ.